ಈ ಲೇಖನದ ಮೂಲಕ ನನ್ನ ಅಭಿಪ್ರಾಯವನ್ನು ತಿಳಿಸಲು ಎಷ್ಟರ ಮಟ್ಟಿಗೆ ಅರ್ಹನೋ ತಿಳಿಯದು. ಕನ್ನಡಕ್ಕೆ ಮೊದಲ 'ಸರಸ್ವತಿ ಸಮ್ಮಾ ನ್' ಪ್ರಶಸ್ತಿ ತಂದುಕೊಟ್ಟ ಡಾ|| ಎಸ್.ಎಲ್.ಭೈರಪ್ಪನವರ ಬಗ್ಗೆ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರು ಬರೆದಿರುವ ಹಲವು ಕೃತಿಗಳಲ್ಲಿ ನಾನು ಓದಿರುವುದು ಬಹಳ ಕಮ್ಮಿ ಅಂದರೆ ೪; ದಾಟು, ವಂಶವೃಕ್ಷ, ಮಂದ್ರ, ಆವರಣ. ಈ ನಾಲ್ಕರಲ್ಲೂ ವ್ಯಕ್ತವಗಿರುವ ಅವರ ವಿಚಾರಧಾರೆ ನನಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂದು ಹೇಳಲಾರೆ . ಆದರೆ ಮುಖ್ಯವಾಗಿ ಮಂದ್ರ ಮತ್ತು ಆವರಣ ಕಾದಂಬರಿಗಳಿಂದ ಪ್ರಭಾವಿತನಾಗಿರುವುದಂತು ನಿಜ.
ಮಂದ್ರವನ್ನು ಓದುತ್ತಾ ಹೋದಂತ್ತೆಲ್ಲ ನನ್ನಲ್ಲಿ ಹುದುಗಿದ್ದ ಸಂಗೀತಾಸಕ್ತಿ ಎಚ್ಚರಗೊಂಡಿತು, ಮೊದಲಿಗಿಂತ ಹೆಚ್ಚಾಯಿತು. ಒಬ್ಬ ವ್ಯಕ್ತಿಯ ಭಾವನೆಗಳನ್ನು ವರ್ಣಿಸಿರುವ ಶೈಲಿ, ಸಂಗೀತದ ವಿವಿಧ ರಾಗಗಳೊಂದಿಗಿನ ಹೋಲಿಕೆ, ನನಗೆ ಮತ್ತಷ್ಟು ಹಿಡಿಸಿದವು. ಆವರಣ; ಅದೊಂದು ಅದ್ಭುತ ಕೃತಿ ಎಂದೇ ಹೇಳಬಹುದು. ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ಹಿಂದು ಮತ್ತು ಮುಸಲ್ಮಾನರಿಗಿರುವ ಅವರದೇ ಆದಂತಹ ಅಭಿಪ್ರಾಯಗಳನ್ನು ತಿಳಿದಂತಾಯಿತು. ದೇವನೊಬ್ಬ, ನಾಮ ಹಲವು ಎಂಬ ಹಿಂದುಗಳ ಪರಿಕಲ್ಪನೆ ಮತ್ತು ಗಂಡು, ಹೆಣ್ಣುಗಳ ಸಮಾನತೆಯೇ ಗೊತ್ತಿಲ್ಲದ, ಎಕದೇವೋಪಾಸನೆಯನ್ನು ನಂಬಿರುವ ಮುಸಲ್ಮಾನ ಸಮಾಜದಲ್ಲಿರುವ ವಿಭಿನ್ನತೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಓದುತ್ತಾ ಹೋದಂತ್ತೆಲ್ಲಾ ಹಿಂದು ಮತ್ತು ಮುಸಲ್ಮಾನ ಧರ್ಮದ ವಿಭಿನ್ನತೆ ಜೊತೆಗೆ ಕಾಲಗರ್ಭದಲ್ಲಿ ಹುದುಗಿರುವ ಸತ್ಯಾಸತ್ಯತೆಗಳ ಪರಿಚಯವೂ ಆಗುತ್ತದೆ. ದಾಟುವಿನಲ್ಲಿ ವ್ಯಕ್ತವಾಗಿರುವ ಜಾತಿ ವತ್ಯಾಸ, ಇದರಿಂದ ಪ್ರೇಮಿಗಳ ನಡುವೆ ಉಂಟಾಗುವ ವೈಮನಸ್ಯ, ರಾಜಕಾರಣಿಗಳ ಅವಕಾಶವಾದಿತನ ಪರಿಪೂರ್ಣವಾಗಿ ವ್ಯಕ್ತವಾಗಿದೆ.
ವಂಶವೃಕ್ಷ ಮತ್ತು ಆವರಣದಲ್ಲಿ ಸಂಶೋಧನಕಾರ ಅಥವ ಕಾದಂಬರಿಕಾರ ಎಂಬ ಸಾಮ್ಯತೆ ನಮಗೆ ಕಾಣಿಸುತ್ತದೆ. ಒಂದು ಕಾದಂಬರಿ (ಐತಿಹಾಸಿಕವಾಗಲಿ, ಸಾಮಾಜಿಕವಾಗಲಿ) ಬರೆಯುವ ಮುನ್ನ ನಾವು ಮಾಡಿಕೊಳ್ಳಬೇಕಾದ ತಯಾರಿ ಎಂತಹದು ಎಂಬುದು ಈ ಎರಡು ಕಾದಂಬರಿಯಲ್ಲಿ ವ್ಯಕ್ತವಾಗಿದೆ.
ಸ್ವತಃ ಕಥೆಗಾರನಲ್ಲದಿದ್ದರೂ ಕಥೆ ಬರೆಯುತ್ತೇನೆ ಎಂಬ ಕಾರಣಕ್ಕೆ ನನಗೆ ಈ ಎರಡು ಕಾದಂಬರಿಗಳು ಮಾರ್ಗದರ್ಶಿಯಂತೆ. ೧-೨ ಕಥೆಗಳನ್ನು ಬರೆದಿರುವ ನಾನು ಮುಂದಿನ ಕಥೆ ಬರೆಯಬೇಕಾದರೆ ಪ್ರಸ್ತುತ ಕಾದಂಬರಿಗಳ ಪ್ರಭಾವವಿರುತ್ತದೆ ಎಂಬುದು ಅಕ್ಷರಶ: ನಿಜ. ವ್ಯಕ್ತಿ , ಭಾವನೆಗಳು, ಸಂಭಂದಗಳು, ಸನ್ನಿವೇಶಗಳ ನಿರೂಪಣೆ ನನ್ನಲ್ಲಿ ಹೊಸದೊಂದು ಉತ್ಸಾಹ ತಂದಿದೆ. ಈ ಕಾದಂಬರಿಗಲನ್ನು ಓದಿ ಎಷ್ಟರ ಮಟ್ಟಿಗೆ ನನ್ನ ಭಾಷ ಮತ್ತು ರಚನಾ ಕೌಶಲ್ಯ ಸುಧಾರಿಸಿದೆ ಎಂಬುದು ನನಗೂ ತಿಳಿದಿಲ್ಲ. ಮುಂದಿನ ಕಥೆಗಳನ್ನು ಬರೆಯುವಾಗ ಈ ಕೌಶಲ್ಯಗಳನ್ನು ಒರೆ ಹಚ್ಚಲು ಹೆಚ್ಚು ಉತ್ಸುಕನಾಗಿದ್ದೇನೆ. ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೇನೆಂಬುದು ನನಗೆ ತಿಳಿದಿಲ್ಲ.
ಮಂದ್ರವನ್ನು ಓದುತ್ತಾ ಹೋದಂತ್ತೆಲ್ಲ ನನ್ನಲ್ಲಿ ಹುದುಗಿದ್ದ ಸಂಗೀತಾಸಕ್ತಿ ಎಚ್ಚರಗೊಂಡಿತು, ಮೊದಲಿಗಿಂತ ಹೆಚ್ಚಾಯಿತು. ಒಬ್ಬ ವ್ಯಕ್ತಿಯ ಭಾವನೆಗಳನ್ನು ವರ್ಣಿಸಿರುವ ಶೈಲಿ, ಸಂಗೀತದ ವಿವಿಧ ರಾಗಗಳೊಂದಿಗಿನ ಹೋಲಿಕೆ, ನನಗೆ ಮತ್ತಷ್ಟು ಹಿಡಿಸಿದವು. ಆವರಣ; ಅದೊಂದು ಅದ್ಭುತ ಕೃತಿ ಎಂದೇ ಹೇಳಬಹುದು. ರಾಷ್ಟ್ರೀಯ ಭಾವೈಕ್ಯತೆಯ ಬಗ್ಗೆ ಹಿಂದು ಮತ್ತು ಮುಸಲ್ಮಾನರಿಗಿರುವ ಅವರದೇ ಆದಂತಹ ಅಭಿಪ್ರಾಯಗಳನ್ನು ತಿಳಿದಂತಾಯಿತು. ದೇವನೊಬ್ಬ, ನಾಮ ಹಲವು ಎಂಬ ಹಿಂದುಗಳ ಪರಿಕಲ್ಪನೆ ಮತ್ತು ಗಂಡು, ಹೆಣ್ಣುಗಳ ಸಮಾನತೆಯೇ ಗೊತ್ತಿಲ್ಲದ, ಎಕದೇವೋಪಾಸನೆಯನ್ನು ನಂಬಿರುವ ಮುಸಲ್ಮಾನ ಸಮಾಜದಲ್ಲಿರುವ ವಿಭಿನ್ನತೆಯನ್ನು ಚೆನ್ನಾಗಿ ಚಿತ್ರಿಸಿದ್ದಾರೆ. ಓದುತ್ತಾ ಹೋದಂತ್ತೆಲ್ಲಾ ಹಿಂದು ಮತ್ತು ಮುಸಲ್ಮಾನ ಧರ್ಮದ ವಿಭಿನ್ನತೆ ಜೊತೆಗೆ ಕಾಲಗರ್ಭದಲ್ಲಿ ಹುದುಗಿರುವ ಸತ್ಯಾಸತ್ಯತೆಗಳ ಪರಿಚಯವೂ ಆಗುತ್ತದೆ. ದಾಟುವಿನಲ್ಲಿ ವ್ಯಕ್ತವಾಗಿರುವ ಜಾತಿ ವತ್ಯಾಸ, ಇದರಿಂದ ಪ್ರೇಮಿಗಳ ನಡುವೆ ಉಂಟಾಗುವ ವೈಮನಸ್ಯ, ರಾಜಕಾರಣಿಗಳ ಅವಕಾಶವಾದಿತನ ಪರಿಪೂರ್ಣವಾಗಿ ವ್ಯಕ್ತವಾಗಿದೆ.
ವಂಶವೃಕ್ಷ ಮತ್ತು ಆವರಣದಲ್ಲಿ ಸಂಶೋಧನಕಾರ ಅಥವ ಕಾದಂಬರಿಕಾರ ಎಂಬ ಸಾಮ್ಯತೆ ನಮಗೆ ಕಾಣಿಸುತ್ತದೆ. ಒಂದು ಕಾದಂಬರಿ (ಐತಿಹಾಸಿಕವಾಗಲಿ, ಸಾಮಾಜಿಕವಾಗಲಿ) ಬರೆಯುವ ಮುನ್ನ ನಾವು ಮಾಡಿಕೊಳ್ಳಬೇಕಾದ ತಯಾರಿ ಎಂತಹದು ಎಂಬುದು ಈ ಎರಡು ಕಾದಂಬರಿಯಲ್ಲಿ ವ್ಯಕ್ತವಾಗಿದೆ.
ಸ್ವತಃ ಕಥೆಗಾರನಲ್ಲದಿದ್ದರೂ ಕಥೆ ಬರೆಯುತ್ತೇನೆ ಎಂಬ ಕಾರಣಕ್ಕೆ ನನಗೆ ಈ ಎರಡು ಕಾದಂಬರಿಗಳು ಮಾರ್ಗದರ್ಶಿಯಂತೆ. ೧-೨ ಕಥೆಗಳನ್ನು ಬರೆದಿರುವ ನಾನು ಮುಂದಿನ ಕಥೆ ಬರೆಯಬೇಕಾದರೆ ಪ್ರಸ್ತುತ ಕಾದಂಬರಿಗಳ ಪ್ರಭಾವವಿರುತ್ತದೆ ಎಂಬುದು ಅಕ್ಷರಶ: ನಿಜ. ವ್ಯಕ್ತಿ , ಭಾವನೆಗಳು, ಸಂಭಂದಗಳು, ಸನ್ನಿವೇಶಗಳ ನಿರೂಪಣೆ ನನ್ನಲ್ಲಿ ಹೊಸದೊಂದು ಉತ್ಸಾಹ ತಂದಿದೆ. ಈ ಕಾದಂಬರಿಗಲನ್ನು ಓದಿ ಎಷ್ಟರ ಮಟ್ಟಿಗೆ ನನ್ನ ಭಾಷ ಮತ್ತು ರಚನಾ ಕೌಶಲ್ಯ ಸುಧಾರಿಸಿದೆ ಎಂಬುದು ನನಗೂ ತಿಳಿದಿಲ್ಲ. ಮುಂದಿನ ಕಥೆಗಳನ್ನು ಬರೆಯುವಾಗ ಈ ಕೌಶಲ್ಯಗಳನ್ನು ಒರೆ ಹಚ್ಚಲು ಹೆಚ್ಚು ಉತ್ಸುಕನಾಗಿದ್ದೇನೆ. ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತೇನೆಂಬುದು ನನಗೆ ತಿಳಿದಿಲ್ಲ.