ಹಿಂದೂ ಈಗ ಜಾಗೃತವಾಗಿದ್ದಾನೆ. ತನ್ನ ಮೇಲೆ ನೇರ ಹಾಗೂ ಪರೋಕ್ಷವಾಗಿ ಆಗುತ್ತಿರುವ ದಬ್ಬಾಳಿಕೆಯ ವಿರುದ್ಧ ದನಿ ಎತ್ತುತ್ತಿದ್ದಾನೆ. ಶಾಲಾ ಸಮವಸ್ತ್ರದ ಪರವಾಗಿ ಹೈಕೋರ್ಟ್ ತೀರ್ಪು ಬಂದಾಗ ನೆಲದ ಕಾನೂನನ್ನು ಗೌರವಿಸದೇ ಒಂದು ಸಮುದಾಯದ ಕೆಲವರು ತಮ್ಮ ವ್ಯಾಪಾರವನ್ನು ಬಂದ್ ಮಾಡಿದರು. ಇದರ ಬೆನ್ನಲ್ಲೇ ಹರ್ಷನ ಕೊಲೆ ಘಟಿಸಿತು, ಆತನ ಶವಯಾತ್ರೆ ಸಮಯದಲ್ಲಿ ಅಹಿತಕಾರಿ ಘಟನೆಗಳು ನಡೆಯಿತು. ಈ ಎಲ್ಲಾ ಘಟನೆ ಹಾಗೂ ಮುಖ್ಯವಾಗಿ ನಮ್ಮ ನೆಲದ ಕಾನೂನನ್ನು ಗೌರವಿಸದಿರುವುದು ಹಿಂದೂವನ್ನು ಒಗ್ಗೂಡಿಸಿಬಿಟ್ಟಿತು. ಹಲಾಲ್ ವಿಚಾರ ಬಂದ ಮೇಲೆ ಹಿಂದೂ ಸಮಾಜ ಅರ್ಥಿಕವಾಗಿ ಗಮನ ಹರಿಸಲು ಪ್ರಾರಂಭಿಸಿತು. ಜಾತ್ರೆ ಸಂದರ್ಭದಲ್ಲಿ ಮುಸಲ್ಮಾನರು ದೇವಾಲಯಗಳ ಹತ್ತಿರ ವ್ಯಾಪಾರ ಮಾಡಬಾರದು, ಹಲಾಲ್ ಬದಲು ಜಟ್ಕಾ ಮಾಂಸವನ್ನು ಕೊಳ್ಳುವ ಸಂಕಲ್ಪ ಮಾಡಿದರು, ಇದರ ಬೆನ್ನಲ್ಲೇ ದೇಶದ ಕೆಲವು ರಾಜ್ಯಗಳಲ್ಲಿ ಹನುಮ ಜಯಂತಿ ದಿವಸ ನಡೆದ ಜಾತ್ರೆ ಸಂದರ್ಭದಲ್ಲಿ ಕಲ್ಲು ತೂರಾಟ ನಡೆಯಿತು. ಈಗ ಅಕ್ಷಯ ತೃತೀಯ ಬರುತ್ತಿದೆ. ಹಿಂದೂಗಳು ಒಡವೆಯನ್ನು ಹಿಂದೂ ಅಂಗಡಿಯಲ್ಲೇ ಖರೀದಿ ಮಾಡುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಇದು ಜಾಗೃತಿಯ ಸಂಕೇತವಾದರೂ ಸೌಹರ್ದತೆಯ ಲಕ್ಷಣವಂತೂ ಅಲ್ಲ. ಹಾಗಾದರೇ ಸೌಹಾರ್ದತೆಯ ಪಾಠ ಆಗಬೇಕಾಗಿರುವುದು ಯಾರಿಗೆ?
ಈ ಪ್ರಶ್ನೆಗೆ ಉತ್ತರ ಹೇಳಲು ಇತಿಹಾಸದ ಕೆಲವು ಪುಟಗಳನ್ನು ಅವಲೋಕಿಸುವುದು ಅವಶ್ಯ. 
ಅಲೆಕ್ಶಾಂಡರ್ ನ ಕಾಲದಿಂದ ಹಿಡಿದು ಸ್ವಾತಂತ್ರ್ಯ ಬರುವವರೆಗೂ ಅಸಂಖ್ಯ ಆಕ್ರಮಣಗಳು 
ಭಾರತದ ಮೇಲಾಗಿದೆ. ಗ್ರೀಕರು, ಶಖರು, ಕುಶಾನರು, ಹೂಣರು ನಮ್ಮ ದೇಶದ ಸಾಮಾನ್ಯ ಜನರ ಮೇಲೆ
 ಬರ್ಬರವಾಗಿ ಆಕ್ರಮಣ ಮಾಡುತ್ತಾರೆ. ಕಾಲಕ್ರಮದಲ್ಲಿ ಈ ದಾಳಿಕೋರರನ್ನು ಎದುರಿಸಿ, ಅವರ 
ಹುಟ್ಟಡಗಿಸಿ ಭಾರತ ಅವರೆಲ್ಲರನ್ನೂ ತನ್ನೊಳಗೆ ಜೀರ್ಣೀಸಿಕೊಳ್ಳುತ್ತದೆ. ಅವರೆಲ್ಲರೂ 
ಭಾರತದ ಸಂಸ್ಕೃತಿಯೊಂದಿಗೆ ಏಕರಸವಾಗುತ್ತಾರೆ. ಭಾರತ ತಾನಾಗೇ ಯಾರ ಮೇಲೂ ಏರಿಹೋಗದೇ ತನ್ನ
 ಮೇಲೆ ಆಕ್ರಮಣ ಮಾಡಿದವರನ್ನು ಎದುರಿಸಿ, ಹಿಂದೂ ಸಂಸ್ಕೃತಿಯನ್ನು ಗಟ್ಟಿಯಾಗಿ 
ನಿಲ್ಲಿಸುತ್ತದೆ.  ಹತ್ತನೇ ಶತಮಾನದ ಹೊತ್ತಿಗೆ ಭಾರತದ ಮೇಲೆ ಅರಬ್ಬಿನ ಮುಸಲ್ಮಾನರ 
ಆಕ್ರಮಣ ಪ್ರಾರಂಭವಾಗುತ್ತದೆ. ಘೋರಿ, ಘಜ್ನಿ, ಅಫ್ಘ್ನನ್ನರು, ಮೊಘಲರು, ಕಿಲ್ಜೀ, 
ತುಗ್ಲಕ್ ಸಂತತಿ ಹೀಗೆ ಒಬ್ಬರ ಹಿಂದೆ ಒಬ್ಬರು ನಮ್ಮ ದೇಶದ ಮೇಲೆ ಆಕ್ರಮಣ ಮಾಡುತ್ತಾರೆ. 
ಇವರ ಆಕ್ರಮಣದ ಉದ್ದೇಶ ಲೂಟಿ ಮಾಡುವುದಷ್ಟೇ ಆಗಿರಲಿಲ್ಲ ಬದಲಾಗಿ ಈ ದೇಶದ ಅಸ್ಮಿತೆ, 
ಸಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿದ್ದಂತಹ ದೇವಾಲಯಗಳನ್ನು ನಾಶ ಮಾಡುವುದಾಗಿತ್ತು.
 ಪ್ರತಿಯೊಬ್ಬ ದಾಳಿಕೋರನು ತನ್ನನ್ನು ತಾನು ಬುತ್ಷಿಕನ್; ಮೂರ್ತಿ ಭಂಜಕ ಎಂದು 
ಕರೆಸಿಕೊಳ್ಳಲು ಹೆಮ್ಮೆ ಪಡುತ್ತಿದ್ದ. 
ಹಿಂದೂಗಳ ಶ್ರದ್ಧಾ ಕೇಂದ್ರಗಳಾದ ಕಾಶಿ, ಮಥುರಾ, ಅಯೋಧ್ಯೆ, ಕಾಶ್ಮೀರ, ಸೋಮನಾಥ ದಲ್ಲಿನ ದೇವಾಲಯಗಳನ್ನು ಭಂಗಿಸಿ, ಮಂದಿರದ ಅವಶೇಷಗಳನ್ನೇ ಬಳಸಿ ಮಸೀದಿ ನಿರ್ಮಾಣ ಮಾಡಿದರು. ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿ ಕೆಳಗೆ ಇದದ್ದು ದೇವಸ್ಥಾನ ಎಂಬುದನ್ನು ಸುಪ್ರೀಂ ಕೋರ್ಟು ಕೂಡ ಒಪ್ಪಿದೆ. ಕಾಶಿ ಮತ್ತು ಮಥುರಾ ದೇವಾಲಯಗಳ ಎದುರು ಮಸೀದಿ ಇರುವುದು ಇಗಲೂ ಕಾಣಬಹುದು. ಸಾಮಾನ್ಯವಾಗಿ ಶಿವನ  ದೇವಸ್ಥಾನಗಳಲ್ಲಿ ಗರ್ಭಗುಡಿ ಎದುರು ಮುಖವಾಗಿ ನಂದಿ ಇರುತ್ತದೆ ಆದರೆ ಕಾಶಿಯಲ್ಲಿ ನಂದಿಯ ಹಿಂಬದಿಯಲ್ಲಿ ಗರ್ಭಗುಡಿ ಇದೆ ಹಾಗೂ ಎದುರಲ್ಲಿ ಮಸೀದಿ ಇದೆ. ಔರಂಗಜೇಬನ ಆಕ್ರಮಣದ ಕಾರಣ ವಿಶ್ವನಾಥ ಭಾವಿಗೆ ಹಾರಿದ ಎಂಬ ಕಥೆ ಅಲ್ಲಿನ ಜನ ಹೇಳುತ್ತಾರೆ. ಭಂಜನವನ್ನು ತಡೆಯಲು ಮೂಲವಿಗ್ರಹವನ್ನು ಭಾವಿಗೆ ಹಾಕಿ ನಂತರ ಬೇರೆ ಕಡೆಗೆ ಸಾಗಿಸಿರುವ ಸಾಧ್ಯತೆ ಇದೆ. ಕಾಶಿಯ ಗಲ್ಲಿಗಳ ಅನೇಕ ಮನೆಗಳಲ್ಲಿ ಶಿವನ ಲಿಂಗದ ಪೂಜೆ ನಡೆಯುತ್ತದೆ. ಪ್ರತಿಯೊಂದು ಮನೆಯೂ ಸಹ ಒಂದು ವಿಧದಲ್ಲಿ ದೇವಸ್ಥಾನವೇ ಸರಿ. 
ಕಾಶ್ಮೀರದ ಇತಿಹಾಸ ಎಲ್ಲಕ್ಕಿಂತಲೂ ಬರ್ಬರವಾದದ್ದು. ಹಿಂದುಗಳ ಮೇಲೆ ನರಮೇಧ ಪ್ರಾರಂಭವಾದದ್ದು 14ನೇ ಶತಮಾನದಿಂದ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಈ ನರಮೇಧಗಳ ಪ್ರತಿ ಹಂತದಲ್ಲೂ ಪಂಡಿತರ ಕಗ್ಗೊಲೆ, ಅತ್ಯಾಚಾರ, ದೇವಸ್ಥಾನಗಳ ನಾಶ ಎಗ್ಗಿಲ್ಲದೆ ನಡೆದವು. ಮೊಘಲರ ಅಡಳಿತದಲ್ಲಿ ಹಿಂದೂವಾಗಿರಲು ಜೆಜಿಯಾ ಕಂದಾಯ ಕಟ್ಟಬೇಕಾಗಿತ್ತು. ಮೊಘಲರ ದೌರ್ಜನ್ಯದ ವಿರುದ್ಧ ತಿರುಗಿಬಿದ್ದ ಸಂತ ಗುರು ತೇಗ್ ಬಹದ್ದೂರ್ ಅವರ ತಲೆಯನ್ನು ಔರಂಗಜೇಬ್ ಕಡಿಸುತ್ತಾನೆ. ಅವರ ಸಹಚರ ಸಹೋದರರಾದ ಭಾಯ್ ಮತಿದಾಸ್ ಮತ್ತು ಭಾಯ್ ಸತಿದಾಸರನ್ನು ಸಹ ದೆಹಲಿಯ ಚಾಂದಿನಿ ಚೌಕ್ ಅಲ್ಲಿ ಕೊಲ್ಲಿಸುತ್ತಾರೆ. ಭಾರತದಲ್ಲಿ ಸಂತರೊಬ್ಬರ ತಲೆ ಕಡಿಯಲಾಯಿತು ಅನ್ನುವುದು ಖೇದಕರ ವಿಚಾರ. ಸ್ವಾತಂತ್ರ್ಯ ನಂತರ ಸಹ ಪಂಡಿತರ ಪರಿಸ್ಥಿತಿ ಸುಧಾರಿಸಲಿಲ್ಲ, ಅವರ ನಿರಂತರವಾದ ಸಾಮೂಹಿಕ ವಲಸೆಗೆ ಕಾಶ್ಮೀರ ಸಾಕ್ಷಿಯಾಯಿತು. ಇದಕ್ಕೆ ನಮ್ಮ ವ್ಯವಸ್ಥೆ ಕೂಡ ಕಾರಣವಾದವು. ಕಾಶ್ಮೀರದಲ್ಲಿ ಆರ್ಟಿಕಲ್ 370 ಇಂದಾಗಿ ಕಾನೂನು ಮತ್ತು ಸುವ್ಯವಸ್ಥೆಯ ಅಧಃಪತನ, ಜಮೀನ್ದಾರಿ ಪದ್ಧತಿಯ ರದ್ದತಿ ಹಾಗೂ ಯಾವುದೇ ಪರಿಹಾರ ಸಿಗದ ಕಾರಣ ಅನೇಕ ಪಂಡಿತ ಭೂಮಾಲಿಕರು ಬಡವರಾದರು, ಉನ್ನತ ಶಿಕ್ಷಣ, ತಾಂತ್ರಿಕ ಮತ್ತು ವೃತ್ತಿಪರ ಸಂಸ್ಥೆಗಳಲ್ಲಿ ಪಂಡಿತ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಲ್ಲಿ ತಾರತಮ್ಯ. 1990ರಲ್ಲಿ ನಡೆದ ನರಮೇಧವಂತೂ ಅತ್ಯಂತ ಭೀಕರ. ಅದರ ಸಣ್ಣ ಎಳೆಯನ್ನು ದಿ ಕಾಶ್ಮಿರ್ ಫೈಲ್ಸ್ ಚಿತ್ರದಲ್ಲಿ ನೋಡಿದ್ದೇವೆ. ಕರ್ನಾಟಕದ ವಿಚಾರಕ್ಕೆ ಬಂದರೆ ಚಿತ್ರದುರ್ಗ, ಹಂಪಿ, ಕೊಡಗಿನಲ್ಲಿ ನಡೆದದ್ದು ಇಂತಹ ನರಮೇಧವೇ. ಅನಕ್ಷರಸ್ತರಿಗಿಂತಲೂ ಅಕ್ಷರಸ್ತ ಮುಸಲ್ಮಾನರಿಂದಲೇ ಕಾಶ್ಮೀರದಲ್ಲಿ ಕೊಲೆ ಮತ್ತು ಅತ್ಯಾಚಾರದಂತಹ ಹೀನ ಕೃತ್ಯ ನಡೆಯಿತು ಎಂಬುದು ನೆನಪಿನಲ್ಲಿಡಬೇಕಾದ ಅಂಶ.
ದೇಶದೆಲ್ಲೆಡೆ ಇರುವ ಮಸೀದಿಗಳಲ್ಲಿ ದಿನಕ್ಕೆ ಐದು ಬಾರಿ ಅಜಾನ್ ಕೂಗುತ್ತಾರೆ. ಜೊತೆಗೆ ಧ್ವನಿವರ್ಧಕವನ್ನೂ ಬಳಸುತ್ತಾರೆ. ಎಲ್ಲರಿಗೂ ಕೇಳುವಂತೆ ಅಲ್ಲಾ ಒಬ್ಬನೇ ದೇವರು ಎಂದು ಅಜಾನ್ ಕೂಗುತ್ತಾರೆ. ಸರ್ವಧರ್ಮ ಸಮನ್ವಯದ ಸಂಕೇತವಾದ ಈ ದೇಶದಲ್ಲಿ ಈ ರೀತಿ ಸಾರ್ವಜನಿಕವಾಗಿ ಧ್ವನಿವರ್ಧಕ ಬಳಸುವುದು ಹೇರಿಕೆ ಎಂದು ಅವರಿಗೆ ಅನ್ನಿಸಲೇ ಇಲ್ಲ! ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ, ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾರಣವಾದದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್. ಸಾಮಾಜಿಕ ಜಾಲತಾಣವೆಂಬುದು ಕೆಲಸಕ್ಕೆ ಬಾರದ ವಿಚಾರ, ಅರ್ಥವಿಲ್ಲದ್ದು ಎಂಬುದನ್ನು ಮನೆಯಲ್ಲಿ ಹಿರಿಯರು ಹೇಳಿದನ್ನು ಅನೇಕ ಸಲ ನಾವೇ ಕೇಳಿದ್ದೇವೆ. ಆದರೆ, ಇಂತಹ ಪೋಸ್ಟುಗಳು ಸಮುದಾಯವೊಂದನ್ನು ಕೆರಳಿಸುತ್ತದೆ ಎಂದರೆ ಅವರ ಮನಸ್ಥಿತಿಯನ್ನು ಒಮ್ಮೆ ಯೋಚಿಸಿ.
ಜಾಗೃತವಾಗಿರುವ ಹಿಂದೂ ಸಮಾಜ ತನ್ನ ಮೇಲಾದ ದೌರ್ಜನ್ಯಕ್ಕೆ ಪ್ರತಿಕ್ರಯಿಸಲು ಮುಂದಾಗಿದೆ. ಈಗ ಒಂದಷ್ಟು ಜನರಿಗೆ ಬಿಸಿ ತಾಗಿ ಶಾಂತಿ, ಸೌಹಾರ್ದತೆ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದಾರೆ. ಜನರ ಮೇಲೆ ಆದ ದೌರ್ಜನ್ಯಕ್ಕಿಂತ ಕಲ್ಲಂಗಡಿ ಹಾಳಾಗಿದ್ದೆ ದೊಡ್ಡ ವಿಚಾರ ಅನ್ನುವ ರೀತಿ ಮಾತಾಡುತ್ತಾರೆ ರಾಜಕೀಯದ ನಾಯಕರು. ಪ್ರಗತಿಯ ದೃಷ್ಟಾರರು ಎಂದು ತಮ್ಮನ್ನು ಕರೆದುಕೊಳ್ಳುವ ಕಮ್ಯುನಿಸ್ಟರಿಗೆ ಹಿಂದೂ ಜಾಗೃತಗೊಂಡಿರುವುದು ಹೃದಯ ಬಿರಿಯುವ, ಹೊಟ್ಟೆ ಉರಿಸುವ ವಿಚಾರ. ಐತಿಹಾಸಿಕವಾಗಿ ನಡೆದ ಪ್ರಮಾದವನ್ನು ತಿದ್ದಿಕೊಂಡು, ನೆಲದ ಕಾನೂನಿಗೆ ಗೌರವ ಕೊಟ್ಟು ಎಲ್ಲರೂ ಸೌಹಾರ್ದಯುತವಾಗಿ ಬದುಕಬೇಕು ಎಂಬುದು ನಮ್ಮ ಮಂತ್ರವಾಗಬೇಕು. ಶಾಂತಿ, ಸೌಹಾರ್ದತೆ ಎಂಬುದು ಹಿಂದೂವಿಗೆ ರಕ್ತಗತವಾಗಿದೆ. ಇನ್ನೂ ಆ ಪಾಠ ಆಗಬೇಕಾಗಿದದ್ದು ಮುಸಲ್ಮಾನರಿಗೆ. ಕಲಿಸಲು ಸಮಾಜ ತಯಾರಿದೆ ಆದರೆ ಅವರು ಕಲಿಯಲು ತಯಾರಾಗಬೇಕು ಅಷ್ಟೇ! 

