October 22, 2021

ಮತಾಂಧತೆಯ ಮುಂದೆ ಮಾನವೀಯತೆ ಮಾಯ!

ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತ್ತು ದೇವಾಲಯಗಳ ಮೇಲೆ ಹೇಯವಾಗಿ ದಾಳಿ ನಡೆದಿದೆ. ಮುಸಲ್ಮಾನ್ ಬಾಹುಳ್ಯವಿರುವ ಈ ದೇಶದಲ್ಲಿ ಹಿಂದೂ ಹಬ್ಬ ದಸರಾ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಿ, ದುರ್ಗಾ ವಿಗ್ರಹಗಳನ್ನು ನಾಶ ಮಾಡಿದ್ದಾರೆ. ಮುಸಲ್ಮಾನ್ ಮತಾಂಧರು ಕಂಡ ಕಂಡಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ಅಲ್ಲಿದ್ದ ಬೌದ್ಧ ದೇವಾಲಯಗಳನ್ನು ಸಹ ಧ್ವಂಸ ಮಾಡಿದ್ದಾರೆ. ಹಿಂದೂಗಳಿರುವ ಹಳ್ಳಿಗಳನ್ನು ಲೂಟಿ ಮಾಡಿ, ಬೆಂಕಿಯಿಟ್ಟು ಸುಟ್ಟಿದ್ದಾರೆ. ದೇಶದ ವಿವಿಧೆಡೆ ಇರುವ ಇಸ್ಕಾನ್ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ನಿಜಕ್ಕೂ ತೀರ ಕ್ಷುಲ್ಲಕವಾದದ್ದು. ದಸರಾ ಸಂದರ್ಭದಲ್ಲಿ ಖುರಾನ್ ಗ್ರಂಥವೊಂದನ್ನು ಹಿಂದೂ ದೇವರ ವಿಗ್ರಹದ ಪಾದದ ಬಳಿ ಇದ್ದ ವೀಡಿಯೋ ಒಂದು ಬಿಡುಗಡೆಯಾಗಿದ್ದು!


Destruction in Bangladesh

ಸ್ವಾತಂತ್ರ ಪೂರ್ವದಲ್ಲಿ ಈಗಿನ ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ ಮತ್ತು ಬಾಂಗ್ಲಾದೇಶ ಒಟ್ಟಾಗಿ ಬಂಗಾಳ ಪ್ರಾಂತ್ಯ ಎಂದಾಗಿತ್ತು. ಭಾರತದಲ್ಲಿದ್ದ ಪ್ರಮುಖ ಮತ್ತು ದೊಡ್ಡ ಪ್ರಾಂತ್ಯ ಇದಾಗಿತ್ತು. 1905 ರಲ್ಲಿ ಬ್ರಿಟೀಷ್ ಸರ್ಕಾರ ಕರ್ಜನ್ ನೇತೃತ್ವದಲ್ಲಿ ಬಂಗಾಳವನ್ನು ಎರಡು ತುಂಡಾಗಿ ವಿಭಜಿಸಲು ಮುಂದಾಯಿತು. ಬ್ರಿಟೀಷ್ ಸರ್ಕಾರ ಎಷ್ಟು ಚಾಣಾಕ್ಷವೆಂದರೆ ಮುಸಲ್ಮಾನರು ಮತ್ತು ಹಿಂದೂಗಳು ಕಿತ್ತಾಡುತ್ತಿರಬೇಕು ಎಂಬ ಉದ್ದೇಶದಿಂದಲೇ ಧರ್ಮದ ತಳಹದಿಯಲ್ಲಿ ಪ್ರಾಂತ್ಯವನ್ನು ವಿಭಜಿಸುತ್ತಾರೆ. ಈ ನಡೆ ಭಾರತದ ರಾಷ್ಟ್ರೀಯವಾದಿಗಳನ್ನು ಉದ್ರಿಕ್ತಗೊಳಿಸುತ್ತದೆ. ದೇಶದೆಲ್ಲಡೆ ಸ್ವದೇಶಿ ಚಳಿವಳಿಗಳು ವ್ಯಾಪಕವಾಗುತ್ತದೆ. ಗುರುದೇವ ರವೀಂದ್ರರು ಬಂಗಾಳವನ್ನು ವರ್ಣಿಸುವಂತಹ 'ಅಮರ್ ಶೊನಾರ್ ಬಾಂಗ್ಲಾ' ಎಂಬ ಗೀತೆಯನ್ನು ರಚಿಸುತ್ತಾರೆ. ಮಹಾರಾಷ್ಟ್ರದಲ್ಲಿ ತಿಲಕರು, ಪಂಜಾಬ್ ನಲ್ಲಿ ಲಾಲಾ ಲಜಪತ್ ರಾಯ್ ಮತ್ತು ಸರ್ದಾರ್ ಅಜಿತ್ ಸಿಂಗ್, ಮದ್ರಾಸಿನಲ್ಲಿ ಚಿದಂಬರಂ ಪಿಳ್ಳೈ ನೇತೃತ್ವದಲ್ಲಿ ಎಲ್ಲೆಡೆ ಸ್ವದೇಶಿ ಚಳುವಳಿ ವ್ಯಾಪಕವಾಗುತ್ತದೆ. ಚಳಿವಳಿಯ ಕಾವಿನಿಂದಾಗಿ ಬ್ರಿಟೀಷರು 1911 ರಲ್ಲಿ ವಿಭಜನೆಯ ಪ್ರಸ್ತಾವವನ್ನು ಹಿಂಪಡೆಯುತ್ತಾರೆ. ಇದರೊಂದಿಗೆ ಬಂಗಾಳಿ ಮಾತಾಡದ ಬಿಹಾರ, ಒರಿಸ್ಸಾ, ಬಂಗಾಳ ಪ್ರಾಂತ್ಯದಿಂದ ಬೇರೆಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ವಿಭಜನೆಯಾದಾಗ ಬಂಗಾಳ ಪ್ರಾಂತ್ಯದ ಮುಸಲ್ಮಾನರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಪ್ರತ್ಯೇಕವಾಗಿರಲು ಆಶಿಸುತ್ತಾರೆ. ಆಗಿನ ಬಂಗಾಳ ವಿಭಜನೆ ಇರಬಹುದು ಅಥವಾ ಈಗಿನ ಕಾಶ್ಮಿರದ ವಿಚಾರವಿರಬಹುದು ಮೊದಲಿನಿಂದಲೂ ಏಕತೆಯ ಬದಲು ಪ್ರತ್ಯೇಕತೆ ಎಂಬ ಹುಚ್ಚು ಅವರ ತಲೆಗೆ ಏರಿರುವಂತಹುದೆ.


ಸ್ವಾತಂತ್ರ್ಯ ಬರುವ ಒಂದು ವರ್ಷದ ಮುನ್ನ ಕೂಡ ಬಂಗಾಳದಲ್ಲಿ ಒಂದು ಕೋಮುಗಲಭೆ ನಡೆಯುತ್ತದೆ. ವರದಿಗಳ ಪ್ರಕಾರ ಎರಡು ದಿನಗಳಲ್ಲಿ 270 ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟು, 1600 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 1947 ರಲ್ಲಿ ಭಾರತ ಸ್ವತಂತ್ರ್ಯವಾಯಿತು. ಆಗ ಧರ್ಮಾದಾರಿತವಾಗಿ ಭಾರತ, ಪೂರ್ವ ಪಾಕೀಸ್ತಾನ ಮತ್ತು ಪಶ್ಚಿಮ ಪಾಕೀಸ್ತಾನ (ಈಗಿನ ಬಾಂಗ್ಲಾದೇಶ) ಎಂದು ಮೂರು ಭಾಗಗಳಾಗಿ ಒಡೆಯಿತು. ಶಾಂತವಾಗಿದ್ದ ಬಾಂಗ್ಲಾದೇಶ 1971 ರಲ್ಲಿ ಹೊತ್ತಿ ಉರಿಯುತ್ತದೆ. ಪಾಕೀಸ್ತಾನದ ಸೈನ್ಯ ಮತ್ತು ಬಾಂಗ್ಲಾದ ಜಮಾತ್-ಇ-ಇಸ್ಲಾಮಿ ಎಂಬ ಮತಾಂಧ ಗುಂಪು ಅಲ್ಲಿನ ಜನರ ನರಮೇಧ ಶುರು ಮಾಡುತ್ತದೆ. ಧರ್ಮದ ಅಫೀಮು ತಲೆಗೇರಿ ಈ ಮತಾಂಧ ಗುಂಪು ತಮ್ಮ ದೇಶ ಮತ್ತು ಅದರ ಸ್ವಾತಂತ್ರ್ಯವನ್ನು ಮರೆತು ಪಾಕೀಸ್ತಾದ ಜೊತೆಗೆ ಸಹಕರಿಸುತ್ತಾರೆ. ಮೊದಲು ಬಾಂಗ್ಲಾದ ಬುದ್ಧಿವಂತರನ್ನೂ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರನ್ನು ವ್ಯವಸ್ಥಿತವಾಗಿ ಕೊಲ್ಲುತ್ತಾರೆ. ಪತ್ರಕರ್ತರು, ವೈದ್ಯರು, ಕವಿಗಳನ್ನೆಲ್ಲಾ ಪಾಕೀಸ್ತಾನಿ ಸೈನ್ಯ ಮತ್ತು ರಜಾಕಾರರು ಎಳೆದೋಯ್ದು ಮಿರ್ಪುರ್ ಮತ್ತು ರಾಯರ್ ಬಜಾರ್ ಅಲ್ಲಿ ಕೊಲ್ಲುತ್ತಾರೆ. ಯುದ್ಧದ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು 2-4 ಲಕ್ಷದಷ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವುದು ದಾಖಲಾಗಿದೆ. ಪಾಕೀಸ್ತಾನದ ಇಮಾಮ್ಗಳು ಮತ್ತು ಮುಸಲ್ಮಾನ್ ಧಾರ್ಮಿಕ ನಾಯಕರು ಈ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸೆಗಿ, ಕೊಂದು ಬಂಗಾಳಿ ಹೆಣ್ಣು ಮಕ್ಕಳನ್ನು ಮುಸಲ್ಮಾನರ ಸಂತತಿ ಹೆಚ್ಚಿಸಲು ಉಪಯೋಗಿಸಿಕೊಂಡಿದ್ದಾರೆ. ಈ ಪರಿಯ ನರಮೇಧದ ಕಾರಣದಿಂದ ನಲುಗುತ್ತಿದ್ದ ದೇಶಕ್ಕೆ ಭಾರತ ಸಹಾಯಕ್ಕೆ ಬರುತ್ತದೆ. ಭಾರತದ ಸೈನಿಕ ದಳ, ವಾಯುಪಡೆ ಬಾಂಗ್ಲಾದ ಮತಾಂಧ ಮತ್ತು ಪಾಕೀಸ್ತಾನದ ಸೈನ್ಯದ ಮೇಲೆ ದಾಳಿ ಮಾಡುತ್ತದೆ. ಯುದ್ಧದಲ್ಲಿ ಅವರನ್ನು ಸೋಲಿಸಿ ಸುಮಾರು 93,000 ಸೈನಿಕರನ್ನು ಭಾರತ ಒತ್ತೆಯಾಳಾಗಿಸಿಕೊಳ್ಳುತ್ತದೆ. ಇದರೊಂದಿಗೆ ಪಾಕೀಸ್ತಾನದ ಕಪಿಮುಷ್ಠಿಯಿಂದ ಸ್ವತಂತ್ರ್ಯಗೊಂಡು ಬಾಂಗ್ಲಾದೇಶ ಎಂದಾಗುತ್ತದೆ. ಬಾಂಗ್ಲಾದೇಶವು ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಕರೋನಾ ಸಮಯದಲ್ಲಿ ಆ ದೇಶಕ್ಕೆ 1.2 ಮಿಲಿಯನ್ಗಳಷ್ಟು ಡೋಸ್ ಲಸಿಕೆಯನ್ನು ಉಚಿತವಾಗಿ ಭಾರತ ನೀಡಿದೆ.


Media Reports the Communal Riots in Bengal in 1946


ಕಳೆದ ವರ್ಷ ಇಸ್ಕಾನ್ ದೇವಾಲಯದ ಸ್ವಾಮೀ ನಿತಾಯ್ ದಾಸ್ ಪ್ರಭು ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತವಾಗಿ ರಂಜಾನ್ ತಿಂಗಳ ಅಷ್ಟೂ ದಿನಗಳು ಇಫ್ತಾರ್ ಕೂಟವನ್ನು ಆಯೋಜಿಸಿ, ಮುಸಲ್ಮಾನರಿಗೆ ಊಟ ಬಡಿಸಿದ್ದರು. ಆದರೆ, ಅದೇ ಮತಾಂಧ ಮುಸಲ್ಮಾನರು ಇಸ್ಕಾನ್ ದೇವಾಲಯಗಳ ಮೇಲೆ ದಾಳಿಗೈದು ಅವರನ್ನು ಹತ್ಯೆ ಮಾಡಿದ್ದಾರೆ. ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರೂ ಭಾರತದಲ್ಲಿ ಅವರನ್ನು ಸೌಹಾರ್ದಯುತವಾಗಿ ಕಾಣುತ್ತಿದ್ದೇವೆ ಅನ್ನುವುದನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಭಾರತ ಬಾಂಗ್ಲಾದೇಶಕ್ಕೆ ಇಷ್ಟೆಲ್ಲಾ ಸಹಾಯ ಮಾಡಿದರೂ, ಪ್ರತಿಬಾರಿಯೂ ಕಷ್ಟದ ಸಂದರ್ಭದಲ್ಲಿ ಅವರ ಜೊತೆಗಿದ್ದರೂ ಸಹ ಧರ್ಮದ ಹೆಸರಿನಲ್ಲಿ ಮತಾಂಧರಾಗಿ ಮಾನವತೆಯನ್ನು ಮರೆತು ನಡೆದುಕೊಂಡಿದ್ದಾರೆ. ಅಲ್ಲಿನ ಮುಸಲ್ಮಾನರು ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅಸಹ್ಯ ಮತ್ತು ಹೆದರಿಕೆ ಉಂಟು ಮಾಡುವಂತಹುದು. ಜಗತ್ತಿನಲ್ಲಿ ಮುಸಲ್ಮಾನರಿಗೆ ಮತ್ತು ಇತರ ಮತ ಪಂಥದವರಿಗೆ ಅನೇಕ ದೇಶಗಳಿವೆ ಆದರೆ, ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಎನ್.ಆರ್.ಸಿ ಮತ್ತು ಸಿ.ಎ.ಎ ವಿರುದ್ಧ ಪ್ರತಿಭಟನೆ ಮಾಡುವವರು ಈಗಲಾದರೂ ತಮ್ಮ ತಪ್ಪನ್ನು ಅರಿತುಕೊಳ್ಳಬೇಕು. ಸರ್ವೇಜನ ಸುಖಿನೋ ಭವಂತು ಎಂದು ಹೇಳುವ ನಾವು ಬಾಂಗ್ಲಾದ ಹಿಂದೂಗಳೊಂದಿಗೆ ನಿಲ್ಲಬೇಕಾಗಿದೆ, ಅವರ ಕ್ಷೇಮಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ.

Swami Nitaydas Serving Muslims during Ramzan

October 18, 2021

ಬಾಲಿವುಡ್ ಅಲ್ಲಿ ಭಾರತೀಯತೆ ಕಾಣಿಸುತ್ತಾ?

ಈ ವರ್ಷದ ಮಹಾತ್ಮ ಗಾಂಧಿ ಜಯಂತಿಯಂದು ಬಾಲಿವುಡ್ ಕಾ ಬಾದ್ ಷಾ ಅನ್ನಿಸಿಕೊಳ್ಳುವ ಶಾರುಖ್ ಖಾನ್ ಪುತ್ರ, 23 ವರ್ಷದ ಆರ್ಯನ್ ಖಾನ್ ಅನ್ನು ಎನ್.ಸಿ.ಬಿ ಬಂಧಿಸಿದ್ದಾರೆ. ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ, ಮಾದಕ ದ್ರವ್ಯಗಳ ಬಳಕೆ, ಮಾರಾಟ ಮತ್ತು ಖರೀದಿಯ ಆರೋಪ ಆತನ ಮೇಲಿರುವುದು. ಸಾಮಾನ್ಯವಾಗಿ ಮಾದಕ ವಸ್ತುಗಳ ಕೇಸಿನಲ್ಲಿ ಜಾಮೀನು ಸಿಗುವುದಿಲ್ಲ, ಅದರಂತೆ ಮುಂಬೈ ಹೈಕೋರ್ಟು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದೇನು ಹೊಸತಲ್ಲ, ಬಾಲಿವುಡ್ ಜೊತೆಗೆ ಮಾದಕ ದ್ರವ್ಯ ಆಗಾಗ ಕೇಳಿ ಬರುತ್ತಲೇ ಇದೆ. ಸಂಜಯ್ ದತ್ ತನ್ನ ಕಾಲೇಜ್ ದಿನಗಳಿಂದ 9 ವರ್ಷಗಳ ಕಾಲ ಡಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಫರ್ದೀನ್ ಮಾದಕ ವ್ಯಸನಿಯಾಗಿದ್ದರು. ಆತನನ್ನು ಮುಂಬೈ ಪೊಲೀಸರು ಮೇ 5, 2001 ರಂದು ಬಂಧಿಸಿದ್ದರು. ಜೂನ್ 2018 ರಲ್ಲಿ ಥಾಣೆ ಪೊಲೀಸರು ನಟಿ ಮಮತಾ ಕುಲಕರ್ಣಿ ಭಾರತದ ಅತಿದೊಡ್ಡ ಡಗ್ಸ್ ಕೇಸಿನ ಆರೋಪಿಯೆಂದು ಹೆಸರಿಸಿದರು. ಕಳೆದ ವರ್ಷ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ ಲಿಂಬಾಚಿಯಾರನ್ನು ಇದೇ ಕೇಸಿನಲ್ಲಿ ಬಂಧಿಸಲಾಯಿತು. ಈ ವರ್ಷ ಆಗಸ್ಟ್‌ನಲ್ಲಿ ಅರ್ಮಾನ್ ಕೊಹ್ಲಿಯನ್ನು ಎನ್‌.ಸಿ.ಬಿ ಬಂಧಿಸಿತ್ತು! ಇಷ್ಟಲ್ಲದೇ ಅನೇಕ ವಿಚಾರದಲ್ಲಿ ಬಾಲಿವುಡ್ ಭಾರತೀಯತೆಗಿಂತ ದೂರವಾಗಿರುವುದನ್ನು ಗಮನಿಸಬಹುದು. ಇದರ ಕುರಿತ ಒಂದು ಅವಲೋಕನವೇ ಈ ಲೇಖನ.
 
Bollywood and Drugs

ಚಕ್ದೇ ಇಂಡಿಯಾ! 2007 ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತದ ಮಾಜಿ ಹಾಕಿ ಆಟಗಾರ ರಂಜನ್ ನೇಗಿ ಅವರ ಜೀವನವನ್ನು ಹೋಲುತಿತ್ತು. ಆದರೆ, ಚಿತ್ರದಲ್ಲಿ ನಾಯಕನ ಹೆಸರನ್ನು ಕಬೀರ್ ಖಾನ್ ಎಂದಾಗಿತ್ತು. ಶೇರ್ನಿ! ಈ ವರ್ಷ ತೆರೆಕಂಡ ಚಿತ್ರವಿದು. ಈ ಚಿತ್ರದ ವಸ್ತು ಕೂಡ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಂತಿದೆಯಾದರೂ ಇದರಲ್ಲಿ ವ್ಯತ್ಯಾಸವಿದೆ. ಅಸ್ಗರ್ ಅಲಿ ಖಾನ್ ಚಿತ್ರದಲ್ಲಿ ಕಲಾವಾ ಧರಿಸಿದ ರಂಜನ್ ರಾಜನ್ ಎಂಬ ಹೆಸರಿನಿಂದ ಚಿತ್ರದಲ್ಲಿ ಖಳನಟನಾಗಿದ್ದಾರೆ. ಅರಣ್ಯಾಧಿಕಾರಿ ಅಭರ್ನಾ ಅವರನ್ನು ಚಿತ್ರದಲ್ಲಿ ವಿದ್ಯಾ ವಿನ್ಸೆಂಟ್ ಎಂಬ ಕ್ರೈಸ್ತ ಪಂಥದವರ ಹೆಸರಿನಿಂದ ಚಿತ್ರಿಸಲಾಗಿದೆ. ಪಿ.ಕೆ - ನಿರ್ದೇಶಕ ರಾಜಕುಮಾರ್ ಹೇಳುವಂತೆ 'ಪಿ.ಕೆ ಒಂದು ಹಿಂದು ಧರ್ಮದ ಬಗ್ಗೆ ವಿಡಂಬನಾತ್ಮಕ ಚಿತ್ರ'. ಚಿತ್ರವನ್ನು ವಿಡಂಬನಾತ್ಮಕ ಎನ್ನುವುದಕ್ಕಿಂತ ಅಪಹಾಸ್ಯ ಸೂಚಕ ಎನ್ನಬಹುದಾಗಿದೆ.  ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರವನ್ನು ತಪ್ಪಾಗಿ ಬಿಂಬಿಸಿದ್ದಾರೆ, ಹಿಂದೂ ದೇವರನ್ನು ಹಾಸ್ಯಾಸ್ಪದವಾಗಿ ಚಿತ್ರಿಸಲಾಗಿದೆ. ಗಂಗಾ ಕೀ ಸೌಗಂಧ್ - ಹಿಂದೂ ಪುರೋಹಿತರು ಕೇಸರಿ ಬಟ್ಟೆ ಧರಿಸಿ, ರುದ್ರಾಕ್ಷ ಧರಿಸಿ, ಜಪ ಮಾಡುವಾಗ ಮುಜರೆಯನ್ನು ನೋಡುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರದ ಹಾಡಿನಲ್ಲಿ ಹಿಂದೂ ಧರ್ಮದ ಮೂರ್ತಿ ಪೂಜೆಯನ್ನು ಆಡಿಕೊಂಡಿದ್ದಾರೆ. ಪುರೋಹಿತರು ಧರ್ಮದ ಹೆಸರಿನಲ್ಲಿ ಲೂಟಿ ಮಾಡುತ್ತಾರೆ, ದೇವರ ಹೆಸರಿನಲ್ಲಿ ಅಪರಾಧಿಗಳನ್ನು ರಕ್ಷಿಸುವವರು ಇವರು ಎಂಬಂತೆ ಚಿತ್ರಿಸಲಾಗಿದೆ. ಇದು ಕೆಲವು ಉದಾಹರಣೆಯಷ್ಟೇ. ಬಾಲಿವುಡ್ ನಲ್ಲಿ ಒಂದು ಧರ್ಮ ನಿಂದಕ ಚಿತ್ರಗಳನ್ನು ಮಾಡುವಂತಹ ಕೆಟ್ಟ ಚಟ ಬೆಳೆದಿದೆ ಎಂದೇ ಹೇಳಬಹುದು. ಸಾಂವಿಧಾನಿಕವಾಗಿ ಭಾರತೀಯರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಹೌದು. ಹಾಗೆಂದು, ಒಂದು ಧರ್ಮ ಅಥವಾ ಪಂತದ ಓಲೈಕೆ ಮತ್ತೊಂದು ಧರ್ಮದ ಅವಹೇಳನ ಎಷ್ಟು ಸಲ್ಲ ಎಂಬುದನ್ನು ಬಾಲಿವುಡ್ ಆವರು ತಮಗೆ ತಾವು ಕೇಳಿಕೊಳ್ಳಬೇಕು. ಹಿಂದೂಸ್ಥಾನದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವುದು ನಿಜಕ್ಕೂ ಭಾರತೀಯತೆ ಅಲ್ಲ!

ಮೊದಲ ಬಾರಿಗೆ ಮೋದಿ ಪ್ರಧಾನಿಯಾದ ಸಮಯವದು. ಭಾರತದಲ್ಲಿ ಅಸಹಿಶ್ಣುತೆ ಇದೆ ಎಂದು 2015 ರಲ್ಲಿ ಕೆಲವರು ಬೊಬ್ಬೆ ಇಟ್ಟರು. ಅದರಲ್ಲಿ ಬಾಲಿವುಡ್ಡಿನ ಆಮಿರ್ ಖಾನ್ ಕೂಡ ಇದ್ದರು. ವ್ಯಕ್ತಿ ಅಥವಾ ಪಕ್ಷವೊಂದರ ಮೇಲೆ ವಿರೋಧವಿದ್ದರೆ ಅವರ ವಿರುದ್ಧ ಮಾತಾಡುವುದು ಸರಿ. ಆದರೆ, ದೇಶ ಮತ್ತು ದೇಶದ ಜನರ ವಿರುದ್ಧ ಮಾತಾಡುವುದು ಸರಿನಾ ಎಂಬಂತಹ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ಮುಂಬೈನಲ್ಲಿ 1993 ರಲ್ಲಿ ನಡೆದ ಸರಣಿ ಸ್ಪೋಟ, 2003 ಮತ್ತು 2006 ರಲ್ಲಿ ನಡೆದ ರೈಲು ಸ್ಪೋಟಗಳು, 2008 ರಲ್ಲಿ ತಾಜ್ ಹೋಟೆಲ್ಲಿನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ಇದೇ ಆಮಿರ್ ಖಾನ್ ಅಸಹಿಶ್ಣುತೆಯ ಮಾತು ಆಡಿರಲಿಲ್ಲ. 2005ರಲ್ಲಿ ಮೋದಿಗೆ ಅಮೇರಿಕಾ ವೀಸಾ ನಿರಾಕರಿಸುವ ವಿಚಾರದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯ ಸಭೆಯಲ್ಲಿ ಮೋದಿ ಪರವಾಗಿ ಇದ್ದರು. ಮೋದಿಯ ವಿರುದ್ಧ, ಮನಮೋಹನ್ ಸಿಂಗರು ಕ್ಷಮೆ ಬೇಡುವಂತೆ ಒತ್ತಾಯಿಸಿ ಬರೆದ ಪತ್ರಕ್ಕೆ ಆಮಿರ್ ಖಾನ್, ಅಮಲಾ ಅಕ್ಕಿನೇನಿ, ಆನಂದ್ ಪಟವರ್ಧನ್ ರವರುಗಳು ಸಹಿ ಹಾಕಿದ್ದರು. ನಮ್ಮ ಮನೆಯವರೊಬ್ಬರು ತಪ್ಪು ಮಾಡಿದಾಗಲೂ ಸಹ ನಮ್ಮ ಮನೆಯ ಮರ್ಯಾದೆ ಎಂದು ಬೇರೆಯವರ ಮುಂದೆ ನಾವು ಮಾತಾಡುವುದಿಲ್ಲ. ವಿದೇಶಿ ಸಂಸ್ಥೆಯ ಮುಂದೆ ನಮ್ಮದೇ ದೇಶದ ನಾಯಕನೊಬ್ಬ ತಪ್ಪು ಮಾಡಿಲ್ಲವಾದರೂ ಈ ರೀತಿ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಇದು ಬಾಲಿವುಡ್ ನವರಿಗೆ ತಿಳಿದಿಲ್ಲವ? 

List of people who signed letter demanding apology to Prime Minister in 2005

ಡ್ರಗ್ಸ್ ಕೇಸು, ಸಿನಿಮಾ ಮೂಲಕ ಧರ್ಮ ನಿಂದನೆ, ದೇಶ ಮತ್ತು ಅದರ ನಾಯಕರ ವಿರುದ್ಧ ಮಾತಾಡುವುದು ಒಂದು ಕೆಟ್ಟತನವಾಗಿ ಬಾಲಿವುಡ್ಡಿನಲ್ಲಿ ಬೆಳೆದಿದೆ. ತನ್ನ ಮಗ ಯಾರ ಜೊತೆ ಬೇಕಾದರೂ ಓಡಾಡಲಿ, ಏನು ಬೇಕಾದರೂ ಮಾಡಲಿ ಎಂದು 1999 ರಲ್ಲಿ ಮಾತಾಡಿದ್ದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ತಂದೆಯಾದವನೊಬ್ಬ ಮಕ್ಕಳನ್ನು ಬೆಳಸುವ ರೀತಿ ಇದಲ್ಲ. ವಿಶ್ವವಿಖ್ಯಾತ ಜಾಕೀ ಚಾನ್ ಮಗನೂ ಸಹ ಇಂತಹುದೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಜಾಕೀ ಚಾನ್ ಆತನ ಮಗನನ್ನು ವಹಿಸಿಕೊಂಡು ಬರಲ್ಲಿಲ್ಲ ಎಂಬುದು ನಮಗೆ ಆದರ್ಶವಾಗಬೇಕಿತ್ತು. ಸಿನಿಮಾ, ಕಲೆ ಎಂಬುದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆ ಹೊರತಾಗಿ ಯಾವುದೋ ಒಂದು ಪಂಥದ ಒಲೈಕೆ ಅಥವಾ ಧರ್ಮನಿಂದನೆ ಮಾಡವುದು ಸರಿ ಇಲ್ಲ. ಇದೆಲ್ಲವನ್ನು ಗಮನಿಸಿದರೆ ಬಾಲಿವುಡ್ ಎಂಬುದು ನಮ್ಮ ಸಂಸ್ಕೃತಿಯಿಂದ ದೂರ ಆದಂತಿದೆ. ಆ ಕ್ಷೇತ್ರವನ್ನು ನೋಡಿದರೆ ಭಾರತೀಯತೆ ಇದೆಯಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಇದು ಬದಲಾಗಬೇಕು ಮತ್ತು ನಮ್ಮ ಸಂಸ್ಕೃತಿಗೆ ಪೂರಕವಾಗಬೇಕು ಎಂಬುದು ನಮ್ಮ ಆಶಯ.