ಈ ಸಲ ನನ್ನ ಸಾಗರದಾಚೆಗಿನ ಪ್ರಯಾಣ ಯೂರೋಪಿನ ಮತ್ತೊಂದು ರಾಷ್ಟ್ರವಾದ ಸ್ವೀಡನ್ ಕಡೆಗಿತ್ತು. ಇಲ್ಲಿಂದ ಆಮ್ಸ್ಟರ್ಡಾಮ್ ಮತ್ತು ಅಲ್ಲಿಂದ ಸ್ವೀಡನ್ ಗೆ ಹೋಗಬೇಕಿತ್ತು. ನಾನು ಸರಿಯಾದ ಸಮಯಕ್ಕೆ ವಿಮಾನವನ್ನು ಹಿಡಿದು ಸ್ವೀಡನ್ ತಲುಪಿದೆ, ಆದರೆ ನನ್ನ ಲಗೇಜ್ ಬರುವುದು ತಡವಾಯಿತು. ಸ್ವೀಡನ್ ಅಲ್ಲಿ ನಾನು ಇಳಿಯುತ್ತಿದ್ದಂತೆ ನನ್ನ ಲಗೇಜ್ ತಡವಾಗಿರುವ ಕುರಿತು ನನಗೆ ಸಂದೇಶ ತಲುಪಿತು. ವಿಮಾನ ನಿಲ್ದಾಣದಲ್ಲೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ ನಾನು ಹೋಟೆಲಿಗೆ ಬಂದೆ. ನನ್ನ ಲಗೇಜ್ ರಾತ್ರಿ ಬಂದು ತಲುಪಿತು.
ಈ ದೇಶದಲ್ಲಿ ನನ್ನ ಗಮನಕ್ಕೆ ಬಂದ ಕೆಲವು ವಿಚಾರಗಳನ್ನು ತಿಳಿಸಲು ಇಚ್ಚಿಸುತ್ತೇನೆ.
೧. ಹೋದ ದಿವಸದ ಸಂಜೆ ನಾನು ನನ್ನ ಸಹೋದ್ಯೋಗಿ ಹೊರಗೆ ತಿರುಗಾಡಲು ಹೋದೆವು. ಅಲ್ಲಿನ ತಾಪಮಾನ ೭-೮ ಡಿ.ಸೇ ಅಷ್ಟು ಇತ್ತು. ನನ್ನ ಸಹೋದ್ಯೋಗಿ ಟೋಪಿ, ಜರ್ಕಿನ್ ಮುಂತಾದ ಉಣ್ಣೆಯ ಬಟ್ಟೆಯನ್ನು ತೊಟ್ಟಿದ್ದರು. ನನ್ನ ಲಗೇಜ್ ಬಂದಿಲ್ಲದ ಕಾರಣ, ನಾನು ಯಾವುದೇ ಉಣ್ಣೆ ಬಟ್ಟೆ ಇಲ್ಲದೆ ಹೋದೆ. ಆ ಚಳಿಗೆ ಹೊಂದಿಕೊಳ್ಳಬೇಕಿತ್ತು, ಹೊಂದಿಕೊಂಡೆ. ಉಣ್ಣೆ ಬಟ್ಟೆ ಧರಿಸಿದ್ದ ನನ್ನ ಸಹೊದ್ಯೋಗಿ ನನ್ನನ್ನು ನೋಡಿಯೇ ಚಳಿ ಅನ್ನುತ್ತಿದ್ದರು. ಆಗ ನನಗೆ ಅನ್ನಿಸಿತು, ನಮಗೆ ಅವಕಾಶ ಇದ್ದಲ್ಲಿ ನಾವು ಕಷ್ಟಗಳನ್ನು ಬರದಂತೆ ತಡೆಯುತ್ತೇವೆ. ಆದರೆ ಏನು ಮಾಡಲಾಗದೆ ಕಷ್ಟಗಳು ಬಂದಾಗ ನಮ್ಮನ್ನು ನಾವು ಗಟ್ಟಿ ಮಾಡಿಕೊಂಡು ಅದನ್ನು ಎದುರಿಸಿ ನಿಲ್ಲಬೇಕು. ಅಲ್ಲಿ ನನ್ನ ಸಹೋದ್ಯೋಗಿ ನನಗೆ ಹೇಳಿದ ಮಾತು ಇನ್ನು ನೆನಪಿದೆ - 'You should respect the bad whether'. ಆದರೆ, ನನ್ನ ಮನಸ್ಥಿತಿ ಬೇರೆನೇ ಇತ್ತು. ಚಳಿಯನ್ನು ನಾನು ಎದುರಿಸಿ ನಿಲ್ಲುತ್ತೇನೆ ಹೊರತು ಅದಕ್ಕೆ ನಾನು ಬಗ್ಗುವುದಿಲ್ಲ ಎಂದು. ಈ ರೀತಿಯ ಮನಸ್ಥಿತಿಗೆ ಕಾರಣ ನನಗನ್ನಿಸಿದ್ದು 'ಭಗವದ್ಗೀತೆ' ಮತ್ತು ಸುಭಾಷ್ ಬೋಸರ ಮಾತು - 'ನಾವು ಪ್ರಕೃತಿಯನ್ನು ಗೆಲ್ಲಬೇಕಾದರೆ ಅದರ ವಿರುದ್ಧ ಹೋರಾಡುವುದನ್ನು ಕಲಿಯಬೇಕು'.
೧. ಹೋದ ದಿವಸದ ಸಂಜೆ ನಾನು ನನ್ನ ಸಹೋದ್ಯೋಗಿ ಹೊರಗೆ ತಿರುಗಾಡಲು ಹೋದೆವು. ಅಲ್ಲಿನ ತಾಪಮಾನ ೭-೮ ಡಿ.ಸೇ ಅಷ್ಟು ಇತ್ತು. ನನ್ನ ಸಹೋದ್ಯೋಗಿ ಟೋಪಿ, ಜರ್ಕಿನ್ ಮುಂತಾದ ಉಣ್ಣೆಯ ಬಟ್ಟೆಯನ್ನು ತೊಟ್ಟಿದ್ದರು. ನನ್ನ ಲಗೇಜ್ ಬಂದಿಲ್ಲದ ಕಾರಣ, ನಾನು ಯಾವುದೇ ಉಣ್ಣೆ ಬಟ್ಟೆ ಇಲ್ಲದೆ ಹೋದೆ. ಆ ಚಳಿಗೆ ಹೊಂದಿಕೊಳ್ಳಬೇಕಿತ್ತು, ಹೊಂದಿಕೊಂಡೆ. ಉಣ್ಣೆ ಬಟ್ಟೆ ಧರಿಸಿದ್ದ ನನ್ನ ಸಹೊದ್ಯೋಗಿ ನನ್ನನ್ನು ನೋಡಿಯೇ ಚಳಿ ಅನ್ನುತ್ತಿದ್ದರು. ಆಗ ನನಗೆ ಅನ್ನಿಸಿತು, ನಮಗೆ ಅವಕಾಶ ಇದ್ದಲ್ಲಿ ನಾವು ಕಷ್ಟಗಳನ್ನು ಬರದಂತೆ ತಡೆಯುತ್ತೇವೆ. ಆದರೆ ಏನು ಮಾಡಲಾಗದೆ ಕಷ್ಟಗಳು ಬಂದಾಗ ನಮ್ಮನ್ನು ನಾವು ಗಟ್ಟಿ ಮಾಡಿಕೊಂಡು ಅದನ್ನು ಎದುರಿಸಿ ನಿಲ್ಲಬೇಕು. ಅಲ್ಲಿ ನನ್ನ ಸಹೋದ್ಯೋಗಿ ನನಗೆ ಹೇಳಿದ ಮಾತು ಇನ್ನು ನೆನಪಿದೆ - 'You should respect the bad whether'. ಆದರೆ, ನನ್ನ ಮನಸ್ಥಿತಿ ಬೇರೆನೇ ಇತ್ತು. ಚಳಿಯನ್ನು ನಾನು ಎದುರಿಸಿ ನಿಲ್ಲುತ್ತೇನೆ ಹೊರತು ಅದಕ್ಕೆ ನಾನು ಬಗ್ಗುವುದಿಲ್ಲ ಎಂದು. ಈ ರೀತಿಯ ಮನಸ್ಥಿತಿಗೆ ಕಾರಣ ನನಗನ್ನಿಸಿದ್ದು 'ಭಗವದ್ಗೀತೆ' ಮತ್ತು ಸುಭಾಷ್ ಬೋಸರ ಮಾತು - 'ನಾವು ಪ್ರಕೃತಿಯನ್ನು ಗೆಲ್ಲಬೇಕಾದರೆ ಅದರ ವಿರುದ್ಧ ಹೋರಾಡುವುದನ್ನು ಕಲಿಯಬೇಕು'.
೨. ನಾನು ಉಳಿದುಕೊಂಡಿದ್ದ ಹೋಟೆಲಿನ ರೂಮಿನ ಕಪಾಟೊಂದರಲ್ಲಿ Bible - New Testament ನ ಒಂದು ಪ್ರತಿ ಇಟ್ಟಿದ್ದರು. ನನ್ನ ಸಹೊದ್ಯೋಗಿ ಕೋಣೆಯಲ್ಲೂ ಸಹ ಅದರ ಪ್ರತಿಯನ್ನು ಕಂಡೆ. ಜರ್ಮನಿಯಿಂದ ಮತ್ತೋರ್ವ ಸಹೋದ್ಯೋಗಿ ಮತ್ತೊಂದು ಹೋಟೆಲಿನಲ್ಲಿ ಉಳಿದುಕೊಂಡಿದ್ದ. ಅವನನ್ನು ವಿಚಾರಿಸಿದಾಗ ಅವನ ಕೋಣೆಯಲ್ಲೂ ಬೈಬಲ್ಲಿನ ಪ್ರತಿ ಇದ್ದದ್ದು ಸ್ಪಷ್ಟವಾಯಿತು. ಇದು ಅಲ್ಲಿನ ಜನ ತಮ್ಮ ಮತ ಪ್ರಚಾರ ಮಾಡುವ ಒಂದು ಪ್ರಕ್ರಿಯೆ. ತಮ್ಮ ದೇಶಕ್ಕೆ ಬರುವವರು ಯಾರೇ ಆಗಿರಲಿ, ತಮ್ಮ ಮತದ ಪ್ರಚಾರ ಆಗಬೇಕು ಎಂಬ ಉದ್ದೇಶದಿಂದ ಮಾಡುವ ಪ್ರಕ್ರಿಯೆ ಇದು. ಅಲ್ಲಿನ ಜನ, ಸಾಮಾಜಿಕ ವ್ಯವಸ್ಥೆ ತಮ್ಮ ಮತ ಪ್ರಚಾರಕ್ಕೆ ಅಂತಾನೆ ತಮ್ಮ ಸಂಪಾದನೆಯ ಒಂದು ಭಾಗವನ್ನು ಮೀಸಲಿಡುತ್ತದೆ. ಇದನ್ನು ನಾವು (ಭಾರತೀಯರು, ಹಿಂದುಗಳು) ಹೇರಿಕೆ ದೃಷ್ಟಿಯಿಂದ ನೋಡುವುದರ ಬದಲು ನಮ್ಮಲ್ಲಿ ಈ ರೀತಿಯ ಪದ್ಧತಿ ಯಾಕೆ ಅಳವಡಿಸಿಕೊಳ್ಳಬಾದರು ಎಂಬ ಪ್ರಶ್ನೆ ನನ್ನನ್ನು ನಾನೆ ಕೇಳಿಕೊಂಡೆ. ತಕ್ಷಣ ಮನಸ್ಸಿಗೆ ಹೀಗನ್ನಿಸಿತು - 'ನಮ್ಮ ಮಕ್ಕಳಿಗೆ ನಮ್ಮ ಧರ್ಮವನ್ನೇ ಸರಿಯಾಗಿ ಕಲಿಸುತ್ತಿಲ್ಲ. ಇನ್ನು ಈ ರೀತಿ ಹಿಂದುಗಳು ಮಾಡಿದ್ದೆ ಆದರೆ, ಅಸಹಿಷ್ಣುತೆ ಮತ್ತು ಮಾಡುವುವರನ್ನು ಮೂರ್ಖರೆಂದು ಜರಿದು ಕೂರಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ'.
೩. ಮತ್ತೊಂದು ಒಳ್ಳೆಯ ಸಾಮಾಜಿಕ ವ್ಯವಸ್ಥೆ ನಾನು ಗಮನಿಸಿದ್ದು ಎಂದರೆ 'ನಗದು ರಹಿತ ವ್ಯವಹಾರ (Cashless transaction)'. ನಾನು ಓಡಾಡಿದ ಅಷ್ಟೂ ಕಡೆ ಬಹುತೇಕ ಎಲ್ಲರೂ ಕಾರ್ಡ್ಗಳನ್ನು ಬಳಸುತ್ತಾರೆ. ಹಾಗೆಂದು ನಗದು ವ್ಯವಹಾರ ಇಲ್ಲ ಎಂದಲ್ಲ, ಆದರೆ ತೀರ ಕಡಿಮೆ. ಜರ್ಮನಿಯಲ್ಲೂ ಕಾರ್ಡ್ ವ್ಯವಹಾರವಿದೆ ಆದರೆ, ನಗದು ವ್ಯವಹಾರ ಸಹ ಅಷ್ಟೇ ಪ್ರಮಾಣದಲ್ಲಿ ಇದೆ. ಆದರಿಲ್ಲಿ ಶೇ ೯೯ರಷ್ಟು ನಗದು ರಹಿತ ವ್ಯವಹಾರ. ಅದೊಂದು ಸಂಜೆ ಆಫ಼ೀಸಿನ ಕೆಲಸ ಮುಗಿಸಿ, ರಾತ್ರಿ ಊಟಕ್ಕೆಂದು 'Vapiano' ಎಂಬ ರೆಸ್ಟುರಾಗೆ ಹೋದೆವು. ಸಾಮಾನ್ಯವಾಗಿ ಭಾರತದಲ್ಲಿ ನಾನು ಪಿಜ಼ಾ ತಿನ್ನುವುದಿಲ್ಲ, ಆದರೆ, ಅಲ್ಲಿ ನನಗೆ ಬೇರೆ ವಿಧಿ ಇರಲಿಲ್ಲ, ಆದ್ದರಿಂದ ತಿಂದೆ. ಅಲ್ಲಿನ ವಿಶೇಷ ಅಂದರೆ, ನಾವು ಆರ್ಡರ್ ಕೊಟ್ಟ ಮೇಲೆ ಒಂದು ಡಿಜಿಟಲ್ ದೀಪ ಕೊಡುತ್ತಾರೆ. ನಮ್ಮ ಆರ್ಡರ್ ತಯಾರಾದ ಮೇಲೆ ಆ ದೀಪ ಬೆಳಗುತ್ತದೆ, ನಾವು ಹೋಗಿ ಅದನ್ನು ಕೊಟ್ಟು ನಮ್ಮ ತಿಂಡಿಯನ್ನು ತರಬೇಕು. ಈ ವ್ಯವಸ್ಥೆ ಕೂಡ ಚೆನ್ನಾಗಿದೆ ಅನ್ನಿಸಿತು. ವಾಪಸ್ಸು ಹೊರಡುವ ಮುನ್ನ ಹಣದ ಪಾವತಿ ಮತ್ತೆ ಕಾರ್ಡ್ ಮುಖಾಂತರವೇ ಆಯಿತು.
೪. ಜರ್ಮನಿಯಲ್ಲಿ ರೈಲು ಪ್ರಮುಖ ಸಂಚಾರ ವ್ಯವಸ್ಥೆ ಮತ್ತು ಪ್ರತಿ ನಿಲ್ದಾಣದಲ್ಲೂ ಟಿಕೇಟ್ ಪಡೆಯುವ ಯಂತ್ರ ಇದೆ. ಇಲ್ಲಿ ಸಂಪೂರ್ಣ ಬಿನ್ನ. ಇಲ್ಲಿ ರೈಲು ಮತ್ತು ಬಸ್ಸು ಎರಡೂ ಪ್ರಮುಖ ಸಂಚಾರ ವ್ಯವಸ್ಥೆ. ಆದರೆ, ಟಿಕೇಟ್ ಪಡೆಯಲು ಮಾತ್ರ ಕೇಂದ್ರ ನಿಲ್ದಾಣಕ್ಕೆ (Central Station) ಹೋಗಬೇಕು. ಬಸ್ಸಿನಲ್ಲಾಗಲಿ, ರೈಲಿನಲ್ಲಾಗಲಿ ಟಿಕೇಟ್ ಕೊಳ್ಳಲು ಸಾಧ್ಯವಿಲ್ಲ. ಬಹುತೇಕ ಜನ ಬಸ್ ಹಾಗು ರೈಲಿನ ತಿಂಗಳ ಅಥವಾ ವಾರ್ಷಿಕ ಪಾಸ್ ಮಾಡಿಸಿರುತ್ತಾರೆ. ಈ ವಿಚಾರದಲ್ಲಿ ಜರ್ಮನಿ ಹೆಚ್ಚು ಅನುಕೂಲಕರವಾಗಿದೆ. ಇಲ್ಲಿನ ಟ್ಯಾಕ್ಸಿ ಚಾಲಕರು ಬಹುತೇಕ ಆಫ಼್ರಿಕದ ಉತ್ತರ ಭಾಗ ಮತ್ತು middle east ಪ್ರಾಂತ್ಯದವರಾಗಿದ್ದಾರೆ. ವಾಹನ ಚಲಿಸುವ ಪ್ರಕ್ರಿಯೆ ಬಗೆಗೆ ಹೇಳೋದಾದರೆ ಜರ್ಮನಿಯವರಷ್ಟು ಶಿಸ್ತು ಇವರಲ್ಲಿ ಇಲ್ಲ. ಟ್ಯಾಕ್ಸಿ ಚಾಲಕರು ಕೆಲವರು ನಿಯಮವನ್ನು ಮುರಿದದ್ದನ್ನು ಗಮನಿಸಿದೆ. ಶಿಸ್ತು ಎಂಬುದಕ್ಕೆ ಜರ್ಮನಿ ತಕ್ಕವಾದದ್ದು ಎಂಬುದಕ್ಕೆ ಸ್ವೀಡನ್ನಿನ ಪ್ರವಾಸದಿಂದ ಮತ್ತಷ್ಟು ಖಾತರಿಯಾಯಿತು.
೫. ಕೊನೆ ದಿವಸ ಕೆಲಸ ಮುಗಿದ ಮೇಲೆ ಮಧ್ಯಾಹ್ನ ಹೊರಗೆ ಸುತ್ತಾಡಿದೆವು. ವಾತಾವರಣವೂ ಆಹ್ಲಾದಕರವಾಗಿತ್ತು. ಅಲ್ಲಿದ್ದ ಉದ್ಯಾನಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಸುತ್ತಲು ಹಸಿರು, ನದಿ, ಆ ಜನಜಂಗುಳಿ ನಡುವೆ ಆ ಪ್ರಶಾಂತ ವಾತಾವರಣ ನನಗೆ ಬಹಳ ಹಿಡಿಸಿತು. ನಾನು ವಸಂತ ಋತುವಿನಲ್ಲಿ ಹೋಗಿದ್ದರೆ ಮರಗಳಲೆಲ್ಲ ಹೂ ಬಿಟ್ಟಿರುತ್ತಿತ್ತು. ಆದರೆ, ಈಗ ಮರಗಳೆಲ್ಲ ಬೋಳಾಗಿತ್ತು. ನಮ್ಮ ಕಾವೇರಿ ನದಿಯನ್ನು ನಾವು ಗಲೀಜು ಮಾಡಿದ್ದರೂ ತಿಳಿಯಾಗಿ ಕಾಣಿಸುತ್ತದೆ. ಅದರ ಸೌಂದರ್ಯ ನೋಡಿದವನೇ ಬಲ್ಲ. ಅದರೆ, ಸ್ವೀಡನ್ನಿನ ಜನ ಅದನ್ನು ಸ್ವಚ್ಚವಾಗಿ ಇಟ್ಟರೂ ನೀರು ತಿಳಿಯಾಗಿ ಮಾತ್ರ ಇರಲಿಲ್ಲ. ಏನಾದರು ಬರೆಯಬೇಕು ಅಂತ ಅನ್ನಿಸಿದರೂ ಬರೆಯಲು ಸ್ಪೂರ್ತಿ ಸಿಗಲಿಲ್ಲ. ಸೌಂದರ್ಯ ಎಂಬುದು ನೋಡುವ ಕಣ್ಣಲ್ಲಿ ಇದೆ, ಅದರ ಆಧಾರದ ಮೇಲೆ ಹೇಳುತ್ತಿದ್ದೇನೆ. ಲಕ್ಷಣದ ವಿಚಾರಕ್ಕೆ ಬಂದಾಗ ಭಾರತೀಯ ಹೆಣ್ಣು ಮಕ್ಕಳೇ ಸುಂದರಿಯರು, ಅಲ್ಲಿನ ಹೆಣ್ಣು ಮಕ್ಕಳಲ್ಲಿ ಅಂತಹ ಲಕ್ಷಣ, ಸೌಂದರ್ಯ ನನ್ನ ಕಣ್ಣಿಗೆ ಕಾಣಕಿಲ್ಲ. ನನ್ನ ಅನಿಸಿಕೆ ತಪ್ಪೂ ಇರಬಹುದು. ಬರೆಯಲು ಕೂತಾಗ ಪದಗಳು ಹೊರಹೊಮ್ಮದಿರಲು ಇದು ಒಂದು ಕಾರಣವಿರಬಹುದು.
ಹೀಗೆ ನನ್ನ ಒಂದು ವಾರದ ಸ್ವೀಡನ್ನಿನ ಪ್ರವಾಸ ಮುಗಿದಿತ್ತು. ಭಾರತಕ್ಕೆ ಬರುವಾಗ ಮನಸ್ಸು ತಿಳಿಯಾಗಿತ್ತು. ರಾಮಕೃಷ್ಣ ಆಶ್ರಮಕ್ಕೆ ಹೋಗಿ ಬಂದ ಮೇಲೆ ಖುಷಿಯಾಯಿತು.
























