March 25, 2023

ಪ್ರಜಾಪ್ರಭುತ್ವದಲ್ಲಿ ಮೌಲ್ಯವೇ ಮಾಪನ

ಕರ್ನಾಟಕದಲ್ಲಿ ಚುಣಾವಣೆಯ ಕಾವು ಜೋರಾಗಿದೆ. ಭಾಜಪಾ, ಕಾಂಗ್ರೇಸ್, ದಳ ರಥಯಾತ್ರೆ ನಡೆಸುತ್ತಿವೆ. ಮೂರು ಪಕ್ಷಗಳು ತಮ್ಮ ಪ್ರಣಾಳಿಕೆ, ಘೋಷಣೆಗಳನ್ನು ಮಾಡುತ್ತಿವೆ. ದೆಹಲಿ ಹಾಗೂ ಪಂಜಾಬ್ ಅಲ್ಲಿ ಹೆಚ್ಚು ಸದ್ದು ಮಾಡಿದ ಏಏಪಿ ಇಲ್ಲಿ ಸುಳಿವೇ ಇಲ್ಲ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಕೀಯದ ಹೆಸರು ಓಡಾಡುತ್ತಿದೆ. 2024 ರಲ್ಲಿ ಕೇಂದ್ರ ಚುಣಾವಣೆ ನಡೆಯಬೇಕಿದೆ. ಮೋದಿಯವರನ್ನು ಅಧಿಕಾರದಿಂದ ಇಳಿಸಲು ಪ್ರಾದೇಶಿಕ ಪಕ್ಷಗಳಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೊರೋಸ್ ಅಂತಹವರಿಂದ ಷಢ್ಯಂತ್ರ ನಡೆಯುತ್ತಿದೆ. ಇದೆಲ್ಲ ಗದ್ದಲಗಳ ನಡುವೆ ಜನರ ಆಯ್ಕಯೇ ಅಂತಿಮ. ನಮ್ಮ ರಾಜ್ಯವನ್ನು, ದೇಶವನ್ನು ಯಾರು ಮುನ್ನಡೆಸಬೇಕು ಎಂಬುದರ ತೀರ್ಮಾನ ಶ್ರೀಸಾಮಾನ್ಯರದ್ದು. ಅದನ್ನೇ ಪ್ರಜಾಪ್ರಭುತ್ವ ಅನ್ನುವುದು. ಎಲ್ಲರಿಗೂ ಒಂದೇ ಮೌಲ್ಯದ ಮತ ಅಂತ ಇರುವ ಪ್ರಜಾಪ್ರಭುತ್ವದಲ್ಲಿ ಜನರು ಸರಿಯಾದದ್ದನ್ನು, ದೇಶದ ಆರೋಗ್ಯಕ್ಕೆ ಪೂರಕವಾದದ್ದನ್ನು ಆಯ್ಕೆ ಮಾಡಿದರೆ ಒಳಿತು ಆದರೆ ತಪ್ಪಾದರೆ ಎಂಬುದೇ ಪ್ರಶ್ನೆ. 

ಕಾಂಗ್ರೇಸ್ಸಿನವರು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಗ್ಯಾರಂಟಿ ಇದೆಯೋ ಇಲ್ಲವೋ ಆದರೆ ಮನಸೋ ಇಚ್ಛೆ ಬಿಟ್ಟಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದಾರೆ. ತಿಂಗಳಿಗೆ 200 ಯೂನಿಟ್ ವಿದ್ಯುತ್, ಪ್ರತಿ ಯಜಮಾನಿಗೆ ತಿಂಗಳಿಗೆ 2000 ರೂ, ಅನ್ನಭಾಗ್ಯದ ಹೆಸರಲ್ಲಿ ಪ್ರತಿಯೊಬ್ಬರಿಗೂ ಉಚಿತ ಅಕ್ಕಿ, ಯುವನಿಧಿ ಹೆಸರಿನಲ್ಲಿ 3000 ರೂ! ಈ ಘೋಷಣೆಗಳು ಹೇಗಿದೆ ಎಂದರೆ; ಡಿಗ್ರಿ ಓದಿದ ತರುಣ ಕೆಲಸ ಮಾಡದೆ ಮನೆಯಲ್ಲಿ ಕೂತರೆ ಅವನಿಗೆ ಹಾಗೂ ಮನೆಯ ಯಜಮಾನಿಗೆ ಸೇರಿ 5000 ರೂ  ಬರುತ್ತದೆ. ಆ ಹಣದಲ್ಲಿ ಸಾರಾಯಿ ಕೊಂಡು, ಕುಡಿದು ಬಡವರಾದರೆ 10 ಕೆಜಿ ಅಕ್ಕಿ ಸಿಗುತ್ತದೆ. ಅದನ್ನು ಮಾರಿ ಅಥವಾ ತಿಂದು ಜೀವನವನ್ನು ಸಾರ್ಥಕ ಮಾಡುಕೊಳ್ಳಬಹುದು. ಜನತಾದಳದವರು ಪಂಚಾಯಿತಿಗೊಂದು ಹೈಟೆಕ್ ಆಸ್ಪತ್ರೆ ಹಾಗೂ ಶಾಲೆ, ಸಾಲ ಮನ್ನ, ರೈತರಿಗೆ ಎಕರೆಗೆ 10000 ರೂ ಎಂಬಂತಹ ಘೋಷಣೆಗಳನ್ನು ಮಾಡಿದ್ದಾರೆ. ಇದಕ್ಕೆಲ್ಲಾ ಹಣ ಎಲ್ಲಿಂದ ತರುತ್ತೀರ ಹಾಗೂ ಹೇಗೆ ಕಾರ್ಯರೂಪಕ್ಕೆ ತರುತ್ತೀರ ಎಂಬ ಪ್ರಶ್ನೆಗೆ ಅವರಿಂದ ಸಮರ್ಪಕ ಉತ್ತರ ಇಲ್ಲ. ದುರಾದೃಷ್ಟವಶಾತ್ ಸಮ್ಮಿಶ್ರ ಸರ್ಕಾರ ಬಂದರೇ 'ಪೂರ್ಣ ಬಹುಮತ ಇದ್ದಿದ್ದರೆ ನಮ್ಮ ಘೋಷಣೆಗಳನ್ನು ಕಾರ್ಯರೂಪಕ್ಕೆ ತರಬಹುದಿತ್ತು' ಎಂಬ ಉತ್ತರ ಸಿದ್ದವಾಗಿರುತ್ತದೆ. ಪೂರ್ಣ ಬಹುಮತ ಬರುವ ಖಾತ್ರಿ ಇಲ್ಲದ ಮೇಲೆ ಈ ರೀತಿಯ ಪ್ರಣಾಳಿಕೆ ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ರಾಜಕೀಯ ಪಕ್ಷಗಳು ಯೋಚಿಸಬೇಕು. ಇಂತಹ ಪಕ್ಷಗಳಿಗೆ ಮತ ಹಾಕುವ ಮುನ್ನ ಮತದಾರರೂ ಸಹ ಯೋಚಿಸಬೇಕು.

Congress Guarantee

ಈ ಬಿಟ್ಟಿ ಯೋಜನೆಗಳು ರಾಜ್ಯದ, ದೇಶದ ಭವಿಷ್ಯಕ್ಕೆ ಮಾರಕ ಎಂಬುದು ಸೂಕ್ಷವಾಗಿ ಗಮನಿಸಿದರೆ ಅರ್ಥವಾಗುವಂತಹುದು. ಇಂತಹ ಯೋಚನೆಗಳನ್ನು ಜಾರಿಗೆ ತಂದ ವೆನೇಜುಲಾ ದೇಶ ಆರ್ಥಿಕವಾಗಿ ದಿವಾಳಿಯಾಗಿರುವುದು ನಮ್ಮ ಕಣ್ಣೆದುರಿಗಿದೆ. ಜಾತಿ, ಧರ್ಮಾಧಾರಿತ, ಸ್ವಾರ್ಥಯುತವಾದ ಆರ್ಥಿಕ ನೀತಿ ಜಾರಿಗೆ ತಂದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಪಕ್ಕದ ಪಾಕೀಸ್ತಾನ ಹಾಗೂ ಶ್ರೀಲಂಕಾ! ಜಾತ್ಯಾಧಾರಿತ ಮೀಸಲಾತಿಗೆ ಒತ್ತುಕೊಟ್ಟರೆ ಆ ಜನಾಂಗವನ್ನು ಶಾಶ್ವತವಾಗಿ ಹಿಂದುಳಿಸಿದಂತೆ. ಬದಲಾಗಿ ಹಿಂದುಳಿದವರನ್ನು ಸದೃಢರನ್ನಾಗಿ ಮಾಡುವುದು ಹೇಗೆ ಎಂಬುದು ರಾಜಕೀಯವಾಗಿ, ಸಾಮಾಜಿಕವಾಗಿ ಯೋಚಿಸಬೇಕಾದ ಸಂಗತಿ.

ಭಾರತ್ ಜೋಡೋ ಯಾತ್ರೆ ನಂತರ ಲಂಡನ್ ಪ್ರವಾಸಕ್ಕೆ ತೆರಳಿದ ರಾಹುಲ್ ನರೇಂದ್ರ ಮೋದಿ ಹಾಗೂ ಭಾಜಾಪ ನೇತೃತ್ವದ ಸರ್ಕಾರವನ್ನು ಟೀಕಿಸುವ ಭರದಲ್ಲಿ ಭಾರತದ ವ್ಯವಸ್ಥೆ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರು. 2019ರಲ್ಲಿ ಚುಣಾವಣೆ ಪ್ರಚಾರ ಭಾಷಣದಲ್ಲಿ ಮೋದಿ ಎಂದು ಹೆಸರಿರುವವರೆಲ್ಲ ಕಳ್ಳರು ಎಂಬ ಮಾತಿಗಾಗಿ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಾಗಿತ್ತು. 24ನೇ ತಾರೀಖು ರಾಹುಲ್ ಗಾಂಧಿ ತಪ್ಪಿತಸ್ಥ ಎಂದು ಅವರ ಸಂಸತ್ ಸದಸ್ಯತ್ವವನ್ನು ಅಸಿಂಧುಗೊಳಿಸಿ ಅವರನ್ನು ಅನರ್ಹಗೊಳಿಸುವಂತ ತೀರ್ಪು ಸೂರತ್ ನ್ಯಾಯಾಲಯ ಕೊಟ್ಟಿದೆ. ರಾಹುಲ್ ಆಗಲಿ ಅಥವಾ ಪಕ್ಷದ ವತಿಯಿಂದಾಗಲಿ ಈವರೆಗೆ ತೀರ್ಪಿಗೆ ತಡೆತರುವ ಸೂಚನೆ ಕಾಣಿಸುತ್ತಿಲ್ಲ. ಕಾಂಗ್ರೇಸ್ ಇದನ್ನು ಕರ್ನಾಟಕ ಚುಣಾವಣೆಗೆ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಯೋಚನೆ ಮಾಡುತ್ತಿರಬಹುದು. ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವುದೇ ಇವರ ಧ್ಯೇಯವಾಗಿರುವುದರಿಂದ ಭಾರತದಲ್ಲಿ 'ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂಬ ಸುಳ್ಳಿಗೆ ಹೆಚ್ಚು ಪ್ರಚಾರ ಕೊಡಬಹುದು. ಸಾಧ್ಯವಾದಲ್ಲಿ ಜನರ ಸಹಾನುಭೂತಿ ಗಿಟ್ಟಿಸಿ ಪ್ರಿಯಾಂಕಳನ್ನು ಅದಿನಾಯಕಿ ಎಂದು ಬಿಂಬಿಸುವ ಪ್ರಯತ್ನವನ್ನೂ ಮಾಡಬಹುದು. 1975 ರಲ್ಲಿ ರಾಹುಲನ ಅಜ್ಜಿ ಇಂದಿರಾ ವಿರುದ್ಧ ಅಲ್ಲಹಾಬಾದ್ ಕೋರ್ಟು ತೀರ್ಪಿತ್ತಾಗ ದೇಶವನ್ನು ತುರ್ತು ಪರಿಸ್ಥಿತಿ ಎಂಬ ನರಕಕ್ಕೆ ತಳ್ಳಿದರು. ಸಂವಿದಾನದ ವಿಧಿಗಳಿಗೆ ತಿದ್ದುಪಡಿ ತರಲಾಯಿತು, ನಿಯಮಗಳನ್ನು ಗಾಳಿಗೆ ತೂರಿ, ಮೂಲ ಪ್ರಸ್ತಾವನೆಯನ್ನು ಬದಲು ಮಾಡಿ ಸೋಸಿಯಲಿಸ್ಟ್ (ಸಮಾಜವಾದ) ಹಾಗೂ ಸೆಕ್ಯುಲರ್ (ಜಾತ್ಯಾತೀತ) ಎಂಬ ಪದಗಳನ್ನು ಸೇರಿಸಲಾಯಿತು. ಇಗಲೂ ಕಾಂಗ್ರೇಸ್ ಪಕ್ಷವೇ ಅಧಿಕಾರದಲ್ಲಿದ್ದರೆ ಏನಾಗುತ್ತಿತ್ತು ಎಂದು ಊಹಿಸಿ! ಇಂತಹವರ ಜೊತೆ ನಿಲ್ಲುವ ಮುನ್ನ, ಅವರ ಪಕ್ಷಕ್ಕೆ ಮತ ಹಾಕುವ ಮುನ್ನ ಯೋಚಿಸಬೇಕು ಮತ್ತೂ ಎಚ್ಚರವಹಿಸಬೇಕು.

Disqualification notice

ಸಾರ್ವಜನಿಕ ಜೀವನದಲ್ಲಿ ನಾವು ಬಳಸುವ ಪದಗಳ ಮೌಲ್ಯವನ್ನರಿಯಬೇಕು. ಜನಸಾಮಾನ್ಯರು ತಮ್ಮ ಮತವನ್ನು ಹಾಕುವ ಮುನ್ನ ಅದರ ಮೌಲ್ಯವನ್ನರಿಯಬೇಕು. ಎಲ್ಲರ ಮತಕ್ಕೂ ಒಂದೇ ಮೌಲ್ಯ ಎಂಬುದು ಸಂವಿಧಾನ ನಮಗೆ ಕೊಟ್ಟಿರುವ ವರ. ಇದನ್ನು ದೇಶದ ಒಳಿತಿಗಾಗಿ ಸದುಪಯೋಗ ಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಇರುವ ಹತ್ತು ಜನರಲ್ಲಿ ಕತ್ತೆಯೊಂದನ್ನು ಕುದುರೆ ಎಂದು ಎಂಟು ಜನ ಹೇಳಿ; ಇಬ್ಬರು ಸತ್ಯವನ್ನು ಕೂಗಿದರೂ ಈಗಿನ ಪ್ರಜಾಪ್ರಭುತ್ವ ಬಹುಜನರ ಅಭಿಪ್ರಾಯವನ್ನು ತಪ್ಪಿದ್ದರೂ ಒಪ್ಪುತ್ತದೆ. ಮತವನ್ನು ನೋಟಿಗಾಗಿ, ಕುಕ್ಕರ್ ಗಾಗಿ, ಜಾತಿಗಾಗಿ ಮಾರಿಕೊಂಡು ಅದರ ಮೌಲ್ಯ ಹಾಗೂ ಸುತ್ತಲಿನ ವಿದ್ಯಮಾನವನ್ನು ಅರಿಯದೆ ಅಯ್ಕೆ ಮಾಡುವುದು ಮಾರಕ. ಸಮಾಜ ತಪ್ಪು ದಾರಿ ಹಿಡಿಯಬಾರದು ಎಂಬುದಷ್ಟೇ ನನ್ನ ಆಶಯ.

***********************************************************

References

1 comment:

  1. Congress party's promises/guarantees are same as that of Chinese products coz both won't last long, the sooner the voters know the truth' & their true face is better for our country's bright future.😊

    ReplyDelete