February 7, 2021

ರೈತರ ಹೆಸರಿನಲ್ಲಿ ಭಾರತದ ವಿರುದ್ಧ ಷಡ್ಯಂತ್ರ!

ಭಾರತದಲ್ಲಿ ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಒಂದು ವಿಚಾರವನ್ನು ಗಮನಿಸಬೇಕು. ದೇಶದಲ್ಲಿ ವಿಧಾನಸಭೆ ಚುಣಾವಣೆ ಬಂದಾಗಲೆಲ್ಲಾ ಪ್ರತಿಪಕ್ಷಗಳು, ಚೀನಾ ಪ್ರೇರಿತ ಕಮ್ಯುನಿಸ್ಟರು ಯಾವುದಾದರು ಒಂದು ವಿವಾದವನ್ನು ತಂದು, ಅದನ್ನು ಕೇಂದ್ರ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸುವುದು, ಚುಣಾವಣೆ ಮುಗಿದ ನಂತರ ಆ ವಿಚಾರವನ್ನು ಮರೆತೆ ಬಿಡುವುದು. ಸುಮಾರು 2015 ರಿಂದ ಇವತ್ತಿನವರೆಗೂ ಅಂತಹುದೇ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ. ಲೇಖಕ ಎಂ.ಕಲಬುರ್ಗಿ ಹತ್ಯೆ ಪ್ರಕರಣ, ಅಸಹಿಸ್ಣುತೆ ಮತ್ತು ಅವಾರ್ಡ್ ವಾಪ್ಸಿ ಎಂಬ ನಾಟಕ, ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು, ಸಿಎಎ ಮತ್ತು ಎನ್.ಆರ್.ಸಿ ನೆಪದಲ್ಲಿನ ಶಹೀನ್ ಭಾಗ್ ಪ್ರಕರಣ. ಈಗ ಬಂಗಾಳ ಚುಣಾವಣೆ ಬಂದಿದೆ, ಜೊತೆಗೆ ಕೋವಾಕ್ಸಿನ್ ಮೂಲಕ ಜಗತ್ತಿಗೆ ಒಳಿತು ಮಾಡುತ್ತಿದೆ ಭಾರತ. ಈ ಸಂದರ್ಭದಲ್ಲಿ ಭಾರತದ ವಿರುದ್ಧ ದೊಡ್ಡ ಮಟ್ಟದಲ್ಲಿ ಆಂದೋಲನ ಅಥವಾ ಷಡ್ಯಂತ್ರ ನಡೆಯುವ ಸಾಧ್ಯತೆ ಇತ್ತು. ಅದೀಗ ರೈತರ ಹೋರಾಟದ ರೂಪದಲ್ಲಿ ಬಂದು ಎದುರಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧ ಮಾಡುವುದು ಇದರ ಮೂಲ ಉದ್ದೇಶವಾದರೂ ಕಳೆದ ಕೆಲವು ತಿಂಗಳುಗಳಿಂದ ನಡೆದಿರುವ ಘಟನೆಗಳನ್ನು ಅವಲೋಕಿಸಿದರೆ ರೈತರ ಆಂದೋಲನದ ಉದ್ದೇಶ ಬೇರೆಯೆ ಇದೆ ಎಂಬುದು ಸ್ಪಷ್ಟವಾಗುತ್ತದೆ.  

ಕಳೆದ ವರ್ಷ ಪ್ರಧಾನಿ ಮೋದಿ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಬೇಕಾದರೆ ಕೃಷಿ ಕಾಯ್ದೆ ಜಾರಿಗೆ ತರುವ ವಿಚಾರವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಾರೆ. ಭಾರತೀಯ ಕಿಸಾನ್ ಯೂನಿಯನ್ನಿನ ನಾಯಕ ರಾಕೇಶ್ ತಿಕಾಯ್ತ್ ಕೃಷಿ ಕಾಯ್ದೆಯನ್ನು ಸ್ವಾಗತಿಸುತ್ತಾರೆ. ತಮ್ಮ ಬೆಳೆಗೆ ಹೆಚ್ಚಿನ ಮಾರುಕಟ್ಟೆ ಸಿಗುವುದನ್ನು ಯಾವ ರೈತ ತಾನೆ ವಿರೋಧಿಸುತ್ತಾನೆ? ಹಾಗಾಗಿ ಕಾಯ್ದೆಯನ್ನು ಸ್ವಾಗತಿಸುವುದು ತೀರ ಸಹಜವಾಗೆ ಇತ್ತು.

ಇದಾದ 2-3 ತಿಂಗಳಾದ ಮೇಲೆ ಹೈದರಾಬಾದ್ ಮತ್ತು ಪಂಜಾಬಿನ ಕೆಲ ಭಾಗಗಳಲ್ಲಿ ಕಾಯ್ದೆ ವಿರುದ್ದದ ಮಾತುಗಳು ಹೊರಬರಲು ಶುರುವಾಗಿತ್ತು. ನಂತರ 17-20 ಸೆಪ್ಟಂಬರ್ 2020ರಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೃಷಿ ಕಾಯ್ದೆಯ ಬಿಲ್ ಪಾಸಾಗುತ್ತದೆ. ಈ ಸಮಯದಲ್ಲಿ ಆಹಾರ ಸಂಸ್ಕರಣ ಸಚಿವ ಹರ್ಸಿಮತ್ ಬಾದಲ್ ರಾಜಿನಾಮೆ ಕೊಡುತ್ತಾರೆ ಮತ್ತು ಅಕಾಲಿ ದಳ ಎನ್.ಡಿ.ಏ ಒಕ್ಕೂಟದಿಂದ ಹೊರಬರುತ್ತದೆ. ಇದೇ ಸಮಯದಲ್ಲಿ ರಾಹುಲ್ ಗಾಂಧಿ ಹೋರದೇಶಕ್ಕೆ ಹೋದರು ಎಂಬುದು ನೆನಪಿಡಬೇಕಾದ ಸಂಗತಿ.

25 ಸೆಪ್ಟಂಬರ್ ಹೊತ್ತಿಗೆ ಕಾಯ್ದೆ ವಿರುದ್ಧದ ಪ್ರತಿಭಟನೆ ರಾಷ್ಟ್ರಮಟ್ಟದ ಬಂದಾಗಿ ಉಲ್ಬಣಗೊಳ್ಳುತ್ತದೆ. ಜನವರಿ 21ರ ತನಕ 11 ಬಾರಿ ಕೃಷಿ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ಮಾಡುವ ಪ್ರಯತ್ನ ಮಾಡಿತು. ಕೇಂದ್ರ ಸರ್ಕಾರ ಎ.ಪಿಎಂ.ಸಿ ಗಳನ್ನು ಮುಚ್ಚುವುದಿಲ್ಲ, ಎಂ.ಎಸ್.ಪಿ ಮತ್ತು ಕಾಯ್ದೆಯಲ್ಲೂ ಕೂಡ ಕೆಲವು ಮಾರ್ಪಾಡು ಮಾಡಲು ಮುಂದಾಯಿತು. ಆದರೆ, ಕೃಷಿ ಸಂಘಟನೆಗಳು ಯಾವ ಬದಲಾವಣೆಗಳನ್ನು ಒಪ್ಪಲಿಲ್ಲ. ಬದಲಾಗಿ ಕಾಯ್ದೆಯನ್ನು ಹಿಂಪಡೆಯುವ ಆಗ್ರಹವನ್ನು ಮಾತ್ರ ಮುಂದಿಟ್ಟರು. ಜನವರಿಯಲ್ಲಿ ಸುಪ್ರೀಂ ಕೋರ್ಟು ಸಮಿತಿಯೊಂದನ್ನು ರಚಿಸಿ ಕಾಯ್ದೆಯ ತಿದ್ದುಪಡಿಯ ಬಗ್ಗೆ ಚರ್ಚಿಸುವ ಪ್ರಸ್ತಾವವನ್ನೂ ರೈತ ಸಂಘಟನೆ ತಿರಸ್ಕರಿಸಿತು. ಕೇಂದ್ರ ಸರ್ಕಾರ 18 ತಿಂಗಳಗಳ ಕಾಲ ಕಾದ್ದೆಯನ್ನು ತಡೆಹಿಡಿದು ಮಾತುಕತೆಗೆ ಮಾಡುವ ಪ್ರಸ್ತಾವವನ್ನೂ ಸಹ ಸಂಘಟನೆ ತಿರಸ್ಕರಿಸಿತು.


26 ಜನವರಿ - ಗಣತಂತ್ರ ದಿವಸದಂದು ರೈತರು ಟ್ರಾಕ್ಟರ್ ರ್ಯಾಲಿ ಮಾಡುವುದಾಗಿ ಘೋಷಿಸಿದರು. ಅಂದು ದೆಹಲಿಯ ಕೆಂಪುಕೋಟೆಯನ್ನು ಹತ್ತಿ, ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿ, ರಾಷ್ಟ್ರಧ್ವಜಕ್ಕಿಂತಲೂ ಮೇಲು ಎಂಬಂತೆ ತಮ್ಮ ಸಂಘಟನೆಯ ಬಾವುಟವನ್ನು ಹಾರಿಸಿದರು. ಸರ್ಕಾರ ಮತ್ತು ಸುಪ್ರೀಂ ಕೋರ್ಟು ತಮ್ಮ ಮುಂದಿಟ್ಟ ಪ್ರಸ್ತಾಪವನ್ನು ತಿರಸ್ಕರಿಸುತ್ತಾರೆ, ರಾಷ್ಟ್ರಕ್ಕೆ ಅವಮಾನ ಮಾಡುವಂತಹ, ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಮ್ಮ ಮೇಲಿನ ಗೌರವವನ್ನು ತಾವೆ ಕಳೆದುಕೊಂಡು, ಇವರೆಲ್ಲರೂ ರೈತರ? ಎಂಬ ಅನುಮಾನ ದಟ್ಟವಾಗುವಂತೆ ಮಾಡಿಕೊಂಡರು. 

ಭಾರತದ ಒಳಗೆ ನಡೆದ ಘಟನೆಗಳು ಹೀಗಾದರೆ, ಜಾಗತಿಕ ಮಟ್ಟದಲ್ಲೂ ಕೆಲವು ಘಟನೆಗಳು ಭಾರತದ ವಿರುದ್ಧವಾಗಿದ್ದವು. ಜೂನ್ ತಿಂಗಳಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಕೊರೋನಾವನ್ನು 'ಚೀನಾ ವೈರಸ್' ಎಂದು ಕರೆದು, ಹಲವು ದೇಶಗಳಿಗೆ ಹುವಾಯ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡು, ಇತರರೊಂದಿಗೆ 5G ತಂತ್ರಜ್ಞಾನದ ಕುರಿತು ಕೆಲಸ ಮಾಡುವ ಕರೆಕೊಟ್ಟರು. ಇಷ್ಟೇ ಅಲ್ಲದೆ, ಹುವಾಯ್ ಮತ್ತು ZTE ಕಂಪನಿಗಳು ಭದ್ರತಾ ವಿಚಾರದಲ್ಲಿ ದೇಶಕ್ಕೆ ಮಾರಕ ಎಂದು ಸಹ ಹೇಳಿ ಇತರ ದೇಶಗಳಿಗೂ ಚೀನಿ ಕಂಪನಿ ವಿರುದ್ಧ ಕ್ರಮಕೈಗೊಳ್ಳಲು ಕರೆಕೊಡುತ್ತಾರೆ.

ಜೂನಿನಲ್ಲಿ ನಡೆದ ಗಲ್ವಾನ್ ಪ್ರಕರಣದ ವಿರುದ್ಧ ಕ್ರಮವಾಗಿ ಪಬ್ ಜಿ, ವೀ ಚಾಟ್ ಸೇರಿದಂತೆ 59 ಚೀನಿ ಆಪ್ಗಳನ್ನು ಬ್ಯಾನ್ ಮಾಡಿ ಚೀನಾದ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್ ಮಾಡಿತು. 

ಬ್ರಿಟನ್ ಕೂಡ ಚೀನಾದ ಕಂಪನಿಯೊಂದಿಗಿನ ಸಂಬಂಧ ತೊರೆದು 2027ರ ಹೊತ್ತಿಗೆ ಹುವಾಯ್ಗೆ ಸಂಬಂಧಿಸಿರುವ ಎಲ್ಲಾ ಬಿಡಿಭಾಗಗಳನ್ನು ತೆರುವು ಮಾಡುವುದಾಗಿ ಒಂದು ಹೆಜ್ಜೆ ಮುಂದೆ ಹೋಯಿತು.

ಇದೇ ಸಮಯಕ್ಕೆ ಸರಿಯಾಗಿ ಮುಖೇಶ್ ಅಂಬಾನಿ ಭಾರತದ್ದೆ ಆದ ಜಿಯೋ 5G ಬಗೆಗಿನ ಘೋಷಣೆ ಮಾಡುತ್ತಾರೆ. ಈ ಕ್ರಮ ಚೀನಾಗೆ ತಲೆಕೆಡಿಸುತ್ತದೆ.

ಈಗ ಚುಕ್ಕಿಗಳನೆಲ್ಲ ಜೋಡಿಸಿಕೊಳ್ಳಿ. ಕೃಷಿ ಕಾಯ್ದೆ ಘೋಷಣೆಯಾದ 2 ತಿಂಗಳವರೆಗೂ ಅಂದರೆ ಜೂನ್ ರಿಂದ ಆಗಸ್ಟಿನವರೆಗೆ ಯಾವ ಪ್ರತಿಭಟನೆ ಇರಲಿಲ್ಲ. ಆದರೆ, ಭಾರತ 5G ಕುರಿತು ಒಂದು ಬಲವಾದ ಹೆಜ್ಜೆ ಮುಂದ್ದಿಟ್ಟೊಡನೆ ಎಲ್ಲಾ ಘಟನೆಗಳು ಶುರುವಾದವು! ಕೃಷಿ ಸಂಘಟನೆಯೊಟ್ಟಿಗೆ ಪ್ರತಿಪಕ್ಷಗಳು, ಕಮ್ಯುನಿಸ್ಟರು ಜಿಯೋ ಮತ್ತು ರಿಲಿಯನ್ಸ್ ಉತ್ಪನ್ನಗಳ ವಿರುದ್ಧ ಇದ್ದಕ್ಕಿದ್ದ ಹಾಗೆ ದನಿ ಎತ್ತಲು ಶುರು ಮಾಡುತ್ತಾರೆ. ಕೃಷಿ ಕಾಯ್ದೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅಂಬಾನಿ ಹೇಳಿದರೂ ಜಿಯೋದ 1500 ಟವರ್ಗಳನ್ನು ಪ್ರತಿಭಟನಾಕಾರರು ಹಾಳು ಮಾಡುತ್ತಾರೆ.

ಇದನ್ನೇ ಭಾರತದ ನೆಮ್ಮದಿ ಕೆಡಿಸುವ ಅವಕಾಶವನ್ನಾಗಿ ಚೀನಾ ಉಪಯೋಗಿಸಿಕೊಳ್ಳುತ್ತದೆ. ಪ್ರತಿಭಟನೆಕಾರರಿಗೆ ಖಾಲಿಸ್ತಾನದ ಮೂಲಕ ಹಣ ಕೊಟ್ಟು, ಬ್ರಿಟನ್ ಮತ್ತು ಕೆನಡಾ ಮೂಲಕ ಭಾರತದ ಕೃಷಿಕಾಯ್ದೆ ವಿರುದ್ಧ ದನಿ ಎತ್ತುವಂತೆ ನೋಡಿಕೊಳ್ಳುತ್ತದೆ. ಕಳೆದ ವಾರ ಅಮೇರಿಕಾದ ಪಾಪ್ ಗಾಯಕಿ ರಿಹಾನ, ಪೋರ್ನ್ಸ್ಟಾರ್ ಮಿಯಾ ಖಲೀಫ಼ಾ ಭಾರತದ ಪ್ರತಿಭಟನೆ ಪರವಾಗಿ ಟ್ವೀಟ್ ಮಾಡಿ ಭಾರಿ ಗೊಂದಲ ಉಂಟು ಮಾಡುವ ಪ್ರಯತ್ನ ಮಾಡಿದ್ದಾರೆ. ಗ್ರೇಟಾ ಥುನ್ಬರ್ಗ್ ಎಂಬ ಸ್ವೀಡನ್ನಿನ ಹೆಣ್ಣು ಮಗಳು ಭಾರತದಲ್ಲಿ ನಡೆಯಬೇಕಾಗಿರುವ ಪ್ರತಿಭಟನಾ ಕ್ರಮಗಳ ಕಡತಗಳನ್ನು ಅಚಾನಕ್ಕಾಗಿ ಅನಾವರಣಗೊಳಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಜಗತ್ತಿಗೆ ತಿಳಿಯುವಂತೆ ಮಾಡಿದ್ದಾಳೆ. ಆಸ್ಟ್ರೇಲಿಯಾದಲ್ಲಿರುವ ಚೀನಾದ ಕೆಲವು ಸಂಸ್ಥೆಗಳು ಅದಾನಿ ವಿರುದ್ಧ ಪ್ರತಿಭಟನೆ ಮತ್ತು ದನಿ ಎತ್ತುವಂತೆ ನೋಡಿಕೊಂಡಿತು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯದ ನಡುವೆ ಈ ರೀತಿ 'ಸ್ಟಾಪ್ ಅದಾನಿ' ಎಂಬ ಫ಼ಲಕ ಹಿಡಿದುಕೊಂಡು ಕ್ರೀಡಾಂಗಣದಲ್ಲೂ ಒಡಾಡಿದ್ದನ್ನು ಗಮನಿಸಬಹುದು!




ವಿದೇಶಿಗರು ಭಾರತದ ಆಂತರಿಕ ವಿಚಾರದಲ್ಲಿ ಮತಾಡಿದಾಗ ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತಿತ್ತರು - "ಭಾರತದ ಆಂತರಿಕ ವಿಚಾರದಲ್ಲಿ ಹೊರಗಿನವರು ಮಾತಾಡುವ ಅಗತ್ಯವಿಲ್ಲ, ಭಾರತೀಯರಿಗೆ ಭಾರತ ಚನ್ನಾಗಿ ತಿಳಿದಿದೆ, ನಮ್ಮ ದೇಶದ ವಿಚಾರವನ್ನು ನಾವೇ ನೋಡಿಕೊಳ್ಳುತ್ತೇವೆ, ಎಲ್ಲರೂ ಒಟ್ಟಾಗಬೇಕು" ಎಂಬಂತಹ ಮಾತಾಡಿ ಭಾರತದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುತ್ತಾರೆ. ರಾಷ್ಟ್ರೀಯವಾದಿಗಳು, ಭಾರತದ ಪರವಾಗಿರುವ ಮಾಧ್ಯಮಗಳು ಈ ವಿದೇಶಿ ದನಿಗಳ ವಿರುದ್ಧ ಜೋರಾಗಿ ಮಾತಾಡಿ ನಮ್ಮ ತನವನ್ನು ಎತ್ತಿಹಿಡಿದರು. ಇದರ ಹೊರತಾಗಿ ಭಾರತದ ದುರಾದೃಷ್ಟ ಮತ್ತು ಮಾರಕವೆಂದರೆ ಕಾಂಗ್ರೇಸ್ ಪಕ್ಷ. ತಮ್ಮ ಅಧಿಕಾರದ ಅವಧಿಯಲ್ಲಿ ಸಚಿನ್ ಗೆ ರಾಜ್ಯಸಭಾ ಸದಸ್ಯತ್ವ, ಭಾರತ ರತ್ನ ಕೊಟ್ಟ ಕಾಂಗ್ರೇಸ್ ಪಕ್ಷ ಅದೇ ಸಚಿನ್ ಚಿತ್ರಕ್ಕೆ ಮಸಿ ಬಳಿಯುವ ಕೆಲಸ ಇಂದು ಮಾಡುತ್ತಿದೆ.

 
ಪಾಪ್ ಗಾಯಕರು, ಪೋರ್ನ್ಸ್ಟ್ರಾರ್ಗಳ ಮಾತಿಗೆ ಬೆಲೆ ಕೊಡುವಷ್ಟು ಹೀನಾಯ ಸ್ಥಿತಿ ಕಾಂಗ್ರೇಸ್ ಮತ್ತು ಈ ದೇಶದ ಕಮ್ಯೂಸಿಸ್ಟರಿಗೆ ಬಂದಿದೆ. ಶನಿವಾರ ದೇಶದಾತ್ಯಂತ ಹೆದ್ದಾರಿ ತಡೆ ಮಾಡಿರುವ ಪ್ರತಿಭಟನಾಕಾರರು ಕೇಂದ್ರ ಸರ್ಕಾರಕ್ಕೆ ಕಾಯ್ದೆ ಹಿಂಪಡೆಯಲು ಅಕ್ಟೋಬರ್ 2 ತನಕ ಗಡುವು ಕೊಡುವಷ್ಟು ಮುಂದುವರೆದಿದ್ದಾರೆ. ವಿದೇಶಿ ಶಕ್ತಿ ಪ್ರೇರೇಪಿತ, ರೈತರ ಹೆಸರಿನಲ್ಲಿ ನಡಿಯುತ್ತಿರುವ ಭಾರತದ ವಿರುದ್ಧದ ಈ ಷಡ್ಯಂತ್ರವನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಡೆಯಬೇಕಾಗಿದೆ. ಭಾರತೀಯರಾದ ನಾವು ಚೀನಾ, ಖಾಲಿಸ್ತಾನ, ಪಾಕೀಸ್ತಾನದಂತಹ ದುಷ್ಟಶಕ್ತಿಗಳ ವಿರುದ್ಧ ಒಟ್ಟಾಗಿ ಹೋರಾಡುವ ಕಾಲ ಎದುರಾಗಿದೆ.

February 2, 2021

ಭಾರತದಲ್ಲಿ ಸ್ವಾತಂತ್ರ್ಯದ ಮೊದಲ ಹೆಜ್ಜೆ ಇಟ್ಟದ್ದೇ ಸುಭಾಷ್ ಬೋಸ್!

ಆಂಗ್ಲರ ವಿರುದ್ಧ ಹೋರಾಟದಲ್ಲಿ ಸುಭಾಷ್ ಬೋಸರು ಸುಮಾರು 11 ಸಲ ಜೈಲಿಗೆ ಹೋಗಿಬಂದರು. ಕಾಂಗ್ರೇಸಿನ ಅಧ್ಯಕ್ಷರಾಗಿದ್ದರೂ ಸ್ವಾತಂತ್ರ್ಯ ಹೋರಾಟಕ್ಕೆ ತೀವ್ರ ಸ್ವರೂಪ ಕೊಡಲಾಗಲಿಲ್ಲ ಎಂಬ ಕೊರಗು ಸುಭಾಷರ ಮನಸ್ಸಿನಲ್ಲಿತ್ತು. ಕಾಂಗ್ರೇಸ್ ಪಕ್ಷವಂತೂ ಆಂಗ್ಲರ ವಿರುದ್ಧ ಹೋರಾಟ ಮಾಡುವುದರ ಬದಲು ಬೇಡಿಕೊಳ್ಳುವ ಸ್ಥಿತಿಯಲ್ಲಿತ್ತು. ಸರ್ಕಾರವಂತೂ ಸುಭಾಷರ ಮೇಲೆ ತೀವ್ರವಾದ ನಿಗ ಇಟ್ಟಿತ್ತು. ಆರೋಗ್ಯದ ದೃಷ್ಟಿಯಿಂದ ಸುಭಾಷರನ್ನು ಗೃಹ ಬಂಧನದಲ್ಲಿ ಇಟ್ಟಿದ್ದರು. ಮುಂದೇನು ಎಂಬ ಪ್ರಶ್ನೆ ಸುಭಾಷರನ್ನು ಕಾಡುತ್ತಲೇ ಇತ್ತು, ಅದರ ಕುರಿತು ಚಿಂತನೆ ನಡೆಸುತ್ತಲೇ ಇದ್ದರು. ಅವರ ಮುಂದಿನ ಮಹಾಕಾರ್ಯಕ್ಕೆ ದಾರಿ ತೋರಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ್ ಸಾವರ್ಕರ್! ಆಗ ಎರಡನೇ ವಿಶ್ವಯುದ್ಧ ಪ್ರಾರಂಭವಾಗುವ ಹೊತ್ತಾಗಿತ್ತು. ಅಂಗ್ಲರ ವಿರುದ್ದ ಇರುವ ಶತ್ರು ರಾಷ್ಟ್ರಗಳೆಲ್ಲವನ್ನು ಭೇಟಿಮಾಡಿ, ಅಲ್ಲಿದ ಭಾರತೀಯ ಯುದ್ಧ ಖೈದಿಗಳನ್ನು ಸೇರಿಸಿಕೊಂಡು, ಭಾರತ ಮೇಲೆ ಆಕ್ರಮಣ ಮಾಡಿ ಆಂಗ್ಲರನ್ನು ಹೊರದೋಡಿಸುವ ಪರಿಕಲ್ಪನೆ ಸಾವರ್ಕರ್ರದಾಗಿತ್ತು. ಇಂತಹದೊಂದು ಪ್ರಯತ್ನವನ್ನು ಮೊದಲನೆ ವಿಶ್ವಯುದ್ಧದ ಹೊತ್ತಲ್ಲಿ ರಾಸ್ ಬಿಹಾರಿ ಘೋಷ್ ಮಾಡಿದ್ದರು. ಅವರು ಕಟ್ಟಿರುವ ಸೈನ್ಯದ ಸಹಕಾರ ತೆಗೆದುಕೊಂಡು ಈ ಮಹತ್ಕಾರ್ಯವನ್ನು ಸಾಧಿಸುವ ಯೋಜನೆಯನ್ನು ಮುಂದಿಟ್ಟರು. ಸಾವರ್ಕರ್ ಮಾತನ್ನು ಕೇಳಿದ ಸುಭಾಷರು ಈ ಕೆಲಸ ತಾನೆ ಮಾಡುವುದಾಗಿ ದಿಟ್ಟ ನಿರ್ಧಾರ ಮಾಡಿ, ಆಂಗ್ಲರ ವಿರುದ್ಧದ ಯುದ್ಧಕ್ಕೆ ತಯಾರಾದರು.

Subash Chandra Bose meets Veer Sawarkar

ಗೃಹಬಂಧನಕ್ಕೊಳಗಾದ ಸುಭಾಷರು ಹೊರಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತಾರೆ, ಅಣ್ಣ ಶರತ್ಚಂದ್ರರೊಂದಿಗೆ ಮಾತ್ರ ಮಾತಾಡುತ್ತಿದ್ದರು. ಕಿಟಕಿಯ ಮೂಲಕ ಊಟಕೊಡುವ ಮಟ್ಟಿಗೆ ಸುಭಾಷರು ಏಕಾಂತವಾದರು. ಸುಭಾಷರು ಅಧ್ಯಾತ್ಮಿಕ ಸಾಧನೆ ಮಾಡುತ್ತಿದ್ದಾರೆ, ಸನ್ಯಾಸಿಯಾಗುವತ್ತ ಸಾಗಿದ್ದಾರೆ ಎಂಬಂತಹ ಸುದ್ಧಿ ಹೊರಜಗತ್ತಿಗೆ ತಿಳಿಯುವಂತಾಯ್ತು. ಅದಕ್ಕೆ ತಕ್ಕಂತೆ ಸುಭಾಷರು ಗಡ್ಡವನ್ನು ಬಿಟ್ಟರು. ಆಂಗ್ಲರಿಗೆ ಸುಭಾಷರ ಮೇಲೆ ಸದಾ ಕಾಲ ಅನುಮಾನ ಕಾಡುತ್ತಲೇ ಇತ್ತು. ಅವರ ಮನೆ ಸುತ್ತಾ ಅನೇಕ ಪೋಲಿಸರ ಪಹರೆ ಯಾವಾಗಲೂ ಇರುತ್ತಿತ್ತು. ಅದೊಂದು ದಿನ ಶರತ್ಚಂದ್ರರ ಪುತ್ರ ಶಿಶಿರ್ಚಂದ್ರ ಕರಿ ಕಾರು ಮತ್ತು ಮುಸಲ್ಮಾನರ ಬಟ್ಟೆ ತಂದು ಕೊಡುತ್ತಾನೆ. ವೇಷ ಮರೆಸಿಕೊಂಡು, ಮುಸಲ್ಮಾನನಂತೆ ಗಡ್ಡ ಬಿಟ್ಟು, ಕಾರಿನಲ್ಲಿ ಕೂತು ಯಾರಿಗೂ ಗೊತ್ತಾಗದಂತೆ ಸುಭಾಷರು ತಪ್ಪಿಸಿಕೊಂಡು ಹೊರಡುತ್ತಾರೆ. ಮನೆಯಿಂದ ಹೊರಟ ಸುಭಾಷರು ಇನ್ಸುರೆನ್ಸ್ ಆಫ಼ೀಸರ್ ವೇಷದಲ್ಲಿ ಕಾಬುಲ್ಗೆ ತೆರಳುತ್ತಾರೆ. ಸುಭಾಷರು ಡಿಸೆಂಬರ್ ಕೊನೆಯಲ್ಲಿ ಮನೆಯಿಂದ ತಪ್ಪಿಸಿಕೊಂಡಿದ್ದರು. 
 
ಶಿಶಿರ್ಚಂದ್ರ ಬೋಸ್

ಆದರೆ, ಸುಭಾಷರು ಕಾಣುತ್ತಿಲ್ಲ ಎಂದು ಬ್ರಿಟೀಷರಿಗೆ ತಿಳಿದದ್ದೆ ಜನವರಿ 12ರ ನಂತರ. ಕಾಬುಲ್ನಿಂದ ಮೂಗನಾಗಿ ನಟಿಸುತ್ತಾ ಅಡ್ಡಾ ಶರೀಫ಼್ ಎಂಬ ಜಾಗಕ್ಕೆ ತೆರಳಿ, ಜರ್ಮನಿ, ಇಟಾಲಿ, ರಷ್ಯಾದ ದೂತಾವಾಸರ ಸಹಾಯದಿಂದ ಜರ್ಮನಿಗೆ ಹೊಗುವ ತಯಾರಿ ನಡೆಸಿದರು. ಈ ತಯಾರಿಗೂ ಸಹ 8-9 ತಿಂಗಳು ಹಿಡಿಯಿತು. ಕೊನೆಗೆ ರಷ್ಯಾಗೆ ತೆರಳಿ ಬರ್ಲಿನ್ಗೆ ಹೊಗುವ ವ್ಯವಸ್ಥೆಯಾಗುತ್ತದೆ. ಸುಭಾಷರು ಒರ್ಲಾಂಡೊ ಮೆಗ್ಸೊಟ ಎಂಬ ಹೆಸರಿನಲ್ಲಿ ರಷ್ಯಾಗೆ ತೆರಳಿ ಅಲ್ಲಿಂದ ಬರ್ಲಿನ್ಗೆ ತೆರೆಳುತ್ತಾರೆ. ಹಿಂದೊಮ್ಮೆ ಜರ್ಮನಿ, ಇಟಾಲಿ, ಆಸ್ಟ್ರಿಯಾ ತಿರುಗಾಡಿದ್ದ ಸುಭಾಷರಿಗೆ ಜರ್ಮನ್ ಭಾಷೆ ಸುಲಲಿತವಾಗಿ ಮಾತನಾಡಲು ಬರುತ್ತಿತ್ತು. ಅದೇ ಸಮಯದಲ್ಲಿ ಸುಭಾಷರು 1920-1934ರ ನಡುವಿನ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪುಸ್ತಕ ಬರೆದರು. ಈ ಕೆಲಸದಲ್ಲಿ ಸುಭಾಷರಿಗೆ ಸಹಾಯ ಮಾಡಿದ್ದು ಎಮಿಲಿ ಶೆಂಕೆಲ್ ಎಂಬ ಹೆಣ್ಣು ಮಗಳು. ನಂತರದ ದಿನಗಳಲ್ಲಿ ಆಕೆಯನ್ನು ಸುಭಾಷರು ಮದುವೆಯಾಗುತ್ತಾರೆ. ಅಲ್ಲಿನ ಸೈನ್ಯಾಧಿಕಾರಿಗಳ ಮೂಲಕ ಸುಭಾಷರು ಹಿಟ್ಲರನ್ನು ಭೇಟಿಮಾಡುವ ಅವಕಾಶವನ್ನು ಪಡೆಯುತ್ತಾರೆ. ಹಿಟ್ಲರ್ರನ್ನು ಭೇಟಿ ಮಾಡಿ ತಮ್ಮ ತಯಾರಿ ಮತ್ತು ಬೇಡಿಕೆಯನ್ನು ಮುಂದಿಡುತ್ತಾರೆ. 

1. ಜರ್ಮನಿಯಲ್ಲಿ 'ಫ಼್ರೀ ಇಂಡಿಯಾ ಸೊಸೈಟಿ' ನಿರ್ಮಾಣ ಮಾಡಲು ಅವಕಾಶ ಮಾಡಿಕೊಡಬೇಕು

2. ಜರ್ಮನಿಯಿಂದ ಜಗತ್ತಿನಾದ್ಯಂತ ಪ್ರಸಾರವಾಗುವಂತೆ ಅವರ ರೇಡಿಯೋ ಬಳಸಿಕೊಳ್ಳಲು ಅಣುವು ಮಾಡಿಕೊಡಬೇಕು

3. ಅಲ್ಲೇ ಇದ್ದ ಭಾರತೀಯ ಯುದ್ಧ ಖೈದಿಗಳನ್ನು ಬಳಸಿಕೊಂಡು ಸೈನ್ಯವನ್ನು ತಯಾರಿ ಮಾಡಲು ಅವಕಾಶ ಮಾಡಿಕೊಡಬೇಕು

ಸುಭಾಷರ ಈ ಇಚ್ಚಾಶಕ್ತಿಯನ್ನು ನೋಡಿದ ಹಿಟ್ಲರ್ ಮೂರು ಬೇಡಿಕೆಗಳನ್ನು ಯಾವುದೇ ತಕರಾರಿಲ್ಲದೆ ಒಪ್ಪಿಕೊಳ್ಳುತ್ತಾನೆ. ಸುಭಾಷರಿಗೆ ಈ ಕೆಲಸದಲ್ಲಿ ಆಗುತ್ತಿದ್ದ ಖರ್ಚನ್ನು ಸಹ ಜರ್ಮನಿಯವರೇ ವಹಿಸಿಕೊಳ್ಳುತ್ತಾರೆ. ಸುಭಾಷರು ಈ ಹಣವನ್ನು ಸಾಲ ಎಂದು ಸ್ವೀಕರಿಸಿದ್ದರು. ಮುಂದೆ, ಪೂರ್ವ ಏಷ್ಯಾದಲ್ಲಿ ಗಳಿಸಿದ ಹಣದಿಂದ ಜರ್ಮನಿಗೆ ಸಾಲವನ್ನು ತೀರಿಸುತ್ತಾರೆ. ಇದರ ಮೂಲಕ ಸುಭಾಷರು ಭಾರತದ ಸ್ವಾಭಿಮಾನವನ್ನು ಉಳಿಸುತ್ತಾರೆ.

Subhas Chandra Bose meets Adolf Hitler

ಭಾರತದಿಂದ ತಪ್ಪಿಸಿಕೊಂಡು ಹೋದ 1 ವರ್ಷದ ಮೇಲೆ ಆಜಾದ್ ಹಿಂದ್ ರೇಡಿಯೋ ಮೂಲಕ 'ನಾನು ಸುಭಾಷ್ ಚಂದ್ರ ಬೋಸ್ ಮಾತಾಡುತ್ತಿದ್ದೇನೆ' ಎಂದು ಸುಭಾಷರು ಹೇಳಿದಾಗ ಇಡೀ ಭಾರತ ರೋಮಾಂಚನಗೊಳ್ಳುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಸುಭಾಷರ ಭಾಷಣ ಬರಬರುತ್ತಾ ಬಂಗಾಳಿ, ತೆಲುಗು, ಹಿಂದಿ, ತಮಿಳು, ಪುಸ್ತೂನ್ ಭಾಷೆಗಳಿಗೆ ಅನುವಾದಗೊಂಡು ಮರು ಪ್ರಸಾರವಾಗುತ್ತಿತ್ತು. ಅವರ ಭಾಷಣದಲ್ಲಿ ಬ್ರಿಟೀಷರು ಮಾಡುತ್ತಿದ್ದ ಅನ್ಯಾಯ, ಕಾಂಗ್ರೇಸರ ನಡುವಳಿಕೆ, ಭಾರತದಲ್ಲಿ ನಡೆಯುತ್ತಿದ್ದ ಕೆಲವು ವಿಚಾರವನ್ನು ತಿಳಿಸಿಸುತ್ತಿದ್ದರು. ಕ್ರಿಪ್ಸ್ ಭಾರತಕ್ಕೆ ಬರುವ ಹೊತ್ತಲ್ಲಿ ಅವರ ವಿರುದ್ಧ ಭಾಷಣ ಮಾಡಿ ಭಾರತದಲ್ಲಿ ಕಾಂಗ್ರೇಸ್ ಅನಿವಾರ್ಯವಾಗಿ ಕ್ರಿಪ್ಸ್ ಕಮಿಷನ್ ವಿರುದ್ಧ ನಿಲ್ಲಬೇಕಾಗತ್ತದೆ. ಸುಭಾಷರು ದೇಶದ ಹೊರಗಿದ್ದೂ ಭಾರತವನ್ನು ನಿಯಂತ್ರಿಸುತ್ತಿದ್ದಕ್ಕೆ ಒಂದು ನಿದರ್ಶನ. 1 ವರ್ಷದ ಈ ಅವಧಿಯಲ್ಲಿ ಸುಮಾರು 3-4 ಸಾವಿರದಷ್ಟು ಯುದ್ಧ ಖೈದಿಗಳನ್ನೊಳಗೊಂಡ ಸೈನ್ಯವನ್ನು ಜರ್ಮನಿಯಲ್ಲಿ ಕಟ್ಟಿದ್ದರು. ಅದೇ ಹೊತ್ತಲ್ಲಿ ಬ್ರಿಟೀಷರಿಂದ ಸಿಂಗಾಪುರವನ್ನು ಜಪಾನ್ ವಶಪಡಿಸಿಕೊಂಡಿತು. ಜಗತ್ತಿನ ಆಗುಹೋಗನ್ನು ಗಮನಿಸುತ್ತಿದ್ದ ಸುಭಾಷರಿಗೆ ಆದಷ್ಟು ಬೇಗ ಜಪಾನಿಗೆ ಹೋಗುವ ತವಕಶುರುವಾಗಿತ್ತು. ಅದಕ್ಕಾಗಿ ಸುಭಾಷರು ತಯಾರಿ ನಡೆಸಿದರು. ಜರ್ಮನಿಯಿಂದ ಜಪಾನ್ ತನಕ ಸಬ್ಮರೈನಲ್ಲಿ ತೆರಳುವ ತಯಾರಿ ಮಾಡಿಕೊಳ್ಳುತ್ತಾರೆ. ಬರೋಬ್ಬರಿ 7 ತಿಂಗಳ ಪ್ರಯಾಣ, ಸದಾ ಜನರೊಟ್ಟಿಗೆ ಬೆರೆಯುತ್ತಿದ್ದ ಸುಭಾಷರಿಗೆ ಸಹಾಯ ಮಾಡಿದ್ದು ಅಂತರ್ಮುಖಿ ವ್ಯಕ್ತಿತ್ವ, ಧ್ಯಾನ ಮತ್ತು ಅಧ್ಯಯನ.

Subash Chandra Bose in submarine on voyage to Japan

ಜಪಾನಿಗೆ ತೆರಳಿದ ಸುಭಾಷರಿಗೆ ರಾಸ್ ಬಿಹಾರಿ ಘೋಷ್ ಕಟ್ಟಿದ್ದ ಸೈನ್ಯ ಅಭೂತಪೂರ್ವ ಸ್ವಾಗತ ಕೊಡುತ್ತದೆ. ಸುಭಾಷರಿಗಾಗಿಯೇ ಕಾಯುತ್ತಿದ್ದ ಘೋಷರು ತಮ್ಮ ಸೈನ್ಯವನ್ನು ಅವರಿಗೆ ಸಂಪೂರ್ಣ ವಹಿಸಿಬಿಡುತ್ತಾರೆ. ಆ ಸೈನ್ಯವನ್ನು ಕೆಲವು ರೆಜಿಮೆಂಟ್ಗಳನ್ನಾಗಿ ವಿಭಾಗಿಸಿ, ಮಹಿಳ ಮತ್ತು ಮಕ್ಕಳ ಸೈನ್ಯವನ್ನು ಕಟ್ಟುತ್ತಾರೆ. ಚರಕವಿದ್ದ ಜಾಗದಲ್ಲಿ ಹಾರುವ ಹುಲಿಯನ್ನು ಹಾಕಿ ಅದನ್ನು ತಮ್ಮ ಧ್ವಜವನ್ನಾಗಿ ಅಳವಡಿಸಿಕೊಳ್ಳುತ್ತಾರೆ.

Subash Chandra Bose with Jhansi Regiment of INA

ಅದಲ್ಲದೆ 'ಜೈ ಹಿಂದ್' ಎಂಬ ಘೋಷಣೆಯನ್ನು ಮೊಳಗಿಸುತ್ತಾರೆ. ಬ್ರಿಟೀಷರ ವಿರುದ್ಧದ ಯುದ್ಧಕ್ಕೆ ಸಹಕಾರ ಕೊಡಲು ಸುಭಾಷರು ಜಪಾನ್ ಸರ್ಕಾರಕ್ಕೆ ಕೇಳಿಕೊಳ್ಳುತ್ತಾರೆ. ಆದರೆ, 'ನೀವು ಯಾರೆಂದು ನಿಮ್ಮೊಟ್ಟಿಗೆ ಸೈನ್ಯವನ್ನು ಕಳಿಸಬೇಕು? ನೀವೊಂದು ದೇಶದ ಸರ್ಕಾರವೆಂದಾದರೆ ಸಹಕಾರ ಕೊಡಬಹುದು' ಎಂದು ಜಪಾನ್ ಸರ್ಕಾರ ಹೇಳುತ್ತದೆ. ಈ ಮಾತಿನ ಸೂಕ್ಷ್ಮತೆಯನ್ನು ಅರಿತ ಸುಭಾಷರು ಸಿಂಗಪೂರಿನ ಕ್ಯಾತೆ ಥಿಯೇಟರಿನಲ್ಲಿ ಭಾರತದ ಹಂಗಾಮಿ ಸರ್ಕಾರವನ್ನು ಜಾರಿಗೆ ತರುತ್ತಾರೆ. ಸುಭಾಷರು ಭಾರತದ ಸರ್ಕಾರದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ, ವಿದೇಶಾಂಗ, ಯುದ್ಧ ಮತ್ತು ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಳ್ಳುತ್ತಾರೆ. ಈ ಸರ್ಕಾರಕ್ಕೆ 7-8 ದೇಶಗಳು ಅನುಮೋದನೆ ನೀಡುತ್ತದೆ. ಮುಂದಿನ ಬಾರಿ ಜಪಾನ್ ಸರ್ಕಾರದೊಂದಿಗೆ ಭಾರತದ ಪ್ರಧಾನಿಯಾಗಿ ಸುಭಾಷರು ಮಾತಾಡುತ್ತಿದ್ದರು. 

Subash Chandra Bose taking oath as Prime Minister in Singapore

ಬ್ರಿಟೀಷರ ವಿರುದ್ಧ ಗೆದ್ದ ಜಾಗಗಳನ್ನು ಭಾತರಕ್ಕೆ ಬಿಟ್ಟುಕೊಡಬೇಕು ಎಂಬ ಷರತ್ತನ್ನು ಹಾಕಿ, ಅಲ್ಲಿ ತಮ್ಮ ಸರ್ಕಾರದ ಪ್ರತಿನಿಧಿಯನ್ನು ಸ್ಥಾಪಿಸಿ, ಅಂಡಮಾನ್ ನಿಕೋಬಾರನ್ನು ವಶಪಡಿಸಿಕೊಳ್ಳುತ್ತಾರೆ. ಅದಕ್ಕೆ ಸ್ವರಾಜ್ ಮತ್ತು ಶಹೀದ್ ದ್ವೀಪ ಎಂದು ನಮಾಕಾರಣ ಮಾಡುತ್ತಾರೆ. ಭಾರತ ಸರ್ಕಾರದ ಹೆಸರಲ್ಲಿ ಸುಭಾಷರು ಒಂದು ಬ್ಯಾಂಕನ್ನು ಸಹ ಶುರು ಮಾಡುತ್ತಾರೆ. ಜಪಾನ್ ಮತ್ತು ಭಾರತೀಯ ಸೈನ್ಯ ಕೊಹಿಮಾ ಮತ್ತು ಇಂಫ಼ಾಲ್ ಮೂಲಕ ಭಾರತದ ಮೇಲೆ ಆಕ್ರಮಣಕ್ಕೆ ತಯಾರಿ ನಡೆಸುತ್ತದೆ. ಅದೇ ಸಮಯಕ್ಕೆ ಅತೀಯಾದ ಮಳೆಬಂದು ಸೈನ್ಯ ಮುಂದುವರೆಯಲು ಆಗದೆ, ಹಿಂದಿರುಗಲು ಆಗದೆ ರೋಗಕ್ಕೆ ಶರಣಾಗುತ್ತದೆ. ಅಮೇರಿಕಾದ ಬಾಂಬ್ ದಾಳಿಗೆ ಸಿಲುಕಿ ಜಪಾನ್ ಯುದ್ಧದಲ್ಲಿ ಸೋತು, ಸಿಂಗಾಪುರ ಮತ್ತೆ ಬ್ರಿಟೀಷರ ವಶವಾಗುತ್ತದೆ. ಸೋತಿದ್ದು ಜಪಾನ್ ಭಾರತವಲ್ಲ ಎಂದು ಸುಭಾಷರು ರಷ್ಯಾದ ಸಹಕಾರ ತೆಗೆದುಕೊಳ್ಳಲು ತಯಾರಾಗುತ್ತಾರೆ. ಸೈಗಾನ್ ವಿಮಾನ ನಿಲ್ದಾಣದಿಂದ ಟೋಕಿಯೋಕ್ಕೆ ತೆರಳಲು ವಿಮಾನ ಹತ್ತುತ್ತಾರೆ. ವಿಮಾನ ಅಪಘಾತಕ್ಕೆ ಈಡಾಗಿ ಸುಭಾಷರು ತೀರಿಕೊಂಡರು ಎಂಬ ಸುದ್ಧಿ ಅವರ ಜೊತೆ ತೆರಳಿದ್ದ ಹಬಿಬುರ್ ರೆಹಮಾನ್ ಮೂಲಕ ತಿಳಿದು ಬರುತ್ತದೆ.

Subash Chandra Bose's last journey

ಐ.ಎನ್.ಎ ಸೈನ್ಯಕರನ್ನು ಆಂಗ್ಲರು ಬಂಧನಕ್ಕೊಳಪಡಿಸಿ ಕೋರ್ಟ್ ಮಾರ್ಷಲ್ ಮಾಡಲು ತಯಾರಿ ಮಾಡುತ್ತಾರೆ. ಖ್ಯಾತ ವಕೀಲ ಬೋಲಾಬಾಯಿ ದೆಸಾಯಿ ಸೈನಿಕರ ಪರವಾಗಿ ವಾದಮಾಡಿ ಅವರಿಗೆ ನೇಣು ಶಿಕ್ಷೆಗೆ ಬದಲಾಗಿ ಗಡಿಪಾರಿನ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತಾರೆ. ಸುಭಾಷರ ಸಾಧನೆಯನ್ನು ಕೇಳಿ ಗಾಂಧೀಜಿ ಅವರನ್ನು 'ದೇಶಭಕ್ತರ ದೇಶಭಕ್ತ' ಎಂದು ಹೊಗಳುತ್ತಾರೆ. ಐ.ಎನ್.ಎ. ಸೈನ್ಯದ ಪರವಾಗಿ, ಸುಭಾಷರ ಪರವಾಗಿ ಇಡೀ ದೇಶದಲ್ಲಿ ಒಕ್ಕೊರಲಿನ ಕೂಗು ಏಳುತ್ತದೆ. ರೈಲ್ವೆ ಹಳಿ, ಟೆಲಿಫ಼ೋನಿಕ್ ತಂತಿಯನ್ನು ಕಿತ್ತು ಬಿಸಾಡುತ್ತಾರೆ, ಕಾಂಗ್ರೇಸು ಕೂಡ ತನಗೆ ತಿಳಿಯದಂತೆ ಉಗ್ರತ್ವದ ಮಾರ್ಗಕ್ಕೆ ಹೊರಳುತ್ತದೆ. ಮುಂಬೈ ಬಂದರಿನಲ್ಲಿ ಸೈನ್ಯ ಬಂಡಾಯವೇಳುತ್ತದೆ. ಆಂಗ್ಲರಿಗೆ 1857ರ ಬಂಡಾಯದ ಬಿಸಿ ನೆನೆಪಾಗಿ ಭಾರತಕ್ಕೆ ಸ್ವಾತಂತ್ರ ನೀಡಲು ಮುಂದಾಗುತ್ತಾರೆ. ಸುಭಾಷರು ಎಣಿಸಿದಂತೆ ಭಾರತವನ್ನು 3 ತುಂಡುಗಳನ್ನಾಗಿ ಮಾಡಿ, ಆಂಗ್ಲರು ಭಾರತವನ್ನು ಬಿಟ್ಟು ಹೊರಡುತ್ತಾರೆ. 1857ರಲ್ಲಿ ಮಂಗಲ್ ಪಾಂಡೆ, ತಾತ್ಯ ತೋಪೆ ಸ್ವಾತಂತ್ರ್ಯ ಹೋರಾಟ ವ್ಯಾಪಕವಾಗಿ ಶುರುಮಾಡಿದರೆ ಅದಕ್ಕೊಂದು ತಾರ್ಕಿಕ ಅಂತ್ಯವನ್ನು ತಂದದ್ದು ಸುಭಾಷ್ ಚಂದ್ರ ಬೋಸ್! ಭಾರತದ ಮೊದಲ ಪ್ರಧಾನಿಯಾಗಿ ಮೆರೆದದ್ದು ಅವರೇ. ಭಾರತದಲ್ಲಿ ಸ್ವಾತಂತ್ರ್ಯದ ಮೊದಲ ಹೆಜ್ಜೆ ಇಟ್ಟದ್ದೇ ಸುಭಾಷ್ ಬೋಸ್!