9/11 ಎಂದೊಡನೆ ಬಹುತೇಕರಿಗೆ ನೆನಪಾಗೋದು ಒಸಾಮ ಬಿನ್ ಲಾಡೆನ್ ನೇತೃತ್ವದ ಅಲ್ ಖೈದಾದ ಭಯೋತ್ಪಾದಕರು ಅಮೇರಿಕಾದಲ್ಲಿದ್ದ ವಿಶ್ವವಾಣಿಜ್ಯ ಕಟ್ಟಡವನ್ನು ಉರುಳಿಸಿದ್ದು. ಇದರಲ್ಲಿ ಹೆಚ್ಚೇನು ಅಶ್ಚರ್ಯ ಇಲ್ಲ ಬಿಡಿ. ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದು ಹೆಚ್ಚು ಪ್ರಚಾರವಾಗುತ್ತದೆ ಮತ್ತು ಅದೇ ನೆನಪಿನಲ್ಲಿ ಇರುತ್ತದೆ. ಸೆಪ್ಟಂಬರ್ 11 ಎಂದರೆ ಭಾರತದ ಮತ್ತು ಹಿಂದೂ ಸಂಸ್ಕೃತಿಯ ಪಾಲಿಗೆ ಮಾತ್ರ ಹೆಮ್ಮೆ ಪಡುವಂತಹ ದಿವಸ. 1893ನೇ ಇಸವಿಯಲ್ಲಿ ಇದೇ ಅಮೇರಿಕಾದ ಚಿಕಾಗೋದಲ್ಲಿ ಭಾರತ ಸಿಡಿಲ ಸಂತ ಸ್ವಾಮೀ ವಿವೇಕಾನಂದ ತಮ್ಮ ವಾಗ್ಝರಿಯ ಮೂಲಕ ಇಡೀ ಜಗತ್ತನ್ನೇ ಮಣಿಸಿದ್ದರು. "ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ಼್ ಅಮೇರಿಕಾ" ಅವರು ಹೇಳಿದ ಐದೇ ಐದು ಪದಗಳಿಗೆ ಸಭೆಯಲ್ಲಿ ನೆರೆದಿದ್ದ ಅಷ್ಟೂ ಜನ ಬರೋಬ್ಬರಿ ಎರಡು ನಿಮಿಷ ಕರತಾಡನ ಮಾಡಿದ್ದು ಈಗ ಇತಿಹಾಸ. ಅಮೇರಿಕಾ ಕಂಡು ಹಿಡಿದ 400 ವರ್ಷದ ಸಂಭ್ರಮಾಚರಣೆ ಪ್ರಯುಕ್ತವಾಗಿ ಸರ್ವಧರ್ಮ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಜಗತ್ತಿನಲ್ಲಿ ಕ್ರೈಸ್ತ ಧರ್ಮವೇ ಎಲ್ಲಕ್ಕಿಂತ ಶ್ರೇಷ್ಠ ಧರ್ಮ ಎಂದು ಪ್ರಚುರಪಡಿಸಲು ಅಮೇರಿಕನ್ನರು ಮುಂದಾಗಿದ್ದರು. ಆದರೆ, ಅವರ ಉದ್ದೇಶವನ್ನು ಧೂಳಿಪಟ ಮಾಡಿ, ಭಾರತದ ಹಿಂದೂ ಧರ್ಮದ ಸತ್ವದ ಬಗ್ಗೆ ಇಡೀ ಜಗತ್ತಿಗೆ ಪಾಠ ಮಾಡಿದ್ದು ಸ್ವಾಮೀಜೀ. 9/11 ಎಂದರೆ ಜಗತ್ತಿಗೆ ಏನಾದರೂ ನೆನಪಾಗಲಿ ಆದರೆ, ಭಾರತಕ್ಕೆ ಮಾತ್ರ ನೆನಪಾಗುವುದು, ನೆನಪಾಗಬೇಕಾಗಿರುವುದು ವಿಶ್ವವಿಜೇತ ಸ್ವಾಮೀ ವಿವೇಕಾನಂದ ಮಾತ್ರ!
  | 
| Swami Vivekananda at the World Parliament of Religions, Chicago, 1893 | 
  | 
| Steps of Art Institute of Chicago | 
ಸ್ವಾಮೀ ವಿವೇಕಾನಂದರಿಗೆ ಅಮೇರಿಕಾಗೆ ಹೋಗುವ ಉದ್ದೇಶ ಇತ್ತು ಎಂಬುದು ಖಚಿತವಾಗಿ ಹೇಳಲಾಗುವುದಿಲ್ಲ. ಆಂಗ್ಲರ ಕಪಿಮುಷ್ಠಿಯಿಂದ ಬಿಡಿಸಿ ಭಾರತವನ್ನು ಎತ್ತರದ ಸ್ಥಾನದಲ್ಲಿ ಬೆಳಗಿಸಬೇಕು ಎಂಬುದು ಅವರ ಆಶಯವಾಗಿತ್ತು. ಆದರೆ, ಅದಕ್ಕಾಗಿ ಅವರಿಗೆ ಏನು ಮಾಡಲು ತೋಚದೆ 'ನನ್ನಿಂದ ಏನು ಆಗದಿದ್ದರೆ ಸಮುದ್ರಕ್ಕೆ ಹಾರಿ ಪ್ರಾಣ ಬಿಡುತ್ತೇನೆ' ಎಂದು ಕನ್ಯಾಕುಮಾರಿಯ ಸಮುದ್ರಕ್ಕೆ ಹಾರಿ, ಈಜಿ ಅಲ್ಲಿದ್ದ ಬಂಡೆಯನ್ನೇರಿ ತಪಸ್ಸಿಗೆ ಕೂರುತ್ತಾರೆ. ಡಿಸೆಂಬರ್ 25 ರಿಂದ ಮೂರು ದಿನಗಳ ಕಾಲ ಭಾರತದ ಕುರಿತು ತಪ್ಪಸ್ಸು ಮಾಡುತ್ತಾರೆ. ತಪಸ್ಸಿನ ಫಲವಾಗಿ ತಮ್ಮ ಗುರುದೇವ ಶ್ರೀ ರಾಮಕೃಷ್ಣರು ಸ್ವಾಮೀಜೀಗೆ ಪಶ್ಚಿಮಕ್ಕೆ ಹೋಗಲು ಆದೇಶಿಸುತ್ತಾರೆ. ಸ್ವಾಮೀಜೀಯ ಭಕ್ತನಾದ ಖೇತ್ರಿಯ ಮಹಾರಾಜ ತನ್ನ ಪುತ್ರನ ನಾಮಕರಣಕ್ಕಾಗಿ ವಿವೇಕಾನಂದರನ್ನು ಕರೆಸಿಕೊಂಡು ಅವರ ಅಪೇಕ್ಷೆಯನ್ನರಿತು ನಮ್ಮ ದೇಶದ ಪ್ರತಿನಿಧಿಯಾಗಿ ಅಮೇರಿಕಾಗೆ ಕಳಿಸಿಕೊಡುತ್ತಾರೆ. ಹಡಗಿನಲ್ಲಿ ಸ್ವಾಮೀಜೀಗೆ ಜಮ್ಶೇಡ್ ಜೀ ಟಾಟಾರ ಭೇಟಿಯಾಗುತ್ತದ್ದೆ. ಸ್ವಾಮೀಜೀಯ ಪ್ರೇರಣೆಯಿಂದ ಟಾಟಾ ಭಾರತದಲ್ಲಿ ಐ.ಐ.ಎಸ್.ಸಿ. ಅನ್ನು ಸ್ಥಾಪಿಸಿದರು. ಅಮೇರಿಕಾಗೆ ಹೋಗಿ ಇಳಿದ ಮೇಲೆ ಸ್ವಾಮೀಜೀಗೆ ತಾನು ಮೂರು ತಿಂಗಳ ಮುಂಚಿತವಾಗಿಯೇ ಸಮ್ಮೇಳನಕ್ಕೆ ಬಂದಿದ್ದೇನೆ ಎಂದು ತಿಳಿಯುತ್ತದೆ. ಕಡಿಮೆ ಖರ್ಚು ಎಂಬ ಕಾರಣಕ್ಕೆ ಸ್ವಾಮೀಜೀ ಬೋಸ್ಟನ್ ನಗರದಲ್ಲಿ ಉಳಿಯುತ್ತಾರೆ. ಬೋಸ್ಟನ್ನಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯ ಪ್ರೊ.ಜಾನ್ ರೈಟ್ ಅನ್ನು ಭೇಟಿಯಾಗುವ ಅವಕಾಶವಾಗುತ್ತದೆ. ಅವರ ಜೊತೆ ಚರ್ಚೆ ಮಾಡಿದ ನಂತರ ಸರ್ವಧರ್ಮ ಸಮ್ಮೇಳನಕ್ಕೆ ಭಾಷಣಕಾರನಾಗಿ ಹೋಗಲು ತನಗೊಂದು ಪರಿಚಯ ಪತ್ರ ಬರೆದು ಕೊಡುವಂತೆ ಸ್ವಾಮೀಜೀ ಕೇಳುತ್ತಾರೆ. 'ನಿಮಗೆ ಪರಿಚಯ ಕೇಳುವುದು ಸೂರ್ಯನಿಗೆ ಹೊಳೆಯುವುದಕ್ಕೆ ಅಧಿಕಾರವೇನಿದೆ ಎಂದು ಕೇಳಿದಂತೆ' ಎಂದು ರೈಟ್ ಹೇಳುತ್ತಾರೆ. ಆದರೂ, ನಿಯಮಾನುಸಾರ 'ನಮ್ಮಲ್ಲಿ ಇರುವಂತಹ ಎಲ್ಲಾ ಬುದ್ಧಿವಂತರಿಗಿಂತಲೂ ಹೆಚ್ಚು ತಿಳಿದವರು ಸ್ವಾಮೀಜೀ. ತನ್ನ ನಾಲ್ಕುನೂರು ವರ್ಷದ ಇತಿಹಾಸದಲ್ಲಿ ಇಂತಹ ಬುದ್ಧಿವಂತನನ್ನು ಅಮೇರಿಕಾ ಕಂಡಿರಲಿಲ್ಲ' ಎಂದು ಬರೆದು ಒಂದು ಪರಿಚಯ ಪತ್ರವನ್ನು ಕೊಡುತ್ತಾರೆ. ಸಮ್ಮೇಳನದಲ್ಲಿ ಭಾಷಣ ಮಾಡುವ ತನಕ ಯಾರಿಗೂ ಪರಿಚಯವಿಲ್ಲದಿದ್ದ ಸ್ವಾಮೀಜೀ ಒಮ್ಮೆಲೆ ಅಮೇರಿಕಾ ಪೂರ ಚರ್ಚೆಯ ವ್ಯಕ್ತಿಯಾಗುತ್ತಾರೆ. ಅಲ್ಲಿನ ಅನೇಕ ಪತ್ರಿಕೆಗಳು ಸ್ವಾಮೀಜೀಯನ್ನು ಸಮ್ಮೇಳನದ ಹೀರೋ ಎಂದು ಉದ್ಗರಿಸುತ್ತದೆ. ಅದಾದ ನಂತರ ಎರಡು ವರ್ಷಗಳ ಕಾಲ ಅಮೇರಿಕಾದಾದ್ಯಂತ ಸ್ವಾಮೀಜೀ ಪ್ರವಾಸ ಮಾಡಬೇಕಾಗುತ್ತದೆ. ಎಲ್ಲಾ ನಗರಗಳಲ್ಲೂ ಅವರ ಉಪನ್ಯಾಸದ ಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ. ಜನರು ಅವರ ಉಪನ್ಯಾಸಕ್ಕೆ ಹಣಕೊಟ್ಟು ಬರುತ್ತಿದ್ದರು. ಸ್ವಾಮೀಜೀಯ ಹೆಸರಿನಲ್ಲಿ ಅಲ್ಲಿನ ಸಂಸ್ಥೆಯೊಂದು ಉಪನ್ಯಾಸಗಳನ್ನು ಏರ್ಪಡಿಸಿ ಹಣ ಮಾಡಿಕೊಂಡ ಘಟನೆಯೂ ಇದೆ.
  | 
| Prof J.H. Wright praising Swami Vivekananda | 
  | 
American Newspapers Advertising Swami Vivekananda Source: Chicago Tribune, November 1893 | 
ಸ್ವಾಮೀಜೀಯ ಉಪನ್ಯಾಸಗಳಲ್ಲಿ ಭಾರತ ಮತ್ತು ಹಿಂದೂ ಧರ್ಮದ ಶ್ರೇಷ್ಟತೆ ಎದ್ದು ಕಾಣುತ್ತಿತ್ತು. ಕ್ರಿಶ್ಚಿಯನ್ನರನ್ನು ಮತ್ತು ಯುರೋಪಿಯನ್ನರನ್ನು ಕುರಿತು 'ನಿಮ್ಮವರನ್ನು ನೀವೇ ದೇಶಬಿಟ್ಟು ಓಡಿಸಿದಾಗ ಅಂತಹ ಜನರಿಗೆ ಆಶ್ರಯಕೊಟ್ಟ ದೇಶ ಭಾರತ. ಕತ್ತಿ ಹಿಡಿದು, ರಕ್ತ ಹರಿಸಿ ಎಲ್ಲರನ್ನು ಆಳುವುದನ್ನು ಶ್ರೇಷ್ಠ ಎಂಬುದನ್ನು ಹಿಂದೂ ಆದವನು ಎಂದೂ ಒಪ್ಪುವುದಿಲ್ಲ, ಅದು ಅವನ ಪಾಲಿಗೆ ಧರ್ಮವೇ ಅಲ್ಲ' ಎಂದು ಜಾಡಿಸುತ್ತಿದ್ದರು ಸ್ವಾಮೀಜೀ. ಇದೆಲ್ಲದರ ನಡುವೆ ಸ್ವಾಮೀಜೀಯನ್ನು ಜಗತ್ತು ಹೊಗಳುತ್ತಿದ್ದರೆ ಭಾರತದ್ದೂ ಸೇರಿದಂತೆ ಕೆಲವು ಪತ್ರಿಕೆಗಳು ಅವರನ್ನು ಟೀಕಿಸಲು ಶುರು ಮಾಡಿದವು. ಅವರು ಸನ್ಯಾಸಿಯೇ ಅಲ್ಲ, ಹಿಂದೂಧರ್ಮದ ಕುರಿತಂತೆ ಮಾತಾಡುವ ಅಧಿಕೃತ ವ್ಯಕ್ತಿತ್ವ ಅವರದಲ್ಲ ಎಂದರು. ಭಾರತದ ಹಿಂದೂ ಧರ್ಮದ ಸನ್ಯಾಸಿಯೊಬ್ಬ ಹೊಗಳಿಕೆ ಮತ್ತು ತೆಗಳಿಕೆ ಎರಡಕ್ಕೂ ಆತ ಬೆಲೆಕೊಡುವುದಿಲ್ಲ. ಹೊಗಳಿದಾಗ ಹಿಗ್ಗುವುದು, ತೆಗಳಿದಾಗ ಕುಗ್ಗುವುದು ಆತನ ಸ್ವಭಾವವಲ್ಲ. ಎಲ್ಲವನ್ನು ನಿರ್ಲಿಪ್ತತೆ ಇಂದ ಸ್ವೀಕರಿಸಿ, ತಾನು ಮಾತ್ರ ಅಚಲನಾಗಿ ನಿಲ್ಲುವುದು ಆತನ ಧರ್ಮ. ಅದರಂತೆ ಪತ್ರಿಕೆಗಳ ಹೊಗಳಿಕೆ ಮತ್ತು ತೆಗಳಿಕೆಗೆ ಸ್ವಾಮೀಜಿ ತಲೆಕೆಡಿಸಿಕೊಳ್ಳಲಿಲ್ಲ. ಹಾಗೆಂದು ಸ್ವಾಮೀಜೀ ಭಾರತ ಮತ್ತು ಹಿಂದೂ ಧರ್ಮದ ಬಗ್ಗೆ ಕೆಟ್ಟ ಮಾತಾಡುವವರ ಮುಂದೆ ಸುಮ್ಮನಿರುತ್ತಿರಲಿಲ್ಲ, ತೀಕ್ಷ್ಣವಾಗೆ ಪ್ರತಿಕ್ರಯಿಸುತ್ತಿದ್ದರು. ಸ್ವಾಮೀಜೀ ಧರಿಸುವ ಬಟ್ಟೆಯನ್ನು ನೋಡಿ 'ಈ ಮನುಷ್ಯ ಒಳ್ಳೆಯವನು ಅನ್ನಿಸುವುದಿಲ್ಲ' ಎಂದು ಹೆಣ್ಣುಮಗಳೊಬ್ಬಳು ತನ್ನ ಗಂಡನಿಗೆ ಹೇಳುತ್ತಾಳೆ. ಅದನ್ನು ಕೇಳಿ ಸ್ವಾಮೀಜೀ 'ನಿಮ್ಮ ದೇಶದಲ್ಲಿ ವ್ಯಕ್ತಿಯೊಬ್ಬನನ್ನು ಒಳ್ಳೆಯವನಾಗಿ ಮಾಡುವುದು ಟೈಲರ್. ಭಾರತದಲ್ಲಿ ವ್ಯಕ್ತಿಯ ಚಾರಿತ್ಯ ಅವನನ್ನು ಒಳ್ಳೆಯವನನ್ನಾಗಿ ಮಾಡುತ್ತದೆ' ಎಂದು ಹೇಳುತ್ತಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸ್ವಾಮೀಜೀ ತಮ್ಮ ಕೆಲಸವನ್ನು ಮುಂದುವರೆಸುತ್ತಾರೆ. ಅಮೇರಿಕಾದಲ್ಲಿ ಅವರದೇ ಆದ ಶಿಷ್ಯವೃಂದ ರೂಪುಗೊಳ್ಳುತ್ತದೆ. ಅಲ್ಲೊಂದು ವೇದಾಂತ ಸೊಸೈಟಿ ಸ್ಥಾಪಿತವಾಗಲು ಸ್ವಾಮೀಜೀ ಪ್ರೇರೇಪಿತರಾಗುತ್ತಾರೆ. ಯೂರೋಪಿಗೆ ಬಂದ ಸ್ವಾಮೀಜೀಗೆ ಮಾರ್ಗ್ರೇಟ್ ನೊಬೆಲ್ ಎಂಬ ಶಿಷ್ಯೆ ಭಾರತಕ್ಕೆ ಅಕ್ಕ ನಿವೇದಿತೆಯಾಗಿ ಬರುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಕ್ಕನ ಕೊಡುಗೆ ಅಪಾರ ಮತ್ತು ಐತಿಹಾಸಿಕ.
ಮೊದಲೇ ಹೇಳಿದಂತೆ ಒಳ್ಳೆಯದಕ್ಕಿಂತ ಕೆಟ್ಟದ್ದು ಬೇಗ ಹರಡುತ್ತದೆ. ಕೆಲವು ಪತ್ರಿಕೆಗಳು ಸ್ವಾಮೀಜೀಯನ್ನು, ಹಿಂದೂ ಧರ್ಮವನ್ನು ಅಂದು ತೆಗಳಿದ್ದರು. ಇಂದು ತಾಲಿಬಾನಿಗಳನ್ನು ಒಳ್ಳೆಯವರು ಅನ್ನುತ್ತಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ತಾಲಿಬಾನಿಗಳನ್ನು ಧೀರರು ಎಂದೂ ಮೋದಿ ವಿಚಾರವಾಗಿ ಉಗ್ರವಾದಿಗಳೆಂದು ಬರೆಯುತ್ತದೆ. ಅಮೇರಿಕಾದಲ್ಲಿ ಕಳೆದ ಕೆಲ ದಿನಗಳಿಂದ ದಿನಕ್ಕೆ ಒಂದುವರೆ ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದರ ಬಗ್ಗೆ ಮಾತಾಡದ ಅಮೇರಿಕಾದ ಪತ್ರಿಕೆಗಳು ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಹೆಣಗಳು ಸುಡುತ್ತಿರುವ ಸುದ್ಧಿಯನ್ನು ತನ್ನ ಮುಖಪುಟದಲ್ಲಿ ಪ್ರಕಟಿಸಿತ್ತು. ಆ ಚಿತ್ರಗಳನ್ನು ನಮ್ಮವರೆ ಆನ್ಲೈನ್ನಲ್ಲಿ ಬೇರೆ ದೇಶಕ್ಕೆ ಮಾರಿದ್ದಾರೆ ಎಂಬುದು ವಿಷಾದನೀಯ. ಜಗತ್ತಿಗೆ ಕೊರೋನಾವನ್ನು ರಫ್ತು ಮಾಡಿದ್ದು ಚೀನಾ, ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಕ್ಯಾತೆ ತೆಗೆದಿದ್ದು ಚೀನಾ. ಅವರ ಪರವಾದ ಜಾಹಿರಾತನ್ನು ಒಂದು ಇಡೀ ಪುಟದಲ್ಲಿ ಪ್ರಕಟನೆ ಮಾಡಿತ್ತು 'ದಿ ಹಿಂದೂ' ಎಂಬ ಪತ್ರಿಕೆ. 
  | 
| Hypocrisy of 'The New York Times' | 
ಭಾರತದ ಸಂತನೋರ್ವ ಚಿಕಾಗೋದಲ್ಲಿ ಭಾರತ ಮತ್ತು ಹಿಂದೂ ಧರ್ಮದ ಕುರಿತು ಜಗತ್ತಿಗೆ ಮತ್ತೊಮ್ಮೆ ತಿಳಿಸಿಕೊಟ್ಟ ಭಾಷಣಕ್ಕೆ 128 ವರ್ಷಗಳಾಗಿವೆ. ಇಪ್ಪತ್ತು ವರ್ಷಗಳ ನಂತರ ತಾಲಿಬಾನಿನ ಆಡಳಿತ ಮತ್ತೆ ಬಂದಿದೆ. ತಾಲಿಬಾನ್ ಮತ್ತು ಪಾಕೀಸ್ತಾನದ ಮೂಲಕ ಚೀನಾ ತನ್ನ ಆಟವಾಡಲು ಶುರುಮಾಡಿದೆ. ಜಗತ್ತಿಗೆ ಇದು ನಿಜಕ್ಕೂ ಒಳ್ಳೆಯದಲ್ಲ. ಜಗತ್ತಿಗೆ ಭಾರತ ಮತ್ತು ಹಿಂದೂ ಸಂಸೃತಿ ಪಸರಿಸುವುದು ಒಳಿತು. ಸ್ವಾಮೀ ವಿವೇಕಾನಂದರ ಮಾತುಗಳು ಎಲ್ಲರಿಗೂ ಆದರ್ಶವಾಗಲಿ. ಕರೋನಾದ ಕತ್ತಲೆ ಕಳೆದು ಸದೃಢ ಭಾರತ ನಿರ್ಮಾಣವಾಗಲಿ. ಸೆಪ್ಟಂಬರ್ 11 ಎಂದರೆ ಭಯೊತ್ಪಾದನಾ ಕೃತ್ಯದ ಬದಲು ಸ್ವಾಮೀ ವಿವೇಕಾನಂದರು ನೆನಪಾಗಲಿ.
 
 
ತುಂಬಾ ಚೆನ್ನಾಗಿ ಮೂಡಿಬಂದಿದೆ ಅಣ್ಣ ಅಂಕಣ
ReplyDeleteವಿಶೇಷವಾಗಿ ಪ್ರಸ್ತುತ ಪರಿಸ್ಥಿತಿ ಮತ್ತು ಆಗಿನ ಪರಿಸ್ಥಿತಿಯ ಹೋಲಿಕೆ ಅದ್ಭುತವಾಗಿದೆ
ಪ್ರತಿಕ್ರಿಯೆಗಾಗಿ ಧನ್ಯವಾದಗಳು. ರಾಮ ಇದ್ದ ಕಾಲದಲ್ಲಿ ರಾವಣ ಕೂಡ ಇದ್ದ. ಹಾಗೆ ಅಂದೂ, ಇಂದೂ ಸಹ ತೆಗಳುವವರು ಕಾಲನ್ನು ಎಳೆಯುವವರು ಇದ್ದೇ ಇದ್ದರು. ಅಂದು ತಮ್ಮ ಧರ್ಮವನ್ನು ಪ್ರಚುರಪಡಿಸಲು ಇತರ ಧರ್ಮಗಳನ್ನು ಇಲ್ಲವಾಗಿಸಿದರು ಅದೇ ರೀತಿ ಈಗಲೂ ಸಹ. ಹಣದ ಆಮಿಷ ತೋರಿಸಿ ತಮ್ಮ ತನವನ್ನು ಪ್ರಚಾರ ಮಾಡಿಕೊಳ್ಳುತ್ತಿದೆ ಚೀನಾದಂತಹ ರಾಷ್ಟ್ರಗಳು.
DeleteVery true sir people tend to get attracted towards bad news & believe it, but don't accept truth so easily. I really like the way you narrate the story on any given topic.��
ReplyDeleteThanks for the feedback. Truth is bitter most of the time!
Delete