ಸರ್ಕಾರ ಹೊರಡಿಸಿದ ಆದೇಶ ಅಂಬೇಡ್ಕರ್ ಜಯಂತಿಯಂದು ಮಾಂಸಾಹಾರ ನಿಷೇಧಿಸಿದೆ ಎಂದು. ಇದನ್ನು ಹಲವಾರು ಜನರು ತಮ್ಮ ರಾಜಕೀಯ ಲಾಭಕ್ಕಾಗಿ ಉಪಯೋಗಿಸಿಕೊಳ್ಳಬಹುದು, ಆದರೆ ನನಗನ್ನಿಸುವ ಪ್ರಕಾರ ಮಾಂಸಾಹಾರವೆಂಬುದು ಮೂಲಭೂತವಾಗಿ ಇರಬೇಕೆ ಬೇಡವೆ ಎಂದು.
ನಾನು ಇದನ್ನು ಒಂದು ಮಾನವೀಯತೆಯ ದೃಷ್ಟಿಯಿಂದ ನೋಡಲು ಇಚ್ಚಿಸುತ್ತೇನೆ. ನಾನೊಬ್ಬ ಸಸ್ಯಹಾರಿಯಾಗಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ ಆದರೂ ಇದರಲ್ಲಿ ಸತ್ಯವಿದೆ ಎಂದು ನನ್ನ ಅನಿಸಿಕೆ. ನಮ್ಮ ಬಾಯಿಚಪಲಕ್ಕೊಸ್ಕರ ಒಂದು ಮೂಕಪ್ರಾಣಿಯನ್ನು ಕೊಲ್ಲುವುದು ಸರಿತೋರುವುದಿಲ್ಲ. ಅದರಲ್ಲಿನ ಸತ್ವ, ಪೌಷ್ಟಿಕತೆಯ ಬಗ್ಗೆ ಬೇರೆಯವರು ಏನೇ ಹೇಳಬಹುದು ಆದರೂ ಇವೆಲ್ಲವೂ ಮಾನವೀಯತೆಯನ್ನು ಮೀರುವುದಿಲ್ಲ.
ವೈಜ್ಞಾನಿಕವಾಗಿ ಮಾಂಸದಲ್ಲಿನ ರುಚಿಯಿರುವುದು ಅದರಿಂದ ಉತ್ಪತ್ತಿಯಾಗುವ ಹಾರ್ಮೋನಿನಿಂದ ಎಂದು ಧೃಡಪಟ್ಟಿದೆ. ಈ ವಿಚಾರ ದೃಷ್ಟಿಯಿಂದ ಹೊರ ದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮುನ್ನ ಅದರ ಮಾಂಸದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಶಾಕ್ ಕೊಟ್ಟು ಹಾರ್ಮೋನನ್ನ ಉತ್ಪತ್ತಿಯಾಗುವಂತೆ ಮಾಡುತ್ತಾರೆ. ಇದು ತೀರ ಅಮಾನವೀಯ ಮತ್ತು ಹಸುವಲ್ಲಿ ಮುಕ್ಕೋಟಿ ದೇವತೆಯನ್ನು ಕಾಣುವ ಭಾರತದಲ್ಲೂ. ಇತ್ತಿಚೆಗೆ ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂಬುದು ವಿಷಾದದ ಸಂಗತಿ.
ಆರೋಗ್ಯದ ದೃಷ್ಟಿಯಿಂದಲೂ ಮಾಂಸಹಾರ ಅಷ್ಟು ಒಳ್ಳೆಯದಲ್ಲ ಎಂಬುದು ಬಹುತೇಕ ಜನಕ್ಕೆ ಗೊತ್ತಿರಬಹುದು. ವಯಸ್ಸಾದಂತೆಲ್ಲ ಮಾಂಸ ಅರಗುವುದು ಕಷ್ಟಸಾದ್ಯ ಎಂಬುದು ಎಲ್ಲರೂ ಒಪ್ಪಬೇಕಾದ ಸತ್ಯ. ಈ ಎಲ್ಲಾ ಕಾರಣದಿಂದಾಗಿ ಮಾಂಸಹಾರ ನಿಷೇಧ ಮಾಡುವುದಕ್ಕಿಂತ ಜನಗಳೇ ತ್ಯಜಿಸುವುದು ಒಳ್ಳೆಯದು... ಅಲ್ಲವೇ...?
ನಾನು ಇದನ್ನು ಒಂದು ಮಾನವೀಯತೆಯ ದೃಷ್ಟಿಯಿಂದ ನೋಡಲು ಇಚ್ಚಿಸುತ್ತೇನೆ. ನಾನೊಬ್ಬ ಸಸ್ಯಹಾರಿಯಾಗಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುವುದು ಸಹಜ ಆದರೂ ಇದರಲ್ಲಿ ಸತ್ಯವಿದೆ ಎಂದು ನನ್ನ ಅನಿಸಿಕೆ. ನಮ್ಮ ಬಾಯಿಚಪಲಕ್ಕೊಸ್ಕರ ಒಂದು ಮೂಕಪ್ರಾಣಿಯನ್ನು ಕೊಲ್ಲುವುದು ಸರಿತೋರುವುದಿಲ್ಲ. ಅದರಲ್ಲಿನ ಸತ್ವ, ಪೌಷ್ಟಿಕತೆಯ ಬಗ್ಗೆ ಬೇರೆಯವರು ಏನೇ ಹೇಳಬಹುದು ಆದರೂ ಇವೆಲ್ಲವೂ ಮಾನವೀಯತೆಯನ್ನು ಮೀರುವುದಿಲ್ಲ.
ವೈಜ್ಞಾನಿಕವಾಗಿ ಮಾಂಸದಲ್ಲಿನ ರುಚಿಯಿರುವುದು ಅದರಿಂದ ಉತ್ಪತ್ತಿಯಾಗುವ ಹಾರ್ಮೋನಿನಿಂದ ಎಂದು ಧೃಡಪಟ್ಟಿದೆ. ಈ ವಿಚಾರ ದೃಷ್ಟಿಯಿಂದ ಹೊರ ದೇಶಗಳಲ್ಲಿ ಪ್ರಾಣಿಗಳನ್ನು ಕೊಲ್ಲುವ ಮುನ್ನ ಅದರ ಮಾಂಸದ ರುಚಿಯನ್ನು ಮತ್ತಷ್ಟು ಹೆಚ್ಚಿಸಲು ಶಾಕ್ ಕೊಟ್ಟು ಹಾರ್ಮೋನನ್ನ ಉತ್ಪತ್ತಿಯಾಗುವಂತೆ ಮಾಡುತ್ತಾರೆ. ಇದು ತೀರ ಅಮಾನವೀಯ ಮತ್ತು ಹಸುವಲ್ಲಿ ಮುಕ್ಕೋಟಿ ದೇವತೆಯನ್ನು ಕಾಣುವ ಭಾರತದಲ್ಲೂ. ಇತ್ತಿಚೆಗೆ ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂಬುದು ವಿಷಾದದ ಸಂಗತಿ.
ಆರೋಗ್ಯದ ದೃಷ್ಟಿಯಿಂದಲೂ ಮಾಂಸಹಾರ ಅಷ್ಟು ಒಳ್ಳೆಯದಲ್ಲ ಎಂಬುದು ಬಹುತೇಕ ಜನಕ್ಕೆ ಗೊತ್ತಿರಬಹುದು. ವಯಸ್ಸಾದಂತೆಲ್ಲ ಮಾಂಸ ಅರಗುವುದು ಕಷ್ಟಸಾದ್ಯ ಎಂಬುದು ಎಲ್ಲರೂ ಒಪ್ಪಬೇಕಾದ ಸತ್ಯ. ಈ ಎಲ್ಲಾ ಕಾರಣದಿಂದಾಗಿ ಮಾಂಸಹಾರ ನಿಷೇಧ ಮಾಡುವುದಕ್ಕಿಂತ ಜನಗಳೇ ತ್ಯಜಿಸುವುದು ಒಳ್ಳೆಯದು... ಅಲ್ಲವೇ...?