December 28, 2017

ರೂಪಸಿ

 
 
ರೂಪಸಿ ಕಂಡಳು ಕನಸಿನಲಿ
ಮನಸಿನ ಆಳದ ಪುಟಗಳಲಿ
ಅವಳು ಆಡಿದ ಮಾತುಗಳು
ಕಳಚಿತು ಹೃದಯದ ಬೇನೆಯನು

ಮೊಗದಲ್ಲಿನ ನುಸು ನಾಚಿಕೆ ಕಾಡಿತೆನ್ನನೂ
ಪ್ರತಿ ನೋಟವು ಹೊಂಗನಸಿನ ಕದವ ತೆರೆಯಿತೂ

ಸ್ವರ್ಗವ ಕಂಡೆನು ಸ್ಪರ್ಶದಲಿ
ಆಕೆಯ ಮಡಿಲಿನ ತೊಟ್ಟಿಲಲಿ
ಸವಿದೆನು ಜೇನಿನ ಸಿಹಿಯನ್ನು
ಪ್ರೇಮದ ಮಾತಿನ ಸವಿಯನ್ನು

ಪ್ರತಿ ಜನ್ಮಕೂ ಉಸಿರಾಗುವೆ ಪ್ರೇಮ ಪಯಣದಿ
ಜಗ ಮರೆವೆನು ನೀನಿದ್ದರೆ ನನ್ನ ಜೊತೆಯಲಿ

December 27, 2017

ಕ್ರಿಸ್ಮಸ್ ಹಾಗು ಹೊಸ ವರ್ಷ ಹತ್ತಿರ ಬಂತು

ಬಹುರಾಷ್ಟೀಯ ಕಂಪನಿಗಳಲ್ಲಿ ಸೀಕ್ರೇಟ್ ಸಾಂತಾ ಆಡೋದು, ಅನೇಕರು ಹುಟ್ಟಿದ ಹಬ್ಬ ಎಂದು ಕೇಕ್ ತಿನ್ನೋದು, ವೈನ್ ಕುಡಿಯೋದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ. ಪಿಜ್ಜಾ ಅಂಗಡಿಗಳು ಹಲವು ಕೊಡುಗೆಗಳನ್ನು ಕೊಡುತ್ತವೆ. ಕೆಲವರು ಮೊಟ್ಟೆ ಇಲ್ಲದ ಕೇಕ್ ಮಾಡುತ್ತೇವೆ ಅಂತಾನು ಗ್ರಾಹಕರನ್ನು ಆಕರ್ಷಿಸುತ್ತಾರೆ. ಇಸ್ಕಾನ್ ದೇವಾಲಯವೂ ಸಹ ಇದಕ್ಕೆ ಹೊರತಾಗಿಲ್ಲ. ದೇವರ ಪ್ರಸಾದವೆಂದು ಕೇಕ್ ಕೊಡೋ ಪದ್ಧತಿ ಅಲ್ಲಿದೆ.

ಮಕ್ಕಳು, ಯುವಕ ಯುವಕಿಯರು ಮುಗಿಬಿದ್ದು ಹಬ್ಬದಲ್ಲಿ ಸಂಭ್ರಮಿಸುತ್ತಾರೆ. ಹಾಂ ಇವೆಲ್ಲ ತಪ್ಪು ಎಂದು ನಾನೇನು ಪ್ರತಿಪಾದಿಸುತಿಲ್ಲ ಬದಲಾಗಿ ಹೀಗೆ ಆಚಾರಿಸುವ ಮೊದಲು ಆ ಆಚರಣೆ ಹಿಂದಿನ ಅರ್ಥವನ್ನು ತಿಳಿದುಕೊಂಡು ಮುಂದುವರೆಯಿರಿ. ಯಾವುದೇ ವಿಚಾರವನ್ನು ಅರ್ಥ ಮಾಡಿಕೊಂಡು ಆಚರಿಸಿದರೆ ಒಳಿತು ಎಂಬುದಷ್ಟೇ ನನ್ನ ಉದ್ದೇಶ.

 
ಕ್ರಿಶ್ಟಿಯನ್ ಪಂಥದಲ್ಲಿ 3 ದೈವದ ಕಲ್ಪನೆ ಇದೆ.

1. ಗಾಡ್; ದಿ ಹೋಲಿ ಫಾದರ್
2. ಗಾಡ್; ದಿ ಹೋಲಿ ಸನ್
3. ಗಾಡ್; ದಿ ಹೋಲಿ ಘೋಸ್ಟ್

ಈ ಮೂರು ದೇವರಲ್ಲಿ ಕ್ರಿಸ್ತನನ್ನು ದಿ ಹೋಲಿ ಸನ್ ಎನ್ನುತ್ತಾರೆ. ಕ್ರಿಸ್ತನಿಗೂ ಕೇಕಿಗು, ವೈನಿಗೂ ಏನು ಸಂಬಂಧ ಎಂದು ಕೇಳಬಹುದು. ಸಂಬಂಧ ಖಂಡಿತ ಇದೆ. ಕ್ರಿಸ್ತನನ್ನು ಶಿಲುಬೆಗೆರಿಸಿ ಕೊಂದರು. ಮೂರು ದಿನಗಳ ನಂತರ ಆತ ಹುಟ್ಟಿ ಬಂದ ಎಂಬ ಕಲ್ಪನೆ ಇದೆ. ಅದೇ ರೀತಿ ಕ್ರಿಸ್ತ ತನ್ನ ದೇಹವನ್ನು ತನ್ನ ಜನರಿಗಾಗಿ ಬಿಟ್ಟು ಕೊಟ್ಟಿದ್ದೇನೆ ಎಂಬ ತ್ಯಾಗದ ಕಲ್ಪನೆ ಕೂಡ ಇದೆ. ಆ ಕಲ್ಪನೆಗೆ ಅನುಸಾರವಾಗಿ ಕ್ರಿಶ್ಟಿಯನ್ನರು ಕೇಕ್ ಅನ್ನೋದನ್ನು ಆತನ ದೇಹದ ಮಾಂಸ ಮತ್ತು ವೈನನ್ನು ಆತನ ದೇಹದ ರಕ್ತ ಎಂದು ಸೇವಿಸುತ್ತಾರೆ. ಇದನ್ನು ಕ್ರೌರ್ಯಾ ಅನ್ನೋದೋ ಅಥವಾ ಅಪರಿಮಿತವಾದ ಭಕ್ತಿ ಅನ್ನೋದು ತಿಳಿಯದು.

ಇದೇ ಕಲ್ಪನೆಯೊಂದಿಗೆ ಪೋರ್ಚುಗೀಸಿನ ಪಾದ್ರಿ ಫ್ರಾನ್ಸಿಸ್ ಕ್ಸೇವಿಯರ್ ಸ್ವಾತಂತ್ರ್ಯ ಪೂರ್ವದಲ್ಲಿ (1542) ಕುಡಿಯುವ ನೀರಿನ ಭಾವಿಯಲ್ಲಿ ವೈನಿನಲ್ಲಿ ಅದ್ದಿದ ಬ್ರೇಡ್ ತುಂಡನ್ನು ಹಾಕಿ ಮತಾಂತರ ಮಾಡಿದ ಉದಾಹರಣೆ ಇದೆ. ಈ ರೀತಿ ಮತಾಂತರ ಮಾಡಿಯೇ ಪೋರ್ಚುಗೀಸರು ಗೋವೆಯನ್ನು ಆಕ್ರಮಿಸಿಕೊಂಡರು. ನಂತರ ಯೂರೋಪಿಯನ್ನರು (ಕ್ರಿಶ್ಟಿಯನ್ನರು) ಭಾರತವನ್ನು ಆಳಿದರು. ಮುಂದೆ ಮೇಕಾಲೆ ತಂದಂತಹ ಆಂಗ್ಲ ಶಿಕ್ಷಣ ಪದ್ಧತಿಯಿಂದ ಭಾರತೀಯರು ಬೌದ್ಧಿಕವಾಗಿ ಯೂರೋಪಿಯನ್ನರಿಗೆ ಗುಲಾಮರಾದರು. ನಾಗಾಲಾಂಡ್, ಮಿಜೋರಾಮ್ ಪ್ರಾಂತ್ಯಗಳಲ್ಲಿ 1902ರಲ್ಲಿ 98% ರಷ್ಟು ಬುಡಕಟ್ಟಿನವರಿದ್ದರು 2% ಕ್ರಿಶ್ಟಿಯನ್ನರಿದ್ದರು. ಕೇವಲ 100 ವರ್ಷದಲ್ಲಿ ಪರಿಸ್ಥಿತಿ ಬದಲಾಗಿದೆ. ಈಗ 98% ಕ್ರಿಶ್ಟಿಯನ್ನರು 2% ರಷ್ಟು ಬುಡಕಟ್ಟು ಜನಾಂಗ ಅಲ್ಲಿದೆ.

ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನಾವಿನ್ನು ಮಾನಸಿಕವಾಗಿ ಯೂರೋಪಿಯನ್ನರಿಗೆ (ಕ್ರಿಶ್ಟಿಯನ್ನರಿಗೆ) ಗುಲಾಮರಾಗೆ ಉಳಿದಿದ್ದೇವೆ. 'ತಮಸೋಮ ಜ್ಯೋತಿರ್ಗಮಯ' ಅನ್ನುವ ನಾವು ದೀಪವನ್ನು ಆರಿಸಿ ಕೇಕ್ ತಿಂದು ಹಬ್ಬವನ್ನು ಆಚರಿಸೋದು ಎಷ್ಟರ ಮಟ್ಟಿಗೆ ಸರಿ ಎಂಬುದು ನನ್ನ ಕಾಡುತ್ತಿರುವ ಪ್ರಶ್ನೆ. ಕ್ರಿಸ್ಮಸ್ ಹಾಗು ಹೊಸ ವರ್ಷ ಬಂತು ಆದ್ದರಿಂದ ಕೇಕ್ ತಿನ್ನುವ ಮತ್ತು ವೈನ್ ಕುಡುಯುವ ಮುನ್ನ ಒಮ್ಮೆ ಯೋಚಿಸಿ.