ಪ್ರಸ್ತಾವನೆ:
ಇಲ್ಲಿ ನಾ ಹೇಳುತ್ತಿರುವ ಮಾತುಗಳನ್ನು ದಯವಿಟ್ಟು ಓದಬೇಡಿ. ಓದುವ ಹಾಗಿದ್ದಲ್ಲಿ...
ಇಲ್ಲಿ ನಾ ಹೇಳುತ್ತಿರುವ ಮಾತುಗಳನ್ನು ದಯವಿಟ್ಟು ಓದಬೇಡಿ. ಓದುವ ಹಾಗಿದ್ದಲ್ಲಿ...
- ಯಾವುದೇ ವ್ಯಕ್ತಿ ಮೇಲೆ (ಪ್ರಮುಖವಾಗಿ ಆಮಿರ್ ಖಾನ್) ಕುರುಡು ಅಭಿಮಾನವಿರಬಾರದು
 - ವಿವೇಕವಾಣಿಯ (ಸ್ವಾಮಿ ವಿವೇಕಾನಂದರ ಮಾತು) ಬಗ್ಗೆ ಅಪಸ್ವರವಿರಬಾರದು
 
ಅಭಿಪ್ರಾಯ:
ಕೆಲ ದಿನಗಳಿಂದ ಶ್ರೀಯುತ ಆಮಿರ್ ಖಾನ್ ರವರ ದೇಶದಲ್ಲಿನ ಅಸಹಿಶ್ಣುತೆ ಕುರಿತ ಹೇಳಿಕೆಯ ಬಗ್ಗೆ ವ್ಯಾಪಕವಾಗಿ ಚರ್ಚೆ ನಡೆದಿದೆ ಹಾಗು ಅಭಿಪ್ರಾಯಗಳು ವ್ಯಕ್ತವಾಗಿದೆ. ಈ ಕುರಿತಂತೆ ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳಲು ಬಯಸುತ್ತೇನೆ. ಎಲ್ಲರೂ ಮಾತಾಡುತ್ತಿದ್ದಾರೆ ನನ್ನದೇನಪ್ಪ ಎಂದುಕೊಳ್ಳಬಹುದು. ಆದರೆ, ಇದು ದೇಶದ ಕುರಿತಂತೆ ಆಡಿದ ಮಾತು, ಆದ್ದರಿಂದ ನನ್ನ ಅಭಿಪ್ರಾಯ ಕೆಲವರಿಗೆ ಪ್ರಶ್ನೆ ಹಾಗು ಉತ್ತರ ರೂಪದಲ್ಲಿ ಹಂಚಿಕೊಳ್ಳುವುದು ನನ್ನ ಕರ್ತವ್ಯ ಎಂದು ನಂಬಿದ್ದೇನೆ.
ಆಮಿರ್ ಖಾನ್ ಏನು ಹೇಳಿದರು ಎಂದು ಎಲ್ಲರಿಗೂ ತಿಳಿದಿದೆ. 'ಅಸಹಿಶ್ಣುತೆ' ಎಂಬುದು ಯಾವುದರ ಬಗ್ಗೆ ಎಂಬುದು ಸ್ಪಷ್ಟ ಪಡಿಸಲಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಹೆದರಿರುವ ಇವರುಗಳು ತಾವು ಎದುರಿಸುತ್ತಿರುವ ತೊಂದರೆಗಳಾದರು ಏನು? ಹಾಗೊಂದು ವೇಳೆ ಸಮಸ್ಯೆ ಇದ್ದಲ್ಲಿ ಅದನ್ನು ಬಗೆ ಹರಿಸಿಕೊಳ್ಳಬೇಕೆ ಹೊರತು ದೇಶ ಬಿಟ್ಟು ಹೋಗುವ ಮಾತಾಡುವುದು ಲಜ್ಜೆಗೇಡು ಹಾಗು ಪರಮ ಹೇಡಿತನ. ನಮ್ಮ ಮನೆಯಲ್ಲಿ ಕಸವಿದ್ದಲ್ಲಿ ಸ್ವಚ್ಚ ಮಾಡಬೇಕೆ ಪರಂತು ಮನೆ ಬಿಟ್ಟು ಹೊರಡುವುದಲ್ಲ. ಹಾಗೆ ಯೋಚನೆ ಮಾಡಿದ್ದೇ ಆದಲ್ಲಿ, ಅದು ಪರಮ ಮೂರ್ಖತನ. ಇಲ್ಲಿ ಈತ ಪ್ರಸ್ಥಾಪಿಸಿರುವುದು ದೇಶದ ಕುರಿತು, ಆದ್ದರಿಂದ ಈತನನ್ನು 'ದೇಶದ್ರೋಹಿ' ಎಂದು ಸಾರಬಹುದು. ಇಂತಹವರ ಪರವಾರಿ ಸಮಜಾಯಿಶಿ ಕೊಟ್ಟು ಮಾತಾಡುವವರಿಗೆ ಏನು ಹೇಳಬೇಕೋ ತಿಳಿಯದು. ಇನ್ನು ಸ್ವಲ್ಪ ಉಗ್ರತೆ (ಉಗ್ರವಾದ ಅಲ್ಲ) ಇಂದ ಹೇಳುವುದಾದರೆ ಇವರೂ ಸಹ ದೇಶ ದ್ರೋಹಿಗಳೇ. ಅಪರಾಧಿಗೆ ಸಹಾಯ ಮಾಡಿದವನು ಅನ್ನುತ್ತಾರಲ್ಲ ಹಾಗೆ...!!!
ಆಮಿರ್ ಖಾನನ ಬಗ್ಗೆ ನನಗೆ ಖಂಡಿತ ಗೌರವವಿತ್ತು. 'ಲಗಾನ್', 'ಮಂಗಲ್ ಪಾಂಡೆ', 'ತಾರೆ ಜ಼ಮೀನ್ ಪರ್', 'ರಂಗದೇ ಬಸಂತಿ', ಇಂತಹ ಒಳ್ಳೆ ಸಿನಿಮಾಗಳನ್ನು ಕೊಟ್ಟ ಇವನ ಬಗ್ಗೆ ಹೆಮ್ಮೆ ಇತ್ತು. 'ಧೂಮ್ 3' ಸಿನಿಮಾವನ್ನು ಇವರು ನಟಿಸಿದ್ದಾನೆ ಎಂಬ ಕಾರಣಕ್ಕೆ ನೋಡಿದವರಲ್ಲಿ ನಾನೂ ಒಬ್ಬ. ಇಷ್ಟಾದ ಮೇಲೆ ಈತ 'ಪಿ.ಕೆ.' ಎಂಬ ಸಿನಿಮಾವನ್ನು ಮಾಡಿದ. ಅದನ್ನು ನೋಡಿ ನನಗೆ ಇವನಲ್ಲಿ ಇದ್ದ ಗೌರವ ಕೊಂಚ ಕಡಿಮೆ ಆಯಿತು. ಧರ್ಮದ ಕುರಿತು ವಿಡಂಬನಾತ್ಮಕವಾಗಿ ಮಾಡಿರುವ ಚಿತ್ರ. ಧರ್ಮದ ಕುರಿತಾಗಿ ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸುವುದು ನನ್ನ ಮಟ್ಟಿಗೆ ಭಾರತದಲ್ಲಿ ಈತನ ಯೋಗ್ಯತೆಗೆ ಶೋಭೆ ತರುವುದಿಲ್ಲ. ಇರಲಿ, ಅದರ ಬಗ್ಗೆ ಮಾತು ನಂತರ. ಆದರೆ, ಈಗ ಮಾತಾಡಿರುವುದು ದೇಶದ ಕುರಿತಂತೆ. ಇದು ಖಡಾಖಂಡಿತವಾಗಿ 'ಧರ್ಮ ದ್ರೋಹಿ'ಯೂ ಹೌದು.
ಇಲ್ಲಿ 'ಧರ್ಮದ್ರೋಹಿ' ಎಂದು ಹೇಳಲು ಕಾರಣವಿದೆ. 'ಸ್ವಾಮೀ ವಿವೇಕಾನಂದ'ರು ಹೇಳುವಂತೆ -
- ಭಾರತದ ಅಂತಸತ್ವ ಅಡಗಿರುವುದು 'ಆಧ್ಯಾತ್ಮ' ಹಾಗು 'ಧರ್ಮ'ದ ಅಡಿಯಲ್ಲಿ.
 - ಎಲ್ಲಾ ದೇಶಕ್ಕು ಕೆಲವು ಸಿದ್ಧಾಂತವಿರುತ್ತದೆ ಹಾಗೆ, ಭಾರತದ ಸಿದ್ಧಾಂತ ಅಡಗಿರುವುದು 'ಧರ್ಮ'ದಲ್ಲಿ.
 
ಹಾಗೆ ವಿಶ್ಲೇಷಿಸಿ ನೋಡುವುದಾದರೆ ಭಾರತದಲ್ಲಿ, 'ಧರ್ಮ' ಎಂಬ ಪದಕ್ಕೆ 'ದೇಶ' ಎಂಬ ಅರ್ಥವೂ ಬರುತ್ತದೆ. ಇದರ ಅಡಿಯಲ್ಲಿ ಈತ 'ದೇಶದ್ರೋಹಿ' ಹಾಗು 'ಧರ್ಮದ್ರೋಹಿ' ಎಂದು ನಾನು ಧೈರ್ಯವಾಗಿ ಹೇಳುತ್ತೇನೆ .
ಈತನ ಮಾತಿನ ಹಿನ್ನಲೆಗೆ ಬರೋಣ.
'ಅಸಹಿಶ್ಣುತೆ' ಎಂಬುದು ಒಬ್ಬ ವ್ಯಕ್ತಿಯ ಕುರಿತಾಗಿಯೋ ಅಥವಾ ದೇಶದ ಪರಿಸ್ಥಿತಿಯೋ ತಿಳಿಯದಾಗಿದೆ. ನನಗನ್ನಿಸುವ ಪ್ರಕಾರ ಪ್ರಧಾನ ಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯ ವಿರುದ್ಧವಾಗಿ ಈ 'ಅಸಹಿಶ್ಣುತೆ ' ಪದವನ್ನು ಬಳಸಿದ್ದಾನೆ. ಒಬ್ಬ ವ್ಯಕ್ತಿಯನ್ನು ವಿರೋಧ ಮಾಡಲು ದೇಶದ ಬಗ್ಗೆ ಮಾತಡುವುದು ಎಷ್ಟರ ಮಟ್ಟಿಗೆ ಸರಿ? ನಾನು ಹೀಗೆ ಹೇಳಲು ಕಾರಣ ನಾನು ಮೋದಿ ಪರ ಎನ್ನುವುದಲ್ಲ. ಕಾರಣಗಳನ್ನು ಕೆಳಗಿನ ವಾಕ್ಯಗಳಲ್ಲಿ ತಿಳಿಸ ಬಯಸುತ್ತೇನೆ.
'ಅಸಹಿಶ್ಣುತೆ' ಎಂಬುದು ಒಬ್ಬ ವ್ಯಕ್ತಿಯ ಕುರಿತಾಗಿಯೋ ಅಥವಾ ದೇಶದ ಪರಿಸ್ಥಿತಿಯೋ ತಿಳಿಯದಾಗಿದೆ. ನನಗನ್ನಿಸುವ ಪ್ರಕಾರ ಪ್ರಧಾನ ಮಂತ್ರಿಯಾದ ಸನ್ಮಾನ್ಯ ನರೇಂದ್ರ ಮೋದಿಯ ವಿರುದ್ಧವಾಗಿ ಈ 'ಅಸಹಿಶ್ಣುತೆ ' ಪದವನ್ನು ಬಳಸಿದ್ದಾನೆ. ಒಬ್ಬ ವ್ಯಕ್ತಿಯನ್ನು ವಿರೋಧ ಮಾಡಲು ದೇಶದ ಬಗ್ಗೆ ಮಾತಡುವುದು ಎಷ್ಟರ ಮಟ್ಟಿಗೆ ಸರಿ? ನಾನು ಹೀಗೆ ಹೇಳಲು ಕಾರಣ ನಾನು ಮೋದಿ ಪರ ಎನ್ನುವುದಲ್ಲ. ಕಾರಣಗಳನ್ನು ಕೆಳಗಿನ ವಾಕ್ಯಗಳಲ್ಲಿ ತಿಳಿಸ ಬಯಸುತ್ತೇನೆ.
ಈತ ವಾಸ ಮಾಡುವ ಮುಂಬೈನ ಘಟನೆಗಳನ್ನು ಮೆಲಕು ಹಾಕೋಣ
- 1993 Serial Blast
 - 2003 Train Attacks
 - 2006 Serial Train Blast
 - 2008 Taj Hotel Attack
 
ಈ ಎಲ್ಲ ಘಟನೆಗಳು ನಡೆದಾಗ ಎಲ್ಲಿ ಅಡಗಿತ್ತು ಇವನ 'ಅಸಹಿಶ್ಣುತೆ'ಯ ಕೂಗು? ಆಗ, ಈತನಿಗೆ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಬರಲಿಲ್ಲವೇ? ಇಷ್ಟೆಲ್ಲ ಆದಾಗ ದೇಶ ಬಿಟ್ಟು ಹೋಗಬೇಕು ಎನ್ನಿಸಲ್ಲಿಲ್ಲವೇ? ಆಗ, ಇವನ ಬುದ್ಧಿ ಕತ್ತೆ ಹಲ್ಲು ಉಜ್ಜುತ್ತಿತ್ತೇ?
'ಯಾಕುಬ್' ಅಂತಹ ಭಯೋತ್ಪಾದಕನನ್ನು ನೇಣಿಗೆ ಹಾಕಿದಾಗ 'ನೇಣು ಶಿಕ್ಷೆ' ಹಾಗು 'ಮಾನವ ಹಕ್ಕು'ಗಳ ಬಗ್ಗೆ ಸಲ್ಮಾನ್ ಖಾನ್ ಮಾತಾಡುತ್ತಾನೆ. ಭಯೋತ್ಪಾದಕನೊಬ್ಬನ ಪರವಾಗಿ ಮಾತಾಡುವವನ ವಿರುದ್ಧ ಯಾಕೆ ಈತನ ಮಾತು ಬರುವುದಿಲ್ಲ? 'ಯಾಕುಬ್'ನ ಅಂತ್ಯಕ್ರಿಯೆ ಸಮಯದಲ್ಲಿ ಇದ್ದ ಜನ (ಭಯೋತ್ಪಾದಕರಿರಬಹುದು) ಸಂಖ್ಯೆ ನೋಡಿ ನನಗೆ ಗಾಬರಿ ಆಯಿತು. ಅಂದು 'ಡಾ. ಕಲಾಮ್'ರ ಅಂತ್ಯಕ್ರಿಯೆ ಕೂಡ ಇತ್ತು. ಆಗ ಈತನ 'ಅಸಹಿಶ್ಣುತೆ' ಕೂಗು ಎಲ್ಲಿ ಹೋಗಿತ್ತು? ಇತನೇನು ಮಣ್ಣು ತಿನ್ನುತ್ತಿದ್ದನೆ?
ನಮ್ಮ ದೇಶವನ್ನು ಇಷ್ಟು ವರ್ಷ ಆಳಿದ (ಹಾಳು ಮಾಡಿದ) 'ಕಾಂಗ್ರೇಸ್'ಗೆ 'ಮೋದಿ'ಯ ವೀಸಾ ವಿಚಾರವಾಗಿ ಪತ್ರ ಬರೆದವರ ಪಟ್ಟಿಯಲ್ಲಿ ಇತನ ಹೆಸರೇ ಮೊದಲು. ಶ್ರೀ ನರೇಂದ್ರ ಮೋದಿಯವರು ಗುಜ್ರಾತ್ ಹತ್ಯಾಕಂಡದ ವಿಚಾರದಲ್ಲಿ ನಡೆದುಕೊಂಡ ರೀತಿ ಎಲ್ಲರಿಗೂ ತಿಳಿದಿದೆ
(ಇಲ್ಲವಾದಲ್ಲಿ ತಿಳಿಯಿರಿ: India Today Report).
ಆಗ ಮಾತ್ರ ಈತ ಅಗ್ರಣಿಯಲ್ಲಿ ಯಾಕೆ ಬಂದ?
'Better late than never' ಎನ್ನುವ ಬದಲು 'Nothing is better than Nonsense' ಎನ್ನುವುದು ಈತನ ವಿಚಾರದಲ್ಲಿ ಹೆಚ್ಚು ಸಮಂಜಸ.
PK:
ಈ ಚಿತ್ರದಲ್ಲಿ ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರದಲ್ಲಿ ತಪ್ಪು (ಅವಹೇಳನ) ಎಂದು ಬಿಂಬಿಸುತ್ತಾರೆ. ಇವರಿಗೆ ಭಾರತದಲ್ಲಿ ಆಧ್ಯಾತ್ಮದ ಔನತ್ಯ ಸಾಧಿಸಿದ 'ಶ್ರೀ ರಾಮಕೃಷ್ಣ ಪರಮಹಂಸ'ರ ಬಗ್ಗೆ ತಿಳಿದಿರಲಿಲ್ಲವೇ?
ಈ ಚಿತ್ರದಲ್ಲಿ ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರದಲ್ಲಿ ತಪ್ಪು (ಅವಹೇಳನ) ಎಂದು ಬಿಂಬಿಸುತ್ತಾರೆ. ಇವರಿಗೆ ಭಾರತದಲ್ಲಿ ಆಧ್ಯಾತ್ಮದ ಔನತ್ಯ ಸಾಧಿಸಿದ 'ಶ್ರೀ ರಾಮಕೃಷ್ಣ ಪರಮಹಂಸ'ರ ಬಗ್ಗೆ ತಿಳಿದಿರಲಿಲ್ಲವೇ?
ಚಿತ್ರದ ನಿರ್ದೇಶಕ: ರಾಜಕುಮಾರ್ ಹೇಳುವಂತೆ 'ಪಿ.ಕೆ ಒಂದು ಹಿಂದು ಧರ್ಮದ ಬಗ್ಗೆ ವಿಡಂಬನಾತ್ಮಕ ಚಿತ್ರ' (ನೋಡಿ: PK Film). ಇಂತಹ ಚಿತ್ರ ಮಾಡಿದ ಮೇಲು ಇನ್ನು ಜೀವಂತವಾಗಿರುವುದೇ ಭಾರತದ 'ಸಹಿಶ್ಣುತೆ'ಯ ಸಂಕೇತ. ಎಲ್ಲರೂ ಹೇಳುವಂತೆ, ಇಸ್ಲಾಂ ಧರ್ಮದ (ಈತ ಮುಸಲ್ಮಾನ ಆದ್ದರಿಂದ) ಕುರಿತಂತೆ ಇಂತಹ ಒಂದು ಚಿತ್ರ ಮಾಡಿ (ಹಾಗೆ ಮಾಡುವುದು ಬೇಡ, ಆದರೆ ಮಾತಿಗೆ ಹೇಳುವುದಾದರೆ) ಪಾಕಿಸ್ತಾನದಂತಹ ಹೊರದೇಶಕ್ಕೆ ಒಮ್ಮೆ ಭೇಟಿಕೊಟ್ಟು ಜೀವಂತವಾಗಿ ಬರಲಿ ನೋಡುವ. ಕೆಲವರು ಈ ಚಿತ್ರದ ಬಗ್ಗೆ ಸಮರ್ತಿಸಿಕೊಂಡು ಮಾತಾಡುವವರಿಗೆ ಬುದ್ಧಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ (ಅವರಿಗೆ ದೇವರಲ್ಲಿ ನಂಬಿಕೆ ಇದ್ದಲ್ಲಿ (ಹಿಂದು ದೇವರಲ್ಲದ್ದಿದ್ದರೂ ಪರವಾಗಿಲ್ಲ)).
ಆಮೀರ್ ಖಾನರ ಹೆಂಡತಿ ಈ ಮಾತನ್ನು ಹೇಳಿದರು ಆದರೆ, ಆಮೀರ್ ಅಲ್ಲ ಎಂಬುದು ಸತ್ಯ. ಗಂಡ, ಹೆಂಡತಿ, ಮಕ್ಕಳನ್ನು ಒಂದು ಕುಟುಂಬವಾಗಿ ನೋಡುವ ಹಿಂದು ಧರ್ಮ ನಮ್ಮದು. ಯಾರೇ ಈ ಮಾತನ್ನು ಹೇಳಿದರೂ, ಕುಟುಂಬದ ಯಜಮಾನ ಆ ಮಾತಿಗೆ ಜವಾಬ್ದಾರನಾಗಿರುತ್ತಾನೆ. ಆಗಲಿ, ಆಮೀರ್ ಈ ಮಾತನ್ನು ಹೇಳಿಲ್ಲ ಒಪ್ಪಿಕೊಳ್ಳೋಣ. ಆದರೆ, ಸಮಾಜದ ಎದುರಿಗೆ ದೇಶದ ಕುರಿತಾಗಿ ಮಾತಾಡುವ ಮುನ್ನ ಯೋಚಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲವ? ಇರಲಿಕ್ಕಿಲ್ಲ, ಬಹುಶಃ 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಗಾದೆ ತಿಳಿದಿಲ್ಲ ಅಂತ ಕಾಣುತ್ತೆ.
ಆಮೀರ್ ಖಾನರ ಹೆಂಡತಿ ಈ ಮಾತನ್ನು ಹೇಳಿದರು ಆದರೆ, ಆಮೀರ್ ಅಲ್ಲ ಎಂಬುದು ಸತ್ಯ. ಗಂಡ, ಹೆಂಡತಿ, ಮಕ್ಕಳನ್ನು ಒಂದು ಕುಟುಂಬವಾಗಿ ನೋಡುವ ಹಿಂದು ಧರ್ಮ ನಮ್ಮದು. ಯಾರೇ ಈ ಮಾತನ್ನು ಹೇಳಿದರೂ, ಕುಟುಂಬದ ಯಜಮಾನ ಆ ಮಾತಿಗೆ ಜವಾಬ್ದಾರನಾಗಿರುತ್ತಾನೆ. ಆಗಲಿ, ಆಮೀರ್ ಈ ಮಾತನ್ನು ಹೇಳಿಲ್ಲ ಒಪ್ಪಿಕೊಳ್ಳೋಣ. ಆದರೆ, ಸಮಾಜದ ಎದುರಿಗೆ ದೇಶದ ಕುರಿತಾಗಿ ಮಾತಾಡುವ ಮುನ್ನ ಯೋಚಿಸಬೇಕು ಎಂಬ ಸಾಮಾನ್ಯ ಪ್ರಜ್ಞೆ ಇಲ್ಲವ? ಇರಲಿಕ್ಕಿಲ್ಲ, ಬಹುಶಃ 'ಸಂಸಾರ ಗುಟ್ಟು, ವ್ಯಾಧಿ ರಟ್ಟು' ಎಂಬ ಗಾದೆ ತಿಳಿದಿಲ್ಲ ಅಂತ ಕಾಣುತ್ತೆ.
ಮುಕ್ತಾಯ:
ಇದು ಸಾಮಾನ್ಯ ಪ್ರಜ್ಞೆ ಇರುವಂತಹ ಬುದ್ದಿವಂತರಿಗೆ ಮಾತ್ರ...!!!
ಇದು ಸಾಮಾನ್ಯ ಪ್ರಜ್ಞೆ ಇರುವಂತಹ ಬುದ್ದಿವಂತರಿಗೆ ಮಾತ್ರ...!!!
- ಎಲ್ಲಾ ವಿಚಾರವನ್ನು ಅರ್ಥಮಾಡಿಕೊಂಡು ಇಂತಹ ದೇಶ ದ್ರೋಹಿಗೆ, ದೇಶಬಿಟ್ಟು ಹೋಗಲು ಅಣುವು ಮಾಡಿಕೊಡಬೇಕು.
 - ಆತನ ಸಿನಿಮಾಗಳನ್ನು ಇನ್ನು ಮುಂದೆ ತಯಾರಿಸಲು ಅವಕಾಶವಿರಬಾರದು.
 - ಈವರೆಗು ನಟಿಸಿರುವ ಚಿತ್ರವನ್ನು ನೋಡಬಾರದು
 - ಆತನು ಪ್ರಚಾರ ಮಾಡುವ ವಸ್ತುಗಳನ್ನು ಭಹಿಷ್ಕರಿಸಬೇಕು.
 - ದೇಶದ ವಿಚಾರವಾದ್ದರಿಂದ ಆತನ್ನನ್ನೆ (ಕುಟುಂಬ ಸಮೇತ) ಭಹಿಷ್ಕರಿಸಬೇಕು.
 
'ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ' ಎಂಬ ಗಾದೆ ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎನ್ನಿಸುತ್ತದೆ. 'ನೀನೊಬ್ಬ ಬದಲಾಗು, ಜಗತ್ತಿನಲ್ಲಿರುವ ಮೂರ್ಖರಲ್ಲಿ ಒಂದು ಸಂಖ್ಯೆ ಕಮ್ಮಿಯಾಗುತ್ತದೆ' ಎಂಬ ವಿವೇಕಾನಂದರ ಮಾತು ನೆನಪಿಗೆ ಬರುತ್ತಿದೆ.
ಮೇಲೆ ತಿಳಿಸಿದಂತೆ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀ ಉಪೇಂದ್ರ ರವರು ಹೇಳುವಂತೆ ಇದು 'ಬುದ್ಧಿವಂತರಿಗೆ ಮಾತ್ರ', 'ತಲೆ ಇಲ್ಲದವರಿಗಲ್ಲ'. ನನ್ನ ಮಾತಿನಲ್ಲಿ ಹೇಳುವುದಾದರೆ 'ಅತೀ ಬುದ್ಧಿವಂತರಿಗಲ್ಲ'
ಈ ಎಲ್ಲಾ ಜಂಜಡಗಳಿಂದ ಮುಕ್ತವಾಗಿ, ಇಂತಹ ದ್ರೋಹಿಗಳು ದೇಶದಿಂದ ತೊಲಗಿ, ಇಂತಹವರನ್ನು ಬೆಂಬಲಿಸುವ ದ್ರೋಹಿಗಳು ನಿರ್ನಾಮವಾಗಿ ಭಾರತ ಮತ್ತಷ್ಟು ಭವ್ಯವಾಗಿ ಬೆಳೆಯಲಿ. ಭಾರತ 'ವಿಶ್ವಗುರು' ಪಟ್ಟದಲ್ಲಿ ವಿರಾಜಮಾನವಾಗಿ ಅಲಂಕೃತ ಎಂಬುದು ನನ್ನ ಮನದಾಳದ ಹಾರೈಕೆ.
ಮೇಲೆ ತಿಳಿಸಿದಂತೆ ಮತ್ತು ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀ ಉಪೇಂದ್ರ ರವರು ಹೇಳುವಂತೆ ಇದು 'ಬುದ್ಧಿವಂತರಿಗೆ ಮಾತ್ರ', 'ತಲೆ ಇಲ್ಲದವರಿಗಲ್ಲ'. ನನ್ನ ಮಾತಿನಲ್ಲಿ ಹೇಳುವುದಾದರೆ 'ಅತೀ ಬುದ್ಧಿವಂತರಿಗಲ್ಲ'
ಈ ಎಲ್ಲಾ ಜಂಜಡಗಳಿಂದ ಮುಕ್ತವಾಗಿ, ಇಂತಹ ದ್ರೋಹಿಗಳು ದೇಶದಿಂದ ತೊಲಗಿ, ಇಂತಹವರನ್ನು ಬೆಂಬಲಿಸುವ ದ್ರೋಹಿಗಳು ನಿರ್ನಾಮವಾಗಿ ಭಾರತ ಮತ್ತಷ್ಟು ಭವ್ಯವಾಗಿ ಬೆಳೆಯಲಿ. ಭಾರತ 'ವಿಶ್ವಗುರು' ಪಟ್ಟದಲ್ಲಿ ವಿರಾಜಮಾನವಾಗಿ ಅಲಂಕೃತ ಎಂಬುದು ನನ್ನ ಮನದಾಳದ ಹಾರೈಕೆ.





