January 18, 2022

ಇನ್ನೆಷ್ಟು ದಿವಸ ಚೀನಾವನ್ನು ಸಹಿಸಿಕೊಳ್ಳಬೇಕು?

ಕರೋನಾ ಶುರುವಾಗಿ ಮೂರು ವರ್ಷವಾದರೂ ಅದರ ಮೂಲದ ಕುರಿತ ಪ್ರಶ್ನೆಗೆ ಇನ್ನೂ ಸಮರ್ಪಕವಾದ ಉತ್ತರ ಜಗತ್ತು ಕಂಡುಕೊಂಡಿಲ್ಲ. ಈ ಶತಮಾನದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬೇಕಾದರೆ, ಪ್ರಸ್ತುತ ಈ ಸಾಂಕ್ರಾಮಿಕದ ಕಾರಣವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಈಗಾಗಲೇ ಕರೋನಾ ಜಗತ್ತಿನಾದ್ಯಂತ 5.4 ದಶಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಸಾವಷ್ಟೇ ಅಲ್ಲದೆ ಈ ರೋಗವು ಸ್ಥೂಲಕಾಯತೆ, ನಿರುದ್ಯೋಗ, ಬಡತನ, ಖಿನ್ನತೆ, ಮದ್ಯಪಾನ, ನರಹತ್ಯೆ, ಕೌಟುಂಬಿಕ ಹಿಂಸೆ, ವಿಚ್ಛೇದನ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ಹೆಚ್ಚಿಸಿದೆ. ಒಮ್ರಿಕಾನ್ ಹೆಚ್ಚಾಗುತ್ತಿರುವಂತೆ ಪ್ರಪಂಚದ ಅನೇಕ ಭಾಗಗಳಲ್ಲಿ ಆರ್ಥಿಕತೆ ಬೆಳವಣಿಗೆ ಸಹ ಕುಂಟಿತವಾಗಿದೆ.
ದುರಾದೃಷ್ಟವಶಾತ್ ಕರೋನಾವನ್ನು ನಿರ್ಮೂಲ ಮಾಡುವ ಸಾಧ್ಯತೆಗಳು ಈಗ ಕಮ್ಮಿಯಾಗಿವೆ. ಆದರೆ, ಈ ವೈರಸ್‌ನೊಂದಿಗೆ ಹೇಗೆ ಬದುಕಬೇಕು ಎಂದು ಪ್ರಯತ್ನಿಸುತ್ತಿರುವಾಗ ಜಗತ್ತು ಈ ಕುರಿತು ತೆಗೆದುಕೊಂಡ ತಪ್ಪು ಹೆಜ್ಜೆಗಳನ್ನು ನಾವು ಗುರುತಿಸಬೇಕು. ಚೀನಾವನ್ನು ಮೊದಲು ವಿಮರ್ಶಾತ್ಮಕವಾಗಿ, ಈ ವೈರಸ್ ಆಕಸ್ಮಿಕವಲ್ಲ ಬದಲಾಗಿ ಉದ್ದೇಶಪೂರ್ವಕವಾಗಿರಬಹುದು ಎಂಬ ಅನುಮಾನದಿಂದಲೇ ನೋಡಬೇಕು. ಜಗತ್ತಿಗೆ ತಿಳಿದಿರುವಂತೆ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾ ವೂಹಾನ್‌ನಲ್ಲಿ ಹೊಸದೊಂದು ಮಾರಣಾಂತಿಕ ವೈರಸ್ಸಿನ ಹುಟ್ಟಿನ ಕುರಿತು ಮತ್ತು ಒಬ್ಬರಿಂದ್ದೊಬ್ಬರಿಗೆ ಹರಡುವ ಕುರಿತ ಮಾಹಿತಿಯನ್ನು ಮುಚ್ಚಿಟ್ಟಿತು. ಈ ಕಾರಣದಿಂದಾಗಿ ಚೀನಾದಲ್ಲೇ ಇರಬೇಕಿದ್ದ ಈ ರೋಗ ಜಗತ್ತಿಗೆಲ್ಲಾ ಹರಡಿತು. ಕರೋನಾ ಸ್ವಾಭಾವಿಕವಾಗಿ ವನ್ಯಜೀವಿಗಳಿಂದ ಹುಟ್ಟಿದ್ದೆ ಅಥವಾ ವೂಹಾನ್ ಇಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ ಸೋರಿಕೆಯಾಗಿದ್ದೆ ಎಂಬುದು ಇಂದಿಗೂ ಪ್ರಶ್ನೆಯಾಗೆ ಉಳಿದಿದೆ.

The Origin of the Corona Virus - WIV

ಚೀನಾ ಈ ವಿಚಾರದಲ್ಲಾಗಲಿ ಅಥವಾ ಮತ್ತೊಂದರಲ್ಲಾಗಲಿ ಪಾರದರ್ಶಕತೆ ತೋರಿಲ್ಲ. ಕರೋನಾದ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಚೀನಾ ಇಂದಿನವರೆಗೂ ಸಹಕರಿಸಿಲ್ಲ, ವಿಚಾರಣೆಯನ್ನು ಕ್ಸಿ ಆಡಳಿತ ತನಿಖೆಯನ್ನು ಹಾಗೂ ವಿಚಾರಣೆಯನ್ನು ನಿರ್ಭಂದಿಸಿದೆ ಮತ್ತು ಇದು ತನ್ನ ವಿರುದ್ಧ ಮಾಡುತ್ತಿರುವ ಪಿತೂರಿ ಎಂದಿದೆ! ಇವೆಲ್ಲಕ್ಕಿಂತಲೂ ಅಶ್ಚರ್ಯವೆಂದರೆ ಚೀನಾದ ಪ್ರಕಾರ ಇದುವರೆಗೂ ತನ್ನ ದೇಶದಲ್ಲಿ ಪತ್ತೆಯಾದ ಪ್ರಕರಣ ಕೇವಲ 1.04 ಲಕ್ಷ ಮತ್ತು ಮೃತಪಟ್ಟವರ ಸಂಖ್ಯೆ 4,636! ಚೀನಾದ ವೈರಸ್ ನಿರ್ವಹಣೆ ಕುರಿತು ತನಿಖೆಗೆ ಆಸ್ಟ್ರೇಲಿಯಾ ತಾಕೀತು ಮಾಡಿದ ನಂತರ ಚೀನಾ ಆಸ್ಟ್ರೇಲಿಯಾ ಮೇಲೆ ಅನೇಕ ನಿರ್ಭಂದಗಳನ್ನು ಹೇರಿತು. ಚೀನಾದ ಪ್ರಮಾದವನ್ನು ಮುಚ್ಚಿಟ್ಟುಕೊಳ್ಳಲು ವಿಶ್ಚ ಆರೋಗ್ಯ ಸಂಸ್ಥೆಯೇ ಸಹಾಯ ಮಾಡಿದಂತೆ ತೋರುತ್ತದೆ. ಆರಂಭದಲ್ಲಿ ಮಹಾನಿರ್ದೇಶಕ ಟೆಡ್ರೊಸ್ ಚೀನಾದ ತಾಳಕ್ಕೆ ಕುಣಿಯುತ್ತಾ ಅವರ ಪರವಾದ ಮಾತುಗಳನ್ನು ಗಿಳಿಪಾಠದಂತೆ ಜಗತ್ತಿನೆದುರಿಗೆ ಒಪ್ಪಿಸಿದ. ಕರೋನಾದ ನಿರ್ವಹಣೆ ಕುರಿತು ಚೀನಾವನ್ನೇ ಶ್ಲಾಘಿಸಿದ! ಕರೋನಾದ ಕಾರಣ ನರಮೇಧ ಅನುಭವಿಸುತ್ತಿರುವ ಜರ್ಮನಿ ಮತ್ತು ಫ್ರಾನ್ಸ್ ಅಂತೂ ವಿಶ್ವ ಆರೋಗ್ಯ ಸಂಸ್ಥೆಯ ನಡೆಗಳನ್ನು ಖಂಡಿಸುವುದಿರಲಿ ಟೆಡ್ರೊಸ್ನನ್ನೇ ಅಧ್ಯಕ್ಷ ಸ್ಥಾನಕ್ಕೆ ಎರಡನೆ ಬಾರಿಗೆ ನಾಮ ನಿರ್ದೇಶನ ಮಾಡಿದರು, ಅಮೇರಿಕಾ ಆತನ ವಿರುದ್ಧ ಪ್ರತಿಸ್ಪರ್ಧಿಯನ್ನೂ ಸಹ ಕಣಕ್ಕಿಳಿಸಲಿಲ್ಲ. ಅವಿರೋಧವಾಗಿ ಆಯ್ಕೆಯಾಗಿರುವ ಟೆಡ್ರೋಸ್ ವಿಶ್ವ ಆರೋಗ್ಯ ಸಂಸ್ಥೆಯನ್ನು ಇನ್ನೂ ಐದು ವರ್ಷಗಳ ಕಾಲ ಮುಂದುವರೆಸುತ್ತಾನೆ!
ಅಮೇರಿಕಾ ಚೀನಾದ ವೂಹಾನ್ ಇಸ್ಟಿಟ್ಯುಟ್ ಆಫ್ ವೈರಾಲಜಿಯಲ್ಲಿ ತಾನು ಮಾಡಿರುವ ಹಣದ ಹೂಡಿಕೆ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿಲ್ಲ. ಅಮೇರಿಕಾದ ಸಂಸ್ಥೆಗಳು ಚೀನಾದ ಮಿಲಿಟರಿಗೆ ಸಂಬಂಧಿಸಿರುವ ಸಂಸ್ಥೆಗಳಲ್ಲಿ ಸಂಶೋಧನೆಗೆ ಧನಸಹಾಯ ಮಾಡುತ್ತಿವೆ ಎಂಬುದಕ್ಕೆ ಸ್ಪಷ್ಟ ಕಾರಣವಾಗಿದೆ. ಅಮೇರಿಕಾದ ಸರ್ಕಾರ ಮತ್ತು ಇತರ ಸಂಸ್ಥೆಗಳ ನಡುವೆ ಗೊಂದಲಗಳಿವೆ. ಕರೋನಾ ಲ್ಯಾಬಿನಿಂದ ಸೋರಿಕೆಯಾಯಿತು ಎಂದು ವೈರಾಲಜಿಸ್ಟ್‌ಗಳು ಹೇಳಿದರೆ, ಸುದ್ಧಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ಲ್ಯಾಬಿನಿಂದ ಸೋರಿಕೆಯಾಗಿರುವುದು ಕಾಲ್ಪನಿಕ ಊಹೆಯಷ್ಟೆ ಎಂದು ಪ್ರಚಾರ ಮಾಡಿಬಿಟ್ಟಿತ್ತು. 1957 ರಲ್ಲಿ ಏಸಿಯನ್ ಫ್ಲೂ, 1968 ರಲ್ಲಿ ಹಾಂಗ್ ಕಾಂಗ್ ಫ್ಲೂ, 2002 ರಲ್ಲಿ ಸಾರ್ಸ್, 2008 ರಲ್ಲಿ ಹೆಚ್5ಎನ್1, 2013 ರಲ್ಲಿ ಹೆಚ್7ಎನ್9 ಮತ್ತು 2019 ರಲ್ಲಿ ಕರೋನಾ. ನೆನಪಿಡಿ, ಈ ಎಲ್ಲಾ ರೋಗಗಳು ಹುಟ್ಟಿದ್ದು ಚೀನಾದಲ್ಲೇ!

ಚೀನಾ ಟಿಬೆಟ್ಟಿಯನ್ನರ ಮೇಲೆ ಹೊಸ ದಾಳಿ ಆರಂಭಿಸಿದೆ. ಸಿಚುವಾನ್‌ನಲ್ಲಿ 2 ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂಬ ಸುದ್ಧಿಗಳು ಕಳೆದ ವಾರದಿಂದ ಬರುತ್ತಿದೆ. ಆಫ್ರಿಕನ್ ರಾಷ್ಟ್ರಗಳು ಕೆಲವು ವರ್ಷಗಳ ಹಿಂದೆ ಸಹಿ ಮಾಡಿದ ಕೆಲವು ಒಪ್ಪಂದಗಳ ಕಾರಣದಿಂದಾಗಿ ರಾಷ್ಟ್ರೀಯ ಆಸ್ತಿಗಳನ್ನು ತನಗೆ ಹಸ್ತಾಂತರಿಸುವಂತೆ ಚೀನಾ ಈಗ ಒತ್ತಾಯಿಸುತ್ತಿದೆ. ಚೀನಾವನ್ನು ನೆಚ್ಚಿಸುವ ಸಲುವಾಗಿ ಕೆಲವು ನಿರ್ಣಾಯಕ ಷರತ್ತುಗಳನ್ನು ಆಫ್ರಿಕಾ ನಿರ್ಲಕ್ಷಿಸಿತ್ತು ಮತ್ತು ಅದರ ಫಲವನ್ನೀಗ ಅನುಭವಿಸುತ್ತಿದೆ. 207 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಹಾಗೂ 2015ರ ಒಪ್ಪಂದದ ಪ್ರಕಾರ ಉಗಾಂಡಾ ತನ್ನ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಚೀನಾದ ಕಂಪನಿಗಳಿಗೆ ಹಸ್ತಾಂತರಿಸಲು ತಯಾರಿ ನಡೆಸುತ್ತಿದೆ. ಆಫ್ರಿಕಾದ 50 ರಾಷ್ಟ್ರಗಳು ಚೀನಾದಿಂದ 150ಕ್ಕೂ ಹೆಚ್ಚು ಬಿಲಿಯನ್ ಡಾಲರ್ ಸಾಲವನ್ನು ಹತ್ತು ವರ್ಷಗಳಲ್ಲಿ ಪಡೆದುಕೊಂಡಿದೆ. ಈಗ ಕರೋನಾ ಬಿಕ್ಕಟ್ಟಿನಿಂದಾಗಿ, ಈ ದೇಶಗಳು ಸಾಲ ಮರುಪಾವತಿ ಮಾಡಲು ಹೆಣಗುತ್ತಿವೆ. ಈ ರೀತಿ ಸಾಲದ ಸುಳಿಯಲ್ಲಿ ಸಿಲುಕಿಸಿ ಇತರ ರಾಷ್ಟ್ರಗಳನ್ನು ತನ್ನ ಕೈಗೊಂಬೆಯಾಗಿಸಿಕೊಳ್ಳುವುದು ಚೀನಾಕ್ಕೆ ಹೊಸದಲ್ಲ. ಆದರೂ ಶ್ರೀಲಂಕಾ ಸಾಲಕ್ಕಾಗಿ ಐ.ಎಂ.ಎಫ್ ಗಿಂತಲೂ ಚೀನಾವನ್ನೇ ಅವಲಂವಭಿಸುತ್ತೇವೆ ಎಂಬಂತಹ ಮಾತುಗಳನ್ನಾಡಿದೆ.

The 99-foot-tall Buddha statue was destroyed by local Chinese authorities in Drago County, Tibet. Photo: TPI

ಮುಂದಿನ ತಿಂಗಳು ಬೀಜಿಂಗ್ ಅಲ್ಲಿ ಚಳಿಗಾಲದ ಒಲಂಪಿಕ್ಸ್ ನಡೆಯಲಿದೆ. ಈಗಾಗಲೇ ಅಮೇರಿಕಾ, ಕೆನಡಾ, ಯೂ.ಕೆ., ಅಸ್ಟ್ರೇಲಿಯಾ, ನೆದರ್ಲಾಂಡ್ಸ್, ಡೆನ್ಮಾರ್ಕ್, ಜಪಾನ್ ರಾಜತಾಂತ್ರಿಕವಾಗಿ ಬಹಿಷ್ಕಾರ ಹಾಕಿದೆ. ಭಾರತ ಬಹಿಷ್ಕಾರ ಹಾಕದಿದ್ದರೂ ಉನ್ನತ ಮಟ್ಟದ ರಾಜಕೀಯ ಪ್ರಾತಿನಿಧ್ಯವಿಲ್ಲ ಎಂದು ಹೇಳಿದೆ. ಹಾಗೆ ನೋಡಿದರೆ ಉಯ್ಘರ್ ಮುಸಲ್ಮಾನರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕರೋನಾ ಕಾರಣದಿಂದಾಗಿ ಎಲ್ಲಾ ದೇಶಗಳು ಚೀನಾದ ಜಾಗತಿಕ ಮಟ್ಟದ ಈ ಆಯೋಜನೆಯನ್ನು ಸಂಪೂರ್ಣ ಬಹಿಷ್ಕರಿಸಬೇಕಿತ್ತು. ಆದರೆ, ಯಾರೂ ಸಹ ಈ ಸಾಹಸಕ್ಕೆ ಮುಂದಾಗಲಿಲ್ಲ. 90 ಕ್ಕೂ ಹೆಚ್ಚು ದೇಶಗಳು ರಾಜತಾಂತ್ರಿಕ ಬಹಿಷ್ಕಾರವನ್ನೂ ಘೋಷಣೆ ಮಾಡಿಲ್ಲ.
ಸುಮಾರು 21 ತಿಂಗಳ ಗಡಿ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತ-ಚೀನಾ ಮಿಲಿಟರಿ ಮಾತುಕತೆಯ ಮತ್ತೊಂದು ಸುತ್ತಿನ ಮಾತುಕತೆ ಯಾವುದೇ ಪ್ರಗತಿಯಿಲ್ಲದೆ ಕೊನೆಗೊಂಡಿದೆ. ಹಿಮಾಲಯದ ಗಡಿಪ್ರದೇಶಗಳಲ್ಲಿ ಯುದ್ಧದ ಮೂಲಸೌಕರ್ಯಗಳ ​​ನಿರ್ಮಾಣವನ್ನು ಚೀನಾ ಹೆಚ್ಚಿಸಿದೆ. ಅದರ ನಿರ್ಮಾಣ ಚಟುವಟಿಕೆಯ ವೇಗ ಮತ್ತು ಪ್ರಮಾಣವನ್ನು ಗಮನಿಸಿದರೆ ಚೀನಾ ಯುದ್ಧದ ತಯಾರಿಯಲ್ಲಿದೆ ಎಂದು ಅಂದಾಜಿಸಬಹುದು. ಪ್ಯಾಂಗೊಂಗ್ ಸರೋವರದ ಮೇಲೆ ಸೇತುವೆಯನ್ನು ನಿರ್ಮಿಸುವುದರಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಭೂತಾನ್ ಪ್ರದೇಶದೊಳಗೆ ಮಿಲಿಟರಿ ಗ್ರಾಮಗಳು ಮತ್ತು ರಸ್ತೆಗಳನ್ನು ನಿರ್ಮಿಸುವವರೆಗೆ ಚೀನಾ ಭಾರತದ ಮೇಲೆ ಒತ್ತಡ ತರುವ ಪ್ರಯತ್ನ ಮಾಡುತ್ತಿದೆ. ಸಮಾಧಾನಕರವಾದ ಸಂಗತಿ ಎಂದರೆ ಭಾರತ ಚೀನಾದ ಮಿಲಿಟರಿ ನಿಯೋಜನೆ ಮಾಡಿರುವದಕ್ಕಿಂತ ಹೆಚ್ಚಿನದನ್ನು ಹೊಂದಿದೆ. ನಮ್ಮ ಸೈನ್ಯದ ಸಿದ್ಧತೆ ಉನ್ನತ ಮಟ್ಟದಲ್ಲಿವೆ ಎಂದು ಸೇನಾ ಮುಖ್ಯಸ್ಥ ಜನರಲ್ ನರವಣೆ ಅಭಿಪ್ರಾಯ ಪಟ್ಟಿದ್ದಾರೆ. ಎಲ್ಲೆಡೆ ಚೀನಾದ ಉಪಟಳ ಹೆಚ್ಚಾಗಿದೆ. ಜಗತ್ತು ಇನ್ನು ಎಷ್ಟು ದಿನಗಳು ಚೀನಾವನ್ನು ಸಹಿಸಿಕೊಳ್ಳಬೇಕು ಎಂಬ ಪ್ರಶ್ನೆ ಕಾಡುತ್ತಿದೆ.

************************************************************

References:

January 10, 2022

ಅದು ಭದ್ರತಾ ವೈಫಲ್ಯವಲ್ಲ ಪೂರ್ವನಿಯೋಜಿತ ಷಢ್ಯಂತ್ರ!

ಭಾರತದ ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಇಬ್ಬರು ಪ್ರಧಾನ ಮಂತ್ರಿಗಳ ಹತ್ಯೆಯಾಗಿದೆ ಮತ್ತು ಒಬ್ಬರು ಅನುಮಾನಾಸ್ಪದ ರೀತಿಯಲ್ಲಿ ಅಸುನೀಗಿದ್ದಾರೆ. ದೇಶದ ನಾಯಕರೊಬ್ಬರನ್ನು ಈ ರೀತಿ ಕಳೆದುಕೊಳ್ಳುವುದು ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಹುದು. ಅಂತಹ ಸಂದರ್ಭದಲ್ಲಿ ದೇಶದ ಜನ, ವಿರೋಧ ಪಕ್ಷಗಳು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಅತೀ ಮುಖ್ಯವಾಗುತ್ತದೆ. ಮೊನ್ನೆ ದೇಶ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಮಂಗಳವಾರ ಪ್ರಧಾನಿ ಮೋದಿ ಪಂಜಾಬಿನ ಹುಸೇನ್ ವಾಲದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಹೋಗಬೇಕಾಗಿತ್ತು. ಹೆಲಿಕಾಪ್ಟರ್ ಮೂಲಕ ತೆರಳಬೇಕಿದ್ದ ಪ್ರಧಾನಿ ಪ್ರತಿಕೂಲ ಹವಾಮಾನದ ಕಾರಣ ರಸ್ತೆ ಮೂಲಕ ತೆರಳಬೇಕಾಗುತ್ತದೆ. ನಿಗದಿತ ಸ್ಥಳದಿಂದ 30 ಕಿ.ಮೀ. ಹಿಂದೆ ಇದ್ದ ಫೈ-ಓವರ್ ಮೇಲೆ ಪ್ರತಿಭಟನಾಕಾರರು ದಾರಿಗೆ ಅಡ್ಡವಾಗಿ ನಿಲ್ಲುತ್ತಾರೆ. ಸುಮಾರು 15-20 ನಿಮಿಷ ಪ್ರಧಾನಮಂತ್ರಿ ಅಲ್ಲೇ ಸಿಲುಕಿ, ಇನ್ನು ಮುಂದುವರೆಯುವುದು ಸರಿಯಿಲ್ಲ ಎಂದು ಹಿಂದಿರುಗುತ್ತಾರೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ 'ನಾನು ಭತಿಂದಾ ಏರ್ಪೋರ್ಟ್ ಗೆ ಜೀವಂತವಾಗಿ ಹಿಂದಿರುಗಿದಕ್ಕಾಗಿ ನಿಮ್ಮ ಸಿ.ಎಂ.ಗೆ ಧನ್ಯವಾದಗಳನ್ನು ತಿಳಿಸಿ' ಎಂದು ಪ್ರಧಾನಿ ಹೇಳಿದರು ಎಂದು ಏ.ಎನ್.ಐ ವರದಿ ಮಾಡಿದೆ. ಪ್ರಧಾನಿಯೊಬ್ಬರು ತಮ್ಮದೇ ದೇಶದ ರಾಜ್ಯವೊಂದರ ಬಗ್ಗೆ ಹೀಗೆ ಹೇಳಬೇಕಾದರೆ ಪರಿಸ್ಥಿತಿಯ ಗಂಭೀರತೆಯನ್ನು ಮತ್ತು ಅಲ್ಲಿ ನಡೆದಿರಬಹುದಾದ ವ್ಯವಸ್ಥಿತ ಸಂಚನ್ನು ಊಹಿಸಿಕೊಳ್ಳಿ.

ANI Reporting Modi's Statement at Airport

ಇಂದಿರಾ ಗಾಂಧಿಯ ಹತ್ಯೆ ನಡೆದಾಗ ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 2800 ಸಿಖ್ಖರನ್ನು ದೆಹಲಿಯಲ್ಲಿ ಮತ್ತು ದೇಶದಾದ್ಯಂತ 3400 ಸಿಖ್ಖರನ್ನು ಕೊಲ್ಲಲಾಯ್ತು. ಆದರೆ ಖಾಸಗಿ ಸಂಸ್ಥೆಯೊಂದು ಎಂಟರಿಂದ ಹದಿನೇಳು ಸಾವಿರ ಸಿಖ್ಖರನ್ನು ಹತ್ಯೆ ಮಾಡಲಾಯ್ತು ಎಂದು ಅಂದಾಜಿಸುತ್ತದೆ. ಇಡೀ ದೇಶ ಈ ಹತ್ಯೆಯನ್ನು ಖಂಡಿಸುತ್ತದೆ. ಇದೇ ರೀತಿ 1991 ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದಾಗ ಈ ದೇಶದ ಭೂಸೇನೆ, ನೌಕಸೇನೆ, ದೂರದರ್ಶನ, ರೇಡಿಯೋ ಮಾಧ್ಯಮ, ಪೊಲೀಸ್ ಇಲಾಖೆ ಹಾಗೂ ಎಲ್ಲಾ ರಾಜಕೀಯ ಪಕ್ಷಗಳು ಎಲ್.ಟಿ.ಟಿ.ಇ. ವಿರುದ್ಧ ತಿರುಗಿ ಬೀಳುತ್ತದೆ. ಕರ್ನಾಟಕದ ಪೊಲೀಸ್ ತೀವ್ರವಾಗಿ ತನಿಖೆ ನಡೆಸಿ ರಾಜೀವ್ ಹಂತಕರು ಕೋಣನಕುಂಟೆಯ ಮನೆಯಲ್ಲಿರುವುದನ್ನು ಪತ್ತೆ ಹಚ್ಚುತ್ತಾರೆ. ನಂತರ ಬದುಕಿದ್ದ ಅರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಲಾಲ್ ಬಹದ್ದೂರ್ ಶಾಸ್ತ್ರಿ ನಿಧನದ ಪ್ರಕರಣದಲ್ಲಿ ದೇಶದ ಜನ ಮತ್ತಿ ವಿರೋಧ ಪಕ್ಷ ಒಕ್ಕೋರಲಿನಿಂದ ತೀವ್ರ ತನಿಖೆಗೆ ಆಗ್ರಹಿಸಿತಾದರೂ ಆಡಳಿತ ಪಕ್ಷದ ನಡೆ ಅನುಮಾಸ್ಪದವಾಗೇ ಇತ್ತು. ಅವರ ಸಾವಿಗೆ ಕಾರಣ ಹೃದಯಾಘಾತ ಎಂದು ಹೇಳಿತು. ಅವರ ಸಾವು ಇಂದಿಗೂ ನಿಗೂಢವಾಗೆ ಉಳಿದಿದೆ. ಹಲವರು ಹಲವು ರೀತಿಯ ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ.


Security Breach During PM's Visit to Punjab

ಈಗ ಮೊನ್ನೆ ನಡೆದ ಘಟನೆಗಳನ್ನು ಮತ್ತು ವಿರೋಧ ಪಕ್ಷಗಳ ಪ್ರತಿಕ್ರಿಯೆಗಳನ್ನು ಗಮನಿಸೋಣ. ಪಂಜಾಬಿನ ಹುಸೇನ್ ವಾಲಾಕ್ಕೆ ಹೋಗಬೇಕಾಗಿದ್ದ ಪ್ರಧಾನಿ ಮೋದಿ ಪಂಜಾಬಿನ ಭತಿಂದಾ ವಿಮಾನ ನಿಲ್ದಾಣಕ್ಕೆ ಬರುತ್ತಾರೆ. ಹೆಲಿಕಾಪ್ಟರ್ ಮೂಲಕ ತೆರಳಬೇಕಿದ್ದವರು ಪ್ರತಿಕೂಲ ಹವಾಮಾನದ ಕಾರಣ ರಸ್ತೆ ಮಾರ್ಗವಾಗಿ ತೆರಳುವ ತೀರ್ಮಾನವಾಗಿತ್ತದೆ. ಇದಕ್ಕಾಗಿ ಪ್ರಧಾನಿ 30 ನಿಮಿಷ ಕಾಯಬೇಕಾಗುತ್ತದೆ. ರಸ್ತೆ ಮೂಲಕ ನಿಗದಿತ ಸ್ಥಳ ತಲುಪಲು ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಸಮಯ ಬೇಕಿತ್ತು. ಪಂಜಾಬಿನ ಡಿಜಿಪಿ ಮತ್ತು ಪೊಲೀಸರಿಂದ ಅಗತ್ಯ ಭದ್ರತಾ ವ್ಯವಸ್ಥೆಯನ್ನು ಖಚಿತಪಡಿಸಿಕೊಂಡ ನಂತರ ಪ್ರಧಾನಿ ಮತ್ತು ತಂಡ ರಸ್ತೆಯ ಮೂಲಕ ಪ್ರಯಾಣಿಸಲು ಮುಂದಾಗುತ್ತಾರೆ. ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ 30 ಕಿ.ಮೀ. ದೂರದಲ್ಲಿ ಪ್ರಧಾನಿ ಮೋದಿ ಹಾಗೂ ಅವರ ಬೆಂಗಾವಲು ಪಡೆ ಫ್ಲೈಓವರ್ ತಲುಪಿದಾಗ ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ತಡೆದಿರುವುದು ಕಂಡುಬಂದಿದೆ. ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿದರು. ಪ್ರಧಾನಿಯ ಪ್ರಯಾಣದ ಮಾರ್ಗ ಮತ್ತು ಯೋಜನೆಯನ್ನು ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ಮುಂಚಿತವಾಗಿ ತಿಳಿಸಲಾಗಿದೆ. ಕಾರ್ಯವಿಧಾನದ ಪ್ರಕಾರ, ಅವರು ಲಾಜಿಸ್ಟಿಕ್ಸ್, ಭದ್ರತೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಿತ್ತು. ಸರ್ಕಾರವು ಯಾವುದೇ ಸುರಕ್ಷಿತ ಕ್ರಮ ಮತ್ತು ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಿರಲಿಲ್ಲ. ಪ್ರಧಾನಿ ತೆರಳುವ ಮಾರ್ಗದ ವಿಚಾರ ಇಲ್ಲಿ ಸೋರಿಕೆಯಾಗಿರುವುದು ಕಂಡುಬರುತ್ತದೆ ಮತ್ತು ಸೂಕ್ತ ಭದ್ರತೆಯನ್ನು ನಿಯೋಜಿಸಿರಲಿಲ್ಲ! ಈ ವಿಚಾರದಲ್ಲೂ ಕೂಡ ಭದ್ರತಾ ವೈಫಲ್ಯ ಎದ್ದು ಕಾಣುತ್ತದೆ. ನೆನಪಿಡಿ, ಪಾಕಿಸ್ತಾನದ ಗಡಿ ಪ್ರಧಾನಿ ಟ್ರಾಫಿಕ್ ಅಲ್ಲಿ ಸಿಲುಕಿದ ಜಾಗಕ್ಕಿಂತ ಕೇವಲ 10 ಕಿ.ಮೀ. ದೂರದಲ್ಲಿತ್ತು!


ಪಂಜಾಬಿನಲ್ಲಿ ಇರುವುದು ಕಾಂಗ್ರೇಸ್ ಸರ್ಕಾರ. ಪ್ರಧಾನಿಮಂತ್ರಿಯನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿ ಬದಲು ಮಂತ್ರಿಯೊಬ್ಬರು ಬಂದಿದ್ದರು. ತಮ್ಮ ಕಛೇರಿಯಲ್ಲಿ ಇಬ್ಬರು ಅಧಿಕಾರಿಗಳಿಗೆ ಕೋವಿಡ್ ಬಂದಿರುವ ಕಾರಣ ಮುಖ್ಯಮಂತ್ರಿ ತೆರಳಿಲ್ಲ ಎಂಬ ಕಾರಣ ಕೊಟ್ಟರು. ಆದರೆ, ರಾತ್ರಿ ಎಲ್ಲರೊಂದಿಗೆ ಪತ್ರಿಕಾಗೋಷ್ಟಿಯನ್ನು ನಡೆಸಿದ್ದಾರೆ ಮತ್ತು ಅವರ ಮಾತುಗಳು ಸೂಕ್ಷ್ಮವಾಗಿ ಇದ್ದಂತೆ ತೋರಲೇ ಇಲ್ಲ. ಪ್ರತಿಕುಲ ಹವಾಮಾನದ ಕಾರಣ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗದಲ್ಲಿ ತರಳುವ ಮುನ್ನ ಅಲ್ಲಿನ ಪೊಲೀಸ್ ವ್ಯವಸ್ಥೆಯ ಅನುಮೊದನೆ ಇರುತ್ತದೆ. ಹಾಗಿದ್ದೂ ಪ್ರಧಾನಿಯೊಬ್ಬರು ತೆರಳುವ ಮಾರ್ಗಯಲ್ಲಿ 300-400 ಪ್ರತಿಭಟನಾಕಾರರು ಜಮಾವಣೆಯಾಗಿದ್ದಾದರೂ ಹೇಗೆ? ಅಥವಾ ಅಷ್ಟು ಜನ ಇದ್ದದ್ದು ಗೊತ್ತಿದ್ದರೂ ಅಲ್ಲಿನ ಡಿಜಿಪಿ ಪ್ರಧಾನಿಯವರಿಗೆ ಅನುಮೋದನೆ ಮಾಡಿದ್ದಾದರೂ ಯಾಕೆ? ಫ್ಲೈ-ಓವರ್ ಮೇಲೆ ಪ್ರಧಾನಿ ಅವರ ಗಾಡಿ ಸಿಲುಕಿದ ಮೇಲೆ ದಾರಿಯನ್ನು ತೆರವು ಮಾಡಲು ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಪ್ರಧಾನಿಯ ಭದ್ರತಾ ಸಿಬ್ಬಂದಿಗಳಿಗೆ ಸುಮಾರು 45 ನಿಮಿಷಗಳು ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಭಾಜಾಪ ಆರೋಪಿಸಿದೆ.


ಕಾಂಗ್ರೇಸ್ ಅಂತೂ ತೀರ ಕೆಳಮಟದಲ್ಲಿ ಪ್ರತಿಕ್ರಯಿಸಿದೆ. ಭಾರತೀಯ ಯುವಾ ಕಾಂಗ್ರೇಸಿನ ಅಧ್ಯಕ್ಷ 'ಹೌ ಈಸ್ ದಿ ಜೋಶ್' ಎಂದು ಧಿಮಾಕಿನಿಂದ ಟ್ವೀಟ್ ಕೂಡ ಮಾಡಿದ್ದಾರೆ. ಮೋದಿಯವರ ರಾಲಿಗೆ ಕುರ್ಚಿಗಳು ಖಾಲಿ ಇದ್ದ ಕಾರಣ ಈ ರೀತಿ ಟ್ವೀಟ್ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕುರ್ಚಿಗಳು ಖಾಲಿ ಇರಲಿಲ್ಲ ಮತ್ತು ಅಲ್ಲಿ ಮಳೆ ಬರುತ್ತಿದ್ದ ವೀಡಿಯೋ ಸಾಕ್ಷ್ಯಗಳು ಈಗ ಹೊರಬರುತ್ತಿವೆ. ನವಜೋತ್ ಸಿದ್ಧು ಮತ್ತಿತರ ಕೆಲವು ಕಾಂಗ್ರೇಸ್ ನಾಯಕರು ಇದೊಂದು ರಾಜಕೀಯ ನಾಟಕ ಎಂದೆಲ್ಲಾ ಮಾತಾಡಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ನಾಚಿಕೆ ಇಲ್ಲದೆ ಸರ್ದಾರ್ ಪಟೇಲರ ಮಾತಾದ 'ಕರ್ತವ್ಯಕ್ಕಿಂತ ಜೀವದ ಬಗ್ಗೆ ಹೆಚ್ಚು ಕಾಳಜಿವಹಿಸುವವನು ಭಾರತದಂತಹ ದೇಶದಲ್ಲಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು' ಎಂಬುದನ್ನು ತಮ್ಮ ಟ್ವಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಖಾಲಿಸ್ತಾನಿ ಎಂಬ ಭಯೋತ್ಪಾದಕರು ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ತಡೆದವರಿಗೆ 80 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು! ಕಳೆದ ವರ್ಷ ಡಿಸೆಂಬರ್ ಅಲ್ಲಿ ಫ್ಲೈ-ಓವರ್‌ ಮೇಲೆ ಪ್ರಧಾನಿ ಮೋದಿಯವರನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ತೋರಿಸುವ ಕೆಲವು ಅನಿಮೇಟೆಡ್ ವೀಡಿಯೊಗಳು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿವೆ.


Punjab CM Channi Quoting Sardar Patel's Statement

ಕಾಂಗ್ರೇಸ್ ಅಂತೂ ತೀರ ಕೆಳಮಟದಲ್ಲಿ ಪ್ರತಿಕ್ರಯಿಸಿದೆ. ಭಾರತೀಯ ಯುವಾ ಕಾಂಗ್ರೇಸಿನ ಅಧ್ಯಕ್ಷ 'ಹೌ ಈಸ್ ದಿ ಜೋಶ್' ಎಂದು ಧಿಮಾಕಿನಿಂದ ಟ್ವೀಟ್ ಕೂಡ ಮಾಡಿದ್ದಾರೆ. ಮೋದಿಯವರ ರಾಲಿಗೆ ಕುರ್ಚಿಗಳು ಖಾಲಿ ಇದ್ದ ಕಾರಣ ಈ ರೀತಿ ಟ್ವೀಟ್ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಕುರ್ಚಿಗಳು ಖಾಲಿ ಇರಲಿಲ್ಲ ಮತ್ತು ಅಲ್ಲಿ ಮಳೆ ಬರುತ್ತಿದ್ದ ವೀಡಿಯೋ ಸಾಕ್ಷ್ಯಗಳು ಈಗ ಹೊರಬರುತ್ತಿವೆ. ನವಜೋತ್ ಸಿದ್ಧು ಮತ್ತಿತರ ಕೆಲವು ಕಾಂಗ್ರೇಸ್ ನಾಯಕರು ಇದೊಂದು ರಾಜಕೀಯ ನಾಟಕ ಎಂದೆಲ್ಲಾ ಮಾತಾಡಿದ್ದಾರೆ. ಪಂಜಾಬಿನ ಮುಖ್ಯಮಂತ್ರಿ ನಾಚಿಕೆ ಇಲ್ಲದೆ ಸರ್ದಾರ್ ಪಟೇಲರ ಮಾತಾದ 'ಕರ್ತವ್ಯಕ್ಕಿಂತ ಜೀವದ ಬಗ್ಗೆ ಹೆಚ್ಚು ಕಾಳಜಿವಹಿಸುವವನು ಭಾರತದಂತಹ ದೇಶದಲ್ಲಿ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಬಾರದು' ಎಂಬುದನ್ನು ತಮ್ಮ ಟ್ವಟ್ಟರ್ ಅಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಖಾಲಿಸ್ತಾನಿ ಎಂಬ ಭಯೋತ್ಪಾದಕರು ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ತಡೆದವರಿಗೆ 80 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು! ಕಳೆದ ವರ್ಷ ಡಿಸೆಂಬರ್ ಅಲ್ಲಿ ಫ್ಲೈ-ಓವರ್‌ ಮೇಲೆ ಪ್ರಧಾನಿ ಮೋದಿಯವರನ್ನು ಹೇಗೆ ನಿರ್ಬಂಧಿಸಬೇಕು ಎಂಬುದನ್ನು ತೋರಿಸುವ ಕೆಲವು ಅನಿಮೇಟೆಡ್ ವೀಡಿಯೊಗಳು ಯೂಟ್ಯೂಬ್ನಲ್ಲಿ ಅಪ್ಲೋಡ್ ಆಗಿವೆ.

2024 ರಲ್ಲಿ ಶತಾಯ ಗತಾಯ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಭಾರತ ವಿರೋಧಿ ಶಕ್ತಿಗಳು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದೆ. ಈ ಘಟನೆಗಳೆಲ್ಲಾ ಅದಕ್ಕೆ ಪೂರ್ವ ತಯಾರಿಯಂತಿದೆ. ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟಿನ ಮುಂದಿನ ನಡೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

***********************************

References:

1. Khalistan Terror Group Had Announced Rs 80 Lakh Reward For Blocking PM Modi
2. Khalistanis had shared animated video showing how they want to block PM Modi