July 27, 2020

ವೃತ್ತಿ ಬದುಕಿನ ಕಲಿಕೆ

07/11/2019 ರಂದು ಕಚೇರಿ ಅಲ್ಲಿ ಒಂದು ತರಬೇತಿ ಕಾರ್ಯಾಗಾರಕ್ಕೆ (training workshop) ಹೋಗಿದ್ದೆ. ತರಬೇತುಗಾರರನ್ನು ತಯಾರಿಸುವ ತರಬೇತಿ ಅರ್ಥಾತ್ Train the Trainers. ಒಂದಷ್ಟು ತತ್ವಗಳನ್ನು ಹೇಳಿ ತರಬೇತಿ ಸಮಯದಲ್ಲಿ ಹೇಗಿರಬೇಕು, ಸಮಯದ ಮಹತ್ವದ ಬಗ್ಗೆ ಇಡೀ ದಿವಸ ಕ್ಲಾಸ್ ರೂಮ್ ಪಾಠ ಆಗತ್ತೆ ಎಂದು ತಿಳಿದಿದ್ದೆ. ಆದರೆ, ಅಲ್ಲಿ ನಾನು ಕಲಿತಿದ್ದೆ ಬೇರೆ. ವಿಚಾರ ಹಳೆಯದಾದರೂ ಕಲಿತ ರೀತಿ ಹೊಸದಾಗಿತ್ತು.

ನಮ್ಮಲ್ಲಿ ನಾಲ್ಕು ತರಹದ ಜನ/ಇರುತ್ತಾರೆ
  • ನಾನು ಸರಿ, ನೀನು ಸರಿಯಿಲ್ಲ.
  • ನಾನು ಸರಿಯಿಲ್ಲ, ನೀನು ಸರಿ.
  • ನಾನೂ ಸರಿಯಿಲ್ಲ, ನೀನು ಸರಿಯಿಲ್ಲ.
  • ನಾನೂ ಸರಿ, ನೀನೂ ಸರಿ.


ತಂಪು ಅಥವಾ ತಣ್ಣಗಿನ ವಾತಾವರಣದಲ್ಲಿ ಏಕಾಗ್ರತೆ ಹೆಚ್ಚು ಎಂಬುದು ಅನುಭವದಿಂದ ತಿಳಿದಿದ್ದೆ. ಆದರೆ, ಮತ್ತೊಬ್ಬರಿಗೆ ಹೇಳಲು ಬರುತ್ತಿರಲಿಲ್ಲ. ಅಲ್ಲೊಂದು ಅದ್ಭುತವಾದ ಉದಾಹರಣೆ ಕೊಟ್ಟರು. 'ತಪಸ್ಸು ಮಾಡಲು ಹಿಮಾಲಯಕ್ಕೆ ಹೋಗುತ್ತಾರೋ ಅಥವಾ ಮರುಭೂಮಿಗೆ ಹೋಗುತ್ತಾರೋ?' ಎಂದು ಕೇಳಿದಾಗ ಎಷ್ಟು ಸರಳ ಮತ್ತು ಅದ್ಭುತ ಅನ್ನಿಸಿತು.


"ನಾನೂ ಸರಿ ನೀನು ಸರಿ" ಅನ್ನುವ ಒಂದು ತತ್ವ ಭಾರತ ಅಥವಾ ಹಿಂದೂ ಧರ್ಮ ಹೇಳುವುದೇ ಆಗಿದೆ. ಎಲ್ಲ ಮಾರ್ಗಗಳು ಒಂದೇ ಭಗವಂತನೆಡೆಗೆ ಹೋಗುತ್ತದೆ ಎಂಬ ಹಿಂದೂ ತತ್ವ ಎಲ್ಲ ಕಡೆ ಪ್ರಚಲಿತ ಎಂಬುದು ಸಾಬೀತಾಯಿತು.

Body, Mind, Thoughts, Action ಬಗೆಗೆ ಮಾತಾಡಿದರು. ಇದು ನನಗೆ ಚೆನ್ನಾಗೆ ಅರ್ಥವಾಯಿತು. ಭಾರತೀಯ ವೇದ ಪರಂಪರೆ ಹೇಳಿದ ತತ್ವವೇ ಅದು. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ಬುದ್ಧಿಮಯ ಕೋಶ ವಿಜ್ಞಾನಮಯ ಕೋಶ, ಆನಂದಮಯ ಕೋಶ.


ಈ ತರಬೇತಿ ಜರ್ಮನ್ ಮಾದರಿ ಆದ್ದರಿಂದ ಬುದ್ಧಿಮಯ ಕೋಶದ ತನಕ ವಿಚಾರ ದಾಖಲಾಗಿದೆ. ಭಾರತೀಯ ವೇದ ಪರಂಪರೆಯನ್ನು ನಾವು ಅರ್ಥೈಸಿಕೊಂಡು ಪಾಲಿಸುವುದೇ ಆದರೆ ಬುದ್ದಿ ಮಟ್ಟವನ್ನು ಮೀರಿ ಆನಂದದ ಮಟ್ಟವನ್ನು ತಲುಪುವ ಪ್ರಯತ್ನ ಮಾಡಬಹುದು. ಭಾರತೀಯ ಪರಂಪರೆ ಅರ್ಥಾತ್ ವೇದ ಪರಂಪರೆ ನಿಜಕ್ಕೂ ಆಳದಲ್ಲಿ ಅಧ್ಯಯನ ಮಾಡಬೇಕು. ಭಗವದ್ಗೀತೆಯನ್ನು ಓದಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅದ್ಭುತವನ್ನು ಸಾಧಿಸಬಹುದು.

ಒಟ್ಟಾರೆ ನನಗೆ ಈ ತರಬೇತಿ ಮತ್ತು ಭಾರತೀಯ ಪರಂಪರೆ ಅದ್ಭುತ ಅನ್ನಿಸಿತು. ಸ್ವಾಮಿ ವಿವೇಕಾನಂದರು ಹೇಳುತ್ತಾರೆ "ನಾನು ಚಿಕ್ಕವನಾದರೆ ಏನು ಓದುವುದಿಲ್ಲ. ಬದಲಾಗಿ, ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವುದನ್ನು ಅಭ್ಯಾಸ ಮಾಡುತ್ತೇನೆ" ಎಂದು. ಹಾಗೆ, ಈ ರೀತಿಯ ತರಬೇತಿ ನಮಗೆ ವಿದ್ಯೆ ಕಲಿಸುವ ಮೊದಲೇ ಆಗಿದ್ದರೆ ಒಳಿತು.

July 9, 2020

Generation After Independence




1. ಭಾರತದಿಂದ ಎಲ್ಲವನ್ನು ಪಡೆದುಕೊಂಡು, ಭಾರತಕ್ಕಾಗಿ ಏನು ಮಾಡದೆ, ವಿದೇಶದಲ್ಲಿ ಜೀವನ ಮಾಡುವುದನ್ನು ಅವರು "ಸಾಧನೆ" ಅನ್ನುತ್ತಾರೆ...!!!

Learn in India and Earn in foreign countries.
They call this an "Achievement" in life...!!!

2. ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚು ಅನ್ನುವುದು ಅವರಿಗೆ "ಖುಷಿ"ಯ ಸಂಗತಿ.
ವಾಹ್... ಎಂತಹ ಸಕಾರಾತ್ಮಕ ಯೋಚನೆ...!!!

Dollar is more valued than Indian Rupee. They call this "Happiness".
Wow... What an Optimistic thought...!!!

3. ತಾವು ತಮ್ಮ ಬಂಧು ಹಾಗೂ ಸ್ನೇಹ ವರ್ಗದವರಿಗಿಂತ ಆರ್ಥಿಕವಾಗಿ ಹೆಚ್ಚು ಸಬಲರಾಗಿರಬೇಕು. ಇದನ್ನು ಅವರು "ಯಶಸ್ಸು" ಅನ್ನುತ್ತಾರೆ.

We should be financially better compared to our friends and relatives. This they call "Success".

4. ಸರ್ಕಾರಕ್ಕೆ ತೆರಿಗೆ ಕಟ್ಟವುದಷ್ಟೇ ತಮ್ಮ "ಸಾಮಾಜಿಕ ಜವಾಬ್ದಾರಿ"ಎಂದು ಅವರ ನಂಬಿಕೆ.

They believe that "Social Responsibility" is paying tax to the government and nothing else.

5. ಕಲಿತ ವಿದ್ಯೆಗಿಂತ ಗಳಿಸಿದ ಅಂಕ ಮುಖ್ಯ. ಇದನ್ನು ಅವರು "ಬುದ್ಧಿವಂತಿಕೆ" ಅನ್ನುತ್ತಾರೆ.

Grades are more important than your learning. This they call as "Intelligence".

6. ಸತ್ಯ ಮಾತಾಡಿದರೆ "ಅಧಿಕ ಪ್ರಸಂಗಿ". ಪ್ರಶ್ನೆ ಕೇಳಿದರೆ "ತಲೆಹರಟೆ" ಅವರ ಪ್ರಕಾರ.

7. ಸಿನಿಮಾದಲ್ಲಿ ಆದ್ರೆ ಚಪ್ಪಾಳೆ ತಟ್ಟು.
ಜೀವನದಲ್ಲಿ ಆದ್ರೆ ತಲೆ ಮೇಲೆ ತಟ್ಟು.

Applaud if it is Cinema.
Criticize if it is Life.

8. ನಾವು ಹೇಳಿದ್ದಷ್ಟನ್ನೇ ಮಕ್ಕಳು ಮಾಡಬೇಕು. ಮಕ್ಕಳಿಗೆ ಇಷ್ಟವಿರಲಿ ಬಿಡಲಿ.
ಅವರ ಪ್ರಕಾರ ಇದು "ವಿಧೇಯತೆ".

Children should only do what elders say irrespective of children's likes and dislikes.
This they call as "Obedience".

9. ಮಾಡುವ ಎಲ್ಲ ಒಳ್ಳೆ ಕೆಲಸಗಳನ್ನು ಅವರು ಪ್ರೋತ್ಸಾಹಿಸುತ್ತಾರೆ ಎನ್ನುವುದು ಬರೀ 'ಭ್ರಮೆ'

It is a 'Myth' that they ecourage all good deeds that are done.

10. ಅವರ ಪ್ರಕಾರ ಮಕ್ಕಳು ಸ್ನೇಹಿತರೊಂದಿಗೆ ಸಿನಿಮಾಕ್ಕೆ ಹೋಗುವುದಕ್ಕಿಂತ ಆಶ್ರಮಕ್ಕೆ ಹೋಗುವುದು 'ಭಯಾನಕ'.

According to them its 'Dangerous' if children goes to Ashram than to movie with friends.

11. ಅವರಿಗೆ ಸಮಾಜವನ್ನು ದೂಷಿಸುವುದು ಗೊತ್ತೆ ಹೊರತು, ಪರಿಹಾರ ಕೊಡಲು ಎಂದಿಗೂ ಪ್ರಯತ್ನಿಸುವುದಿಲ್ಲ...!!!

They always COMPLAIN society but never try SOLVE...!!!

12. "ವಾಸ್ತವದಲ್ಲಿ ಬದುಕು" ಎಂಬುದು ಆದರ್ಶಗಳನ್ನು ಪಾಲಿಸದಿರುವುದಕ್ಕೆ ಅವರು ನೀಡುವ ದೊಡ್ಡ ಕ್ಷಮತೆ.

"Being Practical" is the biggest excuse they give for not following principles.

13. ನಮ್ಮ ಭಾಷೆ ಮರೆತರೂ ವಿದೇಶದವರಿಗೆ ಅರ್ಥವಾಗಬೇಕು ಎಂದು ಆಂಗ್ಲ ಭಾಷೆಯಲ್ಲಿ ಮಾತಾಡಬೇಕು. ಇದು ಅವರ ಪ್ರಕಾರ "ಸಹಕಾರ"

Learn and Converse in English so that we are understandable by foreigners even though we forget our language. They call this "Co-Operation"

14. ಮಾಡೋ ಕೆಲಸ ಮಾಡದೆ, ದೇವರ ಪೂಜೆ ಮಾಡುವುದು. ಹರಕೆ ಎಂಬ ಲಂಚವನ್ನು ಕೊಡುತ್ತೇವೆ ಎಂದು ದೇವರಿಗೆ ಆಮಿಷ ಒಡ್ಡುವುದು. ಇದನ್ನು ಅವರು 'ಭಕ್ತಿ' ಎನ್ನುತ್ತಾರೆ.

15. ನಮ್ಮ ಭಾಷೆ ಮರೆತರೂ ವಿದೇಶದವರಿಗೆ ಅರ್ಥವಾಗಬೇಕು ಎಂದು ಆಂಗ್ಲ ಭಾಷೆಯಲ್ಲಿ ಮಾತಾಡಬೇಕು. ಇದು ಅವರ ಪ್ರಕಾರ "ಸಹಕಾರ".