July 21, 2021

ಭಾರತದ ಸೈನ್ಯ ಯಾವತ್ತೂ ಗೆದ್ದಿದೆ ಆದರೆ ರಾಜಕೀಯ?

ಸ್ವಾತಂತ್ರ್ಯದ ನಂತರ ಭಾರತ - ಪಾಕೀಸ್ತಾನ ನಡುವೆ 1949, 1965, 1971 ಮತ್ತು 1999 ರಲ್ಲಿ 4 ಬಾರಿ ಯುದ್ಧ ನಡೆದಿದೆ. ಯುದ್ಧವೆಂದರೆ ದುಃಖದ ವಿ‍ಚಾರವೇ ಹೌದು. ಭಾರತ ನಾಲ್ಕೂ ಯುದ್ಧದಲ್ಲೂ ಗೆದ್ದಿದೆ ಎಂಬುದು ಸಂಭ್ರಮಕ್ಕಿಂತಲೂ ಸಮಾಧಾನಕರವಾದ ವಿಚಾರ. ಇಷ್ಟು ಯುದ್ಧಗಳಲ್ಲಿ ಭಾರತ ಗೆದ್ದರೂ ಪಾಕೀಸ್ತಾನ ಆಕ್ರಮಿತ ಕಾಶ್ಮಿರ ಭೂಭಾಗ ಸಮಸ್ಯೆಯಾಗೆ ಉಳಿದಿದೆ. 1949 ಇರಲಿ, 1999 ಇರಲಿ ಅಥವಾ 2021 ಇರಲಿ ಭಾರತದ ಸೈನ್ಯ ಬಲಾಢ್ಯವಾಗೆ ಹೋರಾಡಿದೆ ಆದರೆ, ಜಗತ್ತಿನ ಮುಂದೆ ಭಾರತ ಹಿನ್ನಡೆ ಅನುಭವಿಸಿದ್ದರೆ ಅದಕ್ಕೆ ಕಾರಣ ರಾಜಕೀಯ!
 
1949 - ಪಾಕೀಸ್ತಾನ ಗೆಲ್ಲುವ ಸ್ಥಿತಿಯಲ್ಲಿತ್ತು ಅದರೆ ಭಾರತದ ಸೈನಿಕರು ಅದಕ್ಕೆ ಅವಕಾಶಕೊಡಲಿಲ್ಲ. ಕಾರ್ಗಿಲ್, ಲೇಹ್ ಗುಡ್ಡಗಳನ್ನು ವಶಪಡಿಸಿಕೊಂಡು, ಹೆದ್ದಾರಿಯನ್ನು ಭದ್ರ ಪಡಿಸಿದ್ದರು. ಮೌಂಟ್ಬಾಟನ್ ಒತ್ತಡಕ್ಕೆ ಮಣಿದು, ಗೃಹಮಂತ್ರಿ ಸರ್ದಾರರ ಮಾತನ್ನು ಕೇಳದೆ ನೆಹರು ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋದರು. ಅಲ್ಲಿಗೆ ಭಾರತ ಯುದ್ಧವನ್ನು ಮೇಜಿನ ಮೇಲೆ ಸೋಲಿತು. ನೆನಪಿಡಿ, ಭಾರತ 3000 ಸೈನಿಕರನ್ನು ಕಳೆದುಕೊಂಡಿತು.
 
1962 - ಚೀನಾ ಯುದ್ಧ ಶುರುಮಾಡಿತು, ಜೊತೆಗೆ ಯುದ್ಧಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿತ್ತು. ನೆಹರು ಮಾತ್ರ ಹಿಂದಿ-ಚೀನಿ ಭಾಯಿ ಭಾಯಿ ಎಂಬ ಮಂತ್ರವನ್ನು ಜಪಿಸುತ್ತಿದ್ದರು. ಶಸ್ತ್ರಾಸ್ತ್ರಗಳಿರಲಿ ನಮ್ಮ ಸೈನಿಕರಿಗೆ ಬೇಕಾದ ಬಟ್ಟೆ, ಶೂ, ಆಹಾರ ಪದಾರ್ಥ ಕೂಡ ಶೇಖರಣೆ ಮಾಡಿರಲಿಲ್ಲ. ಚೀನಾದ ಸೈನಿಕರು ಗಡಿಯೊಳಗೆ ನುಗ್ಗಿರುವುದು ಖಚಿತವಾಗಿ, ಸರ್ಕಾರದ ಮೇಲೆ ಒತ್ತಡ ಬಿದ್ದಾಗ ನೆಹರು ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಸೇನೆಗೆ 'ಚೀನಿಯರನ್ನು ಹೊರದಬ್ಬಿ' ಎಂದು ಆದೇಶ ಮಾಡಿಯೇ ಬಿಟ್ಟರು. ಸೈನಿಕರ ಹತ್ತಿರವಿದ್ದದ್ದು ಕೇವಲ 32 ಸುತ್ತುಗಳ ಗುಂಡುಗಳು ಮಾತ್ರ. ಭಾರತ ಯುದ್ಧದಲ್ಲಿ ಸೋತು, ಚೀನಾ 32 ಸಾವಿರ ಚದುರ ಕಿ.ಮೀ. ನೆಲವನ್ನು ಆಕ್ರಮಿಸಿಕೊಂಡಿತು. ಈ ಯುದ್ಧ ಭಾರತದ 2000 ಕ್ಕೂ ಹೆಚ್ಚು ಸೈನಿಕರನ್ನು ಬಲಿಪಡೆಯಿತು.

Jawaharlal Nehru with chinese premier Zhou Enlai, (courtesy: Outlook India)
 
1965 - ಪಂಜಾಬಿನ ಭಾಗದಲ್ಲಿ ಯುದ್ಧ ಶುರುವಾದ ಮೇಲೆ ಕಾರ್ಗಿಲ್ ಕಡೆ ಇಂದ ನುಗ್ಗಿ ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಹುನ್ನಾರ ಪಾಕೀಸ್ತಾನ ಮಾಡಿತ್ತು. ಭಾರತದ ಸೈನ್ಯ ಪಂಜಾಬಿನಲ್ಲಿ ಕಾದಾಡುತ್ತಾ ಪಾಕೀಸ್ತಾನದೊಳಗೆ ನುಗ್ಗೆಬಿಟ್ಟಿತು. ಅತ್ಯುನ್ನತ ಸಾಹಸ ಮತ್ತು ಪರಾಕ್ರಮದಿಂದ ಹಾಜಿಪೀರ್ ಕಣಿವೆಯನ್ನು ವಶಪಡಿಸಿಕೊಂಡರು. ಪಾಕೀಸ್ತಾನ ಅಮೇರಿಕಾ ಮತ್ತು ರಷ್ಯಾದ ಮೊರೆ ಹೋಯಿತು. ರಷ್ಯಾ ಮಧ್ಯಸ್ಥಿಕೆ ವಹಿಸುತ್ತಾ ಭಾರತ ಮತ್ತು ಪಾಕೀಸ್ತಾನದ ಸರ್ಕಾರವನ್ನು ತಾಷ್ಕೆಂಟಿಗೆ ಆಹ್ವಾನಿಸಿತು. ಅಲ್ಲಿ ನಡೆದ ಘಟನೆಗಳು ನಿಗೂಢ, ಅನುಮಾಸ್ಪದ ರೀತಿಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಅಸುನೀಗಿದರು. ಕದನ ವಿರಾಮ ಘೋಷಣೆಯಾಗಿ ಕಷ್ಟ ಪಟ್ಟು ವಶಪಡಿಸಿಕೊಂಡ ಹಾಜಿಪೀರ್ ಕಣಿವೆಯನ್ನು ಭಾರತದ ಸೈನ್ಯ ಬಿಟ್ಟು ಬರಬೇಕಾಯಿತು. ಈಗ ನಾವು ಕಳೆದುಕೊಂಡ ಸೈನಿಕರ ಸಂಖ್ಯೆ 20 ಸಾವಿರ!
Indian Prime Minister is dead and Shastri ji on war tank with soldiers after war
 
1971 - ಭಾರತ ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು. ನಮ್ಮ ಸೈನಿಕರು ಪಾಕೀಸ್ತಾನದ ವಿರುದ್ಧ ವಿರಾವೇಶದಲ್ಲಿ ಕಾದಾಡಿ 93 ಸಾವಿರಕ್ಕೂ ಹೆಚ್ಚು ಶತ್ರು ಸೈನಿಕರನ್ನು ಸೆರೆ ಹಿಡಿದರು. ಜಗತ್ತಿನ ಯುದ್ಧ ಇತಿಹಾಸದಲ್ಲಿ ಇಷ್ಟು ಪ್ರಮಾಣದ ಶತ್ರು ಸೈನಿಕರನ್ನು ಸೇರೆಹಿಡಿದ್ದದ್ದು ಇದೇ ಮೊದಲ ಬಾರಿಗೆ. ಈ ಯುದ್ಧದಲ್ಲಿ ಭಾರತ ಖಡಾಖಂಡಿತವಾಗಿಯೂ ಮೇಲುಗೈ ಸಾಧಿಸಿತ್ತು. ಪಾಕೀಸ್ತಾನಕ್ಕೆ ಜಗತ್ತಿನೆದುರಿಗೆ ಭಾರಿ ಮುಖಭಂಗವಾಗಿತ್ತು. ಯುದ್ಧ ಖೈದಿಗಳ ಬಿಡುಗಡೆಗೆ ಪೂರ ಕಾಶ್ಮೀರವನ್ನು ಬಿಟ್ಟು ತೊಲಗಬೇಕೆಂಬ ಷರತ್ತು ಪಾಕೀಸ್ತಾನಕ್ಕೆ ಹಾಕಬೇಕಿತ್ತು ಆದರೆ, ಭುಟ್ಟೋ ಕಣ್ಣೀರಿಟ್ಟರು ಎಂಬ ಕಾರಣಕ್ಕೆ ಇಂದಿರಾಗಾಂಧಿ ಯುದ್ಧ ಕೈದಿಗಳನ್ನು ಬಿಟ್ಟು ಪಾಕೀಸ್ತಾನಕ್ಕೆ ಗೆಲುವು ಖಾತ್ರಿ ಪಡಿಸಿಬಿಟ್ಟರು! ನಮ್ಮದಲ್ಲದ ಕಾರಣಕ್ಕೆ ಆದ ಈ ಯುದ್ಧದಲ್ಲಿ 11 ಸಾವಿರ ಜನ ಪ್ರಾಣ ಕಳೆದುಕೊಂಡರು.
 
Front page of The Statesman. Picture Courtesy: National Herald
 
1999 ರ ಕಾರ್ಗಿಲ್ ಕದನ - ಪ್ರಧಾನಿ ಅಟಲ್ಜೀ ಪಾಕೀಸ್ತಾನಕ್ಕೆ ಬಸ್ಸಿನಲ್ಲಿ ತೆರಳಿ, ನವಾಜ್ ಶರೀಫರನ್ನು ತಬ್ಬಿಕೊಂಡಿದ್ದೆ ತಡ ಭಾರತ ಮತ್ತು ಗುಪ್ತಚರ ಇಲಾಖೆ ಮೈಮರೆಯಿತು. ಸರ್ಕಾರವೂ ಸಹ ಪಾಕೀಸ್ತಾನದ ವಿರುದ್ಧ ಮಾತುಗಳನ್ನು ಕೇಳಿಸಿಕೊಳ್ಳಲು ತಯಾರಿರಲಿಲ್ಲ. ಮೇ ತಿಂಗಳಲ್ಲಿ ನಮಗೆ ಆಕ್ರಮಣದ ಸುದ್ದಿ ಮುಟ್ಟುವ ವೇಳೆಗೆ ಪಾಕಿಸ್ತಾನದ ಸೇನೆ ಬಂಕರ್ಗಳನ್ನು ತೋಲೋಲಿಂಗ್ ಬೆಟ್ಟದಲ್ಲಿ ನಿರ್ಮಾಣ ಮಾಡಿತ್ತು. ತೊಲೋಲಿಂಗ್ ಬೆಟ್ಟ ವಶಪಡಿಸಿಕೊಳ್ಳುವುದೆಂದರೆ ಶ್ರೀನಗರ ಮತ್ತು ಲದಾಖ್ ಪ್ರದೇಶವನ್ನು ಜೋಡಿಸುವ ಏಕೈಕ ಹೆದ್ದಾರಿಯನ್ನು ವಶಪಡಿಸಿಕೊಂಡಂತೆ! ಸ್ಥಳಿಯರು ಕೊಟ್ಟ ಮಾಹಿತಿಯ ಮೇರೆಗೆ ಸೌರಭ್ ಕಾಲಿಯಾ ಮತ್ತು ತಂಡವನ್ನು ಕಳಿಸಿ ಅವರ ತುಂಡು ತುಂಡಾದ ದೇಹವನ್ನು ಪಡೆದ ಮೇಲೆ ಭಾರತದ ಸರ್ಕಾರ ಮತ್ತು ಗುಪ್ತಚರ ಇಲಾಖೆ ಎಚ್ಚೆತ್ತುಕೊಂಡಿದ್ದು! 
 
ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ, ಸಾರ್ಜೆಂಟ್ ಪಿಳ್ಳಾ ವೆಂಕಟ್ ನಾರಾಯಣ್ ರವಿ, ಫ್ಲೈಟ್ ಲೆಫ್ಟಿನೆಂಟ್ ಮುಹಿಲಿನ್ ರ ಪ್ರಾಣಾರ್ಪಣೆ ಮೊದಲಾಯಿತು. ಲೇಸರ್ ನಿರ್ದೇಶಿಸಿದ ಬಾಂಬುಗಳನ್ನು ಹಾಕಿ ಶತ್ರುಗಳನ್ನು ಬಗ್ಗು ಬಡಿಯುವ ಸ್ಪಷ್ಟ ಸಂದೇಶವನ್ನು ಪಾಕೀಸ್ತಾನಕ್ಕೆ ಕೊಟ್ಟಿತ್ತು. ಅಷ್ಟರಲ್ಲಿ ಗುಪ್ತಚರ ಇಲಾಖೆಗೆ ಮಹತ್ವದ ಮಾಹಿತಿ ಸಿಕ್ಕಿತು. ದಿನಕಳೆದಂತೆ ಪಾಕೀಸ್ತಾನದ ಷಡ್ಯಂತ್ರದ ಬಗ್ಗೆ ಸಾಕ್ಷಿ ದೊರೆಯಿತು. ಇದರ ಆಧಾರದ ಮೇಲೆ ಭಾರತ 'ಆಪರೇಷನ್ ವಿಜಯ್' ಘೋಷಣೆ ಮಾಡಿತು ಮತ್ತು ಸೈನ್ಯ ಸಂಪೂರ್ಣ ಯುದ್ಧಕ್ಕೆ ಸಜ್ಜಾಯಿತು. 
 
ಮಾಧ್ಯಮದವರಿಗೆ ಯುದ್ಧದ ಲೈವ್ ಕವೆರೆಜ್ ಮಾಡಲು ಜಗತ್ತಿನಲ್ಲಿ ಮೊದಲ ಬಾರಿಗೆ ಕಾರ್ಗಿಲ್ ಯುದ್ಧದಲ್ಲಿ ಆಣುವು ಮಾಡಿಕೊಡಲಾಯಿತು. ಭಾರತದ ಜನತೆ ಯುದ್ಧವನ್ನು ನೇರವಾಗಿ ನೋಡುವಂತಾಯಿತು. ಬೋಫೋರ್ಸ್ ಫಿರಂಗಿಗಳನ್ನು ಬಹಳ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಮೇಜರ್ ರಾಜೇಶ್ ಆಧಿಕಾರಿ, ಮೇಜರ್ ವಿವೇಕ್ ಗುಪ್ತ, ಕ್ಯಾಪ್ಟನ್ ವಿಕ್ರಂ ಬಾತ್ರ, ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ವಿಜತಯಂತ್, ಕ್ಯಾಪ್ಟನ್ ಕೆಂಗುರಸೆ, ಗ್ರೆನೆಡಿಯರ್ ಯೋಗೆಂದ್ರ ಸಿಂಗ್ ಯಾದವ್, ರೈಫಲ್ ಮ್ಯಾನ್ ಸಂಜಯ್ ಕುಮಾರ್, ಕ್ಯಾಪ್ಟನ್ ಅನೂಜ್ ನಾಯರ್, ಮೇಜರ್ ಶರವಣನ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅಮೋಲ್ ಕಾಲಿಯಾ, ಮೇಜರ್ ಸೋನಮ್ ವಾಂಗ್ಚುಕ್, ವಿವೇಕ್ ಗುಪ್ತ, ನವೀನ್ ನಗಪ್ಪ, ಲೆಫ್ಟೀನೆಂಟ್ ಬಲ್ವಾನ್ ಸಿಂಗ್ ಮುಂತಾದ ಅನೇಕ ಸೈನಿಕರ ಬಲಿದಾನ ಮತ್ತು ಕೆಚ್ಚೆದೆಯ ಹೋರಾಟದ ನಂತರ ಕಾರ್ಗಿಲ್ ಕದನವನ್ನು ಅಧಿಕೃತವಾಗಿ ಜುಲೈ 26 ರಂದು ಭಾರತ ಗೆದ್ದಿತು. 
 
Kargil War Memorial at Tololing

Indian Soldiers celebrate victory of 'Operation Vijay'

ಈ ಯುದ್ಧದಲ್ಲಿ ಭಾರತ 527 ವೀರ ಸೈನಿಕರನ್ನು ಕಳೆದುಕೊಂಡಿತು. ಯುದ್ಧದ ಸಮಯದಲ್ಲಿ ಸುಮಾರು 5 ಬಿಲಿಯನ್ ಅಷ್ಟು ಕಳ್ಳಸಾಗಣೆ ಗಡಿಯುದ್ದಕ್ಕೂ ನಡೆಯಿತು. ಭಾರತಕ್ಕೆ ಸುಮಾರು ವಾರಕ್ಕೆ 3-4 ಬಿಲಿಯನ್ ಅಷ್ಟು ನಷ್ಟವಾಯ್ತು ಎಂದು ಅಂದಾಜಸಲಾಗಿದೆ. 2014 ನಂತರ ಭಾರತ ಹಿಂದೆ ನಡೆದ ಘಟನೆಗಳಿಂದ ಪಾಠ ಕಲಿತಂತೆ ಕಾಣಿಸುತ್ತಿದೆ. ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫರ ಮೊಮ್ಮಗಳ ಮದುವೆಗೆ ಮೋದಿ ಹೋಗಿ ಬಂದರೂ ಸೈನ್ಯ ಮಾತ್ರ ಮೈಮರೆಯಲಿಲ್ಲ. ಉರಿ ಮತ್ತು ಪುಲ್ವಾಮಾ ದಾಳಿ ನಡೆಯಿತಾದರೂ ಭಾರತ ಸರ್ಜಿಕಲ್ ಸ್ಟ್ರೈಕ್ಗಳ ಮೂಲಕ ಪರಿಣಾಮಕಾರಿಯಾದ ಪ್ರತ್ಯುತ್ತರವನ್ನೇ ಕೊಟ್ಟಿದೆ. ಭಾರತದ ಕಾರಣಕ್ಕಾಗಿಯೇ ಪಾಕೀಸ್ತಾನ ಎಫ್.ಎ.ಟಿ.ಎಫ್ ಅಲ್ಲಿ ಗ್ರೇ ಪಟ್ಟಿಯಲ್ಲಿ ಇದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಇಷ್ಟಾದರೂ ವಿರೋಧ ಪಕ್ಷಗಳು ಸರ್ಜಿಕಲ್ ದಾಳಿ ಬಗ್ಗೆ ಸಾಕ್ಷಿ ಕೇಳುವ ಮಟ್ಟದಲ್ಲಿದೆ. ಭಾರತದ ಸೈನಿಕರು ಸಂಬಳಕ್ಕೆ ದುಡಿಯುವುದಕ್ಕಿಂತ ದೇಶಕ್ಕಾಗಿ ದುಡಿಯುತ್ತಾರೆ. ಯಾವುದೇ ಯುದ್ಧವಾಗಲಿ ಸೈನ್ಯ ಗೆದ್ದಿದೆ ಆದರೆ, ಸೋತಿರುವುದು ರಾಜಕೀಯ ಮಾತ್ರ!

July 16, 2021

ಕಾರ್ಗಿಲ್ ಕದನಕ್ಕೆ ಮುನ್ನುಡಿಯಂತಿತ್ತು ಫೋಖ್ರಾನ್ ಪರಮಾಣು ಪರೀಕ್ಷೆ!

ಜೂನ್-ಜುಲೈ ತಿಂಗಳು ಬಂತೆಂದರೆ ತಕ್ಷಣ ನೆನಪಾಗುವುದು ಕಾರ್ಗಿಲ್! ಭಾರತ ಪಾಕೀಸ್ತಾನದೊಟ್ಟಿಗೆ ಎಷ್ಟೇ ಶಾಂತಿ ಮತ್ತು ಸೌಹಾರ್ದತೆಯಿಂದ ಇರಬೇಕೆಂದು ಪ್ರಯತ್ನಪಟ್ಟರೂ ಸಹ ತಾನು ಅದಕ್ಕೆ ಅರ್ಹನಲ್ಲ ಎಂದು ಆ ಪಾಪಿ ದೇಶ 1999 ರಲ್ಲಿ ಮತ್ತೊಮ್ಮೆ ಸಾಬೀತು ಮಾಡಿತು. ಕವಿ ಹೃದಯದ ಪ್ರಧಾನಿ ಅಟಲ್ ಜೀ ಪಾಕೀಸ್ತಾನದ ನವಾಜ್ ಶರೀಫ್ಗೆ ಸ್ನೇಹದ ಹಸ್ತ ಚಾಚಿದರೂ ಆ ದೇಶ ನಮ್ಮ ಬೆನ್ನಿಗೆ ಚೂರಿ ಇರಿಯಿತು. ಸೈನಿಕರನ್ನೂ ಭಯೋತ್ಪಾದಕರ ವೇಶದಲ್ಲಿ ಕಾರ್ಗಿಲ್ ಬೆಟ್ಟಗಳ ಮೇಲೆ ನುಗ್ಗಿಸಿದ ಹೇಡಿ ರಾಷ್ಟ್ರವೆಂದರೆ ಅದುವೆ ಪಾಕೀಸ್ತಾನ!

Indian PM Atal Bihari Vajapayee greeting Pakistan counter part Nawaz Sharif 

ಚಳಿಗಾಲದಲ್ಲಿ ಮಂಜಿನಿಂದ ಆವೃತವಾಗಿ, -10 ರಿಂದ -20 ಡಿಗ್ರಿ ಅಷ್ಟು ತಾಪಾಮಾನಕ್ಕೆ ಜಾರುವ ಪ್ರದೇಶ ಕಾರ್ಗಿಲ್. ಸೆಪ್ಟೆಂಬರ್ 15 ರಿಂದ ಎಪ್ರಿಲ್ 15ರ ನಡುವೆ ಚಳಿಗಾಲದ ಕಾರಣ ಭಾರತ ಮತ್ತು ಪಾಕೀಸ್ತಾನದ ಸೈನಿಕರು ಬೆಟ್ಟದಿಂದ ಕೆಳಗಿಳಿದು ಹೋಗುತ್ತಾರೆ. ಚಳಿಗಾಲ ಮುಗಿದ ನಂತರ ಮತ್ತೆ ಸೈನಿಕರು ಬೆಟ್ಟವನ್ನು ಹತ್ತಿ ಕಾವಲು ಕಾಯುತ್ತಾರೆ. ಇದು 1977 ರಿಂದ ನಮ್ಮ ಮತ್ತು ಪಾಕೀಸ್ತಾನದ ನಡುವೆ ಇದ್ದಂತಹ ಒಂದು ಒಪ್ಪಂದ. ಆ ಒಪ್ಪಂದದ ಹೆಸರೇ 'ಜೆಂಟಲ್ಮೆನ್ಸ್ ಅಗ್ರಿಮೆಂಟ್' ಎಂದು. ಈ ಒಪ್ಪಂದದ ಹೆಸರಿಗೆ ಅಪವಾದ ಪಾಕೀಸ್ತಾನ ಎಂಬ ವಂಚಕ ರಾಷ್ಟ್ರ! 
 
1974ರ ಮೇ 18 ರಂದು ಭಾರತ ರಾಜಾಸ್ತಾನಿನ ಫೋಖ್ರಾನ್ ಅಲ್ಲಿ ಮೊದಲ ಬಾರಿಗೆ ಪರಮಾಣು ಪರೀಕ್ಷೆಯನ್ನು ನಡೆಸಿತು. ಇಂತಹ ಪರೀಕ್ಷೆಗಳು ಪರಮಾಣು ಪ್ರಸರಣಕ್ಕೆ ಕಾರಣವಾಗುತ್ತದೆ ಎಂದು ಅಮೇರಿಕಾ ಭಾರತದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿತ್ತು. ಈ ನಿರ್ಬಂಧಗಳ ನಡುವೆಯೂ ಸಹ 1998, ಮೇ 11 ರಂದು ಭಾರತ ಅಟಲ್ ಜೀ ನೇತೃತ್ವದಲ್ಲಿ ಅದೇ ಫೋಖ್ರಾನಿನಲ್ಲಿ 5 ಪರಮಾಣು ಪರೀಕ್ಷೆಗಳನ್ನು ನಡೆಸುತ್ತದೆ. 1974 ರ ನಂತರ, ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿತು ಹಾಗೂ ಚೀನಾ ಕೂಡ ಪಾಕೀಸ್ತಾನದೊಂದಿಗೆ ಪರಮಾಣು ಕುರಿತ ತಂತ್ರಜ್ಞಾನವನ್ನು ಹಂಚಿಕೊಳ್ಳುತ್ತಿತ್ತು. ಈ ಹಿನ್ನಲೆಯಲ್ಲಿ ಫೋಖ್ರಾನ್ ಪರಮಾಣು ಪರೀಕ್ಷೆ ದೇಶದ ರಕ್ಷಣೆ ಮತ್ತು ಸ್ವಾವಲಂಭನೆಯ ದೃಷ್ಟಿಯಿಂದ ಬಹು ಮುಖ್ಯವಾಗಿತ್ತು.

Pokhran Nuclear Test 1998

1995 ರಿಂದಲೇ ಅಮೇರಿಕಾದ ಗುಪ್ತಚರ ಇಲಾಖೆ ಸಾಟೆಲೈಟ್ಗಳ ಮೂಲಕ ಭಾರತ ಪರಮಾಣು ಪರೀಕ್ಷೆ ಕುರಿತ ಸಿದ್ಧತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿತ್ತು. ಆದ್ದರಿಂದ ಭಾರತ ಅಮೇರಿಕಾ ಮತ್ತು ಇತರ ರಾಷ್ಟ್ರಗಳ ಕಣ್ಣು ತಪ್ಪಿಸಿ ಸಿದ್ಧತೆ ಮತ್ತು ಪರೀಕ್ಷೆಯನ್ನು ನಡೆಸುವ ಅಗತ್ಯವಿತ್ತು. ಪರೀಕ್ಷೆಯ ಸಿದ್ಧತೆ ಬಹಳ ಗೌಪ್ಯವಾಗೆ ನಡೆದಿತ್ತು. ಕೆಲವು ವಿಜ್ಞಾನಿಗಳು, ಹಿರಿಯ ಮಿಲಿಟರಿ ಅಧಿಕಾರಿಗಳು, ಅಟಲ್ಜೀ ಮತ್ತು ಒಂದಿಬ್ಬರು ಸರ್ಕಾರಿ ಅಧಿಕಾರಿಗಳ ಹೊರತಾಗಿ ಕ್ಯಾಬಿನೆಟ್ ಸಚಿವರು ಸೇರಿದಂತೆ ಯಾವುದೇ ರಾಜಕಾರಣಿಗೂ ಸಹ ವಿಚಾರ ತಿಳಿದಿರಲಿಲ್ಲ. ಡಿ.ಆರ್.ಡಿ.ಒ ಮತ್ತು ಬಾರ್ಕ್ ನ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಪರಮಾಣು ಶಸ್ತ್ರಾಸ್ತ್ರಗಳ ಜೋಡಣೆ, ವಿನ್ಯಾಸ, ಆಸ್ಫೋಟನ ಮತ್ತು ಪರೀಕ್ಷಾ ದತ್ತಾಂಶಗಳನ್ನು ಪಡೆಯುವಲ್ಲಿ ಭಾಗಿಯಾಗಿದ್ದರು. ಮತ್ತೊಂದು ತಂಡ ಆಸ್ಫೋಟನ ಪ್ರಕ್ರಿಯೆಯಲ್ಲಿ ಭಾಗಿಯಾಗಿತ್ತು. ಸಿದ್ಧತೆಯ ಪ್ರಕ್ರಿಯೆಗಳು ಹೆಚ್ಚಾಗಿ ರಾತ್ರಿ ಹೊತ್ತು ನಡೆಯುತ್ತಿತ್ತು. ಅಮೇರಿಕಾದ ಸ್ಯಾಟೆಲೈಟ್ಗಳ ಕಣ್ತಪ್ಪಿಸಲು ಪ್ರತಿದಿನವೂ ಬಳಸಿದ ಉಪಕರಣಗಳನ್ನು ಅದರ ಮೂಲ ಸ್ಥಾನದಲ್ಲಿ ಇಡಲಾಗುತ್ತಿತ್ತು. ಕೇಬಲ್ಗಳನ್ನು ನೆಲದಲ್ಲಿ ಹೂತು, ಅದರ ಮೇಲೆ ಗಿಡಗಳನ್ನು ಇಡಲಾಗುತ್ತಿತ್ತು. ವಿಜ್ಞಾನಿಗಳು ಪೋಖ್ರಾನ್ ಹೊರತುಪಡಿಸಿ ಇತರ ಸ್ಥಳಗಳಿಗೆ ಗುಪ್ತನಾಮಗಳಲ್ಲಿ ಸೈನ್ಯದ ನೇತೃತ್ವದಲ್ಲಿ ಪ್ರಯಾಣಿಸುತ್ತಿದ್ದರು. ಮುಂಬೈನ ಚತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಾಂಬ್‌ಗಳನ್ನು ಎಎನ್ -32 ವಿಮಾನದಲ್ಲಿ ಜೈಸಲ್ಮೇರ್ ಸೇನಾ ನೆಲೆಗೆ, ಅಲ್ಲಿಂದ ಮೂರು ಹಂತಗಳಲ್ಲಿ ನಾಲ್ಕು ಟ್ರಕ್‌ಗಳಲ್ಲಿ ಸೈನ್ಯದ ಬೆಂಗಾವಲಿನಲ್ಲಿ ಪೋಖ್ರಾನ್‌ಗೆ ಸಾಗಿಸಲಾಯಿತು.

ಫೆಡರೇಶನ್ ಆಫ್ ಅಮೇರಿಕನ್ ಸೈಂಟಿಸ್ಟ್ಸ್‌ನ ಗುಪ್ತಚರ ತಜ್ಞ ಜಾನ್ ಪೈಕ್ ಈ ಪ್ರಸಂಗವನ್ನು "ಅಮೇರಿಕಾದ ಗುಪ್ತಚರ ಇಲಾಖೆಯ ದಶಕದ ವೈಫಲ್ಯ" ಎಂದು ಬಣ್ಣಿಸಿದ್ದಾನೆ. ಭಾರತ ಪರಮಾಣು ಪರೀಕ್ಷೆ ನಡೆಸಿದ ಬೆನ್ನಲ್ಲೆ 1998 ಮೇ ತಿಂಗಳಲ್ಲಿ ಅಮೇರಿಕಾದ ಸಹಾಯದೊಂದಿಗೆ ಪಾಕೀಸ್ತಾನವೂ ಸಹ ಬಲೂಚೀಸ್ತಾನದಲ್ಲಿ ಪರಮಾಣು ಪರೀಕ್ಷೆ ನಡೆಸುತ್ತದೆ. ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳು ಪರಮಾಣು ಪ್ರಕ್ರಿಯೆಯಲ್ಲಿ ನಿರತರಾಗಿರುವುದನ್ನು ನೋಡಿ ಜಗತ್ತು ಅಚ್ಚರಿಪಟ್ಟಿತು. ಇದದೊಟ್ಟಿಗೆ ಭಾರತವೂ ಸಶಕ್ತ ಮತ್ತು ಸ್ವಾಭಿಮಾನಿ ರಾಷ್ಟ್ರ ಎಂಬ ಸ್ಪಷ್ಟ ಸಂದೇಶ ಜಗತ್ತಿಗೆ ರವಾನೆಯಾಯಿತು. ಶಾಂತಿ ಸೌಹಾರ್ದತೆ ಇನ್ನು ಸಾಧ್ಯವಿಲ್ಲ ಎಂದು ಬಹುತೇಕರು ಅಂದುಕೊಂಡರು. ಅದೇ ಸಮಯದಲ್ಲಿ 'ಸಮರಕ್ಕೂ ಸಿದ್ಧ, ಸ್ನೇಹಕ್ಕೂ ಬದ್ಧ' ಎಂಬ ಸಂದೇಶ ಜಗತ್ತು ಅಚ್ಚರಿ ಪಡುವಂತೆ ಅಟಲ್ಜೀಯ ಮೂಲಕ ಭಾರತ ನೀಡಿತು.

ಭಾರತ ಮತ್ತು ಪಾಕೀಸ್ತಾನಗಳ ನಡುವೆ ಸ್ನೇಹ ಗಟ್ಟಿಯಾಗಿರಬೇಕೆಂದು ಅಟಲ್ಜೀ 17 ಜನ ಭಾರತೀಯರೊಂದಿಗೆ ದೆಹಲಿಯಿಂದ ಲಾಹೋರಿಗೆ ಬಸ್ಸಲ್ಲಿ ತೆರಳಿದರು. ಪಾಕೀಸ್ತಾನದ ಪ್ರಧಾನಿ ನವಾಜ್ ಶರೀಫ಼್ ರನ್ನು ಸ್ನೇಹದ ಸಂಕೇತವಾಗಿ ತಬ್ಬಿಕೊಳ್ಳುತ್ತಾರೆ. ಅಟಲ್ಜೀ ಅವರೊಂದಿಗೆ ಚಲನಚಿತ್ರ, ಕಲೆ, ಸಂಸ್ಕೃತಿ ಮತ್ತು ಕ್ರಿಕೆಟ್ ಕ್ಷೇತ್ರಗಳ ಪ್ರಖ್ಯಾತರುಗಳಾದ ಶತ್ರುಘನ್ ಸಿನ್ಹಾ, ಮಲ್ಲಿಕಾ ಸರಭಾಯ್, ಅರುಣ್ ಶೌರಿ, ಜಾವೇದ್ ಅಖ್ತರ್, ಸತೀಶ್ ಗುಜ್ರಾಲ್, ಕುಲದೀಪ್ ನಾಯರ್ ಮತ್ತು ಕಪಿಲ್ ದೇವ್ ಸಹ ಹೋಗಿದ್ದರು. ಅಟಲ್ಜೀ ಅವರ ಕುಟುಂಬದೊಂದಿಗೆ ಮೊಮ್ಮಗಳು ನಿಹರಿಕಾ, ಸಾಕು-ಮಗಳು ನಮಿತಾ ಮತ್ತು ಅವರ ಪತಿ ರಂಜನ್ ಭಟ್ಟಾಚಾರ್ಯರನ್ನು ಕರೆದುಕೊಂಡು ಹೋಗಿದ್ದರು. ಸರ್ಕಾರದ ಪರವಾಗಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ವಿದೇಶಾಂಗ ಕಾರ್ಯದರ್ಶಿ ಕೆ. ರಘುನಾಥ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಯ ಇತರ ಹಿರಿಯ ಅಧಿಕಾರಿಗಳು ತೆರಳಿದ್ದರು. ವಾಗಾ ಗಡಿಭಾಗದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಎರಡೂ ದೇಶಗಳ ನಡುವಿನ 21 ವರ್ಷಗಳ ದ್ವೇಷದ ಕೊಳೆ ತೊಳೆದುಹಾಕುವ ಇರಾದೆ ಭಾರತದ್ದಾಗಿತ್ತು. "ಉಭಯ ದೇಶಗಳ ನಡುವೆ ಬಸ್ ಸೇವೆಯನ್ನು ನಡೆಸುವುದು ನಮ್ಮ ಸಂಬಂಧವನ್ನು ಸುಧಾರಿಸುವ ಮತ್ತು ನಮ್ಮ ಜನಗಳನ್ನು ಒಗ್ಗೂಡಿಸುವ ಸಂಕೇತವಾಗಿದೆ. ನಮ್ಮ ದ್ವಿಪಕ್ಷೀಯ ಸಂಬಂಧ ಹಿಂಸಾಚಾರದ ಮೂಲಕ ಅಲ್ಲ ಬದಲಾಗಿ ಶಾಂತಿ ಮತ್ತು ಸ್ನೇಹದಿಂದ ಪರಿಹರಿಸಿಕೊಳ್ಳಬಹುದು" ಎಂದು ಅಟಲ್ಜೀ ಹೇಳಿದ್ದರು.

Prime Minister Atal Bihari Vajapayee and team towards Pakistan

ಎಲ್ಲವೂ ಸರಿಯಾಗಿತ್ತು, 1947 ರಲ್ಲಿ ಭಾರತ ತುಂಡಾಗಿ, 3 ಯುದ್ಧಗಳು ನಡೆದ ನಂತರ ಎರಡೂ ದೇಶಗಳು ಪರಸ್ಪರ ಹೊಂದಿಕೊಂಡು ಶಾಂತವಾಗಿ ಮುಂದುವರೆಯುವ ಭಾವನೆ ಭಾರತವನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಇಂಗ್ಲೆಂಡಿನಲ್ಲಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಗುವುದರಲ್ಲಿತ್ತು. ಜಗತ್ತಿನ ಗಮನ ಕ್ರಿಕೆಟ್ ಕಡೆ ಹರಿದಿತ್ತು. ಮೇ ತಿಂಗಳಲ್ಲಿ ಕಾರ್ಗಿಲ್ ಕಣಿವೆಯಲ್ಲಿ ಭಾರತಕ್ಕೆ ಬಂದು ಅಪ್ಪಳಿಸಿತು ನಂಬಿಕೆ ದ್ರೋಹದ ಭಯಂಕರ ಸುದ್ಧಿ! ಚಳಿಗಾಲ ಮುಗಿಯುವ ಮುನ್ನವೇ ಪಾಕೀಸ್ತಾನದ ಸೇನೆ ಭಯೋತ್ಪಾದಕರ ವೇಷದಲ್ಲಿ ಕಾರ್ಗಿಲ್ ಬೆಟ್ಟವನ್ನು ಹತ್ತಿ ಭಾರತದ್ದೇ ಬಂಕರ್ಗಳಲ್ಲಿ ಅವಿತು ಕುಳಿತಿದ್ದರು. ಕಾರ್ಗಿಲ್ ಬೆಟ್ಟದ ಮೇಲೆ ಭಾರತೀಯರಲ್ಲದವರು ಬಂದಿದ್ದಾರೆ ಎಂಬ ಸೂಚನೆಯನ್ನು ಆ ಊರಿನ ದನ ಕಾಯುವ ಹುಡುಗರು ಸೈನ್ಯಕ್ಕೆ ಕೊಡುತ್ತಾರೆ. ಅನುಮಾನದಿಂದ ಸೌರಭ್ ಕಾಲಿಯಾ ನೇತೃತ್ವದಲ್ಲಿ 5 ಜನರ ಪಡೆಯನ್ನು ಭಜರಂಗಿ ಪೋಸ್ಟ್ ಕಡೆಗೆ ಸೇನೆ ಕಳಿಸುತ್ತದೆ. ಪಾಕೀಸ್ತಾನ ಐದು ಜನ ಸೈನಿಕನ್ನೂ ಸೆರೆಹಿಡಿದು ಎಳೆದೊಯ್ಯುತ್ತದೆ. ಭಾರತೀಯ ಸೈನಿಕರಿಗೆ ಅತ್ಯಂತ ಬರ್ಬರವಾಗಿ ಹಿಂಸೆ ಮಾಡಲಾಗುತ್ತದೆ. ಸೈನಿಕರ ಮೂಗು-ನಾಲಿಗೆ ಕತ್ತರಿಸಿ, ಕಣ್ಣು ಕಿತ್ತೆಸೆದು, ಕೈಕಾಲು ಬೆರಳುಗಳನ್ನು ಕತ್ತರಿಸಿ, ಸೌರಭ್ ಕಾಲಿಯಾ ಜೀವಂತವಾಗಿರುವಾಗಲೇ ಅವರ ಮರ್ಮಾಂಗವನ್ನು ಕತ್ತರಿಸಿ ತುಂಡು ತುಂಡಾದ ದೇಹವನ್ನು ಭಾರತಕ್ಕೆ ಪಾಕೀಸ್ತಾನ ಕಳಿಸಿತು! ಭಾರತ ಸರ್ಕಾರಕ್ಕೆ ಆಗ ಅರ್ಥವಾಗಿತ್ತು ತನ್ನ ಬೆನ್ನಿಗೆ ಪಾಕಿಸ್ತಾನ ಚೂರಿ ಇರಿದಿದೆ ಎಂದು!

July 9, 2021

ಕೇಳಿದ್ದು, ನೋಡಿದ್ದು, Feel ಮಾಡಿದ್ದು

  • ನೈತಿಕವಾಗಿ ಪ್ರಾಮಾಣಿಕನಲ್ಲದ ವ್ಯಕ್ತಿ ಆಂತರಿಕವಾಗಿ ಕುಸಿಯುತ್ತಿರುತ್ತಾನೆ.

  • ಮನಸ್ಸಿನಲ್ಲಿ ಪ್ರೀತಿ ನೈಜವಾಗಿದ್ದರೆ ನಿರಾಕರಣೆಯ ಮಾತು ಸಹ ನೆಮ್ಮದಿ ನೀಡುತ್ತದೆ.

  • ಮಾತು ಒರಟಾದರೆ ಪರವಾಗಿಲ್ಲ ಭಾವ ಒರಟಾಗಬಾರದು ಅಷ್ಟೇ!

  • ಪ್ರೀತಿ; ಸಿಕ್ಕರೆ ತಂಪೆರೆಯುವ ಜಲಧಾರೆ. ಸಿಗದಿದ್ದರೆ ಕುದಿಯುವ ಜ್ವಾಲಾಮುಖಿ

  • ಯಾರಿಗೂ ಹೇಳಲಾಗದ ಸ್ಥಿತಿಯಲ್ಲಿ ಹುಟ್ಟುವ ಭಾವವೇ ಬರವಣಿಗೆ
  • Never expect returns from those whom you helped in the past.
  • Restlessness is the sign of frustration and helplessness
  • ಯಾರಿಗಾಗಿ ಯಾತಕ್ಕಾಗಿ ಬದುಕು ಎಂಬ ಪ್ರಶ್ನೆಗೆ ಉತ್ತರವಿಲ್ಲದಾಗ ಕೆಲಸ ಮಾಡುತ್ತಾ ಇರುವುದೇ ಒಳಿತು.
  • Some secrets are to be with you alone. Don't share it with your close ones too!
  • ಸತ್ಯ ಅನೇಕ ಬಾರಿ ಸಹ್ಯವಾಗಿರುವುದಿಲ್ಲ. ಆದರೆ, ಅದರೊಟ್ಟಿಗೆ ಆತ್ಮತೃಪ್ತಿ ಇರುತ್ತದೆ.
  • ನಿಸ್ವಾರ್ಥ ಮನಸ್ಸಿನಿಂದ ಕೊಡಿ. ನಿಮಗೆ 10 ರಷ್ಟು ವಾಪಸ್ಸು ಕೊಡುಗೆಯಾಗಿ ಬರುತ್ತದೆ.
  • ಅನಿರೀಕ್ಷರತೆಯನ್ನು ಎದುರಿಸುವ ಶಕ್ತಿಯೇ ನಮ್ಮ ಬದುಕಿಗೆ ದಾರಿದೀಪ.
  • ಜೀವನದಲ್ಲಿ mathematics ಅಥವಾ science ಅನ್ನು ಸುಲಭವಾಗಿ ವ್ಯಾಖ್ಯಾನಿಸಿ ಅರ್ಥ ಮಾಡಿಸಬಹುದು. ಆದರೆ, ಸಂಭಂದಗಳು logic ಅನ್ನು ಮೀರಿದ್ದು. ಅನೇಕ ಬಾರಿ ಬಾಂಧವ್ಯ ಚಿಗುರೊಡೆಯಲು ಅಂತಃಪ್ರಜ್ಞೆ (intuition) ಕಾರಣವಾಗಿರುತ್ತದೆ. ಭಾವಾಂತರಂಗದ ಅಡಿಪಾಯವೇ ಅಂತಃಪ್ರಜ್ಞೆ. ಇದನ್ನು ನನ್ನ ಹೊರತು ಮತ್ತೊಬ್ಬರಿಗೆ ಅರ್ಥ ಮಾಡಿಸುವುದು ಹೇಗೆ?
  • Being physically far away doesn't matter when you're emotionally connected. Being physically near is of no value when you're emotionally disconnected.
  • ಪ್ರೇಮದ ಭಾವ ಬತ್ತು ಹೋದ ವ್ಯಕ್ತಿಗೆ ಸಾವಿನ ಸಾನಿಧ್ಯವೇ ಸೂಕ್ತ!
  • ಮುಖ ಮನಸ್ಸಿನ ಕನ್ನಡಿ. ಚಿತ್ರದಲ್ಲಿರುವವರ ಭಾವ ಅಂದಾಜಿಸಬಹುದು. ಚಿತ್ರ ತೆಗೆಯುವವನ ಭಾವದ ಘರ್ಷಣೆಗೆ ರೂಪವೂ ಇಲ್ಲ, ಮೌಲ್ಯವೂ ಇಲ್ಲ!
  • ಪ್ರೀತಿ ಪವಿತ್ರ... ಸಂಬಂಧ, ಮದುವೆ, ಬದುಕು... ಬಲವಂತದ ಕರ್ತವ್ಯ!
  • Feel of pounding heart is a sign of excitement of love!
  • ನಮ್ಮ ಮನಸ್ಸಿನ ಭಾವನೆ ಮತ್ತೊಬ್ಬರ ಮಾತಿನಲ್ಲಿ ಅಭಿವ್ಯಕ್ತವಾದಾಗ ಸಂಭಂದಗಳು ಗಟ್ಟಿಯಾಗುತ್ತದೆ.
  • ಭಾವ ಸ್ಪಂದನೆ ಇಲ್ಲದ ಸಂಬಂಧ ಕೇವಲ ಪರಿಚಯ ಎಂದಾಗುತ್ತದೆ.
  • ಪ್ರಾಯೋಗಿಕ ಸತ್ಯಾನ್ವೇಷಣೆ ವಿಜ್ಞಾನ. ಭಾವದ ರಸಾನ್ವೇಷಣೆ ಸಾಹಿತ್ಯ.
  • Irrespective of what you do, people observe only what they want...!!!
    ನೀವೇನೆ ಕೆಲಸ ಮಾಡಿ, ಜನ ತಮಗೆ ಬೇಕಾದ್ದನ್ನು ಮಾತ್ರ ಗಮನಿಸುತ್ತಾರೆ...!!!
  • Amplitude of Relationship in the wave of life is higher when Wavelength of thoughts are in sync.
  • ಅಂತರ್ಮುಖಿ ಅಂತರಾಳದಲ್ಲಿ ಆಲೋಚನೆಗಳ ಆಳಕ್ಕಿಳಿದಾಗ ಆನಂದ, ಆತ್ಮಜ್ಞಾನವನ್ನು ಆಸ್ವಾಧಿಸುವ ಅವಕಾಶ ಅವತರಿಸುತ್ತದೆ.
  • ಗಂಡು ಮಕ್ಕಳು ಪ್ರೀತಿಯೊಂದಿಗೆ ಕರುಣೆ, ಮಮತೆ ಬಯಸುತ್ತಾರೆ. ತಾನು ಸೋತಾಗ ತನ್ನ ಸಂಗಾತಿ ತಾಯಿಯಂತೆ ತನ್ನನ್ನು ನೋಡಿಕೊಳ್ಳಬೇಕು ಎಂಬುದನ್ನು ಬಯಸುತ್ತಾರೆ.
    ಹೆಣ್ಣು ಮಕ್ಕಳನ್ನು ಪ್ರೀತಿಸಬೇಕು ಅಷ್ಟೆ. ಕರುಣೆ ತೋರಿಸುತ್ತಿದ್ದೇವೆ ಎಂದು ಅನಿಸಬಾರದು. ಅವರಿಗೆ ಪ್ರೀತಿಗಿಂತಲೂ ಮಿಗಿಲಾದದ್ದು ಸ್ವಾಭಿಮಾನ.
  • Advertising ourselves is the worst part in life.
  • Natural process is always greater than a deliberate act.
    ಪ್ರಯತ್ನ ಪೂರ್ವಕ್ಕಿಂತ ಸಹಜತೆಯ ಪ್ರಕ್ರಿಯೆ ಶ್ರೇಷ್ಠ.
  • The best and most beautiful things in the world cannot be seen or even touched, they must be felt.
  • Lack of Self Confidence is the symptom of Jealousy.
    ಆತ್ಮ ವಿಶ್ವಾಸದ ಕೊರತೆಯ ಚಿಹ್ನೆಯೇ ಅಸೂಯೆ.

  • Student should possess zeal to learn and shouldn't wait for someone to teach.
    ವಿದ್ಯಾರ್ಥಿಯಾದವನಿಗೆ ಕಲಿಯೋ ಹಸಿವಿರಬೇಕು, ಯಾರೋ ಹೇಳಿಕೊಡುತ್ತಾರೆ ಎಂದು ಕಾಯಬಾರದು.

  • Unconditional feel of expression is Love.
    ಅನಿಯಂತ್ರಿತ ಭಾವನೆಯ ಅಭಿವ್ಯಕ್ತಿಯೇ ಪ್ರೀತಿ.
  • ಅಗಲಿಕೆಯ ಅಳುವಿನ ಮುಂದೆ ನಗುವಿನ ಮುಖವಾಡ ಭಗ್ನತೆಯ ಸಂಕೇತ
    ಏನೇ ಹೇಳಿ...

    ಮೊಗದಲ್ಲಿನ ನಗು ನಕಲಾಗಬಹುದು ಆದರೆ ದುಃಖದ ಅಳು ಸತ್ಯ.
  • ಸಸಿ ಮತ್ತು ಆಸೆ ಚಿಗುರಿದರೆ ಹೆಮ್ಮರವಾಗಿ ಬೆಳೆದು ಫಲ ಕೊಡಬೇಕು. ಬೆಳೆಯದೆ ಚಿಗುರಿನಲ್ಲೇ ಚಿವುಟಿದರೆ ಮಣ್ಣು ಮತ್ತು ಮನಸ್ಸಿನ ಫಲವತ್ತತೆ ನಾಶವಾಗುತ್ತದೆ.
  • ಆತ್ಮತೃಪ್ತಿಯ ಮುಂದೆ ಹೊಗಳಿಕೆ ಮತ್ತು ತೆಗಳಿಕೆ ಗೌಣ.
  • ಅಂತರಂಗ ಕಾಡಿದರೆ ಪಶ್ಚಾತ್ತಾಪ. ಇತರರಿಗೆ ತಿಳಿದೀತು ಎಂಬ ಭಾವ ಭಯ ಅಷ್ಟೇ.
  • ನಿರೀಕ್ಷೆ ಮಾಡುವುದು ದುಃಖವನ್ನು ಆಹ್ವಾನಿಸಿದಂತೆ.
  • Some concepts are your favorite but you fail to handle and live with it!
    ಕೆಲವು ವಿಚಾರಗಳು ನಿಮ್ಮ ಮನಸ್ಸಿಗೆ ಹತ್ತಿರ ಆಗಿರುತ್ತೆ ಆದರೆ, ಅದರೊಟ್ಟಿಗೆ ಜೀವಿಸಲು ಸೋಲುತ್ತೇವೆ!
  • ಜಗನ್ನಿಯಾಮಕನು ಯಾವ ಪುರುಷನಿಗೆ ಯಾವ ಸ್ರ್ತೀಯೆಂದು ವಿಧಾಯಕ ಮಾಡಿರುವನೊ, ಪ್ರಾಪ್ತ ಸಮಯದಲ್ಲಿ ಆ ಜಗನ್ನಿಯಾಮಕನೇ ಆ ಸ್ತ್ರೀಗೂ ಆ ಪುರುಷನಿಗೂ, ಒಬ್ಬರನ್ನೊಬ್ಬರು ಕಣ್ಮನಗಳಿಂದ ಆಕರ್ಷಿಸುವ, ಅಪೇಕ್ಷೆಪಡುವ, ತನ್ನ ಧರ್ಮಪತ್ನಿ (/ಪತಿ)ಯೆಂದು ಅರಿಯುವ ಶಕ್ತಿಯನ್ನೂ ಕರುಣಿಸಿರುತ್ತಾನೆ.
    - ಶಾಂತಲ ಕಾದಂಬರಿ
  • Love - Once lost is lost forever!
  • ಪ್ರಪಂಚದ ಎಲ್ಲರಿಗೂ ಅರ್ಥವಾಗುವಂತಹ ಭಾಷೆ ಎಂದರೆ - ಸಂಗೀತ ಮತ್ತು ಪ್ರೀತಿ.
  • ಪ್ರೀತಿ ಮತ್ತು ದುಃಖ ಒಂದೇ ನಾಣ್ಯದ ಎರಡು ಮುಖಗಳು. ಪ್ರೀತಿಯ ಸುಖ ಅನುಭವಿಸಬೇಕಾದರೆ ನೋವನ್ನು ಎದುರಿಸಲು ಸಿದ್ಧವಿರಬೇಕು.
  • A friend to all is a friend to none.
  • Friendship is like 2 sides of a single paper, which can be torn into pieces but can never be separated.
  • Don't try to teach to those cannot be taught.
  • Minimum love is friendship, Maximum friendship is Love. Strange but true.
  • True friendship comes when silence b/w two people is comfortable.