July 3, 2014

ಡಾಕ್ಟ್ರೇ... ನಿಮಗೆ ಇದು ಏನು ಅಂತ ತಿಳಿಯುತ್ತಾ?

ಸಾಮಾನ್ಯವಾಗಿ ನಾನು ಭಾನುವಾರ ಯಾವ ಪೇಶೆಂಟ್ಗೂ appointment ಕೊಡುವುದಿಲ್ಲ ಆದರೂ ಕೆಲವೊಂದು ಬಾರಿ ಕೆಲವರು ಮನೆಗೆ ಬರುತ್ತಾರೆ. ಆಗ ಇಲ್ಲ ಅನ್ನಲಾಗದೆ ಅವರ ಜೊತೆ ಮಾತಾಡಲು ಕೂರುತ್ತೇನೆ. ನನ್ನ ಹೆಸರು ದೀಪಕ್ ಆರಾಧ್ಯ - ಮನೋವೈದ್ಯ. ಯಾರಾದರೂ ತೊಂದರೆ ಎಂದು ಬಂದಾಗ ನಾಳೆ ಅಥವಾ ಮತ್ತೊಂದು ದಿನ ಬನ್ನಿ ಎಂದು ಹೇಳಲು ಆಗುವುದಿಲ್ಲ. ಮಾನಸಿಕ ಸಮಸ್ಯೆ ಇಟ್ಟುಕೊಂಡು ನನ್ನ ಬಳಿ ಬರುತ್ತಾರೆ ಹಾಗಾಗಿ ಅವರನ್ನು ಕಾಯಿಸುವುದು ನನಗೆ ಸರಿ ಕಾಣುವುದಿಲ್ಲ. ಅದೊಂದು ಭಾನುವಾರ ರಮೇಶ್ ಎಂಬ ಹುಡುಗ, ಮತ್ತವನ ತಂದೆ ತಾಯಿ ಇಬ್ಬರೂ ಮನೆಗೆ ಬಂದರು. ಹುಡುಗನ ಮುಖದಲ್ಲಿ ನಿರ್ಲಿಪ್ತತೆ ಇತ್ತು ಆದರೆ ಅವನ ತಂದೆ ತಾಯಿ ಉದ್ವೇಗದಲ್ಲಿದ್ದರು. ಅವರನ್ನು ನನ್ನ  consultation room ಗೆ ಕರೆದು ಕೊಂಡು ಹೋದೆ. ಅವರ ಸಮಸ್ಯೆ ಏನೆಂದು ಕೇಳಿ, ಅವರನ್ನು ಮಾತಾಡಲು ಹೇಳಿದೆ.

ರಮೇಶನ ತಂದೆ ಮಾತಾಡುತ್ತಾ ಇವನು ನಮ್ಮ ಮಗ ರಮೇಶ, ಕಳೆದ ಕೆಲವು ತಿಂಗಳಿಂದ ಯಾರೊಂದಿಗೂ ಮಾತಾಡುತ್ತಿಲ್ಲ, ತಾನಾಯಿತು ತನ್ನ ಕೆಲಸವಾಯಿತು ಅಂತ ಇರುತ್ತಾನೆ. ಆಫೀಸಿನ ಸಮಯದಲ್ಲಿ ಕೆಲಸದ ವಿಚಾರ ಮಾತ್ರ ಮಾತಾಡುತ್ತಾನೆ, ಅದು ಹೊರತಾಗಿ ಏನೊಂದು ಮಾತಿಲ್ಲ. ನಮಗಂತೂ ಏನು ಮಾಡುವುದು ಅಂತ ತಿಳಿಯುತ್ತಿಲ್ಲ. 3-4 ತಿಂಗಳ ಹಿಂದೆ ಚೆನ್ನಾಗೆ ಇದ್ದ ಡಾಕ್ಟ್ರೇ, ನಂತರ ಆಫೀಸಿನ ಹೊರತಾಗಿ ಮಾತಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾನೆ. ದಯವಿಟ್ಟು ನಮ್ಮ ಮಗನಿಗೆ ಏನಾಗಿದೆ ಎಂದು ಹೇಳಿ, ಸರಿ ಮಾಡಿ ಎಂದು ಬೇಡಿಕೊಂಡರು. ಇವರ ಮಾತನ್ನು ಕೇಳುತ್ತಾ ನಾನು ರಮೇಶನನ್ನು ಗಮನಿಸುತ್ತಿದ್ದೆ. ಆತ ನಿರ್ಲಿಪ್ತವಾಗಿಯೇ ಇದ್ದ. ಆತ ಮಾತಾಡುವುದನ್ನು ನಿಲ್ಲಿಸುವ ಮುನ್ನ ಮನಸ್ಸಿಗೆ ಘಾಸಿ ಆಗುವಂತಹ ಯಾವುದಾದರೂ ಘಟನೆಯ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ರಮೇಶನ ಮದುವೆಗೆಂದು ಹುಡುಗಿ ಹುಡುಕುವ ಪ್ರಯತ್ನ ಶುರುವಾದ ಮೇಲೆ ಆತ ಅಕ್ಷರಶಃ ಮೌನಿಯಾಗಿದ್ದ! ಇಲ್ಲೇನೋ ಸಮಸ್ಯೆ ಇದೆ ಎಂದು ರಮೇಶನ ಜೀವನದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಆಗ, ಅವರ ತಾಯಿ ಮಾತಾಡಲು ಶುರುಮಾಡಿದರು.

ರಮೇಶ ಚಿಕ್ಕವಯಸ್ಸಿನಲ್ಲಿದ್ದಾಗ ಅವರ ಮನೆಯಲ್ಲಿ ಬಡತನವಿತ್ತು. ಹೊಟ್ಟೆ ಬಟ್ಟೆಗೆ ಇರಲಿಲ್ಲ ಎನ್ನುವಷ್ಟು ಬಡತನವಿರಲ್ಲಿಲ್ಲ, ತಿಂಗಳ ಕೊನೆಗೆ ಮನೆಯ ಖರ್ಚನ್ನು ನಿಭಾಯಿಸಲು ಕಷ್ಟಪಡುವಂತಹ ಅರ್ಥಿಕ ಪರಿಸ್ಥಿತಿ ಅವರ ಸಂಸಾರ. ತಾಯಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ತಂದೆಗೆ ಕೆಲಸವಿರಲಿಲ್ಲ ಮತ್ತು ಕುಡಿತದ ಅಭ್ಯಾಸ ಕೂಡ ಇತ್ತು. ಗಂಡ ಹಂಡತಿಯರ ನಡುವೆ ಹೊಂದಾಣಿಕೆ ಇರಲಿಲ್ಲ. ರಮೇಶ ಈ ಪರಿಸ್ಥಿತಿಯಲ್ಲಿ ಮನೆಯ ಕಷ್ಟಗಳನ್ನೇ ನೋಡುತ್ತ ಬೆಳೆದ. ತಂದೆ ಅಥವಾ ತಾಯಂದರೊಂದಿಗೆ ಮನಸ್ಸು ಬಿಚ್ಚಿ ಮಾತಾಡುವ ಅವಕಾಶ ತೀರ ಕಮ್ಮಿ. ಆತನ ತಾಯಿ ಕೂಡ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತಾಡಿದರು. ಈ ಕಷ್ಟಗಳ ನಡುವೆ ಮಗನನ್ನು ಉನ್ನತ ಮತ್ತು ವೃತ್ತಿಪರ ಡಿಗ್ರಿಯನ್ನು ಓದಿಸಿದರು ಎಂಬುದನ್ನು ಹೆಚ್ಚು ಪ್ರತಿಪಾದಿಸಿದರು. ರಮೇಶ ಕಾಲೇಜಿಗೆ ಬರುವ ಹೊತ್ತಿಗೆ ಅವನ ತಂದೆಗೆ ಕೆಲಸ ಸಿಕ್ಕಿ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿತು. ಇದರ ಜೊತೆಗೆ ಅವರ ಕುಡಿತ ಹೆಚ್ಚಿ, ಮನೆಯಲ್ಲಿ ಜಗಳವೂ ಹೆಚ್ಚಾಯಿತು. ಗಂಡ ಹೆಂಡತಿಯರ ನಡುವೆ ಅನ್ಯೋನ್ಯತೆ ಎಂಬುದು ಎಂದೂ ಕಾಣಲೇ ಇಲ್ಲ. ಈಗ, ಮಗನ ವಿಚಾರದಲ್ಲಿ ಇಬ್ಬರೂ ಒಂದೇ ರೀತಿ ನಿರ್ಧಾರಕ್ಕೆ ಬಂದಿರುವುದು ಆಶ್ಚರ್ಯಕರವಾಗಿತ್ತು. 

ರಮೇಶನ ಸ್ನೇಹಿತರ ಬಗ್ಗೆ ಮತ್ತು ಸಂಬಂಧಿಕರ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ರಮೇಶ ಒಬ್ಬನೇ ಮಗನಾಗಿದ್ದ. ಅವನ ತಾಯಿಯೇ ಹೇಳಿದಂತೆ ಆತನಿಗೆ ಹತ್ತಿರದ ಸ್ನೇಹಿತರಾರು ಇರಲಿಲ್ಲ. ಮನೆಗೆ ಇದುವರೆಗೂ ಯಾವ ಸ್ನೇಹಿತನನ್ನು ಕರೆದುಕೊಂಡು ಬಂದಿಲ್ಲ. ರಜೆ ಇದ್ದಾಗ ತಾಯಿಯ ತವರು ಮನೆಗೆ cousin ಗಳ ಜೊತೆ ಹೋಗುತ್ತಿದ್ದ. ಕೆಲಸದ ಅನಿವಾರ್ಯತೆಯಿಂದ ತಾಯಿ ಆತನ ಜೊತೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ರಮೇಶನ ತಂದೆಯ ಕಡೆ ಅಜ್ಜಿ ಮತ್ತು ಅಜ್ಜಂದಿರು ಆತ ಹುಟ್ಟುವ ಮುನ್ನವೇ ಸ್ವರ್ಗಸ್ತರಾಗಿದ್ದರು. ತಾಯಿಯ ತಂದೆ ಕೂಡ ಇರಲಿಲ್ಲ, ಅಜ್ಜಿಯೊಬ್ಬರು ಮಾತ್ರ ಇದ್ದರು. ಗಂಡು ಮಕ್ಕಳ ಮನೆಗೆ ಕೆಲವು ಸಲ ಬರುತ್ತಿದ್ದ ಅಜ್ಜಿ ಮಗಳ ಮನೆಗೆ ಬರುತ್ತಿರಲಿಲ್ಲ. ಆದ್ದರಿಂದ, ರಮೇಶನಿಗೆ ಅಜ್ಜಿಯ ಜೊತೆಯೂ ಅಷ್ಟಾಗಿ ಒಡನಾಟವಿರಲಿಲ್ಲ. ಆಫೀಸಿನಲ್ಲಿ ಕೂಡ ತಾನಾಯಿತು ತನ್ನ ಕೆಲಸವಾಯಿತು ಎಂದಿರುತ್ತಿದ್ದ. ಒಳ್ಳೆಯ ಕೆಲಸಗಾರ ಎಂಬ ಹೆಸರು ಪಡೆದಿದ್ದಾನೆ. ಆದರೆ, ಅದಾವುದರ ಬಗ್ಗೆಯೂ ತಂದೆ ತಾಯಂದರೊಂದಿಗೆ ಹೆಚ್ಚು ಮಾತಾಡಿದ್ದಿಲ್ಲ.

ಅವರ ತಾಯಿ ಮಾತು ಮುಂದುವರೆಸುತ್ತಾ 2 ವರ್ಷದ ಹಿಂದೆ ರಮೇಶ ಒಂದು ಹುಡುಗಿಯನ್ನು ಪ್ರೀತಿಸಿದ್ದ. ಆ ಹುಡುಗಿಯನ್ನು ಅವರ ತಂದೆ ತಾಯಿಯರೊಂದಿಗೆ ಕರೆದುಕೊಂಡು ಬಂದಿದ್ದ. ಆಗ ಇವನಿಗೆ 26 ವರ್ಷ. ಇನ್ನೆರಡು ವರ್ಷ ಬಿಟ್ಟು ಮದುವೆ ಮಾಡುವುದು ನಮ್ಮ ತೀರ್ಮಾನವಾಗಿತ್ತು. ಹುಡುಗಿಗೆ ಕೂಡ 26 ಆಗಿದ್ದ ಕಾರಣ ಮದುವೆ ಮಾಡುವ ಹಂತದಲ್ಲಿದ್ದರು. ಅವರು ಕಾಯಲಿಲ್ಲ, ಬದಲಾಗಿ ಬೇರೆ ಹುಡುಗನೊಟ್ಟಿಗೆ ಮದುವೆ ಮಾಡಿದರು. ಈ ಘಟನೆ ನಂತರ ರಮೇಶ ಮಾತಾಡುವುದನ್ನು ಕಮ್ಮಿ ಮಾಡಿದ್ದ. ನಾವು ಹೇಳಿದ್ದನ್ನೆಲ್ಲಾ ಚಾಚೂ ತಪ್ಪದೆ ಮಾಡುತ್ತಾನೆ. ಯಾವುದನ್ನು ವಿರೋಧ ಮಾಡಿವುದಿಲ್ಲ, ನಾವು ಏನು ಹೇಳುತ್ತೀವೋ ಅಷ್ಟನ್ನು ಮಾತ್ರ ಮಾಡತ್ತಾನೆ. ಈಗ, ಮದುವೆ ಮಾಡೋಣ ಎಂದುಕೊಂಡರೆ ಹೀಗೆ ಮಾತಾಡುವುದನ್ನೇ ನಿಲ್ಲಿಸಿದ್ದಾನೆ. ತಾಯಿ ಮುಖದಲ್ಲಿ ಮಗ ತಮ್ಮನ್ನು ಪ್ರೀತಿಸುತ್ತಿಲ್ಲ, ಹೇಳಿದ್ದನ್ನು ಮಾತ್ರ ಕೇಳುತ್ತಾನೆ, ಈಗ ಪೂರ ಮೌನಿಯಾಗಿದ್ದಾನೆ ಎಂಬ ಚಿಂತೆ ಮತ್ತು ಆತ ಸ್ವಾರ್ಥಿ, ಬೇಜವಾಬ್ದಾರಿ ಎಂಬ ಕೋಪದ ಭಾವ ಕಾಣಿಸುತ್ತಿತ್ತು. 

ನಂತರ ರಮೇಶನನ್ನು ಮಾತಾಡಿಸುವ ಪ್ರಯತ್ನ ಮಾಡಿದೆ. ಇಲ್ಲ, ಆತ ಮಾತ್ರ ಅದೇ ನಿರ್ಲಿಪ್ತತ್ರೆಯ ಭಾವದಲ್ಲಿ ಮೌನಿಯಾಗೆ ಇದ್ದ. ಆತನ ಹವ್ಯಾಸ ಟೇಬಲ್ ಟೆನಿಸ್, ಓದು ಮತ್ತು ಬರವಣಿಗೆ ಎಂದು ತಿಳಿದುಕೊಂಡೆ. ಆತನ ಈ ಹವ್ಯಾಸದ ಬಗ್ಗೆ ತಂದೆ ತಾಯಂದರಲ್ಲಿ ಹೆಚ್ಚು ಆಸಕ್ತಿ ಇಲ್ಲದಿರುವುದನ್ನು ಗಮನಿಸಿದೆ. ಆತ ಅಪರೂಪಕ್ಕೆ ದಿನಚರಿ ಬರೆಯುತ್ತಿದ್ದ ಮತ್ತು ಕೆಲವು ತಿಂಗಳಿಂದ ಅದನ್ನು ಬರೆಯುವುದನ್ನು ನಿಲ್ಲಿಸಿದ್ದ ಎಂದು ಅರ್ಥೈಸಿಕೊಂಡೆ. ದಿನಚರಿ ಪುಸ್ತಕಗಳನ್ನು ನಾನು ತೆಗೆದುಕೊಂಡು 2 ದಿನ ಬಿಟ್ಟು ನಾನು ಕೆಲಸ ಮಾಡುವ ಆಸ್ಪತ್ರೆಗೆ ತಂದೆ ತಾಯಿ ಇಬ್ಬರಿಗೆ ಬರಲು ಹೇಳಿದೆ. 

2 ದಿನದಲ್ಲಿ ರಮೇಶನ ದಿನಚರಿ ಪುಸ್ತಕಗಳನ್ನು ಓದಿದೆ. ತಾನು ಪ್ರೀತಿಸಿದ ಹುಡುಗಿ ಬಗ್ಗೆ ಭಾವುಕನಾಗಿ ಕೆಲವು ಕವಿತೆಯ ಸಾಲುಗಳನ್ನು ಬರೆದಿದ್ದ. ಕೊನೆಯಲ್ಲಿ ತನ್ನ ತಾಯಿ ಮದುವೆಯ ಕಾರಣ ದಿನಚರಿ ಬರೆಯುವುದನ್ನು ನಿಲ್ಲಿಸು ಎಂದು ಹೇಳಿದ್ದಾರೆಂದು 5 ತಿಂಗಳಿಂದ ಬರೆಯುವುದನ್ನು ನಿಲ್ಲಿಸಿದ್ದ. 

ಆಸ್ಪತ್ರೆಗೆ ಬಂದ ರಮೇಶನ ತಂದೆ ತಾಯರನ್ನು ಕೂರಿಸಿ ಹೇಳಿದೆ. ರಮೇಶ ಚಿಕ್ಕ ವಯಸ್ಸಿನಿಂದಲೂ ಒಬ್ಬಂಟಿಗನಾಗೆ ಬೆಳೆದಿದ್ದಾನೆ. ನಿಮ್ಮ ಬದುಕಿನ ಕಷ್ಟದ ಪರಿಚಯ ಅವನಿಗಿದೆ. ಹಾಗಾಗಿ ತನ್ನ ಆಸೆ, ಆಕಾಂಕ್ಷೆ, ಭಯ, ದುಗುಡ ಎಲ್ಲವನ್ನು ಯಾರಂದಿಗೂ ಹೇಳಿಕೊಳ್ಳಲು ಆಗಲೇ ಇಲ್ಲ ಮತ್ತು ತನ್ನ ಭಾವನೆಗಳನ್ನು suppress ಮಾಡುತ್ತಲೇ ಬೆಳೆದ. ನೀವಿಬ್ಬರು ಅನ್ಯೋನ್ಯವಾಗಿ ಇರದ ಕಾರಣ ನಿಮ್ಮ ಹತ್ತಿರ ತನ್ನ ಭಾವನೆಗಳಿಗೆ ಪ್ರತಿಸ್ಪಂದನೆ ಸಿಗಬಹುದು ಎಂಬ ನಂಬಿಕೆ ಆತನಲ್ಲಿ ಹುಟ್ಟಲೇ ಇಲ್ಲ. ಅವನಿಗೆ ಸ್ನೇಹಿತರಾರು ಇಲ್ಲ, ಅಜ್ಜಿ ತಾತಂದಿರ ಪ್ರೀತಿ ಕೂಡ ಸರಿಯಾಗಿ ಸಿಗಲಿಲ್ಲ. ಎಲ್ಲರೊಂದಿಗೆ ಬೆರೆಯಲು ಬೇಕಿರುವ ಆತ್ಮವಿಶ್ವಾಸ, ಮನೆಗೆ ಸ್ನೇಹಿತರನ್ನು ಕರೆದುಕೊಂಡು ಬರುವ ಮತ್ತು ಅವರೊಂದಿಗೆ ಬೆರೆಯುವ ವಾತಾವರಣ ಅಥವಾ ಪ್ರೀತಿ ನಿಮ್ಮಲ್ಲಿ ಇರಲೇ ಇಲ್ಲ. ಆತ ರಜೆಗೆ ತಾತನ ಮನೆಗೆ ಹೋದರೂ ಅಲ್ಲಿ ಎಲ್ಲರ ನಡುವೆ ಒಂಟಿಯಾಗೇ ಇದ್ದ. ಕಾರಣ ನೀವು ಆತನ ಜೊತೆ ಇರಲಿಲ್ಲ. ನಿಮ್ಮ ಕುಡಿತದ ಕಾರಣ ಆತನಿಗೆ ತಂದೆ ಪ್ರೀತಿ ಎಂದರೆ ಏನು ಅಂತಾನೆ ಅರ್ಥವಾಗಿಲ್ಲ. ನೀವು ಕೆಲಸ ಮಾಡಿಕೊಂಡು ಕರ್ತವ್ಯವೆಂಬಂತೆ ಆತನನ್ನು ಓದಿಸಿದ್ದೀರಿ. ಡಿಗ್ರಿ ಮಾಡಿರುವುದು ತನ್ನ ಹೆಸರಿನಲ್ಲಿ ಸಾಲಮಾಡಿ ಮತ್ತು ಆ ಸಾಲವನ್ನು ಆತನೇ ತೀರಿಸಿದ್ದಾನೆ. ಇದು ಆತನ ದೃಷ್ಟಿಯಲ್ಲಿ ನೀವು ಆತನ ತಾಯಿಯಾಗಿ ನಿಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದೀರ ಆದ್ದರಿಂದ ಆತ ನಿಮ್ಮೊಟ್ಟಿಗಿನ ಬದುಕನ್ನು ಕರ್ತವ್ಯ ಎಂದುಕೊಂಡಿದ್ದಾನೆ. ತಾಯಿಯ ಪ್ರೀತಿ ಎಂಬುದು ಕೂಡ ಆತನ ಮನಸ್ಸಿಗೆ ಅರ್ಥವಾಗಿಲ್ಲ.

ಮೊದಲ ಬಾರಿ ಆತ ಪ್ರೀತಿ ಎಂಬುದನ್ನು ಹೊಸ ಭಾವವೆಂಬಂತೆ ತಾನು ಪ್ರೀತಿಸಿದ ಹುಡುಗಿಯಲ್ಲಿ ಕಂಡುಕೊಂಡಿದ್ದಾನೆ. ಆ ಹುಡುಗಿಯ ಮೇಲಿರುವ ಪ್ರೀತಿಗೆ ಅವನು ಬರೆದಿರುವ ಸಾಲುಗಳೇ ಸಾಕ್ಷಿ. ಆ ಹುಡುಗಿಯ ಹತ್ತಿರ ಮಾತ್ರ ಮನಸ್ಸು ಬಿಚ್ಚಿ ಮಾತಾಡಿದ್ದಾನೆ. ಮೊದಲ ಬಾರಿ ಆತ ನಿಮ್ಮ ಬಳಿ ಮನಸಾರೆ ಮಾತಾಡಿದ್ದು ಮತ್ತು ತನ್ನ ಆಸೆಯನ್ನು ಹೇಳಿಕೊಂಡದ್ದು ಆ ಹುಡುಗಿಯೊಂದಿಗಿನ ಮದುವೆ ವಿಚಾರವನ್ನು. ನೀವು ಯಾಕೆ ಒಪ್ಪಲಿಲ್ಲ ಅಥವಾ ಆ ಹುಡುಗಿಯ ಮನೆಯವರು ಒಪ್ಪಲಿಲ್ಲವೋ ರಮೇಶನಿಗೆ ಬೇಡ. ಆದರೆ, ಅವನ ದೃಷ್ಟಿಯಲ್ಲಿ ನೀವು ಆತನಲ್ಲಿ ಹುಟ್ಟಿದ ಒಂದೇ ಒಂದು ಆಸೆಯನ್ನು ಕೊಂದಿದ್ದೀರಾ! ನನ್ನ ದೃಷ್ಟಿಯಲ್ಲಿ ಅವನು ಮನಸ್ಸು ತೆರೆದುಕೊಳ್ಳುವುದಕ್ಕೆ ನೀವೇ ತಡೆಗೋಡೆ! ಮದುವೆ  ವಿಚಾರದಲ್ಲಿ ಆತನಿಗೆ ದಿನಚರಿ ಬರೆಯುವುದನ್ನು ನಿಲ್ಲಿಸಲು ಮತ್ತು ಅವುಗಳನ್ನು ಸುಟ್ಟುಹಾಕಲು ಹೇಳಿದ್ದಿರ. ನಿಮ್ಮ ದೃಷ್ಟಿಯಲ್ಲಿ ಅದು ಸರಿ ಆದರೆ, ಆತನಿಗೆ ತನ್ನ ಮನಸ್ಸಿನ ಮಾತುಗಳನ್ನಾಡಬಹುದಾದ ಏಕೈಕ ಮಾರ್ಗ. ನಿಮ್ಮ ಮಾತಿಗೆ ಕರ್ತವ್ಯವೆಂಬಂತೆ ಬರವಣಿಗೆ ನಿಲ್ಲಿಸಿದ್ದಾನೆ. ತನ್ನ ಯಾವುದೇ ಮಾತಿಗೆ ನಿಮ್ಮ ಹತ್ತಿರ ಬೆಲೆ ಇಲ್ಲ ಎಂಬುದು ಆತನ ಮನಸಲ್ಲಿ ಗಾಢವಾಗಿ ಉಳಿದಿದೆ. ಮದುವೆಯನ್ನು ಸಹ ನಿಮ್ಮ ಜವಾಬ್ದಾರಿ ಕಳೆದುಕೊಳ್ಳಲು ಮಾಡುತ್ತಿರುವ ಕರ್ತವ್ಯ ಎಂದು ಆತನ ಮನಸ್ಸಿನಲ್ಲಿದೆ. ಹಾಗಾಗಿ ನಿಮ್ಮ ಮಾತುಗಳಿಗೆ ಪ್ರತಿಕ್ರಯಿಸಬಾರದು ಎಂದು ಸಂಪೂರ್ಣ ಮೌನಿಯಾಗಿದ್ದಾನೆ. ಕರ್ತವ್ಯವೆಂದು ಆಫೀಸಿನ ವಿಚಾರ ಮಾತಾಡುತ್ತಿದ್ದಾನೆ ಅಷ್ಟೇ. ಆತನಿಗೆ ಬೇಕಾಗಿರುವುದು ಪ್ರೀತಿ, ಕರ್ತವ್ಯದ ಪಾಠವಲ್ಲ ಎಂದು ನನ್ನ ಮಾತುಗಳನ್ನು ಹೇಳಿದೆ.

ನನ್ನ ಮಾತನ್ನು ಕೇಳಿದ ರಮೇಶನ ತಂದೆ ಮತ್ತು ತಾಯಿ ನನ್ನನ್ನು ವಿಚಿತ್ರವಾಗಿ, ವ್ಯಂಗ್ಯವಾಗಿ ನೋಡುತ್ತಾ ದಿನಚರಿ ಪುಸ್ತಕಗಳನ್ನು ಹಿಂಪಡೆದರು. ರಮೇಶನ ತಾಯಿ "ನಮ್ಮ ಮಗನ ತೊಂದರೆ ಸರಿಮಾಡಿ ಎಂದರೇ ನೀವು ನಮ್ಮದೇ ಸಮಸ್ಯೆ ಅನ್ನುತ್ತೀರಲ್ಲ. ಅಲ್ಲ ಡಾಕ್ಟ್ರೇ... ನಿಮಗೆ ಇದು ಏನು ಅಂತ ತಿಳಿಯುತ್ತಾ? ನಾವು ಬೇರೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತೇವೆ" ಎಂದು ಹೊರಟೇ ಬಿಟ್ಟರು.

June 23, 2014

ಸಾಗರದಾಚೆ

ಅಂದು 11 March 2014, ಮೊದಲಸಲ ನನ್ನ 24 ವರ್ಷದ ಜೀವನದಲ್ಲಿ ಮನೆಯಿಂದ ಹೊರಗೆ ಹೊರಟಿದ್ದೆ Germanyಗೆ. Office ಕೆಲಸ ಎಂಬುದಷ್ಟೇ ಕಾರಣ. ಹೊರದೇಶ, ಹೊಸಭಾಷೆ, ಹೊಸ ಸಂಸೃತಿ ಹೇಗೆ ಹೊಂದಿಕೊಳ್ಳಬಹುದು ಎಂಬ ದುಗುಡ, ಅದಕ್ಕಿಂತಲೂ ಹೆಚ್ಚಾಗಿ, ಭಯ, ನನಗಲ್ಲ ಅಮ್ಮನಾಗಿತ್ತು. ನನಗೋ ಒಬ್ಬನೇ ಇರುವುದಕ್ಕಿಂತ ಅಡುಗೆ ನಾನೇ ಮಾಡಿಕೊಳ್ಳಬೇಕಲ್ಲ ಎನ್ನುವುದಷ್ಟೇ ಚಿಂತೆಯಾಗಿತ್ತು. ಮಿಕ್ಕವಿಚಾರವೆಲ್ಲ ಏನು ಅನಿಸುತ್ತಿರಲ್ಲಿಲ್ಲ. ರಾತ್ರಿ 1 ಗಂಟೆಗೆ ಅಮ್ಮ, ಕೃಷ್ಣ ಮಾವ, ಸಿಂಹನೊಂದಿಗೆ Airportಗೆ ಹೊರಟೆ. ಹೋಗಬೇಕಾದರೆ ಭಾರತವನ್ನು miss ಮಾಡಿಕೊಳ್ಳುತ್ತಿದ್ದೆ ಎಂದು ಅನಿಸಿತು.

ಮೊದಲ flight journey, ಆದರೂ ಅಂತ excitement ಇರಲಿಲ್ಲ. Qatar airwaysನಲ್ಲಿ ಹೊರಟ್ಟಿದ್ದೆ. Flight take off ಆಗಬೇಕಾದರೆ ಕೆಲವರ ಮುಖದಲ್ಲಿ ಗಾಬರಿ, ಹೆದರಿಕೆ ಕಾಣಿಸಿತು ಆದರೆ, ನನಗೆ ಅಂತದ್ದೇನು ಆಗಲ್ಲಿಲ್ಲ. ಹೋಗಬೇಕಾದರೆ ಮಧ್ಯದಲ್ಲಿ ಕುಡಿಯಲು, ತಿನ್ನಲು ಸಮಯಕ್ಕೆ ಸರಿಯಾಗಿ ತಂದುಕೊಡುತ್ತಿದ್ದರು. ಪಕ್ಕದಲ್ಲಿದ್ದವರನ್ನು ಮಾತಾಡಿಸುತ್ತಿದ್ದೆ. ಹಾಗೆ, ಸಮಯಕಳೆಯಿತು. 4:30 ಗಂಟೆ ಪ್ರಯಾಣದ ನಂತರ Dohaದಲ್ಲಿ ಇಳಿದೆವು. ಅಲ್ಲಿನ airport ತುಂಬ ದೊಡ್ಡದಾಗಿತ್ತು. ಬಹುಶಃ 3 terminal ಇದ್ದಿರಬಹುದು, ಒಂದೊಂದು terminal 30 gates ಇತ್ತು. ನಾನು terminal 1 ರಿಂದ 2ಗೆ ಹೋಗಬೇಕಿತ್ತು. Germanyಗೆ ಹೋರಟ್ಟಿದ್ದ 3 ಜನ ಪರಿಚಯವಾಗಿದ್ದರು, ನಾವು ಒಟ್ಟಿಗೆ flightನಿಂದ ಇಳಿದೆವು. Terminal 2ಗೆ ಹೊಗುವುದಕ್ಕೆ Benz bus ಬಂತು. ಅಲ್ಲಿ 1 ಗಂಟೆ ಸಮಯವಿತ್ತು. ಆ airport ಒಂದು ರೀತಿ ದೊಂಭಿಯಾಗಿತ್ತು. ತುಂಬಾ ಜನ ನೋಡಿ ಸುಸ್ತಾಗಿತ್ತು ಅಲ್ಲಿ ಸುತ್ತಾಮುತ್ತಾ ನೋಡಿದರೆ ಆ ದೇಶದ ಶ್ರೀಮಂತಿಕೆ ತಿಳಿಯುತ್ತಿತ್ತು. Petroleum ಅವರ ಆದಾಯದ ಮೂಲ ಎಂಬುದು ಮನಸ್ಸಿಗೆ ಬಂತು.

ಅಲ್ಲಿಂದ Germanyಗೆ ಹೊರಟೆವು, flightನಿಂದ ಹೊರಗೆ ದೃಶ್ಯ ಮನೋಹರವಾಗಿತ್ತು. Doha airport ಸಮುದ್ರ ತೀರದಲ್ಲಿ ನಿರ್ಮಾಣವಾಗಿತ್ತು, ನೋಡಿ ಖುಷಿಯಾಯಿತು. ಈ ಸಲ ನನ್ನ ಪಕ್ಕದಲ್ಲಿ ಯಾರೋ Chinaದವರು ಕೂತಿದ್ದರು. ಅವರಿಗೆ English ಬರುತ್ತಿರಲ್ಲಿಲ್ಲ, ಅವರ ಭಾಷೆ ನನಗೆ ತಿಳಿಯದಾಗಿತ್ತು ಆದ್ದರಿಂದ ಮಾತಾಡುವ ಪ್ರಮೇಯವೇ ಬರಲಿಲ್ಲ. ಏನು ಮಾಡಲು ತೋಚಲಿಲ್ಲ, ರಾತ್ರಿ ಎಚ್ಚರವಾಗಿದ್ದೆ ಆದ್ದರಿಂದ ನಿದ್ರೆಗೆ ಜಾರಿದೆ. ಸಂಜೆಗೆ ನಾವು Frankfurt airport ತಲುಪಿದೆವು. Doha airport ಅಷ್ಟು ದೊಡ್ಡದಾಗಿರಲ್ಲಿಲ್ಲ. ಆದರೆ Europe ದೇಶದ ಶ್ರೀಮಂತಿಕೆ ಎದ್ದುಕಾಣುತ್ತಿತ್ತು.
 
Frankfurt ನಲ್ಲಿ luggage collect ಮಾಡಿಕೊಂಡು train ticket ತೆಗೆದುಕೊಂಡು Stuttgart ಗೆ ಹೊರಟೆವು. Train ತುಂಬಾ ವೇಗವಾಗಿ ಹೋಗುತ್ತಿತ್ತು (ಸುಮಾರು 300 kph). ಹೊರಗೆ ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರು; ಹುಲ್ಲುಹಾಸಿಗೆ ಎಂತ್ತಿತ್ತು. ಒಂದೇ ಎತ್ತರಕ್ಕೆ ಸಮಾನವಾಗಿ ಬೆಳೆದ ಹುಲ್ಲು, ನೋಡಿ ಆಶ್ಚರ್ಯವಾಯಿತು, ಅದ್ಭುತ ಎನ್ನಿಸಿತು. ಎಲ್ಲೋ ಅಲ್ಲೊಂದು ಇಲ್ಲೊಂದು ಮನೆ ಕಾಣಿಸಿತು. ನನಗೂ ಅಷ್ಠೋತ್ತಿಗೆ ಪ್ರಯಾಣ ಸಾಕಾಗಿತ್ತು. Stuttgart ಗೆ ಬಂದು taxi ಮಾಡಿಕೊಂಡು room ತಲುಪುವಷ್ಟರಲ್ಲಿ ರಾತ್ರಿ 7:00 ಆಗಿತ್ತು. ತಿನ್ನುವುದಕ್ಕೆ ಏನು ಮಾಡಿದೆ ಎಂದು ಮರೆತು ಹೋಗಿದೆ.

ಇನ್ನು ಹೀಗೆ ಹೇಳುತ್ತಾ ಹೋದರೆ ದಿನಚರಿ ಆಗುತ್ತದೆ. ಅದರ ಬದಲು ನಾನು ನೋಡಿದ ಜಾಗ ಮತ್ತು ಆ ಜಾಗಗಳಿಗೆ ಹೋದಾಗ ಆದ ಅನುಭವಗಳನ್ನು ಬಿಚ್ಚಿಡುತ್ತೇನೆ.
 
ನಾನು ಇದ್ದ 3 ತಿಂಗಳಲ್ಲಿ Germany ಬಗ್ಗೆ ನನಗೆ ಅನಿಸಿದ್ದು, ಶಿಸ್ತು ಎಂಬ ಪದಕ್ಕೆ Germany ಎಂಬುದನ್ನು ಸಮಾನಾರ್ಥಕವಾಗಿ ಬಳಸಬಹುದು. ಶಿಸ್ತು ಎನ್ನುವುದನ್ನು ಅಲ್ಲಿಯ ಜನಗಳು ಪಾಲಿಸುವುದಲ್ಲದೇ ಅವರು ಸಾಕಿರುವ ಪ್ರಾಣಿಗಳಿಗೂ ಕಲಿಸುತ್ತಾರೆ. ಉದಾಹರಣೆಗಳು ಬೇಕಾದಷ್ಟು ಕೊಡಬಹುದು, ಕೇವಲ ಎರಡನ್ನು ಮಾತ್ರ ಹೇಳುತ್ತೇನೆ. ರಸ್ತೆ ದಾಟಲು ಕೆಲವು ಜಾಗಗಳನ್ನು ಮಾಡಿರುತ್ತಾರೆ. ಅದೇನೇ ಆಗಲಿ ಜನರು ಅಲ್ಲಿಗೇ ಹೋಗಿ ರಸ್ತೆ ದಾಟುತ್ತಾರೆ. ರಸ್ತೆ ದಾಟುತ್ತಿದ್ದರೆ ಗಾಡಿಗಳು 50ಮಿ ಹಿಂದೆ ನಿಲ್ಲುತ್ತಿತ್ತು. ಇನ್ನು Zebra crossingನಲ್ಲಿ ರಸ್ತೆದಾಟಬೇಕಾದರೆ ಎರಡನೇ ಯೋಚನೆ ಮಾಡದೆ ದಾಟಬಹುದು. ಗಾಡಿಗಳು ನಾವು ದಾಟುವ ತನಕ ಕಾಯುತ್ತವೆ, ಪಾದಾಚಾರಿಗಳಿಗೆ ತುಂಬಾ ರಕ್ಷಣೆ ಆ ದೇಶ ಒದಗಿಸುತ್ತದೆ. The major means of transport is train. ಆ ವ್ಯವಸ್ಥೆ ತುಂಬಾ ಚೆನ್ನಾಗಿದೆ. 10 ನಿಮಿಷಕ್ಕೆ ಒಂದು train ಖಂಡಿತ ಬರುತ್ತದೆ. ಎಲ್ಲಾ ನಿಲ್ದಾಣಗಳಲ್ಲು mapಗಳಿರುತ್ತದೆ. Train ಬರುವ ಸಮಯವನ್ನು ಪ್ರದರ್ಶನ ಮಾಡಲಾಗುತ್ತಿತ್ತು. ಅದು ಹೇಳುವ ಸಮಯಕ್ಕೆ train ಬರುತ್ತಿತ್ತು. ಒಂದೇ ಒಂದು ನಿಮಿಷ ಕೂಡ ವ್ಯತ್ಯಾಸನಾಗುತ್ತಿರಲ್ಲಿಲ್ಲ. ನಾವು stop ತಲುಪುವುದು 1 ನಿಮಿಷ ತಡವಾಯಿತೆಂದರೆ train miss ಆಯಿತು ಎಂದೆ ಅರ್ಥ.

ನಮ್ಮಲ್ಲಿರುವಂತೆ ನಿರ್ವಾಹಕ (conductor) ಇರುವುದಿಲ್ಲ. ಪ್ರತಿ ನಿಲ್ದಾಣದಲ್ಲೂ ATM machine ತರಹದ್ದು ಒಂದು ಇರುತ್ತದೆ, ಅಲ್ಲಿ ದುಡ್ಡು ಹಾಕಿ ticket ತೆಗೆದುಕೊಳ್ಳಬೇಕು. ನಾನು ನೋಡಿದ ಮಟ್ಟಿಗೆ checking ಅಂತ ಯಾರು ಬರುತ್ತಿರಲ್ಲಿಲ್ಲ. ಆದರೆ ಪ್ರತಿಯೊಬ್ಬರು ticket ತೆಗೆದುಕೊಳ್ಳುತ್ತಾರೆ. ಅದನ್ನು ನೋಡಿದರೆ ಶಿಸ್ತು ಎನ್ನುವುದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು ತೋರುತ್ತದೆ. ಬಹುಶಃ ಅಲ್ಲಿನ ಶಿಕ್ಷೆ, ಶಿಸ್ತು ಕ್ರಮಗಳ ಕಾರಣವೂ ಆಗಿರಬಹುದು ಆದರೆ ಜನರು ಶಿಸ್ತಿನಿಂದ ನಡೆದುಕೊಳ್ಳುತ್ತಾರೆ ಎಂಬುದು ಮುಖ್ಯನಾದ ವಿಷಯ. Parisಗೆ ಹೋಗಿದಾಗ ಅಲ್ಲಿನ ಕ್ರಮವನ್ನು ನೋಡಿದೆ. ಅಲ್ಲಿ trainಗಳು ನೆಲಮಾಳಿಗೆಯಲ್ಲಿ ಓಡಾಡುತ್ತದೆ. ಮೇಲೆ ticket ತೆಗೆದುಕೊಂಡು ನೆಲಮಾಳಿಗೆಗೆ ಹೋಹುವ ಮೊದಲು ticket swipe ಮಾಡಿ ಹೋಗಬೇಕು. ಆದರೆ ಕೆಲವರು ticket ತೆಗೆದುಕೊಳ್ಳದೆ gate ಜಿಗಿದು ಹೋಗುತ್ತಿದ್ದರು. Germany ಇಂದ Parisಗೆ ಇರೋದು 450 ಕಿ.ಮಿ, ಅಷ್ಟಕ್ಕೆ ಎಷ್ಟೋಂದು ವ್ಯತ್ಯಾಸ ಅಂದುಕೊಂಡು.

ನಾನು ಹೋಗಿದ್ದ ಪ್ರಮುಖ ಸ್ಥಳಗಳು: Paris, Munich, Heidelberg, Shinsheim Museum, Oberstdorf, Bad Urach, Black forest, Wiehelma.

Paris:
Eiffel tower ಚೆನಾಗಿತ್ತು. ಅದನ್ನು ಕಟ್ಟಿದವರ ಶ್ರಮಕ್ಕೆ hats off. ಅಲ್ಲಿ ಸೂರ್ಯಾಸ್ತವಾಗುವುದು ತುಂಬ ತಡ. ರಾತ್ರಿ 9:30 ನಂತರ ಸ್ವಲ್ಪ ಕತ್ತಲೆ ಎನ್ನುವ ಹಾಗಾಯಿತು. Tower lightnings ನೋಡಿಕೊಂಡು ಬಂದೆವು. ಮೈಸೊರು ಅರಮನೆಗೆ ದೀಪ ಹಾಕಿದರೆ ಇದಕ್ಕಿಂತ ಚೆಂದ ಎಂದು ಆ ಕ್ಷಣ ಅನ್ನಿಸಿತು. ಅಲ್ಲಿಗೆ ಹೋಗಿ ಬರುವ ಹಲವರು, ಹಲವು ರೀತಿಯಲ್ಲಿ ಹೊಗಳುವುದನ್ನು ಕೇಳಿದ್ದೇನೆ, ಆದರೆ ನನಗೆ ಹೊಗಳುವುದಕ್ಕಾಗಲಿ, ವರ್ಣಿಸುವುದಕ್ಕಾಗಲಿ ಸ್ಪೂರ್ತಿ ಸಿಗಲಿಲ್ಲ, ಅದೇನು ಅದ್ಭುತ ಅನ್ನಿಸಲಿಲ್ಲ.

Munich: 
ಇಲ್ಲಿ ಪ್ರಮುಖವಾಗಿ ನೋಡಲೇಬೇಕಾದ ಜಾಗಗಳೆಂದರೆ Dachau concentration camp, Olympic stadium, BMW museum (office), Duestche Museum ಮತ್ತು ಒಂದು Castle (ಹೆಸರು ನೆನಪಿಲ್ಲ). ಸಮಯದ ಅಭಾವದಿಂದ ನಾವು Dachau concentration camp, Olympic stadium, BMW museum ಮಾತ್ರ ನೋಡಲು ಸಾಧ್ಯವಾಯಿತು.
 
Dachau camp ಒಂದು ಐತಿಹಾಸಿಕ ಸ್ಥಳ. Adolf Hitler ಸ್ಥಾಪಿಸಿದ campಗಳಲ್ಲಿ ಬಹುದೋಡ್ಡ camp ಇದಾಗಿತ್ತು. ಅಲ್ಲಿ ಹಳೆ photos, ಅಲ್ಲಿನ ಶಿಕ್ಷೆಗಳ ಸ್ವರೂಪ, ನಡೆದ ಘಟನಾವಳಿಗಳೂ, ಎಲ್ಲವನ್ನು ವಿವರವಾಗಿ ಪ್ರದರ್ಶಿಸಿದ್ದರು. ಅಲ್ಲಿನ ಬಲಿಪಶುಗಳು (ಖೈದಿಗಳು ಎಂದು ಕರೆಯುವುದು ಸಮಂಜಸವಲ್ಲ) ಉಪಯೋಗಿಸುತ್ತಿದ್ದ ತಟ್ಟೆ, ಹಾಸಿಗೆ (ಒಂದರೆಡು) ಇಟ್ಟಿದ್ದರು. ಅದಷ್ಟನ್ನು ವಿವರವಾಗಿ ನೋಡುವಷ್ಟುರಲ್ಲಿ 4 ಗಂಟೆಗಳಾಗಿತ್ತು. ಆತ ನಡೆಸಿದ ಹತ್ಯಾಕಾಂಡದ ತಾಣವಾದ Gas Chamber ಕೂಡ ನೋಡಿದೆ. ಆ ಜಾಗ ನೋಡಿದ ಮೇಲೆ ಆತ ಎಷ್ಟು ಕ್ರೂರಿಯಾಗಿದ್ದಿರಬಹುದು ಎಂದು ಅನ್ನಿಸಿತು.
ಹಾಗಾದರೆ Hitler ಏನು ಒಳ್ಳೆ ಕೆಲಸವೇ ಮಾಡಿಲ್ಲವ? ಎಂದು ಯೋಚನೆ ಬಂತು. ಹಾಗೆ ವಿವರಗಳನ್ನು Googleನಲ್ಲಿ ಹುಡುಕುತ್ತಾ ಹೋದೆ Germanyಯಲ್ಲಿ ಈಗಿರುವ transportation facilityಯನ್ನು ಶುರುಮಾಡಿದ್ದು ಅವನೇ, ಇನ್ನು ಅನೇಕ ಕೆಲೆಸಗಳನ್ನು ಮಾಡಿದ್ದಾನೆ. ಆದರೆ, ಆತ ಮಾಡಿದ್ದು Jewsರ ಹತ್ಯಾಕಾಂಡ. ಎರಡನೇ ಮಹಾಯುದ್ಧದ ನಂತರ America, France, USSR, England ದೇಶಗಳು Germanyಯ ಅಭಿವೃದ್ಧಿಗಾಗಿ ನಾಲ್ಕು ಭಾಗಗಳಾಗಿ ಹಂಚಿಕೊಂಡರು. 1945 ನಂತರ ಒಂದೆರಡು ವರ್ಷಗಳು Hitler ಬದುಕಿದ್ದರೆ ಅವನು ನಡೆಸಿದ ಹತ್ಯಾಕಾಂಡ ಇಷ್ಟು ಬೆಳಕಿಗೆ ಬರುತ್ತಿರಲಿಲ್ಲ. Hitler ಬಗ್ಗೆ ಚರ್ಚೆ ಮಾಡುವುದರೊಂದಿಗೆ ಒಂದು ಒಳ್ಳೆ ಜಾಗ ನೋಡಿದ ತೃಪ್ತಿ ನನಗೆ ಸಿಕ್ಕಿತು.

Heidelberg and Shinsheim Museum:
ಈ museumನಲ್ಲಿ ಹಳೆ ಕಾರುಗಳು, Planeಗಳು, ವಿಶ್ವಮಹಾಯುದ್ಧದಲ್ಲಿ ಉಪದೋಗಿಸಿದ ಬಂಕರ್ ಗಳು, ಹೀಗೆ automotive ಗೆ ಸಂಬಂಧ ಪಟ್ಟ ವಸ್ತುಗಳನ್ನು ಆಲ್ಲಿ ಪ್ರದರ್ಶನ ಮಾಡಿದ್ದರು. ಅದನೆಲ್ಲಾ ನೋಡುವಷ್ಟರಲ್ಲಿ ಐದು ಗಂಟೆಗಳ ಕಾಲ ಹಿಡಿಯಿತು. ತುಂಬಾ ಚೊಕ್ಕವಾಗಿ ನಿರ್ವಹಣೆ ಮಾಡಿದ್ದರು. ಅದನ್ನು ನೋಡಿ ತುಂಬಾ ಖುಷಿಯಾಯಿತು.

Heidelberg ನಲ್ಲಿ ಒಂದು castle (ಅರಮನೆ)ಗೆ ಹೋಗಿದ್ದೆವು. ಅಲ್ಲಿನ ಸಾಂಸ್ಕೃತಿಕ ಪ್ರದೇಶ ಒಂದನ್ನು ನೋಡಿದ ಹಾಗಾಯಿತು. ಚೊಕ್ಕವಾಗಿ, ವೈಭವವಾಗಿತ್ತು, ಆದರೆ ಕಲಾತ್ಮಕವಾಗಿರಲ್ಲಿಲ್ಲ. ಮತ್ತೊಮ್ಮೆ ಮೈಸೂರು ಅರಮನೆ ನೆನಪಾಯಿತು. ಇಲ್ಲಿನ ಅರಮನೆಯಲ್ಲಿರುವ ಒಂದು ಕಂಬಕ್ಕೆ ಅಲ್ಲಿನ ಅರಮನ್ನು ಹೋಲಿಕೆ ಮಾಡುವುದಕ್ಕಾಗುವುದಿಲ್ಲ. ಕಲೆಯ ಬಗ್ಗೆ ಮಾತಾಡಬೇಕಾದರೆ Paris ಬಗ್ಗೆ ಹೇಳಲೇಬೇಕು. Parisನ ರಸ್ತೆ, ರಸ್ತೆಗಳಲ್ಲಿ ಚಿತ್ರಕಲೆ ರಾರಾಜಿಸುತ್ತದೆ. ಸೀನ್ ನದಿಯ ತೀರದಲ್ಲಿ ಅನೇಕ ಕಟ್ಟಡಗಳು Franceನ ಸಂಸ್ಕೃತಿಯನ್ನು ಬಿಂಬಿಸುತ್ತಿತ್ತು. ಸೇತುವೆಯ ಗೋಡೆಗಳ ಮೇಲೆ ಕೆತ್ತನೆಗಳು ಚೆನ್ನಾಗಿತ್ತು.

Germany ಮತ್ತು France ಎರಡೂ ಕಡೆ ಒಂದು ಸಮಾನವಾದ ನಂಬಿಕೆಯನ್ನು ಕಂಡೆ. ಗಂಡು, ಹೆಣ್ಣುಗಳ ಹೆಸರನ್ನು ಒಂದು ಬೀಗದ ಮೇಲೆ ಬರೆದು ಸೇತುವೆಗಳಿಗೆ ಆ ಬೀಗವನ್ನು ಹಾಕಿ, ಅದರ ಕೀಲಿಕೈಗಳನ್ನು ಬೆಸಾಕುವುದು. ಇದು Eiffel towerನಲ್ಲೂ ಕಾಣಬಹುದು. ಗಂಡು ಹೆಣ್ಣುಗಳ ಸಂಬಂಧ ಶಾಶ್ವತವಾಗಿರಲಿ ಎಂಬ ಒಂದು ನಂಬಿಕೆ.

ನಮ್ಮಲ್ಲಷ್ಟೇ ಅಲ್ಲ, ಅವರಲ್ಲೂ ಕೂಡ ಈ ರೀತಿಯ ನಂಬಿಕೆಗಳಿವೆ ಎಂದು ನನಗೆ ತಿಳಿಯಿತು, ನೋಡಿ ಖುಷಿಯೂ ಆಯಿತು.

ಮತ್ತು ಕೆಲವು ಜಾಗಗಳಿಗೆ ಹೋಗಿದ್ದೆವು Oberstdorf, Bad Urach, Black forest, Wiehelma. ಇವು ಹಿಮಾಚ್ಚಾದಿತ ಪ್ರದೇಶ, ಕಾಡು, ಬೆಟ್ಟ ಮತ್ತು ಮೃಗಾಲಯಗಳಾಗುತ್ತು. ಹೇಳುವಷ್ಟು ವಿಷೇಷವಾಗಿರಲ್ಲಿಲ್ಲ. ನಮ್ಮ ಹಿಮಾಲಯ, ಮಲೆನಾಡು, ಜೋಗಗಳ ಮುಂದೆ ಇವೆಲ್ಲ ಏನೇನು ಇಲ್ಲ ಎನ್ನಿಸಿತು. ಹೀಗೆ ಹೋಲಿಸಬಾರದು ಆದರೆ, ನಮ್ಮ ದೇಶದ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಮ್ಮಲ್ಲಿ ಇಲ್ಲದಿರುವುದು ಏನು ಇಲ್ಲ ಎನ್ನುವುದು ನಮಗೆ ತಿಳಿಯಬೇಕು.
 
ಅದೊಂದು ದಿನ ಕೋಣೆಗೆ ಬಂದ ಮೇಲೆ ಎನೋ ಒಂದು ರೀತಿ ಖುಷಿ, ಸಮಾಧಾನವಾಗುತ್ತಿತ್ತು. ಎನಿರಬಹುದು? ಎಂದು ಆ ಕ್ಷಣಕ್ಕೆ ಹೊಳೆಯಲಿಲ್ಲ. ಕೆಲ ಹೊತ್ತು ಯೋಚಿಸಿದೆ. ಅಂದು ಹೊರಗೆ ಹೋಗಿದ್ದಾಗ ಭಿಕ್ಷುಕನೊಬ್ಬನಿಗೆ 1 Euro ಭಿಕ್ಷೆ ಹಾಕಿದ್ದೆ. ಸಾಮಾನ್ಯವಾಗಿ ನಾನು ಭಿಕ್ಷೆ ಹಾಕುವವನಲ್ಲ, ಅಥವಾ ಹಾಕಿದ್ದರೂ ಆ ದಿನ ನನಗಾದ ಖುಷಿ ಎಂದು ಆಗಿರಲ್ಲಿಲ್ಲ. ಐರೋಪ್ಯ ರಾಷ್ಟ್ರದ ಒಬ್ಬನಿಗೆ ಭಾರತೀಯನಾದ ನಾನು ಭಿಕ್ಷೆ ಹಾಕದ್ದು...!!! ಇದು ನನ್ನ ಸಂತೋಷಕ್ಕೆ ಕಾರಣ, ಅವರು ನಮ್ಮ ಹತ್ತಿರ ಬೇಡಬೇಕು, ಇದು ನಮಗೆ ಹೆಮ್ಮೆಯ ವಿಚಾರ.

ನಾನು ನೋಡಿದ ಹಾಗೆ ಇಡೀ Germanyಯಲ್ಲಿ ಹರಿಯುವುದು ಒಂದೇ ನದಿ; Nekar. ಅಲ್ಲಿ ಎಲ್ಲಾ ರೈಲುಗಳು ವಿದ್ಯುತ್ಚಾಲಿತ. ಮನುಷ್ಯರಿಗಿಂತ ಯಂತ್ರಗಳು ಕೆಚ್ಚಿನ ಕೆಲಸಗಳು ನಿರ್ವಹಿಸುತ್ತದೆ. ನಾನು ನೋಡಿದ ಅಷ್ಟೂ ಜಾಗಗಳಲ್ಲಿ ರಸ್ತೆ ಉಬ್ಬು (hump) ಇರಲಿಲ್ಲ. Railway gateಗಳು ಇರಲಿಲ್ಲ. ಇದ್ದರು ಕೆಲವು highwayಗಳಲ್ಲಿ ಮಾತ್ರ ಇತ್ತು. ಒಂದು ಕಡೆಯಂತೂ 5 ರೈಲು ಹಳಿಗಳು ಒಂದನ್ನೊಂದು ಹಾದು ಹೋಗುತ್ತದೆ, ಆದರೆ, ಅಲ್ಲಿ signal ಬಿಟ್ಟರೆ ಏನು ಇಲ್ಲ ಮತ್ತು ಒಂದೂ ಅಪಘಾತ ಇದುವರೆಗೂ ಸಂಭವಿಸಿಲ್ಲ...!!!

ನನ್ನ ಸ್ನೇಹಿತನೊಬ್ಬ ಅಲ್ಲಿಗೆ ಬಂದಿದ್ದ. Officeಗೆ ನಡೆದು ಹೋಗಿದ್ದೆವು ನಾನು ಸುಮ್ಮನೆ ಕೇಳಿದೆ " ಹೇಗೆ ಅನಿಸುತ್ತದೆ" ಎಂದು. ನನಗೆ ಅಷ್ಟರಲ್ಲಿ ಅಮ್ಮ, ಮನೆ, ನಮ್ಮವರನೆಲ್ಲ ಬಿಟ್ಟು ಬಂದು ಸಕಾಗಿತ್ತು. ವಾಪಸ್ಸು ಬಂದರೆ ಸಾಕು ಎನ್ನುವ ಹಾಗಿದ್ದೆ. ಆತ - "ಇಲ್ಲಿ ಒಂದು ಸಣ್ಣ ಮನೆ ಮಾಡಿಕೊಂಡು ಆರಾಮಾಗಿ ಜೀವನ ಸಾಗಿಸಬಹುದು" ಎಂದ. ಹೌದು, ನಮಗೆ ಅಲ್ಲಿ ಸಿಗುವ ಸೌಲತ್ತುಗಳನ್ನು ನೋಡಿ ಹಾಗೆನ್ನಿಸುವುದು ಸಹಜ. ಆದರೆ, ನಮ್ಮ ದೇಶವನ್ನು ಆ ರೀತಿ ಮಾರ್ಪಾಡು ಮಾಡಬೇಕು ಎಂದು ಯಾರಿಗು ಅನಿಸುವುದಿಲ್ಲವ? ಇದೇ ರೀತಿ ಉತ್ತರಗಳನ್ನು ಕೆಲವರು ಹೇಳಿದನ್ನು ಕೇಳಿದ್ದೇನೆ. ಇಲ್ಲಿ ಓದಿ, ಬೆಳೆದು ವಿದ್ಯಾಭ್ಯಾಸ ಮುಗಿಸಿ ಕೊನೆಗೆ ಹೊರ ದೇಶದಲ್ಲಿ  ಜೀವನ ನಡೆಸುವುದು ಮತ್ತು ಅಲ್ಲಿಯವರಿಗಾಗಿ ದುಡಿಯುವುದು. ಇದರಲ್ಲಿ ಯಾವ ಪುರುಷಾರ್ಥವಿದೆಯೋ ನನಗೆ ತಿಳಿಯದು. Great Indians...!!!

ನಮ್ಮ ದೇಶದಲ್ಲಿ ಒಂದು BMW ಕಾರ್ ನೋಡಿದರೆ ವಾಹ್ ಎನ್ನುತ್ತಿದ್ದೆ. ಅಲ್ಲಿ BMW ಎಂದರೆ ನಮ್ಮಲ್ಲಿ Maruthi ಕಾರ್ ಇದ್ದಹಾಗೆ. ನೋಡಿ ನೋಡಿ ಬೇಸರವಾಗಿತ್ತು. ನಾನು ಕೆಲೆಸ ಮಾಡುತ್ತಿದ್ದ ಕಾರುಗಳು Audi, Benz, VW, Fiat, Landrover ಇವೆಲ್ಲಾ ಅವರಿಗೆ ಸಾಮಾನ್ಯವಾಗಿತ್ತು. ಅಲ್ಲಿಯ ಮಟ್ಟಿಗೆ ಶ್ರೀಮಂತರು ಎಂದು ಹೇಳಬೇಕಾದರೆ ಅವರ ಹತ್ತಿರ Porsche / Ferrari / Lamborghini ಈ ಮಾದರಿಯ ಕಾರುಗಳು ಇರಬೇಕು. ಇದನ್ನು ನೋಡಿ ಅವರ ಆರ್ಥಿಕ ಭಲಾಡ್ಯತೆಯನ್ನು ಅಂದಾಜಿಸಬಹುದು.

ಅಲ್ಲಿಗೆ ಹೋದ ದಿವಸ Benz ಕಾರಲ್ಲಿ ಮುಂದೆ ಕೂತು ಹೋಗುತ್ತಿದ್ದೆ. ಅಲ್ಲಿ driving ಎಡಗಡೆ. ನಾನು ಬಲಕ್ಕೆ ಕೂತಿದ್ದೆ; ಅಂದರೆ ನಮ್ಮ ದೇಶದಲ್ಲಿ ಅದು driver seat. ಒಂದು ತಿರುವಿನಲ್ಲಿ ಎದುರಿಗೆ bus ಬಂತು, ನನಗೆ ಗಾಬರಿಯಾಗಿ steering wheelಗಾಗಿ ಒಂದು ಕ್ಷಣ ಹುಡುಕಾಡಿದೆ. ನಂತರ ನನಗೆ ವಾಸ್ತವ ಹೊಳೆಯಿತು, ನಂತರ ನಗು ಬಂತು.

ವಾಪಸ್ಸು ಬರಬೇಕಾದರೆ BMWನಲ್ಲಿ ನಾನು ನನ್ನ ಸ್ನೇಹಿತ ಬಂದೆವು. ಇಬ್ಬರಿಂದಲೂ 22 Euros ತೆಗೆದುಕೊಂಡ, ಇಬ್ಬರಿಗೂ 40 euro bill ಹಾಕಿಕೊಟ್ಟ. ಅವನಿಗೆ ಹೇಗೆ ಸರಿತೂಗುತ್ತದೆ ತಿಳಿಯದು. ಆದರೆ, ಭ್ರಷ್ಟಾಚಾರ ಅಲ್ಲೂ ಇದೆ ಎಂದಾಯಿತು. Stuttgart to Frankfurt 205 ಕಿ.ಮಿ ಇರಬಹುದು, train ನಲ್ಲಿ 50 ನಿಮಿಷಗಳಲ್ಲಿ ತಲುಪಿದೆವು. ಈ ರೀತಿಯ ವೇಗವಾದ train ನಮ್ಮ ದೇಶಕ್ಕೆ ಎಂದು ಬರುವುದು ಎಂದು ಯೋಚಿಸುತ್ತಲೇ ಭಾರತಕ್ಕೆ ಬಂದು ಇಳಿದೆ.