July 7, 2012

ವೇಗದ ಬದುಕು

ಕೆಲ ದಿನಗಳ ಹಿಂದೆ ಆಕಾಶವಾಣಿಯಲ್ಲಿ - "Laproscopy ಎಂಬ ಶಸ್ತ್ರಚಿಕಿತ್ಸೆ ಮೂಲಕ ಕೆಲವೇ ನಿಮಿಷಗಳಲ್ಲಿ ಮಕ್ಕಳಾಗದಿರುವ ರೀತಿ ಮಾಡುತ್ತೇವೆ, 1-2 ದಿನಗಳಲ್ಲಿ ಎಂದಿನಂತೆ ತಮ್ಮ ನಿತ್ಯ ಕೆಲಸಗಳಲ್ಲಿ ತೊಡಗಬಹುದು, ಮನೆಗೊಂದು ಮಗು ಸಾಕು" ಎಂದು ಪ್ರಸಾರವಾಗುತ್ತಿತ್ತು. ವೈಜ್ಞಾನಿಕವಾಗಿ ಅದನ್ನು ನಾನು ವಿಮರ್ಶಿಸಲು ಅನರ್ಹ, ಆದ್ದರಿಂದ ಆ ಮಾತು ಇಲ್ಲಿ ಬೇಡ. ಆದರೆ ಇಲ್ಲಿ ನಾವು ಗಮನಿಸಬೆಕಾದ ಅಂಶ ಒಂದಿದೆ. ಮೇಲಿನ ಹೇಳಿಕೆಯಂತೆ ನಮ್ಮ ಸಮಾಜ ನಡೆದುಕೊಂಡ್ಡಿದ್ದೇ ಆದರೆ ನಾವು ಮತ್ತು ನಮ್ಮ ಮುಂದಿನ ಪೀಳಿಗೆ ಸಾಂಸ್ಕೃತಿಕವಾಗಿಯೂ ಮತ್ತು ಮಾನಸಿಕವಾಗಿಯೂ ಕುಗ್ಗಿ ಹೋಗುತ್ತೇವೆ. ಇದನ್ನು ನೆನೆದಾಗಲ್ಲೆಲ್ಲ ನನಗೆ ನೆನಪಾಗುವುದು 'ಜಾಗೋ ಭಾರತ್' ಕಾರ್ಯಕ್ರಮದ ಜನಕ "ಚಕ್ರವರ್ತಿ ಸೂಲಿಬೆಲೆ" ರವರ ಮಾತುಗಳು - "ಮನೆಗೆ 1 ಮಗು ಎಂತಾದರೇ ನಾವು ಬಿಡಿ, ನಮ್ಮ ಮುಂದಿನ ಪೀಳಿಗೆಯವರಿಗೆ ಅಕ್ಕ, ಅಣ್ಣ, ತಮ್ಮ, ತಂಗಿ, ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ, ದೊಡ್ಡಪ್ಪ, ದೊಡ್ಡಮ್ಮ, ಅತ್ತಿಗೆ, ನದಿನಿ, ಮೈದುನ, ಭಾವ ಎಂಬ ಸಂಭಂದದ ಅರ್ಥವೇ ತಿಳಿದಿರುವುದಿಲ್ಲ. ಅಪ್ಪ, ಅಮ್ಮ ಬಿಟ್ಟು ಮಿಕ್ಕವರೆಲ್ಲರೂ Aunty, Uncle. ನಮ್ಮ ಹಿಂದು ಸಂಸ್ಕೃತಿಯಲ್ಲಿರುವುದು ಒಟ್ಟು 52 ಸಂಭಂದಗಳು, ಅದರಲ್ಲಿ ನಮ್ಮ ಪೇಳೀಗೆಗೆ ಹಲವು ಗೊತ್ತಿಲ್ಲ, ಹೀಗೆ ಮುಂದುವರೆದರೆ ಮಿಕ್ಕ ಸಂಭಂದಗಳನ್ನು ಕಳೆದುಕೊಳ್ಳುತ್ತೇವೆ."

ಇದರ ಪರಿಣಾಮವಾಗಿ ಮಕ್ಕಳಿಗೆ ಪ್ರೀತಿ ಅರ್ಥ, ತಾಯಿಯ ಮಮತೆಯ ಸುಖವನ್ನು ಕಳೆದುಕೊಳ್ಳುವಂತಾಗುತ್ತದೆ. ಅಂತಹ ಮಕ್ಕಳು ಮಾನಸಿಕವಾಗಿ ಸದೃಡವಾಗಿರುವುದಿಲ್ಲ. ಮನೆಯಲ್ಲಿ ಸಿಗದಿರುವ ಪ್ರೀತಿ, ಮಮತೆ ಹೊರಗೆ ಪಡೆಯಲು ಪ್ರಯತ್ನಿಸುತ್ತಾರೆ. ಅಂತಹ ಮಕ್ಕಳು ಬಹು ಬೇಗ ಮಾದಕ ವ್ಯಸನಿಗಳಾಗುತ್ತಾರೆ, ಕುರುಡು ಪ್ರೇಮಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೆ. ಇಂತ ಉದಾಹರಣೆಗಳನ್ನು ನಾವು ನಮ್ಮ ಸಮಾಜದಲ್ಲಿ ಅನೇಕವನ್ನು ನೋಡಬಹುದು. ಇದೆಲ್ಲದರ ಪರಿಣಾಮವಾಗಿ ದೇಶ ಸಾಂಸ್ಕೃತಿಕವಾಗಿ ನಶಿಸಿಹೊಗುತ್ತದೆ! ಮೇಲಿನ ಹೇಳಿಕೆಯನ್ನು ಕೇಳಿದ ಮೇಲೆ ನನ್ನ ಮನಸ್ಸಿನಲ್ಲಿ ಇವೆಲ್ಲ ಯಾಕೆ?, ಇದರ ಮೂಲ ಕಾರಣ ಏನು? ಎಂದು.

ಮಕ್ಕಳು ತಂದೆ, ತಾಯಿ, ಅಜ್ಜಿ, ತಾತರ ಪ್ರೀತಿಯಿಂದ ವಂಚಿತರಾಗಿರುವುದು ಎಂಬುದು ಮೇಲು ನೋಟಕ್ಕೆ ಕಾಣುವ ಕಾರಣ. ಅಂದರೆ ತಂದೆ, ತಾಯಿಯರಿಗೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವೆಂದಲ್ಲ, ಅದರ ಬೆಳವಣಿಗೆಗಾಗಿ ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ, ಆದರೆ ಪೂರ್ಣ ಪ್ರಮಾಣದಲ್ಲಿ ಗಮನಿಸಲು ಅವರಿಗೆ ಸಮಯ ಸಿಗುತ್ತಿಲ್ಲ ಎಂಬುದು ಸತ್ಯ. ಅದಕ್ಕೆ ಕಾರಣವೆಂದರೆ ನಮ್ಮ ಬದುಕಿನ ಶೈಲಿ ಎಂಬುದೇ ಸತ್ಯ. ಅಂದರೆ ವೇಗದ ಬದುಕು...
 

ಇದರ ಪರಿಣಾಮವಾಗಿ ಮಾನವ ಸಂಭಂದಗಳ ನಡುವೆ ಭಾವನೆಗಳನ್ನು ಮರೆಯುತ್ತಿದ್ದೇವೆ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎಂಬಂದೆ ನಮ್ಮಗಳ ನಡುವೆ ಇರುವ ಸ್ನೇಹ ಸಂಭಂದಗಳನ್ನು ಬಿಟ್ಟು ಜೀವರಹಿತ ವಸ್ತುಗಳ ಜೊತೆಗೆ ನಮ್ಮ ಭಾಂದವ್ಯ ಬೆಳೆಸುಕೊಳ್ಳುತ್ತೆದ್ದೇವೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಯೋಚಿಸಬೇಕಾದ ಸಂಗತಿ. ಮನುಜರನ್ನು ಪ್ರೀತಿಸಿ, ವಸ್ತುಗಳನ್ನು ಉಪಯೋಗಿಸಬೇಕೆಂಬ ದಾರಿಯಲ್ಲಿ ನಡೆಯುದರ ಬದಲು, ನಾವಿಂದು ವಸ್ತುಗಳನ್ನು ಪ್ರೀತಿಸಿ, ಮನುಜರನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದು ಕಹಿ ಎಂದೆನ್ನಿಸಿದರೂ ಒಪ್ಪಿಕೊಳ್ಳಲೇಬೇಕಾದ ಸತ್ಯ.

ವಸ್ತುವನ್ನು ಪ್ರೀತಿಸುತ್ತಾ ಹೋದಂತೆಲ್ಲಾ ಮನುಷ್ಯ ತನ್ನ ಭಾವನೆಗಳನ್ನು ಕಳೆದುಕೊಳ್ಳುತ್ತಾ ಹೋದ. ಭಾವನೆಗಳು ಕಳೆದುಕೊಳ್ಳುತ್ತ ಹೊದಂತೆಲ್ಲಾ ಸ್ವಾರ್ಥಿಯಾದ, ಪರಸ್ಪರ ಹೊಂದಾಣಿಕೆ ಕಮ್ಮಿಯಾಯಿತು. ಹೊಂದಾಣಿಕೆಯ ಬದಲಾಗಿ ಸ್ಪರ್ಧಾತ್ಮಕ ಭಾವನೆ ಹೆಚ್ಚುತ್ತಾ ಹೋಯಿತು. ನಾವು ಕೊಡ ದೈಹಿಕವಾಗಿ ಅದಕ್ಕೆ ಹೊಂದಿಕೊಂಡೆವು. ಆದರೆ ನಮ್ಮೆಲ್ಲ ಹಲವರು ಇಷ್ಟವಿಲ್ಲದಿದ್ದರೂ ಮಾನಸಿಕವಾಗಿ ಹೊಂದಿಕೊಂಡ್ಡಿದ್ದಾರೆ.

ಹೀಗೆ ಮುಂದುವರೆಯುತ್ತಾ ಹೋದರೆ ನಮ್ಮ ಬದುಕು ಎಲ್ಲಿಗೆ ಹೋಗಬಹುದು? ಮಾನಸಿಕವಾಗಿ ನಾವು ಹೇಗಾಗಬಹುದು? ನಮ್ಮ ಸಂಸ್ಕೃತಿ ಎಂತ ಅದಃ ಪತನಕ್ಕೆ ಹೋಗಬಹುದು? ಎಂಬುದನ್ನೆಲ್ಲಾ ನಾವು ಯೋಚಿಸಬೇಕಾದ ಸಂಗತಿ. ಕಡೆಯದಾಗಿ ನನ್ನ ಮನದಲ್ಲಿ ಮೂಡುವ ಪ್ರಶ್ನೆ ಎಂದರೇ ಇಂತಹ ವೇಗದ ಬದುಕು ನಮಗೆ ಬೇಕಾ?