December 22, 2021

ಅನಂತವನ್ನು ಅರಿತಿದ್ದ ಗಣಿತಜ್ಞ ರಾಮಾನುಜನ್

ಪ್ರಾಚೀನ ಕಾಲದಿಂದಲೂ ಜಗತ್ತಿಗೆ ಅನೇಕ ಭಾರತೀಯರು ಅದ್ಭುತ ಕೊಡುಗೆಗಳನ್ನು ಕೊಟ್ಟಿದ್ದಾರೆ. ಗಣಿತದಲ್ಲಿ ಶೂನ್ಯದ ಕಲ್ಪನೆ ಕೊಟ್ಟಿದ್ದು ಆರ್ಯಭಟ, ಟ್ರಿಗ್ನಾಮಿಟ್ರಿ ಎಂದು ಕರೆಯುವ ತ್ರಿಕೋನಮಿತಿ ಶಾಸ್ತ್ರವನ್ನು ಕೊಟ್ಟಿದ್ದು ಕೇರಳದ ಖಗೋಳಶಾಸ್ತ್ರಜ್ಞ ಮಾಧವ, ಶಸ್ತ್ರಚಿಕಿತ್ಸ ಪಿತಾಮಹ ಎಂದು ಕರೆಯಲ್ಪಡುವ ಸುಶ್ರುತ, ಸೂರ್ಯ ಸಿದ್ಧಾಂತವನ್ನು ಕೊಟ್ಟಿದ್ದು ಬ್ರಹ್ಮರ್ಷಿ ಯಾಜ್ಞವಲ್ಕ್ಯರು, ಪರಮಾಣು ಸಿದ್ಧಾಂತ ಪ್ರಸ್ತುತಪಡಿಸಿದ್ದು ಆಚಾರ್ಯ ಕಣಾದ, ರಸಾಯನ ಶಾಸ್ತ್ರ ಗ್ರಂಥ 'ರಸರತ್ನಾಕರ'ದ ಕರ್ತೃ ಆಚಾರ್ಯ ನಾಗಾರ್ಜುನ. ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೊಡುಗೆಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ. ಹತ್ತೊಂಬತ್ತನೆ ಶತಮಾನದಲ್ಲಿ ಗಣಿತ ಕ್ಷೇತ್ರದಲ್ಲಿ ಭಾರತದ ಕೊಡುಗೆ ಎಂದರೆ ಶ್ರೀನಿವಾಸ ರಾಮಾನುಜನ್.

ರಾಮಾನುಜನ್ ಜನಿಸಿದ್ದು ತಮಿಳುನಾಡಿನ ಈರೋಡಿನಲ್ಲಿ, ಬೆಳದದ್ದು ಕುಂಬಕೋಣಂನಲ್ಲಿ. ಅವರದ್ದು ಬಡತನದ ಕುಟುಂಬ ಮತ್ತು ಅದರೊಟ್ಟಿಗೆ ಬಂದ ಅಸಹಾಯಕತೆ. ಬರೆಯಲು ಹೆಚ್ಚು ಕಾಗದವಿರದ ಕಾರಣ ಒಂದು ಕಾಗದದ ಮೇಲೆ ಬೇರೆ ಬೇರೆ ಬಣ್ಣದ ಲೇಖನಿಗಳಿಂದ ಬರೆಯುವಂತಹ ಪರಿಸ್ಥಿತಿ. ಶಾಲಾ-ಕಾಲೇಜುಗಳಲ್ಲಿ ಓದಬೇಕಾದರೆ ಆಸಕ್ತಿ ಇದ್ದದ್ದು ಗಣಿತದಲ್ಲಿ ಮಾತ್ರ. ಅವರು ಗಣಿತದ ಬಗ್ಗೆ ಅತ್ಯಂತ ಸ್ವಾಮ್ಯಸೂಚಕರಾಗಿದ್ದರು. ಗಣಿತದಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆಯಬೇಕು ಎಂಬ ಯೋಚನೆ ಯಾವಾಗಲೂ ಇತ್ತು. ಪ್ರಾಥಮಿಕ ಶಾಲೆಯಲ್ಲಿ ಒಮ್ಮೆ ಸಹಪಾಠಿಯೊಬ್ಬನಿಗೆ ಗಣಿತದಲ್ಲಿ ತನಗಿಂತ ಹೆಚ್ಚು ಅಂಕ ಬಂದಿತ್ತು ಎಂಬ ಕಾರಣಕ್ಕೆ ಆತನ ಜೊತೆ ಮಾತು ಬಿಟ್ಟವರು ರಾಮಾನುಜನ್. ಗಣಿತದ ಕುರಿತು ಅವರ ಆಸಕ್ತಿ ದಿನೇ ದಿನೇ ಹೆಚ್ಚಾಗುತ್ತಿತ್ತು. ಹೈಸ್ಕೂಲಿನಲ್ಲಿ ಓದಬೇಕಾದರೆ ಕಾಲೇಜು ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡುತ್ತಿದ್ದರು. ಅಂತರರಾಷ್ಟ್ರೀಯ ಜರ್ನಲ್ಗಳಲ್ಲಿ ಪ್ರಕಟವಾಗುತ್ತಿದ್ದ ಗಣಿತದ ಲೆಕ್ಕಗಳಿಗೆ ಉತ್ತರ ಬರಿಯುತ್ತಿದ್ದರು ರಾಮಾನುಜನ್. ತಮ್ಮ ಹದಿನಾರನೆ ವಯಸ್ಸಿಗೆ ಗಣಿತದ ವಿವಿಧ ಆಯಮಗಳ ಸೂತ್ರಗಳಿದ್ದಂತಹ ಜಾರ್ಜ್ ಕಾರ್ ರವರ ಪುಸ್ತಕವೊಂದು ಸಿಗುತ್ತದೆ. ಆ ಸೂತ್ರಗಳನ್ನು ಬಿಡಿಸುವುದೇ ಅವರ ಕಾಯಕವಾಗುತ್ತದೆ. ಈ ಸೂತ್ರಗಳನ್ನು ಬಿಡಿಸುತ್ತಾ ಹೋದಂತೆಲ್ಲಾ ಅವರಿಗೊಂದಷ್ಟು ಸೂತ್ರಗಳು ಹೊಳೆಯುತ್ತಿತ್ತು. ಅದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದರು. ಯಾವುದೇ ಸಾಕ್ಷ್ಯ ಅಥವಾ ವಿವರಣೆ ಇರದ ಆ ಸೂತ್ರಗಳೇ ಮೂರು ಪುಸ್ತಕದಷ್ಟಾದವು. ರಾಮಾನುಜನ್ನರ ಬದುಕನ್ನು ಬದಲಾಯಿಸಿದ ಪುಸ್ತಕಗಳವು. ಕಾಲೇಜಿನಲ್ಲಂತೂ ಗಣಿತ ಬಿಟ್ಟರೆ ಮಿಕ್ಕ ಎಲ್ಲಾ ವಿಷಯಗಳಲ್ಲಿ ನಪಾಸಾಗಿದ್ದರು. ಬೇರೆ ವಿಚಾರಗಳು ತಿಳಿಯುತ್ತಿರಲಿಲ್ಲ ಎಂದಲ್ಲ. ಆದರೆ, ಅದರ ಕುರಿತು ಆಸಕ್ತಿ ಇರಲಿಲ್ಲ ಅಷ್ಟೇ. ಇದರ ಪರಿಣಾಮ ತನ್ನ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತಹ ಕೆಲಸ ಸಿಗಲಿಲ್ಲ. ಆದರೆ ಇವರ ಗಣಿತ ಜ್ಞಾನವನ್ನು ಗಮನಿಸಿ ನಾರಾಯಣ ಅಯ್ಯರ್ ಎಂಬುವವರು ಮದ್ರಾಸಿನ ಪೋರ್ಟ್ ಟರ್ಸ್ಟಿನಲ್ಲಿ ಸಾಮಾನ್ಯ ಗುಮಾಸ್ತನ ಕೆಲಸ ಕೊಡಿಸುತ್ತಾರೆ. ಅವರ ಇಪ್ಪತ್ತೊಂದನೆ ವಯಸ್ಸಿಗೆ ತಾಯಿಯ ಒತ್ತಾಸೆಯ ಮೇರೆಗೆ ಒಂಬತ್ತು ವರ್ಷದ ಹುಡುಗಿಯೊಂದಿಗೆ ಮದುವೆಯಾಗುತ್ತದೆ.

Ramanujan's House

ಪೋರ್ಟ್ ಟ್ರಸ್ಟಿನ ಅಧಿಕಾರಿ ರಾಮಾನುಜನ್ ಗಣಿತದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಅವರ ವಿಚಾರವನ್ನು ಪತ್ರದಲ್ಲಿ ಬರೆದು ಲಂಡನ್ನಿನ ಗಣಿತಜ್ಞರಿಗೆ ಒಂದಷ್ಟು ಸೂತ್ರಗಳೊಂದಿಗೆ ಕಳಿಸಿ ಕೊಡುತ್ತಾರೆ. ಭಾರತದ ವ್ಯಕ್ತಿಯೊಬ್ಬನ ವಿಚಾರದಲ್ಲಿ ನೋಡುವುದಕ್ಕೇನಿದೆ ಎಂದು ಅನೇಕರು ತಾತ್ಸಾರ ಮಾಡುತ್ತಾರೆ. ಆದರೆ, ಹಾರ್ಡಿ ಎಂಬ ಗಣಿತಜ್ಞ ರಾಮಾನುಜನ್ನರ ಕೆಲಸವನ್ನು ಗಮನಿಸಿ ಆಶ್ಚರ್ಯ ಚಕಿತರಾಗುತ್ತಾರೆ. ಅವರ ಈ ಸೂತ್ರಗಳನ್ನು ತನ್ನ ಸ್ನೇಹಿತ ಲಿಟಲ್ ವುಡ್ ಅಲ್ಲದೇ ಇತರ ಅನೇಕ ಗಣಿತಜ್ಞರಿಗೆ ತೋರಿಸುತ್ತಾರೆ. ಎಲ್ಲರಿಂದಲೂ ಮೆಚ್ಚುಗೆಯ ಮಾತು ವ್ಯಕ್ತವಾಗುತ್ತದೆ. ಈ ಕಾರಣದಿಂದಾಗಿ ರಾಮಾನುಜನ್ನರನ್ನು ಲಂಡನ್ಗೆ ಆಹ್ವಾನಿಸುತ್ತಾರೆ. ಜಾತಿಯ ಸಂಕೋಲೆಯಿಂದ ಬಂಧಿತರಾಗಿದ್ದ ಭಾರತೀಯರು ಸಾಗರವನ್ನು ದಾಟಬಾರದು ಎಂದು ನಿಶ್ಚಯಿಸಿದ್ದರು. ಅದರ ಪ್ರಕಾರ ರಾಮಾನುಜನ್ ಹಾರ್ಡಿಯ ಆಹ್ವಾನವನ್ನು ನಿರಾಕರಿಸುತ್ತಾ ತನ್ನ ಬಗ್ಗೆ ಮೆಚ್ಚುಗೆಯ ಮಾತಾಡಿ ಒಂದು ಪತ್ರವನ್ನು ಕೊಡಬಹುದ? ಇದರಿಂದ ತನ್ನ ಕೆಲಸಕ್ಕೆ ಅನುಕೂಲವಾಗುತ್ತದೆ ಎಂದು ಉತ್ತರಿಸುತ್ತಾರೆ. ಇದನ್ನು ನೋಡಿ ಬೇಸರಗೊಂಡ ಹಾರ್ಡಿ ಬ್ರಿಟೀಷ್ ಸರ್ಕಾರದ ಮೂಲಕ ಭಾರತದಲ್ಲಿದ್ದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸ್ಥಾನ ಕೊಡಿಸಿ, ಆತನ ಗಣಿತದ ಕೆಲಸಕ್ಕಾಗಿ ತಿಂಗಳಿಗೆ 75 ರೂಪಾಯಿ ಬರುವಂತಹ ವ್ಯವಸ್ಥೆ ಮಾಡುತ್ತಾರೆ. ನಂತರದ ದಿನಗಳಲ್ಲಿ ನೆವಿಲ್ಲೇ ಎಂಬ ಗಣಿತಜ್ಞನನ್ನು ಭಾರತಕ್ಕೆ ಕಳುಹಿಸಿ ರಾಮಾನುಜನ್ನರನ್ನು ಲಂಡನ್ನಿಗೆ ಕರೆಸಿಕೊಳ್ಳುತ್ತಾರೆ. 1913ರಲ್ಲಿ ರಾಮಾನುಜನ್ ಲಂಡನ್ನಿಗೆ ತೆರಳಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. ಅಲ್ಲಿಂದ ಅವರ ಜೀವನದ ಮತ್ತೊಂದು ಅಧ್ಯಾಯ ಪ್ರಾರಂಭವಾಗುತ್ತದೆ.

Mathematician GH Hardy

Ramanujan (centre) at Trinity College

ಲಂಡನ್ನಿಗೆ ಬಂದ ತಕ್ಷಣ ಹಾರ್ಡಿ ರಾಮಾನುಜನ್ ಬರೆದಿಟ್ಟುಕೊಂಡಿದ್ದ ಸೂತ್ರಗಳಿದ್ದ ಪುಸ್ತಕಗಳನ್ನು ತೆಗೆದು ನೋಡುತ್ತಾರೆ. ಅದರಲ್ಲಿದ್ದ ಸೂತ್ರಗಳಾವುವು ಶಾಸ್ತ್ರೀಯ ಪದ್ಧತಿಯಲ್ಲಿರುವುದಿಲ್ಲ ಹಾಗೂ ಕೆಲವು ಸೂತ್ರಗಳು ಸುಮಾರು 50 ವರ್ಷಗಳ ಹಿಂದೆ ಸೃಜನೆಯಾಗಿದ್ದಂತವು. ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಾಮಾನುಜನ್ ಶಾಸ್ತ್ರೀಯ ಪದ್ಧತಿಯಲ್ಲಿ ಗಣಿತವನ್ನು ಅಭ್ಯಾಸ ಮಾಡುತ್ತಾ ತಮ್ಮ ಗಣಿತದ ಮೇಲಿನ ಕೆಲಸಗಳನ್ನು ಮುಂದುವರೆಸುತ್ತಾರೆ. ಇವರ ಪುಸ್ತಕವೊಂದನ್ನು ಹಾರ್ಡಿ ಹಂಗೇರಿಯ ಗಣಿತಜ್ಞ ಜಾರ್ಜ್ ಪೋಲಿಯಾಗೆ ಕೊಡುತ್ತಾರೆ. ಆತ ಅದನ್ನು ನೋಡಿ ಈ ಫಾರ್ಮುಲಾಗಳ ಜಾಲದಲ್ಲಿ ಸಿಕ್ಕಿಹಾಕಿಕೊಂಡರೆ ನನ್ನ ಜೀವಮಾನದಲ್ಲಿ ಹೊರಬರಲು ಸಾಧ್ಯವಿಲ್ಲ ಎಂಬಂತಹ ಅದ್ಭುತ ಮಾತುಗಳನ್ನಾಡುತ್ತಾ ಪುಸ್ತಕವನ್ನು ಹಿಂದಿರುಗಿಸುತ್ತಾರೆ. ಮಹಲನೋಬಿಸ್ ಒಮ್ಮೆ ಭೇಟಿಯಾಗಿ ಜರ್ನಲ್ ಒಂದರಲ್ಲಿ ಕೊಟ್ಟಿದ್ದಂತಹ ಸಮಸ್ಯೆಯನ್ನು ಹೇಳುತ್ತಾರೆ. ತಕ್ಷಣಕ್ಕೆ ರಾಮಾನುಜನ್ ಆ ಸಮಸ್ಯೆಗೆ ಪರಿಹಾರವಾಗಿ ಒಂದು ಸರಣಿಯನ್ನು ಹೇಳಿ, ಈ ಸರಣಿ ಅನೇಕ ಸಮಸ್ಯೆಗಳಿಗೆ ಉತ್ತರ ಕೊಡುತ್ತದೆ ಎಂದು ಹೇಳಿದ್ದರು. ರಾಮಾನುಜನ್ನರಿಗೆ ಸಮಸ್ಯೆಗಳು ನೋಡುತ್ತಿದ್ದಂತೆ ಅದಕ್ಕೆ ಉತ್ತರ ಅವರಿಗೆ ಗೋಚರವಾಗುತ್ತಿತ್ತು. ಅವರನ್ನು ಇನ್ಟ್ಯೂಟೀವ್ ಮ್ಯಾಥೆಮಾಟೀಷಿಯನ್ ಅನ್ನುತ್ತಿದ್ದರು. ಅವರು ಗಣಿತವನ್ನು ಮಾಡುತ್ತಿದ್ದ ರೀತಿಯೇ ಬೇರೆ, ಶಾಸ್ತ್ರೀಯ ಪದ್ಧತಿ ಅಲ್ಲವೇ ಅಲ್ಲ. 1916ನೇ ಇಸವಿಯಲ್ಲಿ ರಾಮಾನುಜನ್ ಗಣಿತದ ಮೇಲೆ ಬರೆದ ಮಹಾಪ್ರಭಂದಕ್ಕೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಬಿ.ಏ. ಪದವಿಯನ್ನು ನೀಡುತ್ತದೆ. ಇದು ಬಹುಶಃ ರಾಮಾನುಜನ್ ಬದುಕಲ್ಲಿ ಕಂಡಂತಹ ಮೊದಲ ಜಯ.

Ramanujan's Three Notebooks

ನಂತರದ ದಿನಗಳಲ್ಲಿ ಅವರ ಆರೋಗ್ಯ ಹಾಳಾಗಲು ಪ್ರಾರಂಭವಾಗುತ್ತದೆ. ಕಠಿಣವಾದ ಸಸ್ಯಹಾರಿಯಾಗಿದ್ದ ಅವರು ಕೆಲಸ ಮಾಡಬೇಕಾದರೆ ತರಕಾರಿಯನ್ನು ಟಿನ್ಗಳಲ್ಲಿ ಇಟ್ಟು ಬೇಯಿಸಿ ತಿನ್ನುತ್ತಿದ್ದರು. ಈ ಕಾರಣದಿಂದಾಗಿ ಅವರ ಆರೋಗ್ಯ ಹಾಳಾಗಿರಬಹುದು ಎಂದು ವೈದ್ಯರ ಅಭಿಪ್ರಾಯ. ಅದೊಂದು ದಿನ ಹಾರ್ಡಿ ರಾಮಾನುಜನ್ನರ ಮನೆಗೆ ಬಂದು 'ಇಂದು ಗಣಿತಜ್ಞನೊಬ್ಬನಿಗೆ ಬೇಸರದ ದಿನ. ಇಂದು ಟ್ಯಾಕ್ಸಿಯೊಂದರಲ್ಲಿ ಬಂದೆ, ಆ ಗಾಡಿಯ ಸಂಖ್ಯೆ 1729 ಆಗಿತ್ತು ಆದರೆ, ಈ ಸಂಖ್ಯೆಯಲ್ಲಿ ಏನು ವಿಶೇಷತೆ ನನಗೆ ಕಾಣಿಸಲಿಲ್ಲ' ಎಂದು ಹೇಳುತ್ತಾರೆ. ಬಹುಶಃ ಒಂದು ನಿಮಿಷ ಆಗಿರಬಹುದು ನಂತರ ರಾಮಾನುಜನ್ 'ಈ ಸಂಖ್ಯೆ ಕೂಡ ವಿಶೇಷವಾದದ್ದೆ. ಎರಡು ವಿಭಿನ್ನ ಜೋಡಿ ಸಂಖ್ಯೆಗಳ ಘನಗಳನ್ನು ಕೂಡಿಸಿದಾಗ ವ್ಯಕ್ತವಾಗುವ ಅತ್ಯಂತ ಕಿರಿಯ ಸಂಖ್ಯೆ 1729!' ಎಂದು ಸಹಜವಾಗಿ ವಿವರಿಸುತ್ತಾರೆ. ಇದನ್ನು ಕೇಳಿದ ಹಾರ್ಡಿ ಗಾಬರಿಯಾಗಿ 'ನೀನೊಬ್ಬ ಅಸಾಧಾರಣವಾದ ಗಣಿತಜ್ಞ' ಎಂದು ಹೊಗಳುತ್ತಾರೆ. ಹಾರ್ಡಿಯ ಕಾರಣದಿಂದಾಗಿ ತಮ್ಮ 29ನೇ ವಯಸ್ಸಿಗೆ ರಾಮಾನುಜನ್ನರು ರಾಯಲ್ ಸೊಸೈಟಿಯ ಸದಸ್ಯರಾಗುತ್ತಾರೆ. ಇದು ಆವರ ಜೀವಮಾನದ ಬಹುದೊಡ್ಡ ಗೌರವ ಮತ್ತು ಸಾಧನೆ ಎಂದು ಭಾವಿಸಿದ್ದರು. ಆರೋಗ್ಯ ಹದಗೆಟ್ಟಿದ್ದ ಕಾರಣ ಅವರು ಭಾರತಕ್ಕೆ ಹಿಂತಿರುಗುತ್ತಾರೆ. ತನ್ನ ಮನೆಯವರೊಂದಿಗೆ ಕೆಲ ದಿನಗಳು ಕಳೆಯುವ ಅವಕಾಶವಾಗುತ್ತದೆ. ಅನಾರೋಗ್ಯ ಮತ್ತು ಮನೆಯಲ್ಲಿ ನೆಮ್ಮದಿ ಇಲ್ಲದ ಕಾರಣ ತಮ್ಮ 32ನೇ ವಯಸ್ಸಿಗೆ ತೀರಿಕೊಳ್ಳುತ್ತಾರೆ.

ರಾಮಾನುಜನ್ ಸ್ವಭಾವತಃ ತುಸು ಮುಂಗೋಪಿ ಮತ್ತು ವ್ಯಗ್ರವಾಗಿ ನಡೆದುಕೊಳ್ಳುತ್ತಿದ್ದರು. ಬಹುಶಃ ತನ್ನನ್ನು ಯಾರು ಅರ್ಥ ಮಾಡಿಕೊಳ್ಳದಿದ್ದಾಗ, ತನಗೆ ಆಸಕ್ತಿ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಸಾಧಿಸಲು ಸಾಧ್ಯವಾಗದಿದ್ದಾಗ ಹತಾಶೆಯ ಭಾವಕ್ಕೆ ಒಳಗಾಗಿ ಮುಂಗೋಪಿಯಾಗೋದು ಸಹಜ ಎಂದು ತೋರುತ್ತದೆ. ಇದೇ ರಾಮಾನುಜರನ್ನು ಕಾಡಿದ್ದು. ತನ್ನ ಗಣಿತದ ಸಾಮರ್ಥ್ಯವನ್ನು ಮನೆಯವರಾರು ಅರ್ಥೈಸಿಕೊಳ್ಳಲಿಲ್ಲ, ಸುತ್ತಾಮುತ್ತಲಿನ ಜನರೂ ಅರ್ಥ ಮಾಡಿಕೊಳ್ಳಲಿಲ್ಲ, ಕಾಲೇಜಿನಲ್ಲಿ ನಪಾಸಾಗಿದ್ದರು, ತಮ್ಮ ಯವ್ವನದ ಕಾಲದಲ್ಲಿ ಸರಿಯಾದ ಕೆಲಸವಿರಲಿಲ್ಲ, ಮನೆಯಲ್ಲಿ ಅತ್ತೆ ಸೊಸೆಯ ಜಗಳದ ಕಾರಣ ನೆಮ್ಮದಿ ಸಿಗಲಿಲ್ಲ, ವಿದೇಶದಲ್ಲಿ ಒಂಟಿತನ ಕಾಡಿತು. ಈ ಕಾರಣದಿಂದಾಗಿ ಅವರ ಸ್ವಭಾವ ವ್ಯಗ್ರವಾಗಿತ್ತು ಅನ್ನಬಹುದು. ಇಷ್ಟೆಲ್ಲಾ ಇದ್ದರೂ ಅವರು ತೀರಿಕೊಳ್ಳುವ ಕೆಲವು ತಿಂಗಳುಗಳ ಮುನ್ನ 'ಮಾಕ್ ಥೀಟಾ' ಕುರಿತು 650 ಸೂತ್ರಗಳನ್ನು ಹಾಸಿಗೆಯ ಮೇಲೆ ಮಲಗಿಕೊಂಡೆ ಬರೆಯುತ್ತಾರೆ. ಆ ಸೂತ್ರಗಳನ್ನು ಗಣಿತ ಲೋಕದಲ್ಲಿನ ಶ್ರೇಷ್ಠ ಕೊಡುಗೆ ಮತ್ತು ಅದನ್ನು ಬಿಡಿಸಲು ಜಗತ್ತು 60-70 ವರ್ಷಗಳಾದ ಮೇಲೂ ಕಷ್ಟ ಪಡುತ್ತಿತ್ತು. ಅನಂತವನ್ನು ಅರಿತಿದ್ದ ಅದ್ಭುತ ಚೇತನ ರಾಮಾನುಜನ್. ಡಿಸೆಂಬರ್ 22 ಅವರ ಜನ್ಮದಿನ. ಭಾರತ ಅವರ ಜನ್ಮದಿನವನ್ನು 'ರಾಷ್ಟ್ರೀಯ ಗಣಿತ ದಿನ' ಎಂದು ಆಚರಿಸಿ ಗೌರವಿಸುತ್ತದೆ.

***********************************

Picture Source:
Color Library Blogspot
 

Srinivas Ramanujan's Biography:
The Man Who Knew Infinity - Robert Kanigel

The Biography

December 14, 2021

ಕಟ್ಟುವ ಹೊತ್ತಲ್ಲಿ ಯಜಮಾನನನ್ನು ಕಳೆದುಕೊಂಡ ಭಾರತದ ಸೈನ್ಯ!

ನಿಜಕ್ಕೂ ಇದು ದುಃಖಕರವಾದ ಸನ್ನಿವೇಶವೇ ಸರಿ. ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಮತ್ತು 11 ಜನ ಸೈನಿಕರು ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಹುತಾತ್ಮರಾಗಿದ್ದಾರೆ. ಮನೆ ಕಟ್ಟುವ ಸಂದರ್ಭದಲ್ಲಿ ಮನೆಯೊಡೆಯ ತೀರಿಕೊಂಡಂತಹ ಸ್ಥಿತಿ ಭಾರತದ ಸೈನ್ಯದ್ದು. ಡಿಸೆಂಬರ್ 6 ರಂದು ರಷ್ಯಾದ ಅಧ್ಯಕ್ಷ ಭಾರತಕ್ಕೆ ಬಂದು ಪ್ರಧಾನಿ ಮೋದಿಯ ಜೊತೆ ಅನೇಕ ವಿಚಾರಗಳನ್ನು ಚರ್ಚಿಸಿ ಹೋಗಿದ್ದಾರೆ. ಭಾರತ ಮತ್ತು ರಷ್ಯಾದ ಈ ಭೇಟಿಯನ್ನು ಸೂಕ್ಷ್ಮವಾಗಿ ಮತ್ತು ಕುತೂಹಲದಿಂದ ಗಮನಿಸಿದ್ದು ಅಮೇರಿಕಾ ಮತ್ತು ಚೀನಾ. ರಷ್ಯಾ ಜೊತೆಗಿನ ಭೇಟಿಗೂ, ಇಲ್ಲಿ ನಡೆದ ವೈಮಾನಿಕ ಅಪಘಾತಕ್ಕೂ ಸಂಬಂಧ ಇದೆಯಾ? ಇಲ್ಲ ಎಂದನ್ನಿಸಿದರೂ ಇಲ್ಲವೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೌದು, ಹೀಗೆ ಹೇಳಲು ಕಾರಣವಿದೆ. ಇತಿಹಾಸ ಇದಕ್ಕೆ ಪೂರಕ.

Chief of Defense Staff General Bipin Rawat

ನೆಹರೂ ತೀರಿಕೊಂಡ ನಂತರ ಲಾಲ್ ಬಹದ್ದೂರ್ ಶಾಸ್ತ್ರಿಗಳು ಪ್ರಧಾನಿಯಾದರು. ಚೀನಾ ವಿರುದ್ಧ ಸೋತು, ನೆಹರುವನ್ನು ಕಳೆದುಕೊಂಡಿದ್ದ ಭಾರತವನ್ನು ಸುಲಭವಾಗಿ ಮಣಿಸಬಹುದು ಎಂಬುದು ಪಾಕೀಸ್ತಾನದ ಲೆಕ್ಕಾಚಾರ. ಅಮೇರಿಕಾ ಕೊಟ್ಟಿದ್ದ ಪೆಟನ್ ಟ್ಯಾಂಕ್ಗಳನ್ನು ಬಳಸಿ ಭಾರತವನ್ನು ಸೋಲಿಸುವ ಉತ್ಸಾಹದಲ್ಲಿತ್ತು. ಆದರೆ, ಯಾರೂ ಊಹಿಸದ ರೀತಿಯಲ್ಲಿ ಶಾಸ್ತ್ರಿ ನಿರ್ಧಾರ ತೆಗೆದುಕೊಂಡಿದ್ದರು. ಲಾಹೋರಿನವರೆಗೂ ಸೈನ್ಯವನ್ನು ನುಗ್ಗಿಸಿದರು. ಅಮೇರಿಕಾಕ್ಕಾಗಲಿ, ವಿಶ್ವಸಂಸ್ಥೆಗಾಗಲಿ ಹೆದರಲಿಲ್ಲ. ಭಾರತ ಪಾಕೀಸ್ತಾನ ನಡುವೆ ಹತ್ತಿದ್ದ ಈ ಬೆಂಕಿಯನ್ನು ಶಮನ ಮಾಡಲು ರಷ್ಯಾ ಮುಂದೆ ಬಂತು. ತಾಷ್ಕೆಂಟ್ ಒಪ್ಪಂದ ನಡೆಯಿತು. ಪ್ರಧಾನಿ ಶಾಸ್ತ್ರಿ ತೀರಿಕೊಂಡರು. ಅವರ ಮರಣದ ಪ್ರಕರಣ ಈಗಲೂ ನಿಗೂಢ! ತೊಂಬ್ಬತ್ತರ ದಶಕದಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿತ್ತು. ಅಮೇರಿಕಾ ಭಾರತದ ಏಳಿಗೆಯನ್ನು ಸಹಿಸದ ರಾಷ್ಟ್ರವಾಗಿತ್ತು ಮತ್ತು ರಷ್ಯಾದ ವಿರುದ್ಧವಾಗಿತ್ತು. ರಾಕೆಟ್ ಉಡಾವಣೆಗೆ ಬೇಕಾದಂತಹ ಇಂಜಿನ್ ಅನ್ನು ರಷ್ಯಾ ಭಾರತಕ್ಕೆ ಕೊಡಲು ಒಪ್ಪಿ ಮೊದಲನೆ ಹಂತದಲ್ಲಿ ಇಂಜಿನ್ನನ್ನು ರವಾನೆ ಮಾಡಿತ್ತು. ಆಗಲೇ ಇಸ್ರೋದ ವಿಜ್ಞಾನಿ ನಂಬಿ ನಾರಯಣನ್ ಬಂಧನಕ್ಕೆ ಒಳಗಾಗಿದ್ದು. ಅಲ್ಲೊಂದು ಷಢ್ಯಂತ್ರ ನಡೆದಿತ್ತು ಎಂದು ತಿಳಿಯಲು 25 ವರ್ಷಗಳೇ ಬೇಕಾಯಿತು!

ಡಿಸೆಂಬರ್ 6 ರಂದು ಪುತಿನ್-ಮೋದಿ ಭೇಟಿಯಾಯಿತು. ಎರಡೂ ದೇಶಗಳ ನಡುವೆ ಅನೇಕ ಒಪ್ಪಂದಗಳು ನಡೆಯಿತು. ನಾಗಾಲಾಂಡಿನಲ್ಲಿ ನುಸುಳುಕೊರರಿದ್ದಾರೆ ಎಂಬ ಗುಪ್ತಚರ ಮಾಹಿತಿ ಮೇರೆಗೆ, ಆರ್ಮಿ ಚಕ್ಪೋಸ್ಟ್ನಲ್ಲಿ ಟ್ರಕ್ ನಿಲ್ಲದ ಕಾರಣ ಸೈನಿಕರು ಗುಂಡು ಹಾರಿಸಿದ್ದಾರೆ. ಅವರು ಸಾಮಾನ್ಯ ನಾಗರೀಕರು ಎಂದು ನಂತರ ತಿಳಿದಮೇಲೆ ಒಂದಷ್ಟು ಗದ್ದಲವಾಗಿದೆ. ಇದಾದ ಎರಡೇ ದಿನಕ್ಕೆ ಬಿಪಿನ್ ರಾವತ್ ರವರ ಹೆಲಿಕಾಪ್ಟರ್ ಅಪಘಾತಕ್ಕೀಡಾಗುತ್ತದೆ. ನೆನಪಿಡಿ, ಕಳೆದ ವರ್ಷ ಹೆಲಿಕಾಪ್ಟರ್ ಅಪಘಾತದಲ್ಲಿ ಮಿಲಿಟರಿ ಮುಖ್ಯಸ್ಥ ಸೇರಿದಂತೆ 8 ಜನರು ತೈವಾನ್ ಅಲ್ಲಿ ಸಾವನ್ನಪ್ಪಿದ್ದರು. ತೈವಾನಿಗೂ ಚೀನಾಕ್ಕೂ ಸಂಬಂಧ ಕೆಡಲು ಪ್ರಾರಂಭವಾಗಿತ್ತು. ಭಾರತ ಮತ್ತು ರಷ್ಯಾದ ನಡುವೆ ಸಂಬಂಧ ಹೆಚ್ಚಾದಾಗಲೆಲ್ಲ ಭಾರತಕ್ಕೆ ಏನಾದರೂ ಆಘಾತ ಉಂಟಾಗಿದೆ. ಈ ಹಿನ್ನಲೆಯಲ್ಲಿ ಗಮನಿಸಿದಾಗ ಸಣ್ಣದೊಂದು ಅನುಮಾನ ಕಾಡುವುದು ಸಹಜ. ಇದು ನಿಜವೇ ಆಗಿದ್ದರೆ ಆಂತರಿಕ ಶತ್ರುಗಳ ಪಾಲು ಅದರಲ್ಲಿರುವ ಸಾಧ್ಯತೆಗಳು ಇವೆ. ಈ ಅಪಘಾತ ಆಕಸ್ಮಿಕ, ಇದರಲ್ಲಿ ಯಾವುದೇ ಷಢ್ಯಂತ್ರವಿಲ್ಲ ಎಂದಾಗಲಿ ಎಂಬುದೇ ಎಲ್ಲಾ ಭಾರತೀಯರ ಆಶಯ.

ರಾವತ್ ರವರು ದೇಶಭಕ್ತಿಯುಳ್ಳ ಮತ್ತು ಕರುವಾಕ್ಕಾಗಿ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವದವರಾಗಿದ್ದರು. ಭಾರತದ ಮೂರು ಸೈನಿಕದಳಗಳ ನಡುವೆ ಮತ್ತು ಸರ್ಕಾರದ ನಡುವಿನ ಕೊಂಡಿಯಾಗಿದ್ದರು. 2015 ರಲ್ಲಿ ಮಯನ್ಮಾರ್ ಗಡಿಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮೂಲಕ ನಕ್ಸಲರ ಹುಟ್ಟಡಗಿಸುವ ಕಾರ್ಯಾಚರಣೆಯ ಹಿಂದಿದ್ದದ್ದು ರಾವತ್. ಸರ್ಕಾರದಿಂದ ಸೈನ್ಯಕ್ಕೆ ಬೇಕಾದ ಸ್ವಾತಂತ್ರ್ಯ ಸಿಕ್ಕ ನಂತರ ಭಾರತದ ತಂಟೆಗೆ ಬಂದರೆ ಪಾಕೀಸ್ತಾನದ ಗಡಿಯೊಡಳಗೆ ನುಗ್ಗಿ ಹೊಡೆಯುತ್ತೇವೆಂಬ ಸ್ಪಷ್ಟ ಸಂದೇಶ ರಾವತ್ ಶತ್ರುಗಳಿಗೆ ಕೊಟ್ಟಿದ್ದರು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಚೀನಾವನ್ನು ಹಿಮ್ಮೆಟ್ಟಿದ ನಂತರ "ಗಾಲ್ವಾನ್ ನಂತರ ಉತ್ತಮ ತರಬೇತಿಯ ಅಗತ್ಯವಿದೆ ಎಂದು ಚೀನಾ ಅರಿತುಕೊಂಡಿದೆ" ಎಂದು ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದರು. ನಮ್ಮ ಸೈನ್ಯವನ್ನು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಲಾಢ್ಯಗೊಳಿಸಿದ ಕೀರ್ತಿ ರಾವತ್ತರದ್ದೇ. ರಷ್ಯಾದ ಎಸ್-400 ಯುದ್ಧೋಪಕರಣ ಖರೀದಿಯಲ್ಲಿ ಅವರ ಪಾತ್ರವಿತ್ತು. ಶತ್ರು ದೇಶದ ಕ್ಷಿಪಣಿ ದಾಳಿಯನ್ನು ಸಮರ್ಥವಾಗಿ ಎದುರಿಸಲು ಈ ಉಪಕರಣದ ಅವಶ್ಯಕತೆಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ವಾಯುಸೇನೆಗೆ ಅಧುನಿಕ ಯುದ್ಧ ವಿಮಾನದ ಅವಶ್ಯಕತೆ ಮನಗಂಡು ರಫೇಲ್ ಖರೀದಿ ವಿಚಾರದಲ್ಲಿ ತೊಡಗಿದ್ದರು. ದೋಖ್ಲಾಂ ವಿಚಾರದಲ್ಲಿ ಭಾರತ ನೇಪಾಳದ ಪರವಾಗಿ ದನಿ ಎತ್ತಿತ್ತು. ಎಲ್ಲಿ ಸೈನ್ಯ ಜಮಾವಣೆ ಮಾಡಿದರೆ ಸರಿ ಎಂಬುದರ ಅರಿವಿದ್ದದ್ದು ರಾವತ್ ರವರಿಗೆ. ಕಾಶ್ಮಿರದಲ್ಲಿ ಕಲ್ಲು ತೂರುತಿದ್ದವನೊಬ್ಬನನ್ನು ಸೇನಾ ವಾಹನದ ಮುಂಭಾಗಕ್ಕೆ ಕಟ್ಟಿ ಎಳತಂದದ್ದು ನೆನಪಿರಬೇಕಲ್ಲ. ಆ ಸೈನಿಕನ ದಿಟ್ಟತನವನ್ನು ಮೆಚ್ಚಿ ಬಹಿರಂಗವಾಗಿ ಕೊಂಡಾಡಿದ್ದು ಇದೇ ರಾವತ್. ಈ ಮೂಲಕ ಆಂತರಿಕ ಶತ್ರುಗಳು ಮತ್ತು ಎಡಚರರಿಗೆ ಎಚ್ಚರಿಕೆ ನೀಡಿದ್ದರು. ಭಾರತದ ಸೈನ್ಯಕ್ಕೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂತಹ ವಿಷಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ರಾವತ್ ಮುಂದಿದ್ದರು.

ಕೊರೋನಾ ನಂತರ ಮೊದಲ ಬಾರಿಗೆ ವಿದೇಶದ ಅಧ್ಯಕ್ಷರೊಬ್ಬರು ಭಾರತಕ್ಕೆ ಭೇಟಿಕೊಟ್ಟದ್ದು ರಷ್ಯಾದ ಪುತಿನ್. ಕಳೆದ ವಾರ ನಡೆದ ಭೇಟಿಯಲ್ಲಿ ಭಾರತ ಮತ್ತು ರಷ್ಯಾ 28 ಒಪ್ಪಂದಗಳಿಗೆ ಸಹಿ ಹಾಕಿದವು. ಒಂಬತ್ತು ಸರ್ಕಾರಗಳ ನಡುವಿನ ಒಪ್ಪಂದಗಳಾದರೆ ಇತರ 19 ವಾಣಿಜ್ಯ ಒಪ್ಪಂದಗಳಾಗಿವೆ. 2021-2031 ನಡುವಿನ ಮಿಲಿಟರಿ-ತಾಂತ್ರಿಕ ಸಹಕಾರದ ಕಾರ್ಯಕ್ರಮ. ಇದರ ಅಡಿಯಲ್ಲಿ ಅಮೇಥಿಯ ಸ್ಥಾವರದಲ್ಲಿ ಏಕೆ-203 ರೈಫಲ್‌ಗಳನ್ನು ತಯಾರಿಸಲು ಒಪ್ಪಂದ, ಬಾಹ್ಯಾಕಾಶದ ಸಂಶೋಧನೆ ಮತ್ತು ಸಹಕಾರ, ವಿಜ್ಞಾನ,-ತಂತ್ರಜ್ಞಾನ-ನಾವೀನ್ಯತೆ ಕುರಿತು ಎರಡು ದೇಶಗಳ ನಡುವಿನ ಸಹಕಾರಕ್ಕಾಗಿ ಮಾರ್ಗಸೂಚಿ ಕುರಿತ ಒಪ್ಪಂದಗಳು ಎರಡು ಸರ್ಕಾರದ ನಡುವಿನ ಮಾಡಿಕೊಂಡ ಮೂರು ಪ್ರಮುಖ ಒಪ್ಪಂದಗಳು. ಈ ಭೇಟಿಯಿಂದಾಗಿ ಭಾರತ ಮತ್ತು ರಷ್ಯಾ ನಡುವೆ ಕ್ವಾಡ್ ಮತ್ತು ಅಮೇರಿಕಾ ಮತ್ತು ಭಾರತ ನಡುವಿನ ಸಂಬಂಧದ ಕುರಿತು ಇರಬಹುದಾಗಿದ್ದ ತಪ್ಪುಗ್ರಹಿಕೆಗಳು ತಕ್ಕ ಮಟ್ಟಿಗೆ ನಿವಾರಣೆಯಾಗಿರುವುದು ಚೀನಾಕ್ಕೆ ಅಸಹನಿಯವಾದ ವಿಚಾರ.

India Russia signs 28 investment deals

ರಾವತ್ ರವರ ನಿಧನದ ಕುರಿತು ಬ್ರಹ್ಮ ಚೆಲಾನಿಯವರು ಕೆಲವು ಅನುಮಾನಗಳನ್ನು ಟ್ವಿಟ್ಟರಲ್ಲಿ ವ್ಯಕ್ತ ಪಡಿಸಿದರು. ಅವರ ಮಾತನ್ನು ರಷ್ಯಾದ ಎಸ್-400 ಕ್ಷಿಪಣಿ ರವಾನೆ, ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಒಪ್ಪಂದ ಮುಂದುವರೆಯುತ್ತಿರುವುದನ್ನು ಅಮೇರಿಕಾ ಬಲವಾಗಿ ವಿರೋಧಿಸುತ್ತಿದೆ, ಅದು ಕಾರಣ ರಾವತ್ ರವರ ಅಪಘಾತ ಪ್ರಕರಣದಲ್ಲಿ ಅಮೇರಿಕದ ಪಾತ್ರವನ್ನು ಶಂಕಿಸಲಾಗಿದೆ ಎಂದು ಚೀನಾದ ಮುಖವಾಣಿಯಾದ ಗ್ಲೊಬಲ್ ಟೈಮ್ಸ್ ಹೇಳಿತು. ಎಲ್ಲದರಲ್ಲೂ ಕೆಟ್ಟದ್ದು ಕಾಣುವ, ಇತರರ ನಡುವೆ ಹುಳಿಹಿಂಡುವ ಬುದ್ಧಿ ಚೀನಾದ್ದು.

Global Times spin over Gen Bipin Rawat's death

ರಾವತ್ ರವರ ಸಾವನ್ನು ಸಂಭ್ರಮಿಸುವ ಕೆಟ್ಟ ಹುಳಗಳು ಕೆಲವು ಭಾರತದಲ್ಲಿ ಇವೆ. ಅವರನ್ನು ಕಮ್ಯುನಿಷ್ಟರು ಮತ್ತು ದ್ರೋಹಿಗಳು ಎನ್ನಬಹುದು. ಅಂತಹವರಿಗೆ ಶಿಕ್ಷೆ ಕೊಡುವುದಾಗಿ ಸರ್ಕಾರಗಳು ಮುಂದಾಗಿರುವುದು ಸಮಾಧಾನಕರವಾದ ಸಂಗತಿ. ಕೆಲವು ಘಟನೆಗಳು ಹೀಗೆ. ಕೆಟ್ಟದ್ದನ್ನು ಗುರುತಿಸಲು ಸಹಾಯ ಮಾಡುತ್ತದೆ. ಏನೇ ಇರಲಿ, ರಾವತ್ ರವರನ್ನು ಕಳೆದುಕೊಂದದ್ದು ದೇಶಕ್ಕೆ ನಿಜಕ್ಕೂ ನಷ್ಟವಾಗಿದೆ. ಹುತಾತ್ಮರಾದ ರಾವತ್ ಮತ್ತು ಇತರರ ಆತ್ಮಕ್ಕೆ ಸದ್ಗತಿ ದೊರೆಯಲಿ. ಆಸ್ಪತ್ರೆಯಲ್ಲಿರುವ ಗ್ರೂಪ್ ಕಾಪ್ಟನ್ ವರುಣ್ ರವರು ಶೀಘ್ರ ಗುಣಮುಖರಾಗಲಿ ಎಂಬುದು ನಮ್ಮೆಲ್ಲರ ಪ್ರಾರ್ಥನೆ.

Perverted Minds posting derogatory remarks

***********************************

References:

December 1, 2021

ಮತ್ತೊಂದು ಯುದ್ಧಕ್ಕೆ ಭಾರತ ಸಜ್ಜಾಗುತ್ತಿದೆಯಾ?

ಯುದ್ಧವೆಂಬುದು ರಣಾಂಗಣದಲ್ಲಿ ಶಸ್ತ್ರಾಸ್ತಗಳೊಂದಿಗೆ ಮಾಡುವ ಕಾಲ ಈಗ ದೂರವಾಗಿದೆ. ವಿಜ್ಞಾನ ಮುಂದುವರೆದಂತೆಲ್ಲಾ ಯುದ್ಧದ ಸ್ವರೂಪವೂ ಬದಲಾಗಿದೆ. ಸೈನಿಕರು ಮುಖಾಮುಖಿಯಾಗಿ ಪರಸ್ಪರ ಆಯುಧಗಳಿಂದ ಸೆಣಸಾಡುತ್ತಿದ್ದ ಕಾಲವೊಂದಿತ್ತು. ನಂತರ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳು ಉಪಯೋಗಕ್ಕೆ ಬಂದವು. ವಿಶ್ವಯುದ್ಧದ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್ಗಳ ಬಳಕೆ ಶುರುವಾಯಿತು. ಪ್ರತ್ಯಕ್ಷ ಯುದ್ಧಕ್ಕೆ ಮುನ್ನ ಶತ್ರು ರಾಷ್ಟ್ರದ ಮಾನಸಿಕ ಸ್ಥೈರ್ಯವನ್ನು ಕುಸಿಯುವಂತೆ ಮಾಡುವುದು ಯುದ್ಧದ ಒಂದು ತಂತ್ರವೇ. ಇದು ಈ ಕಾಲದ ಯುದ್ಧ ತಂತ್ರ. ಶತ್ರುರಾಷ್ಟ್ರಗಳು ತಮ್ಮ ಸೈನಿಕರ ಮೂಲಕ ನಮ್ಮ ಗಡಿಯಲ್ಲೋ ಅಥವಾ ಗಡಿಯನ್ನು ದಾಟಿ ನಮ್ಮನ್ನು ಎದುರಿಸುವುದಿಲ್ಲ ಬದಲಾಗಿ, ನಮ್ಮ ದೇಶದ ಕೆಲವು ಜನರನ್ನು ನಮ್ಮ ವಿರುದ್ಧವೇ ಆಯುಧಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರ ಮಾತು ಕೇಳುವ ಈ ಗುಂಪು ನಮ್ಮ ನಡುವೆ ಅಶಾಂತಿ, ಅವಿಶ್ವಾಸ, ಅಂತಃಕಲಹಗಳನ್ನು ಸೃಷ್ಟಿಸಿ ದೇಶವನ್ನು ಬಲಹೀನ ಮಾಡುವುದು. ಭಾರತದಲ್ಲಿರುವ ಕಮ್ಯೂನಿಸ್ಟರು, ಮವೋವಾದಿಗಳು ಮಾಡುವ ಕೆಲಸವನ್ನು ಗಮನಿಸಿ. ಕೇಂದ್ರದಲ್ಲಿ ಸ್ಪಷ್ಟ ಬಹುಮತವಿರುವ ಸರ್ಕಾರವಿದ್ದರೂ ಕೃಷಿಕಾಯ್ದೆಯನ್ನು ಹಿಂಪಡೆಯಬೇಕಾಯಿತು. ಗಲ್ವಾನ್ ಕಣಿವೆಯಲ್ಲಿ ನಡೆದದ್ದು ಪ್ರತ್ಯಕ್ಷ ಕದನವಾದರೆ, ತನ್ನ ಮೇಲೆ ಸೈಬರ್ ಅಟ್ಯಾಕ್ ಆಗಿದೆ ಎಂದು ಹೇಳಿಕೊಂಡ ಚೀನಾ ಮಾತು ಸತ್ಯವೇ ಆದರೆ ಅದು ಪರೋಕ್ಷವಾಗಿ ನಡೆಯುವ ಕದನ.

ಕಳೆದ ವರ್ಷ ಸಂಸತ್ತಿನಲ್ಲಿ ಕೃಷಿಕಾಯ್ದೆ ಬಿಲ್ ಪಾಸಾಯಿತು. ಅಧಿವೇಶನದ ಮುನ್ನ ಕೋವಿಡ್ ಪರಿಹಾರಾರ್ಥ 20 ಲಕ್ಷ ಕೋಟಿ ಘೋಷಿಸಿದಾಗಲೇ ಕೃಷಿ ಕಾಯ್ದೆಯ ಬಗ್ಗೆ ಪ್ರಧಾನಿ ಹೇಳಿದ್ದರು. ನೆನಪಿಡಿ, ಕಿಸಾನ್ ಯೂನಿಯನ್ ನಾಯಕ ರಾಕೇಶ್ ತಿಕಾಯತ್ ಈ ಕಾಯ್ದೆಯನ್ನು ಕೂಡ ಸ್ವಾಗತಿಸಿದ್ದ. ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ಶುರುವಾದ ನಂತರ ಮಾತು ಕಥೆಗಾಗಲಿ, ಕಾಯ್ದೆಯಲ್ಲಿನ ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್ ಸಮಿತಿ ರಚಿಸುವ ಪ್ರಸ್ತಾವವನ್ನು ತಿರಸ್ಕರಿಸಿದರು. ಜನವರಿ 26 ರಂದು ಇಡೀ ದೇಶವೇ ತಲೆತಗ್ಗಿಸುವಂತಹ ಪ್ರತಿಭಟನೆ ಮಾಡಿದರು. ಇದಕ್ಕೆ ಕಾಂಗ್ರೇಸ್ ಸೇರಿದಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಟೂಲ್ಕಿಟ್ ಮೂಲಕ ಬೆಂಬಲ ವ್ಯಕ್ತವಾಯಿತು. ಕಾಯ್ದೆಯ ಬಿಲ್ ಪಾಸಾದ ಒಂದು ವರ್ಷವಾದರೂ ಪ್ರತಿಭಟನೆ ನಿಲ್ಲಲಿಲ್ಲ. ಭಾರತದಲ್ಲಿ ಅರಾಜಕತೆ ಸೃಷ್ಟಿಸುವ ಮುನ್ನುಡಿಯಂತಿದ್ದ ಈ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಧಾನಿ ಮೋದಿ ಈ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರ ಮಾಡಿದರು. ಅವರ ಭಾಷಣದಲ್ಲಿ 'ರೈತರಿಗಾಗಿ ಕಾಯ್ದೆಯನ್ನು ತಂದೆ. ದೇಶಕ್ಕಾಗಿ ಈಗ ಹಿಂಪಡೆಯುತ್ತಿದ್ದೇನೆ. ದೇಶದ ಜನರು ನನ್ನನ್ನು ಕ್ಷಮಿಸಬೇಕು' ಎಂದರು. ದೇಶಕ್ಕಾಗಿ ಕಾಯ್ದೆಯನ್ನು ಹಿಂಪಡೆಯುತ್ತಿದ್ದೇನೆ ಎಂಬುದಷ್ಟನ್ನೇ ಮುಂದಿಟ್ಟು ಮೋದಿಯನ್ನು ವಿರೋಧ ಮಾಡಲು ಕಮ್ಯೂನಿಸ್ಟರು ಮರೆಯಲಿಲ್ಲ.

ನಮ್ಮ ನಡುವಿನ ರಾಜಕೀಯದ ನಾಯಕರು ಸಹ ಈ ರೀತಿಯ ಸ್ಥಿತಿಗೆ ಕಾರಣವಾಗಿದ್ದಾರೆ. ಕೃಷಿಕಾಯ್ದೆ ಜಾರಿಗೆ ತಂದ ದಿನದಿಂದ ಈವರೆಗೂ ಭಾಜಾಪದ ಯಾವ ನಾಯಕರೂ ಜನರಿಗೆ ಮತ್ತು ರೈತರಿಗೆ ಈ ಕಾಯ್ದೆಯ ಕುರಿತು ತಿಳಿಸಿಕೊಡಲಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಕಾಯ್ದೆಯ ಬಗೆಗೆ ಕರಪತ್ರಗಳಾಗಲಿ, ಪುಸ್ತಕಗಳಾಗಲಿ ಹೊರತರಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳು ಹೊರಬರಲಿಲ್ಲ. ಟೀವಿ ಡಿಬೇಟ್ಗಳನ್ನು ಗಮನಿಸಿದರೆ ಸ್ಥಳಿಯ ನಾಯಕರಿಗೆ ಕಾಯ್ದೆ ಬಗೆಗಿನ ಸ್ಪಷ್ಟತೆ ಇದ್ದದ್ದೇ ಅನುಮಾನ. ಇದಕ್ಕೆ ತದ್ವಿರುದ್ಧ ವಿರೋಧ ಪಕ್ಷ ಮತ್ತು ಕಮ್ಯೂನಿಸ್ಟರ ನಡೆ. ಮೊದಲಿಂದಲೂ ಕಾಯ್ದೆ ಅರ್ಥವಾಗದಿದ್ದರೂ ಅದರ ವಿರುದ್ಧ ಮಾತುಗಳು, ಲೇಖನಗಳು, ಜಾಲತಾಣಗಳಲ್ಲಿನ ಪೋಸ್ಟ್ಗಳು ಸದಾ ಇರುವಂತೆ ನೋಡಿಕೊಂಡರು. ಕೇಂದ್ರ ಸರ್ಕಾರ ನವೆಂಬರ್ 29 ರಂದು ಅಧಿಕೃತವಾಗಿ ಕಾಯ್ದೆಯನ್ನು ಹಿಂಪಡೆಯಿತು. ಇಷ್ಟಾದರೂ ಖಾಲಿಸ್ತಾನಿ ಪ್ರೇರೇಪಿತ ಸೋಕಾಲ್ಡ್ ನಾಯಕರು ಪ್ರತಿಭಟನೆ ಮುಂದುವರೆಸುವ ಸೂಚನೆ ಕೊಟ್ಟಿದ್ದಾರೆ. ಡಿಬೇಟ್ ಮಾಡದೇ ಕಾಯ್ದೆಯನ್ನು ಹಿಂಪಡೆದಿದ್ದಾರೆ ಎಂದು ವಿರೋಧ ಪಕ್ಷದವರು ಆರೋಪ ಮಾಡುತ್ತಿದ್ದಾರೆ. ಏನಾದರೂ ಸರಿ ಮೋದಿಯನ್ನು ವಿರೋಧ ಮಾಡಬೇಕು, ಅರಾಜಕತೆ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಷ್ಟೇ ಇವರ ಉದ್ದೇಶ.

ಗಡಿಭಾಗದಲ್ಲಿ ನಮ್ಮ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಯುತ್ತಿದ್ದರೂ ಭಾರತದ ಪತ್ರಿಕೆಗಳಲ್ಲಿ ತಮ್ಮ ಪರವಾಗಿನ ಸಕಾರಾತ್ಮಕ ಸುದ್ಧಿಯನ್ನು ಪ್ರಕಟ ಮಾಡಿಸುವಲ್ಲಿ ಚೀನಾ ಯಶಸ್ವಿಯಾಗಿದೆ. ಭಾರತದ ಪತ್ರಿಕೋದ್ಯಮದಲ್ಲಿ ಮತ್ತು ವಾರ್ತಾವಾಹಿನಿಗಳ ಮೇಲೆ ನೀತಿಸಂಹಿತೆ ಮತ್ತು ಸ್ವಯಂ-ನಿಯಂತ್ರಣ ಕಾರ್ಯವಿಧಾನಗಳ ಸ್ಪಷ್ಟತೆಯ ಕೊರತೆ ಎದ್ದು ಕಾಣುತ್ತಿದೆ. 'ದಿ ಹಿಂದೂ' ಪತ್ರಿಕೆ ಕಳೆದ ವರ್ಷ ಪುಟಗಟ್ಟಲೆ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸಿತ್ತು. ನವೆಂಬರ್ 26 ರಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್‌' ನಾಲ್ಕು ಪುಟಗಳಗಳಲ್ಲಿ ಚೀನಾದ ಮಾಧ್ಯಮ ಸಂಬಂಧಿತ ವಿಚಾರವನ್ನು ಪ್ರಕಟಿಸಿದೆ.

chinese ad in 'The Indian Express'

ಚಾರ್‌ಧಾಮ್‌ ರಾಷ್ಟ್ರೀಯ ಹೆದ್ದಾರಿ ಯೋಜನೆಯು ಉತ್ತರಾಖ೦ಡ್‌ ರಾಜ್ಯದ ನಾಲ್ಕು ಪವಿತ್ರ ಸ್ಥಳಗಳಾದ ಬದರಿನಾಥ, ಕೇದಾರನಾಥ, ಗ೦ಗೋತ್ರಿ ಮತ್ತು ಯಮುನೋತ್ರಿಯನ್ನು ಸ೦ಪರ್ಕಿಸುವ ಎಕ್ಸ್‌ಪ್ರೆಸ್‌ ರಾಷ್ಟ್ರೀಯ ಹೆದ್ದಾರಿಯಾಗಿದೆ. ಚೀನಾದ ಗಡಿಯ ತನಕ ಅಗಲವಾದ ರಸ್ತೆಯ ಅಗತ್ಯವಿದೆ ಎ೦ದು ಸರ್ಕಾರ ಹೇಳುತ್ತದೆ ಮತ್ತದು ವಾಸ್ತವ ಕೂಡ. ಆದರೆ, ಈ ಯೋಜನೆಯನ್ನು ವಿರೋಧಿಸಿ ದಿ ಹಿ೦ದೂ, ದಿ ವೈರ್‌, ಎನ್‌ಡಿಟೀವಿ ಮು೦ತಾದ ಎಡಚರ ಪತ್ರಿಕೆಗಳು ಲೇಖನಗಳನ್ನು ಕಳೆದ ವರ್ಷದಿ೦ದ ಬರೆಯುತ್ತಲೇ ಇದೆ. ಹಣಕ್ಕಾಗಿ ಚೀನಾ ಪರವಾದ ಜಾಹಿರಾತನ್ನು ಪ್ರಕಟಿಸುವ ಪತ್ರಿಕೆಗಳು ಭಾರತದ ಪರವಾದ ಯೋಜನೆಯ ವಿರುದ್ಧ ಬರೆಯುವುದರಲ್ಲಿ ಅಚ್ಚರಿ ಇಲ್ಲ. ಡೀಮಾನಿಟೈಸೇಷನ್ ನಂತರ ನಕ್ಸಲರ ಆಟಾಟೋಪ ಅಡಗಿತ್ತು ಆದರೆ, ಈಗ ಮತ್ತೆ ಅದು ಶುರುವಾದಂತಿದೆ. ನವೆಂಬರಲ್ಲಿ ನಕ್ಸಲರು ಮನೆಯೊಂದನ್ನು ಸ್ಫೋಟಿಸಿ ನಾಲ್ಕು ಜನರನ್ನು ಕೊಂದಿದ್ದಾರೆ. ಇದೇ ವರ್ಷ ಏಪ್ರಿಲ್ ಅಲ್ಲಿ ಛತ್ತೀಸ್ಗಢದಲ್ಲಿ 22 ಭದ್ರತಾ ಸಿಬ್ಬಂದಿಗಳನ್ನು ನಕ್ಸಲರನ್ನು ಕೊಂದರು. ಇದಕ್ಕೆ ಪ್ರತಿದಾಳಿಯಾಗಿ ಗಡ್ಚಿರೋಲಿಯಲ್ಲಿ ಪೋಲೀಸರು ಎನ್‌ಕೌಂಟರ್‌ನಲ್ಲಿ 26 ನಕ್ಸಲರನ್ನು ಕೊಂದು ಬಿಸಾಡಿದ್ದಾರೆ.

Indian newspapers writing against The Char Dham Road Project

ಇದೆಲ್ಲಾ ಆಂತರಿಕ ವಿಚಾರವಾದರೆ ಜಾಗತೀಕ ಮಟ್ಟದಲ್ಲಿ ಚೀನಾ ತನ್ನದೇ ಆದ ತಯಾರಿ ಮಾಡಿಕೊಳ್ಳುತ್ತಿದೆ. ಒಂದೆಡೆ ತೈವಾನ್ ಮತ್ತೊಂದು ಕಡೆ ಭಾರತ ವಿರುದ್ಧ ಯುದ್ಧದ ತಯಾರಿಯಲ್ಲಿದೆ. ಮಧ್ಯ ಮತ್ತು ಪಶ್ಚಿಮದ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯನ್ನರಿಗೆ ಸೈನಿಕ ತರಬೇತಿ ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಪಾಕೀಸ್ತಾನಕ್ಕೆ ಸಾಲ ಕೊಟ್ಟಿದ್ದರೂ ಯುದ್ಧನೌಕೆಯನ್ನು ಕೊಟ್ಟು ಅವರ ಮೂಲಕ ಭಾರತವನ್ನು ಕಟ್ಟಿಹಾಕುವ ಹಳೆಯ ಚಾಳಿಯನ್ನು ಮುಂದುವರೆಸುತ್ತಿದೆ. ಒಂದೆಡೆ ಚೀನಾ ಮತ್ತೊಂದು ಕಡೆ ಪಾಕೀಸ್ತಾನ ದೇಶಕ್ಕೆ ಶತ್ರುವಾಗಿ ನಿಂತಿದೆ. ಮಯನ್ಮಾರ್ ಮೂಲಕ ನಕ್ಸಲರು ನುಸುಳುತ್ತಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನವನ್ನು ಮರೆಯುವಂತಿಲ್ಲ. ತಾಲಿಬಾನ್ ಭಯೋತ್ಪಾದಕ ಸಂಘಟನೆ ಎಂಬುದಂತು ಸತ್ಯ. ಈಗ ಅಲ್ಲಿ ಶುರುವಾಗಿರುವುದು ಮಾದಕವಸ್ತುವಿನ ಭಯೋತ್ಪಾದನೆ. ಅಫ್ಘಾನಿಸ್ತಾನ ತನ್ನ ಮೆಥಾಂಫೆಟಮೈನ್ ಉತ್ಪಾದನೆಯನ್ನು ತೀವ್ರವಾಗಿ ಹೆಚ್ಚುಮಾಡಿದೆ. ವಾಸ್ತವವಾಗಿ ಮೆಥ್ ಹೆರಾಯಿನ್ ಗಿಂತ ಹೆಚ್ಚಿನ ಲಾಭ ನೀಡುತ್ತದೆ. ತಾಲಿಬಾನ್ ಮಾದಕವಸ್ತುಗಳಿಂದ ಬರುವಂತಹ ಆದಾಯವನ್ನು ಸಾಧ್ಯವಾದಷ್ಟು ವೃದ್ಧಿಸಿಕೊಳ್ಳಲು ಆಶಿಸುತ್ತಿದೆ. ಅಫ್ಘಾನಿಸ್ತಾನದ ಸ್ವಾಧೀನದ ನಂತರ, ಅಫೀಮಿನ ಬೆಲೆ 3 ಪಟ್ಟು ಹೆಚ್ಚಿದೆ. ಅಫೀಮು ಕೃಷಿಯಡಿಯಲ್ಲಿ ಜಾಗತಿಕ ವಿಸ್ತೀರ್ಣದಲ್ಲಿ ಅಫ್ಘಾನಿಸ್ತಾನವು 85% ರಷ್ಟು ಭಾಗವನ್ನು ಹೊಂದಿದೆ. ತಾಲಿಬಾನ್ ವಿಶ್ವದ ಅತಿದೊಡ್ಡ ಮಾದಕವಸ್ತುವಿನ ಒಕ್ಕೂಟ ಆಗಿದೆ! ಈ ಮಾದಕ ವಸ್ತುಗಳನ್ನು ಸಾಗಿಸಲು ತಾಲಿಬಾನ್ ಅನೇಕ ಕಳ್ಳಸಾಗಣೆ ಮಾರ್ಗಗಳನ್ನು ಕಂಡುಕೊಂಡಿದೆ. ತಾಲಿಬಾನ್ ಅಲ್ಲದೆ ಬೋಕೋ ಹರಾಮ್, ಅಲ್-ಶಬಾಬ್ ಮತ್ತು ಅಲ್-ಖೈದಾ ಕೂಡ ಈ ಕಳ್ಳಸಾಗಣಿಕೆಯಲ್ಲಿ ತೊಡಗಿಸಿಕೊಂಡಿದೆ. ಪಶ್ಚಿಮ ಯೂರೋಪ್, ರಷ್ಯಾ ಮತ್ತು ಭಾರತಕ್ಕೆ ಮಾದಕವಸ್ತುವನ್ನು ತಲುಪಿಸಲು ತಯಾರಿ ಮಾಡಿಕೊಂಡಿದೆ, ತನ್ಮೂಲಕ ಭಾರತವನ್ನು ಆಂತರಿಕವಾಗಿ ಬಲಹೀನ ಮಾಡುವ ತಂತ್ರ ಇದಾಗಿದೆ.

ದೇಶದ ಹೊರಗೆ ಮತ್ತು ಒಳಗೆ ಇಷ್ಟೆಲ್ಲಾ ನಡೆಯುತ್ತಿದ್ದು, ಭಾರತ ಅದಕ್ಕೆ ತಕ್ಕಂತೆ ತಯಾರಿ ಮಾಡಿಕೊಳ್ಳುತ್ತಿದೆ. ಕಳೆದ ಎರಡು ತಿಂಗಳಲ್ಲಿ ರಕ್ಷಣಾ ಇಲಾಖೆಯಲ್ಲಿ ನಡೆದಿರುವ ಬೆಳವಣಿಗೆ ಗಮನಾರ್ಹವಾದದ್ದು. ಕಳೆದ ವಾರ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಸಶಸ್ತ್ರ ಪಡೆಗಳ ಸೇವಾ ಮುಖ್ಯಸ್ಥರಿಗೆ ದೇಶೀಯವಾಗಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಉಪಕರಣಗಳನ್ನು ಹಸ್ತಾಂತರಿಸಿದರು. ಹೆ‍ಚ್ಏಎಲ್ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಲೈಟ್ ಕಾಂಬಾಟ್ ಹೆಲಿಕಾಪ್ಟರ್ ಅನ್ನು ವಾಯುಪಡೆಗೆ, ಭಾರತೀಯ ಸ್ಟಾರ್ಟಪ್ಗಳು ವಿನ್ಯಾಸಗೊಳಿಸಿದ ಡ್ರೋನ್ಗಳನ್ನು ಆರ್ಮಿ ಮುಖ್ಯಸ್ಥರಿಗೆ, ಡಿ.ಅರ್.ಡಿ.ಓ ವಿನ್ಯಾಸ ಮಾಡಿದ, ಬಿಇಎಲ್ ನಿರ್ಮಿಸಿದ ಆತ್ಯಾಧುನಿಕ ಎಲೆಕ್ಟ್ರಾನಿಕ್ ವಾರ್ಫೇರ್ ಸೂಟ್ ಅನ್ನು ನೌಕಾಪಡೆಯ ಮುಖ್ಯಸ್ಥರಿಗೆ ಹಸ್ತಾಂತರಿಸಿದ್ದಾರೆ. ರಕ್ಷಣಾ ವಿಭಾಗದಲ್ಲಿ ಭಾರತ ಆತ್ಮನಿರ್ಭರವಾಗುವುದು ಆರ್ಥಿಕ ಸದೃಢತೆಯ ಸಂಕೇತ. ಕಳೆದ ತಿಂಗಳು ಅಗ್ನಿ-5 ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಚೀನಾಕ್ಕೆ ಎಚ್ಚರಿಕೆಯ ಸಂದೇಶ ನೀಡಿದೆ. ಭಾರತದ ರಕ್ಷಣೆಯ ದೃಷ್ಟಿಯಿಂದ ಕೃಷಿಕಾಯ್ದೆ ಹಿಂಪಡೆದಿದ್ದಾರೆ. ಅಜಿತ್ ದೋವಲ್ 'ಹೊಸಬಗೆಯ ಯುದ್ಧನೀತಿಯನ್ನು ಗಮನಿಸಿ ಭಾರತವನ್ನು ರಕ್ಷಣೆ ಮಾಡುವುದು ನಿಮ್ಮ ಹೊಣೆ' ಎಂದು ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸುತ್ತಾ ಹೇಳಿದ್ದರು. ಸೈನಿಕರಷ್ಟೇ ಅಲ್ಲ, ವೈಚಾರಿಕವಾಗಿ ನಾವು ಸಹ ದೇಶಕ್ಕಾಗಿ ಯುದ್ಧ ಮಾಡಬೇಕಾಗಿದೆ.

***********************************

References:

November 16, 2021

ಚೀನಾ; ಒಳಗೆ ಹುಳುಕು ಹೊರಗೆ ಕೆಡುಕು

ಕರೋನಾ ಬಂದ ನಂತರ 2020ರ ತನಕ ತನ್ನ ಮನಸೋ ಇಚ್ಛೆ ಆಟವಾಡುತ್ತಿದ್ದ ಚೀನಾ ಈ ವರ್ಷ ಜಗತ್ತಿನೆದುರು ತಣ್ಣಗಾದಂತೆ ಇದೆ. ಈ ವರ್ಷ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲಾಗಲಿ, ಜಿ-20 ಸಮಾವೇಶದಲ್ಲಾಗಲಿ, ಕಳೆದ ವಾರ ನಡೆದ ಗ್ಲಾಸ್ಗೋ ಹವಾಮಾನ ಸಮ್ಮೇಳನದಲ್ಲಾಗಲಿ ಚೀನಾದ ಹಾಜರಾತಿ ಇರಲಿಲ್ಲ! ಚೀನಾ ಒಂದು ಕಡೆ ತೈವಾನ್ ಮೇಲೆ ದಾಳಿ ಮಾಡುವ ಪ್ರಯತ್ನದಲ್ಲಿದೆ, ಮತ್ತೊಂದು ಕಡೆ ಪಾಕಿಸ್ತಾನಕ್ಕೆ ಅತ್ಯಾಧುನಿಕವಾದ, ಸುಮಾರು 300 ಮಿಲಿಯನ್ ಡಾಲರ್ ಮೊತ್ತದ ಯುದ್ಧನೌಕೆಯೊಂದನ್ನು ಕೊಟ್ಟಿದೆ, ಮತ್ತು ಇನ್ನೂ ಎರಡು ನೌಕೆಗಳನ್ನು ಕೊಡುವ ಯೋಜನೆ ಇದೆ. ಇದಲ್ಲದೆ ಚೀನಾ ಪಾಕಿಸ್ತಾನಕ್ಕೆ ದೊಡ್ಡಮೊತ್ತದ ಸಾಲವನ್ನು ಕೊಟ್ಟಿದೆ. ನೆನಪಿಡಿ, ಯೂರೋಪು ಸಾಲದ ಮೇಲೆ ಹಾಕುವ ಬಡ್ಡಿ ಶೇ1.1 ಆದರೆ, ಚೀನಾ ಹಾಕಿರುವ ಬಡ್ಡಿ ಶೇ3.5 ರಷ್ಟು! ಅಮೆರಿಕಾವೇನಾದರೂ ವಿರಮಿಸಿದರೆ ಜಗತ್ತನ್ನು ಆಳುತ್ತೇವೆ ಎನ್ನುತ್ತಿದ್ದ ಚೀನಾ ಈಗ ಜಾಗತಿಕ ಮಟ್ಟದ ಸಭೆ ಮತ್ತು ವ್ಯವಹಾರಗಳಿಂದ ದೂರ ಉಳಿಯುತ್ತಿದೆ ಎಂಬುದು ಅಚ್ಚರಿಯ ಸಂಗತಿ. ಜಾಗತಿಕ ಸಭೆಗಳಿಗೆ ಗೈರಾಗುತ್ತಿರುವ ಚೀನಾ ಮಾಡುತ್ತಿರುವುದಾದರು ಏನು? ಹಾಗೆಂದು ಆಂತರಿಕವಾಗಿ ಚೀನಾದಲ್ಲಿ ಎಲ್ಲವೂ ಸರಿ ಇದೆ ಎನ್ನಬಹುದ ಎಂಬುದು ಪ್ರಶ್ನೆ.

china delivers largest, most advanced warship to Pakistan

ಈ ವರ್ಷದ ಪ್ರಾರಂಭದಲ್ಲಿ ದೃಢತೆ ಮತ್ತು ಬೆಳೆವಣಿಗೆ ತೋರಿಸುತ್ತಿದ್ದ ಚೀನಾದ ಆರ್ಥಿಕತೆ ಮೂರನೇ ತ್ರೈಮಾಸಿಕದಲ್ಲಿ ಅತ್ಯಂತ ಕಡೆಮೆ ಬೆಳವಣಿಗೆಯಾಗಿದೆ. ಇದಕ್ಕೆ ಒಂದು ಕಡೆ ಪ್ರಕೃತಿ ಕಾರಣವಾದರೆ ಮತ್ತೊಂದು ಕಡೆ ಇದು ಚೀನಾ ಸರ್ಕಾರದ ಸ್ವಯಂಕೃತಾಪರಾಧ ಕೂಡ. ಸೆಪ್ಟಂಬರ್ ಅಲ್ಲಿ ಚೀನಾದ ಪೂರ್ವಭಾಗದಲ್ಲಿ ಭೀಕರವಾದ ಮಳೆ, ಪ್ರವಾಹ ಮತ್ತು ಭೂಕುಸಿತ ಉಂಟಾಯಿತು. ಬೇಸಿಗೆ ಕಾಲದಲ್ಲೂ ಸಹ ಹಿಮ ಬಿದ್ದಿದೆ! ಇದನ್ನು ಚೀನಾ ನಿರೀಕ್ಷಿಸಿರಲಿಲ್ಲ. ಚೀನಾ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಹೆಚ್ಚಾಗಿ ಅವಲಂಬಿಸಿದೆ. ತಾನು ಕಲ್ಲಿದ್ದಲ ಬೃಹತ್ ಉತ್ಪಾದಕನಾಗಿದ್ದರೂ ಸಹ ಪ್ರಮುಖವಾಗಿ ಆಸ್ಟ್ರೇಲಿಯಾದಿಂದ ಆಮದು ಮಾಡಿಕೊಳ್ಳುತ್ತದೆ. ಕ್ವಾಡ್ ಮೇಲಿನ ಕೋಪದಿಂದಲೋ ಅಥವಾ ಸ್ಕಾಟ್ ಮೋರಿಸನ್ ಕರೋನಾ ವಿಚಾರವಾಗಿ ಚೀನಾ ವಿರುದ್ಧ ಮಾತಾಡುತ್ತಿದ್ದ ಎಂಬ ಕಾರಣಕ್ಕೋ ಚೀನಾ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿತು. ಇದರಿಂದ ದೇಶದಲ್ಲಿ ವಿದ್ಯುತ್ ಉತ್ಪಾದನೆ ಇಳಿಯಿತು. ಇದರ ಹೊಡೆತ ಸಾಮಾನ್ಯ ಜನತೆ ಮೇಲೆ ಬಿತ್ತು. ಇದಕ್ಕಾಗಿ ಬೇರೆ ದೇಶದಿಂದ ಕಲ್ಲಿದ್ದಲು ತರಿಸಿದರಾದರೂ ಅವುಗಳ ಗುಣಮಟ್ಟ ತಕ್ಕದ್ದಾಗಿರಲಿಲ್ಲ. ಇದೇ ಸಮಯಕ್ಕೆ ಚಳಿಗಾಲವೂ ಬಂತು. ಸರ್ಕಾರ ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸುವ ಕಾರ್ಯಕ್ಕೆ ಮುಂದಾಯಿತು. ತನ್ನ ಮಿಲಿಟರಿ ಉತ್ಪಾದನಾ ಘಟಕಗಳನ್ನು ಮಧ್ಯಚೀನಾ ಪ್ರಾಂತ್ಯಕ್ಕೆ ವರ್ಗಾಯಿಸಿತು. ಆಗಸ್ಟಿನಲ್ಲಿ ಕೆಲವು ಹೈಪರ್ಸಾನಿಕ್ ಮಿಸೈಲ್ಗಳನ್ನು ಸಹ ಅದು ಪರೀಕ್ಷಿಸಿದೆ. ಇದಲ್ಲದೇ ಉತ್ತರ ಚೀನಾ ಭಾಗದಲ್ಲಿ 300ಕ್ಕೂ ಹೆಚ್ಚು ಮಿಸೈಲ್ಗಳನ್ನು ಸಹ ತಯಾರಿಸಿದೆ. ಈ ರೀತಿ ಬಹುಪಾಲು ವಿದ್ಯುತ್ತನ್ನು ಮಿಲಿಟರಿ ಉದ್ದೇಶಗಳಿಗೆ ಬಳೆಸಲಾಯಿತು. ಈ ಕಾರಣದಿಂದಾಗಿ ಮತ್ತು ಜಾಗತಿಕ ಮಟ್ಟದಲ್ಲಿ ಡೀಸೆಲ್ಲಿನ ಬೆಲೆ ಹೆಚ್ಚಾದ ಕಾರಣ ಟ್ರಕ್ಗಳಿಗೆ ಡೀಸೆಲ್ ಸಿಗಲಿಲ್ಲ ಹಾಗಾಗಿ, ಅವುಗಳ ಸಂಚಾರ ನಿಂತು ಆಹಾರ ಪೂರೈಕೆಯ ಸಮಸ್ಯೆ ಎದುರಾಯಿತು. ಇದನ್ನು ಸುಧಾರಿಸಲು ತನ್ನ ಆಹಾರ ಸುಧಾರಣ ಕ್ರಮವನ್ನು ಚೀನಾ ಬದಲಾಯಿಸಿತು. ಅತೀ ಹೆಚ್ಚು ಆಹಾರವನ್ನು ಆರ್ಡರ್ ಮಾಡುವುದು ಅಥವಾ ಅತೀಯಾಗಿ ತಿನ್ನುವ ವೀಡಿಯೊಗಳನ್ನು ಹಂಚಿಕೊಂಡರೆ 1500 ಡಾಲರ್ಗಳಷ್ಟು ದಂಡ ಹಾಕುವ ನಿಯಮಗಳನ್ನು ಸಹ ತಂದರು! ಇಷ್ಟೆಲ್ಲಾ ಇದ್ದರೂ ಸಹ ಚೀನಾ ತೈವಾನ್ ವಿರುದ್ಧ ದಾಳಿ ಮಾಡಲು ತಯಾರಿ ನಡೆಸಿಯೇ ಇದೆ. ಆದರೆ, ತೈವಾನಿನ ಭದ್ರತಾ ಅಧಿಕಾರಿಯ ಮಾತಿನಂತೆ ಇನ್ನು 4 ವರ್ಷ ಚೀನಾ ತೈವಾನಿನ ಮೇಲೆ ದಾಳಿ ಮಾಡುವುದಿಲ್ಲ ಎಂಬುದು ತಕ್ಕ ಮಟ್ಟಿಗೆ ಸಮಾಧಾನಕರವಾದ ವಿಚಾರ.

ಚೀನಾದ ಈಗಿನ ಸೈನಿಕರಿಗೆ ಯುದ್ಧದ ಅನುಭವ ಕಮ್ಮಿ. ಚೀನಾ ಕೊನೆಯ ಬಾರಿ ಯುದ್ಧ ಮಾಡಿದ್ದು 1979ರಲ್ಲಿ ವಿಯಟ್ನಾಂ ವಿರುದ್ಧ. ಅದನ್ನು ಸಹ ಚೀನಾ ಸೋತಿತ್ತು. ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಭಾರತದ ವಿರುದ್ಧ ಕೂಡ ಅದಕ್ಕೆ ಸೋಲಾಯಿತು. ಮೊದಲು ಯಾರು ಸತ್ತಿಲ್ಲ ಎಂದ ಚೀನಾ ಎಂಟು ತಿಂಗಳ ನಂತರ ನೂರಕ್ಕೂ ಹೆಚ್ಚು ಸೈನಿಕರು ತೀರಿಕೊಂಡಿದ್ದಾರೆ ಎಂದಿತು. ಬೆಟ್ಟದ ಕಣಿವೆಗಳಲ್ಲಿ ಯುದ್ಧ ಮಾಡುವ ಸಾಮರ್ಥ್ಯ ಚೀನಾದ ಇಂದಿನ ಸೈನಿಕರಿಗೆ ಇಲ್ಲ. ಸೈನಿಕ ದಳದ ಈ ದೌರ್ಬಲ್ಯದ ಕಾರಣ ತನ್ನ ವಾಯುಸೈನ್ಯದ ಬಲವನ್ನು ಹೆಚ್ಚಿಸಿಕೊಳ್ಳುವತ್ತ ಗಮನ ಹಸರಿಸಿತು. ಮಧ್ಯ ಮತ್ತು ಪಶ್ಚಿಮ ಟಿಬೆಟ್ ಭಾಗದಲ್ಲಿ 10 ಏರ್ಸ್ಟ್ರಿಪ್ಗಳನ್ನು ನಿರ್ಮಿಸಿದೆ ಮತ್ತು 20 ಸಾವಿರ ಟಿಬೆಟ್ಟಿಯರನ್ನಿಗೆ ಸೈನಿಕ ತರಬೇತಿಯನ್ನು ಕೊಟ್ಟು ಸೈನ್ಯಕ್ಕೆ ಸೇರಿಸಿಕೊಂಡಿದೆ. ಒಂದು ಮೂಲದ ಪ್ರಕಾರ ಚೀನಾಕ್ಕಿಂತ ಪಾಕಿಸ್ತಾನಕ್ಕೆ ಯುದ್ಧದ ಅನುಭವ ಹೆಚ್ಚಿರುವ ಕಾರಣ ಚೀನಾದ ಸೈನಿಕದಳಗಳನ್ನು ಪಾಕಿಸ್ತಾನದ ಕರ್ನಲ್ಗಳು ಮುನ್ನಡೆಸುತ್ತಿದ್ದಾರೆ. ಸೆಪ್ಟೆಂಬರ್ ಅಲ್ಲಿ 300 ಸೈನಿಕರು ಭಾರತದ ಗಡಿಯ ಹತ್ತಿರ ಗಸ್ತು ಹೊಡೆದ್ದಿದ್ದಾರೆ. ಅಕ್ಟೋಬರಿನಲ್ಲಿ ಅರುಣಾಚಲದಲ್ಲಿ 100 ಸೈನಿಕರು ಈ ರೀತಿ ಗಸ್ತು ಹೊಡೆದಿದ್ದಾರೆ. ಅಂದರೆ, ಗಡಿ ಪ್ರದೇಶದಲ್ಲಿ ಚೀನಾ ಭಾರತದ ವಿರುದ್ಧ ಮತ್ತು ಅತ್ತ ತೈವಾನ್ ಜೊತೆ ಯುದ್ಧದ ತಯಾರಿಯಲ್ಲಿರುವಂತಿದೆ. ಏನೇ ಆದರೂ ಭಾರತ ಸಿದ್ಧವಾಗಿದೆ ಎಂಬುದು ಸಮಾಧಾನಕರವಾದ ಸಂಗತಿ. ಭಾರತದ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ 'ನಮಗೆ ಪಾಕಿಸ್ತಾನಕ್ಕಿಂತಲೂ ಚೀನಾ ಪ್ರಮುಖ ಶತ್ರು ಮತ್ತು ಭದ್ರತಾ ತೊಡಕಾಗಿದೆ' ಎಂದು ಚೀನಾದ ನಡೆಗಳನ್ನು ಗಮನಿಸುತ್ತಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ. ಇನ್ನು ಸಾಗರದ ವಿಚಾರಕ್ಕೆ ಬಂದರೆ ಭಾರತ ಇಂಡಿಯನ್ ಓಷನ್ ಭಾಗದಲ್ಲಿ ಬಹಳಷ್ಟು ಬಲವಾಗಿದೆ ಮತ್ತು ಚೀನಾವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದಲ್ಲದೆ ಸೆಪ್ಟಂಬರ್ ನಲ್ಲಿ ಥೈಲ್ಯಾಂಡ್ ಕ್ರಾ ಕಾಲುವೆ ಯೋಜನೆಯನ್ನು ರದ್ದುಗೊಳಿಸಿರುವುದು ಚೀನಾಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದನ್ನು ಗಮನಿಸಿ ಚೀನಾ ಭಾರತವನ್ನು ತಡೆಯಲು ಪಾಕಿಸ್ತಾನಕ್ಕೆ ಸಹಕಾರ ಕೊಡುತ್ತಾ ಮತ್ತೆ ಹಳೆ ಚಾಳಿಯನ್ನು ಶುರುಮಾಡಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನಕ್ಕೆ ಯುದ್ಧನೌಕೆಯೊಂದನ್ನು ಕೊಟ್ಟಿದ್ದು. 'ನಾಯಿ ಹಸಿದಿತ್ತು, ರೊಟ್ಟಿ ಹಲಸಿತ್ತು' ಎನ್ನುವಂತಿದೆ ಚೀನಾ-ಪಾಕಿಸ್ತಾನದ ಸಂಬಂಧ.

ಚೀನಾ ಆಂತರಿಕವಾಗಿ ಕುಸಿಯುತ್ತಿದೆ ಎಂಬುದಕ್ಕೆ ಇನ್ನೂ ಒಂದು ನಿದರ್ಶನವಿದೆ. ಅಕ್ಟೋಬರ್ 21 ರಿಂದ ಒಂದು ವಾರದಲ್ಲಿ ಹತ್ತು ಕಡೆ ಬಾಂಬ್ ಸ್ಫೋಟಗಳಾಗಿವೆ. ರಸ್ತೆಯಲ್ಲಿನ ಟ್ರಕ್ಗಳಲ್ಲಿ, ರೆಸ್ಟುರಾಗಳಲ್ಲಿ, ಎರಡು ಪ್ರಮುಖ ವಿಶ್ವವಿದ್ಯಾಲಯದ ಲ್ಯಾಬ್ಗಳಲ್ಲಿ ಸ್ಫೋಟಗಳಾಗಿವೆ. ಈ ಬಾಂಬ್ ಸ್ಫೋಟಗಳಿಗೆ ಕಾರಣ ತಿಳಿದುಬಂದಿಲ್ಲ. ಜನರ ಹಿತಾಸಕ್ತಿಯನ್ನು ಕಡೆಗಣಿಸಿ ತನ್ನ ಪ್ರಭುತ್ವವನ್ನು ಉಳಿಸಿಕೊಂಡು ಇತರರ ಮೇಲೆ ಯುದ್ಧ ಮಾಡುವ ಮನಸ್ಥಿತಿ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನದ್ದು. ಬದುಕಿರುವವರೆಗೂ ತಾನೇ ಅಧ್ಯಕ್ಷನಾಗಿರಬೇಕು ಎಂಬುದು ಆತನ ಉದ್ದೇಶ. ಅಲ್ಲಿನ ಜನರು ಆತನ ವಿರುದ್ಧ ತಿರುಗಿಬಿದ್ದಿದ್ದಾರ ಎಂಬ ಪ್ರಶ್ನೆ ಮೂಡುತ್ತಿದೆ. ಸೆಪ್ಟೆಂಬರ್ ನಲ್ಲಿ ಕ್ಸಿ ಹತ್ಯೆ ಮಾಡುವ ಸಂಚು ನಡೆದಿತ್ತು ಎಂಬ ಸುದ್ಧಿ ಸಹ ಇದೆ! ಇದರ ಮುಂದುವರೆದ ಭಾಗವಾಗಿ ಅಲ್ಲಿನ ಪಶ್ಚಿಮ ಕಮಾಂಡರನ್ನು ಹತ್ಯೆ ಮಾಡಿಸಲಾಗಿದೆ.

ಇದೆಲ್ಲವನ್ನು ಗಮನಿಸಿದರೆ ಚೀನಾದೊಳಗೆ ಎಲ್ಲವೂ ಸರಿ ಇಲ್ಲ ಎಂಬುದು ಗೋಚರವಾಗುತ್ತಿದೆ. ಆದರೂ ಭಾರತ ಮತ್ತು ತೈವಾನ್ ವಿರುದ್ಧ ಅದು ಯುದ್ಧ ತಯಾರಿ ಮಾಡಿಕೊಳ್ಳುತ್ತಿದೆ. ಜಗತ್ತಿಗೆ ಕರೋನಾವನ್ನು ರಫ್ತು ಮಾಡಿ ಸಾವು, ನಷ್ಟಗಳಿಗೆ ಕಾರಣವಾದ ಚೀನಾ ಈಗ ಒಳಗಿಂದಲೇ ಒಡೆಯುತ್ತಿದೆ. ಒಬ್ಬರಿಗೆ ಕೇಡು ಬಗೆದರೆ ನಮಗೆ ಕೇಡಾಗುತ್ತದೆ ಎಂಬುದಕ್ಕೆ ಚೀನಾ ಇತ್ತೀಚಿನ ನಿದರ್ಶನ.

 

10 bomb blasts across china in a week of October month
 
References:
  1. china Delivers New Warship to Pakistan  
  2. Now, it is Illegal to Order Too Much Food in china 
  3. Explosion at Restaurant in NE china    
  4. High Intensity Blasts Rock china before CCP's 6th Plenary 
  5. Big Blow to china as Thailand Scraps KRA Canal Project 
  6. chinese President xi jinping Escaped an Assassination? 
  7. china Power Cuts: What is Causing Country's Blackouts?

November 5, 2021

ದೀಪಾವಳಿ ಹೊತ್ತು ಮಾತ್ರ ಪರಿಸರ ಕಾಳಜಿ ಯಾಕೆ...?

ಕೆಲವರಿಗೆ ಹಿಂದೂ ಹಬ್ಬಗಳು ಬಂದರೆ ಯಾವತ್ತೂ ಇಲ್ಲದ ಸಾಮಾಜಿಕ ಕಾಳಜಿ, ಪರಿಸರ ಕಾಳಜಿ ಬರುತ್ತದೆ. ಅದರಲ್ಲೂ ದೀಪಾವಳಿ ಹಬ್ಬ ಬಂತೆಂದರೆ 'ಪಟಾಕಿ ಹೊಡೆಯಬೇಡಿ, ಪರಿಸರ ಹಾಳು ಮಾಡಬೇಡಿ' ಎಂದೆಲ್ಲಾ ಉಪದೇಶ ಮಾಡಲು ಮುಂದಾಗುತ್ತಾರೆ. ಇತ್ತೀಚೆಗೆ ವಿರಾಟ್ ಕೋಹ್ಲಿ ನಮಗೆಲ್ಲಾ ಉಪದೇಶ ಮಾಡಲು ಮುಂದಾದನ್ನು ನಾವು ಗಮನಿಸಬಹುದು. ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ, ಹೊಸವರ್ಷ ಅಥವಾ ಜಾಗತಿಕ ಮಟ್ಟದಲ್ಲಿ ನಡೆಯುವ ಇವೆಂಟ್ಗಳಾದ ಒಲಂಪಿಕ್ಸ್, ಫ಼ೂಟ್ಬಾಲ್ ಅಥವಾ ಕ್ರಿಕೇಟ್ ವಿಶ್ವಕಪ್ ನಡೆಯುವ ಸಂದರ್ಭಗಳಲ್ಲಿ ಲೆಕ್ಕವಿಲ್ಲದಷ್ಟು ಪಟಾಕಿ ಹೊಡೆಯುತ್ತಾರೆ ಆಗ ಮಾತ್ರ ಇದೇ ಗಣ್ಯರು ಮಾತಾಡುವುದಿಲ್ಲ. ಇವರದ್ದೆಲ್ಲಾ ಬರೀ ಬೂಟಾಟಿಕೆ, ಹಿಂದೂ ಧರ್ಮದ ವಿರುದ್ಧ ಯಾರೇನೇ ಮಾತಾಡಿದರು ದಕ್ಕಿಸಕೊಳ್ಳಬಹುದು ಎಂಬ ದಾರ್ಷ್ಟ್ಯ. ಇರಲಿ ಬಿಡಿ ವಿಚಾರ ಅದಲ್ಲ, ನಮ್ಮ ಪರಿಸರ ಹಾಳಾಗುತ್ತಿರುವುದಕ್ಕೆ ನೈಜ ಕಾರಣಗಳನ್ನು ನಾವು ವಿಷ್ಲೇಶಿಸಬೇಕಿದೆ.

ನಮ್ಮ ಭೂಮಿಯನ್ನು ಆ ಸೂರ್ಯನ ಹಾನಿಕಾರಕ ವಿಕಿರಣಗಳಿಂದ ರಕ್ಷಿಸುತ್ತಿರುವುದು ಓಝೋನ್ ಪರದೆ. ಇದು ಪ್ರಾಕೃತಿಕವಾಗಿ ನಿರ್ಮಾಣವಾಗಿರುವ ಪರದೆ. ಸೂರ್ಯನ ಅಪಾಯಕಾರಿ ಅತೀನೇರಳೆ ಕಿರಣಗಳನ್ನು ಹೀರಿಕೊಂಡು, ಅದು ಮುಂದುವರೆಯದಂತೆ ಭೂಮಿಯನ್ನು ರಕ್ಷಿಸುತ್ತದೆ. ಈ ಪರದೆಯ ಕಾರಣ ನಾವು ಅನೇಕ ಭೀಕರ ರೋಗಗಳಿಂದ ಪಾರಾಗಿದ್ದೇವೆ. ಆದರೆ, ಜಗತ್ತು ಆಧುನೀಕರಣವಾಗಿ ಕೈಗಾರಿಕಾ ಕ್ರಾಂತಿಯಾದವು, ಅನೇಕ ಕಾರ್ಖಾನೆಗಳು ಹುಟ್ಟಿಕೊಂಡವು. ಇದರ ಪರಿಣಾಮವಾಗಿ ನಮ್ಮ ಪರಿಸರ ಮಲಿನವಾಗತೊಡಗಿತು. ಕ್ಲೋರೋಫ಼್ಲೋರೊ ಕಾರ್ಬನ್ (CFC) ಎಂಬ ರಾಸಾಯನಿಕ ಈ ಓಝೋನ್ ಪರದೆಯನ್ನು ಬಹುವಾಗಿ ನಾಶ ಮಾಡಬಲ್ಲ ಶಕ್ತಿಯನ್ನು ಹೊಂದಿದೆ. ಈ ರಾಸಾಯನಿಕ ಅನಿಲ ಓಝೋನ್ ಪರದೆಯನ್ನು ನಾಶಮಾಡಲು ತಂಪು ವಾತಾವರಣದ ಅವಶ್ಯಕತೆ ಇದೆ. ಅಂತಹ ವಾತಾವರಣವಿರುವುದು ದಕ್ಷಿಣ ಧ್ರುವದಲ್ಲಿ. ಜಗತ್ತಿನ ಎಲ್ಲಾ ಮೂಲೆಗಳಿಂದ ಹರಿದುಬರುವ ಮಾಲಿನ್ಯಕಾರಕ ಅನಿಲಗಳು ದಕ್ಷಿಣ ಧ್ರುವದಲ್ಲಿ ಓಝೋನ್ ಪರದೆಯನ್ನು ನಾಶಮಾಡಲು ಶುರುಮಾಡಿತು. ಕ್ಲೋರೋಫ಼್ಲೋರೋ ಕಾರ್ಬನ್ ಹೆಚ್ಚಲು ಮೂಲಕಾರಣವೇ ಕೈಗಾರಿಕಾ ಕ್ರಾಂತಿ. ನಮ್ಮ ಅನುಕೂಲಕ್ಕೆ ತಕ್ಕಂತೆ ಏ.ಸಿ, ರೆಫ಼್ರಿಜಿರೇಟರ್ಗಳಂತಹ ಸೌಲಭ್ಯಗಳು ಹೆಚ್ಚಿತು. ಓಝೋನ್ ರಂಧ್ರ ಎಂದರೆ ಅದು ಅಕ್ಷರಶಃ ರಂಧ್ರವಲ್ಲ. ಪದರದ ಒಂದು ಭಾಗ ತೆಳುವಾಗಿದೆ ಎಂದರ್ಥ. ಇದು 1985 ರಲ್ಲಿ ದಕ್ಷಿಣಧ್ರುವದಲ್ಲಿ ಕಂಡುಬಂತು. ಮಾನವ ನಿರ್ಮಿತ ಈ ಅನಾಹುತವನ್ನು ತಡೆಗಟ್ಟಲು ಜಾಗತಿಕ ಮಟ್ಟದಲ್ಲಿ 1987 ರಲ್ಲಿ ಮಾಂಟ್ರಿಯಾಲ್ ಒಪ್ಪಂದವನ್ನು ಜಾರಿಗೆ ತರುತ್ತಾರೆ. ಈ ಒಪ್ಪಂದದ ಪ್ರಕಾರ ಓಝೋನ್ ಗೆ ಹಾನಿಮಾಡುವ ಸಿ,ಎಫ಼್.ಸಿ.ಯಂತಹ ಅನಿಲಗಳನ್ನು ಹೊರಸೂಸುವ ಉಪಕರಣಗಳನ್ನು ತಯಾರು ಮಾಡದಂತೆ ಉದ್ಯಮಗಳಿಗೆ ತಾಕೀತು ಮಾಡಿತು. ಇದರ ಪ್ರಕಾರ ಏ.ಸಿ., ಫ಼್ರಿಡ್ಜ್ ತಯಾರಿಕೆ ನಿಲ್ಲಿಸಬೇಕಿತ್ತು. ಆದರೆ, ಮಾನವ ಅನುಕೂಲ ಸಿಂಧುವಾಗಿಬಿಟ್ಟಿದ್ದ. ಸಿ.ಎಫ಼್.ಸಿ ರಹಿತ ಉಪಕರಣಗಳನ್ನು ತಯಾರು ಮಾಡಲು ಮುಂದಾದ. ಈ ಒಪ್ಪಂದದ ಮಹತ್ವವನ್ನು ಸಾರುತ್ತಾ ಪ್ರತಿವರ್ಷ ಸೆಪ್ಟಂಬರ್ 16 ಓಝೋನ್ ಸಂರಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ. ಒಳ್ಳೆಯ ಸಂಗತಿ ಎಂದರೆ ಪ್ರಸಕ್ತ ಸನ್ನಿವೇಶದಲ್ಲಿ ಓಝೋನನ್ನು ಹಾಳುಮಾಡುವ ಅನಿಲಗಳನ್ನು ಬಿಡುಗಡೆ ಮಾಡದ ವಿದ್ಯುತ್ ಉಪಕರಣಗಳನ್ನು, ಯಂತ್ರಗಳು ತಾಯಾರಾಗಿವೆ ಮತ್ತು ಬಳಕೆಯಲ್ಲಿವೆ. ವೈಜ್ಞಾನಿಕ ಸಮೀಕ್ಷೆಗಳ ಪ್ರಕಾರ ಈಗಿರುವ ವಾತಾವರಣದ ಗುಣಮಟ್ಟ ಮುಂದುವರೆದರೆ 2060 ವೇಳೆಗೆ ಓಝೋನ್ ರಂಧ್ರ ಕಾಣೆಯಾಗುತ್ತದೆ ಮತ್ತು ಪರದೆ ಅದರ ಹಿಂದಿನ ಅರೋಗ್ಯವಾದಂತಹ ಸ್ಥಿತಿ ಪಡೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಓಝೋನ್ ಪದರಗಳನ್ನು ಸರಿಪಡಿಸುವ ಅಥವಾ ತೆಳ್ಳಗಾಗಿಸುವ ಯಾವುದೇ ಪ್ರಕ್ರಿಯೆ ಸಹ ತಲೆಮಾರುಗಳ ಸಮಯವನ್ನು ಬೇಡುತ್ತದೆ ಎಂಬ ಎಚ್ಚರ ನಮಗೆ ಮೂಡಬೇಕಿದೆ. ಓಝೋನ್ ತೆಳುವಾದರೆ ಮುಂದಿನ ತಲೆಮಾರುಗಳ ಭವಿಷ್ಯವೂ ತೆಳುವಾದಂತೆಯೇ.

Satellite monitoring revealing that the area of ozone depletion at south pole

ಕಳೆದ ವಾರ ಗ್ಲಾಸ್ಗೋವ್ ನಲ್ಲಿ ನಡೆದ ಜಿ20 ಸಮಾವೇಶದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹವಾಮಾನ ವೈಪರಿತ್ಯವನ್ನು ತಡೆಗಟ್ಟುವಲ್ಲಿ ನಮ್ಮ ದೇಶದ ದೃಷ್ಟಿಕೋನ ಮತ್ತು ಹೆಜ್ಜೆಗಳ ಕುರಿತು ಜಗತ್ತನ್ನು ಉದ್ದೇಶಿಸಿ ಮಾತಾಡಿದರು. ನಮ್ಮ ಎಲ್ಲಾ ಯೋಜನೆಗಳು ಕೂಡ ಪ್ರಪಂಚಕ್ಕೆ ಒಳಿತು ಮಾಡುವ ಯೋಜನೆಗಳೇ ಆಗಿವೆ ಮತ್ತು 2070 ರ ವೇಳೆಗೆ ಕಾರ್ಬನ್ ಹೊರಸೂಸುವ ಪ್ರಮಾಣವನ್ನು ಶೂನ್ಯಕ್ಕೆ ತರುವುದು ನಮ್ಮ ಗುರಿಯಾದೆ ಎಂದರು. ಇದು ಸೇರಿದಂತೆ ಇತರ ಬೇರೆ ಬೇರೆ ವಿಚಾರವನ್ನು ಹಂಚಿಕೊಂಡರು. ಭಾರತೀಯ ಜೀವನಶೈಲಿ ಮತ್ತು ಸಂಸ್ಕೃತಿ ಪರಿಸರದಿಂದ ಪ್ರೇರೇಪಿತವಾಗಿದೆ. ಜಗತ್ತು ಭಾರತೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳನ್ನು ಉದ್ದೇಶಿಸಿತ್ತಾ ಭಾರತ ತನ್ನ ಗುರಿ ಹಾಕಿಕೊಂಡಂತೆ ಜಗತ್ತಿನ ದೊಡ್ಡ ರಾಷ್ಟ್ರಗಳೂ ಕೂಡ ಪರಿಸರ ಕಾಳಜಿ ಮತ್ತು ತಂತ್ರಜ್ಞಾನ ವರ್ಗಾವಣೆಯ ಕುರಿತು ಸ್ಪಷ್ಟ ಗುರಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ. ಭಾರತ 2030 ರ ವೇಳೆಗೆ ಫ಼ಾಸಿಲ್ ಫ಼್ಯೂಲ್ ರಹಿತ ಇಂಧನದ ಮೂಲಗಳಿಂದ 500 ಗಿಗಾವ್ಯಾಟ್ ಶಕ್ತಿ ಉತ್ಪಾದಿಸುವ ಗುರಿ ಹೊಂದಿದೆ, ಅದೇ ವೇಳೆಗೆ ಭಾರತವು ತನ್ನ ಅಗತ್ಯತೆಯ 50% ಶಕ್ತಿಯನ್ನು ನವೀಕರಿಸಹುದಾದ ವಸ್ತುಗಳಿಂದ ಪೂರೈಕೆ ಮಾಡಿಕೊಳ್ಳುತ್ತದೆ. ಈ ಗುರಿಯನ್ನು ತಲುಪಲು 2030 ಹೊತ್ತಿಗೆ 1 ಬಿಲಿಯನ್ ಟನ್ ಅಷ್ಟು, ಕಾರ್ಬನನ್ನು ಹೊರಸೂಸುವುದನ್ನು ಮತ್ತು ಇಂಗಾಲದ ಮೇಲೆ ಹೂಡುವ ಹಣವನ್ನು 45% ಭಾರತ ಕಮ್ಮಿ ಮಾಡುತ್ತದೆ ಎಂದು ಘೋಷಿಸಿದರು. ಇದೇ ವೇಳೆಗೆ ರೈಲ್ವೇ ಇಲಾಖೆ 40 ಬಿಲಿಯನ್ ಟನ್ ಅಷ್ಟು ಕಾರ್ಬನನ್ನು ಹೊರಸೂಸುವುದನ್ನು ಕಡಿಮೆ ಮಾಡುವ ಯೋಜನೆ ಹಾಕಿಕೊಂಡಿದೆ. ಚೀನಾ ಮತ್ತು ಇತರ ದೇಶಗಳನ್ನು ಕುರಿತು 'ಭಾರತ ಜಗತ್ತಿನ 17% ರಷ್ಟು ಹೊಂದಿದ್ದರೂ ಇಂಧನ ಹೊರಸೂಸುತ್ತಿರುವುದು 5% ರಷ್ಟು ಮಾತ್ರ' ಎಂದು ಪರೋಕ್ಷವಾಗಿ ಎಚ್ಚರಿಸುತ್ತಾರೆ. ಜಗತ್ತಿಗೆ ಮಾದರಿಯಾಗಿ, ಗುರುವಾಗಿ ಮಾರ್ಗದರ್ಶನ ಮಾಡುವ ಮಟ್ಟಕ್ಕೆ ಭಾರತ ಬೆಳೆದಿರುವುದನ್ನು ನಾವಿಂದು ಗಮನಿಸಬಹುದು. ಜಗತ್ತಿನ ಅನೇಕ ದೇಶಗಳು ಪ್ಲಾಸ್ಟಿಕನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿ ಸಾಗರವನ್ನು ಕಲುಷಿತಗೊಳಿಸುತ್ತಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೆ ಅಮೇರಿಕಾ, ಜರ್ಮನಿ, ಬ್ರಜಿಲ್, ಜಪಾನ್ ಕ್ರಮವಾಗಿ ಮುಂದಿನ ಐದು ಸ್ಥಾನದಲ್ಲಿದೆ ಪಾಕೀಸ್ತಾನ ಮತ್ತು ರಷ್ಯಾ ಕೂಡ ಮೊದಲ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಓಝೋನ್ ಪರದೆ ತೆಳುವಾಗಲು ಅತ್ಯಂತ ಹೆಚ್ಚು ಕೊಡುಗೆ ನೀಡುತ್ತಿರುವ ರಾಷ್ಟ್ರ ಯಾವುದು ಗೊತ್ತೇ? ಚೀನಾ. ಆದರೆ, ಚೀನಾ ಮಾತ್ರ ಹವಾಮಾನ ವೈಪರಿತ್ಯಕ್ಕೆ ತಾನು ಕಾರಣವಲ್ಲ, ತಾನು ಆಧುನಿಕತೆಗೆ ತೆರೆದುಕೊಳ್ಳುವ ಮುನ್ನ ಈ ಸಮಸ್ಯೆಯಿತ್ತು ಎಂಬತಹ ಬೇಜವಾಬ್ದಾರಿ ಮಾತುಗಳನ್ನು ಆಡಿದೆ. ಜಗತ್ತಿಗೆ ಒಳಿತು ಮಾಡುವ ಯೋಗ್ಯತೆ ಇಲ್ಲದಿದ್ದರೂ ಈ ರೀತಿಯ ಮಾತಾಡುವುದರಲ್ಲಿ ಎತ್ತಿದ ಕೈ ಚೀನಾ.

Top most countries contributing with plastic pollution

chinese media stating that it is not responsible for Climatic Issues

ಪರಿಸರ ಮಾಲಿನ್ಯ ಮತ್ತು ಅದರ ಸಂರಕ್ಷಣೆ ಎಂದರೆ ಬಹಳ ಸೂಕ್ಷ್ಮವಾದ ವಿಚಾರ. ಜಾಗತಿಕ ಮಟ್ಟದಲ್ಲಿ ಇದರ ಕುರಿತು ಬಹಳಷ್ಟು ಚರ್ಚೆ ಮತ್ತು ತಕ್ಕ ಕ್ರಮಗಳು ಆಗುತ್ತಿರುವುದು ಒಳ್ಳೆಯ ಸಂಗತಿ. ಭಾರತ ಜಾಕತಿಕವಾಗಿ ಈ ವಿಚಾರದಲ್ಲೂ ಮುಂದಾಳತ್ವ ವಹಿಸುವುದು ಒಳಿತು. ಕರೋನಾದ ಕಾರಣ 2 ವರ್ಷದಿಂದ ಸ್ಥಗಿತಗೊಂಡಿದ್ದ ಪಟಾಕಿ ಉದ್ಯಮ ಈಗ ಮತ್ತೆ ಗರಿಗೆದರಿದೆ. ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ಭಾರತದಲ್ಲಿ ಆದ ವಹಿವಾಟು 1.25 ಲಕ್ಷ ಕೋಟಿ! ವ್ಯಾಪಾರಿಗಳ ಮನೆಯವರಿಗೆ ಇದು ನಿಜಕ್ಕೂ ದೀಪಾವಳಿಯೇ ಸರಿ. ಎಲ್ಲಾ ಒಳ್ಳೆಯದರ ಜೊತೆಗೆ ಕೆಟ್ಟದ್ದು ಇರುತ್ತದೆ. ಹಾಗೆ ಜಾಗತಿಕ ಮಟ್ಟದಲ್ಲಿ ಪರಿಸರ ಕುರಿತು ಚರ್ಚೆ ನಡೆಯಬೇಕಾದರೆ ಕೆಲವು ಮಂದಿ ದೀಪಾವಳಿ ಹಬ್ಬದ ದಿನಗಳಂದು ಮಾತ್ರ ಪರಿಸರ ಮಲಿನವಾಗುತ್ತದೆ ಎನ್ನುವ ರೀತಿ ಮಾತಾಡುತ್ತಿದ್ದಾರೆ. ನಮ್ಮ ಪ್ರಧಾನಿ 50 ವರ್ಷಗಳಷ್ಟು ಮುಂದಿನ ಯೋಜನೆ ಮಾಡುತ್ತಿದ್ದರೆ ಇಲ್ಲಿನ ಕೆಲವು ನಾಯಕರು ಅನ್ನಿಸಿಕೊಂಡವರು 2024 ರ ಚುಣಾವಣೆ ಎದುರಿಸುವ ಬಗ್ಗೆ ಚಿಂತಿಸುತ್ತಿದ್ದಾರೆ! ನಾಯಕರು ಧೀರ್ಘವಾದದ್ದನ್ನು ಯೋಚಿಸಬೇಕು. ಹಿಂದೂ ಧರ್ಮವನ್ನು ತೆಗಳುವುದು, ಕೆಲವು ಸಾಮಾಜಿಕ ಸಂಘ ಸಂಸ್ಥೆಗಳ ಸೆಲೆಕ್ಟೀವ್ ಕಾಳಜಿ ನಿಲ್ಲಬೇಕು. ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಮ್ಮದಾಗಬೇಕು.

CAIT statement on business during Deepavali across India

October 22, 2021

ಮತಾಂಧತೆಯ ಮುಂದೆ ಮಾನವೀಯತೆ ಮಾಯ!

ಕಳೆದ ಒಂದು ವಾರದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮತ್ತು ದೇವಾಲಯಗಳ ಮೇಲೆ ಹೇಯವಾಗಿ ದಾಳಿ ನಡೆದಿದೆ. ಮುಸಲ್ಮಾನ್ ಬಾಹುಳ್ಯವಿರುವ ಈ ದೇಶದಲ್ಲಿ ಹಿಂದೂ ಹಬ್ಬ ದಸರಾ ಸಂದರ್ಭದಲ್ಲಿ ಕೋಮುಗಲಭೆ ಹುಟ್ಟುಹಾಕಿ, ದುರ್ಗಾ ವಿಗ್ರಹಗಳನ್ನು ನಾಶ ಮಾಡಿದ್ದಾರೆ. ಮುಸಲ್ಮಾನ್ ಮತಾಂಧರು ಕಂಡ ಕಂಡಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ್ದಾರೆ. ಹೆಣ್ಣು ಮಕ್ಕಳನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ಅಲ್ಲಿದ್ದ ಬೌದ್ಧ ದೇವಾಲಯಗಳನ್ನು ಸಹ ಧ್ವಂಸ ಮಾಡಿದ್ದಾರೆ. ಹಿಂದೂಗಳಿರುವ ಹಳ್ಳಿಗಳನ್ನು ಲೂಟಿ ಮಾಡಿ, ಬೆಂಕಿಯಿಟ್ಟು ಸುಟ್ಟಿದ್ದಾರೆ. ದೇಶದ ವಿವಿಧೆಡೆ ಇರುವ ಇಸ್ಕಾನ್ ದೇವಾಲಯಗಳನ್ನು ಧ್ವಂಸ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ನಿಜಕ್ಕೂ ತೀರ ಕ್ಷುಲ್ಲಕವಾದದ್ದು. ದಸರಾ ಸಂದರ್ಭದಲ್ಲಿ ಖುರಾನ್ ಗ್ರಂಥವೊಂದನ್ನು ಹಿಂದೂ ದೇವರ ವಿಗ್ರಹದ ಪಾದದ ಬಳಿ ಇದ್ದ ವೀಡಿಯೋ ಒಂದು ಬಿಡುಗಡೆಯಾಗಿದ್ದು!


Destruction in Bangladesh

ಸ್ವಾತಂತ್ರ ಪೂರ್ವದಲ್ಲಿ ಈಗಿನ ಪಶ್ಚಿಮ ಬಂಗಾಳ, ಬಿಹಾರ, ಒರಿಸ್ಸಾ ಮತ್ತು ಬಾಂಗ್ಲಾದೇಶ ಒಟ್ಟಾಗಿ ಬಂಗಾಳ ಪ್ರಾಂತ್ಯ ಎಂದಾಗಿತ್ತು. ಭಾರತದಲ್ಲಿದ್ದ ಪ್ರಮುಖ ಮತ್ತು ದೊಡ್ಡ ಪ್ರಾಂತ್ಯ ಇದಾಗಿತ್ತು. 1905 ರಲ್ಲಿ ಬ್ರಿಟೀಷ್ ಸರ್ಕಾರ ಕರ್ಜನ್ ನೇತೃತ್ವದಲ್ಲಿ ಬಂಗಾಳವನ್ನು ಎರಡು ತುಂಡಾಗಿ ವಿಭಜಿಸಲು ಮುಂದಾಯಿತು. ಬ್ರಿಟೀಷ್ ಸರ್ಕಾರ ಎಷ್ಟು ಚಾಣಾಕ್ಷವೆಂದರೆ ಮುಸಲ್ಮಾನರು ಮತ್ತು ಹಿಂದೂಗಳು ಕಿತ್ತಾಡುತ್ತಿರಬೇಕು ಎಂಬ ಉದ್ದೇಶದಿಂದಲೇ ಧರ್ಮದ ತಳಹದಿಯಲ್ಲಿ ಪ್ರಾಂತ್ಯವನ್ನು ವಿಭಜಿಸುತ್ತಾರೆ. ಈ ನಡೆ ಭಾರತದ ರಾಷ್ಟ್ರೀಯವಾದಿಗಳನ್ನು ಉದ್ರಿಕ್ತಗೊಳಿಸುತ್ತದೆ. ದೇಶದೆಲ್ಲಡೆ ಸ್ವದೇಶಿ ಚಳಿವಳಿಗಳು ವ್ಯಾಪಕವಾಗುತ್ತದೆ. ಗುರುದೇವ ರವೀಂದ್ರರು ಬಂಗಾಳವನ್ನು ವರ್ಣಿಸುವಂತಹ 'ಅಮರ್ ಶೊನಾರ್ ಬಾಂಗ್ಲಾ' ಎಂಬ ಗೀತೆಯನ್ನು ರಚಿಸುತ್ತಾರೆ. ಮಹಾರಾಷ್ಟ್ರದಲ್ಲಿ ತಿಲಕರು, ಪಂಜಾಬ್ ನಲ್ಲಿ ಲಾಲಾ ಲಜಪತ್ ರಾಯ್ ಮತ್ತು ಸರ್ದಾರ್ ಅಜಿತ್ ಸಿಂಗ್, ಮದ್ರಾಸಿನಲ್ಲಿ ಚಿದಂಬರಂ ಪಿಳ್ಳೈ ನೇತೃತ್ವದಲ್ಲಿ ಎಲ್ಲೆಡೆ ಸ್ವದೇಶಿ ಚಳುವಳಿ ವ್ಯಾಪಕವಾಗುತ್ತದೆ. ಚಳಿವಳಿಯ ಕಾವಿನಿಂದಾಗಿ ಬ್ರಿಟೀಷರು 1911 ರಲ್ಲಿ ವಿಭಜನೆಯ ಪ್ರಸ್ತಾವವನ್ನು ಹಿಂಪಡೆಯುತ್ತಾರೆ. ಇದರೊಂದಿಗೆ ಬಂಗಾಳಿ ಮಾತಾಡದ ಬಿಹಾರ, ಒರಿಸ್ಸಾ, ಬಂಗಾಳ ಪ್ರಾಂತ್ಯದಿಂದ ಬೇರೆಯಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ. ವಿಭಜನೆಯಾದಾಗ ಬಂಗಾಳ ಪ್ರಾಂತ್ಯದ ಮುಸಲ್ಮಾನರು ಈ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಪ್ರತ್ಯೇಕವಾಗಿರಲು ಆಶಿಸುತ್ತಾರೆ. ಆಗಿನ ಬಂಗಾಳ ವಿಭಜನೆ ಇರಬಹುದು ಅಥವಾ ಈಗಿನ ಕಾಶ್ಮಿರದ ವಿಚಾರವಿರಬಹುದು ಮೊದಲಿನಿಂದಲೂ ಏಕತೆಯ ಬದಲು ಪ್ರತ್ಯೇಕತೆ ಎಂಬ ಹುಚ್ಚು ಅವರ ತಲೆಗೆ ಏರಿರುವಂತಹುದೆ.


ಸ್ವಾತಂತ್ರ್ಯ ಬರುವ ಒಂದು ವರ್ಷದ ಮುನ್ನ ಕೂಡ ಬಂಗಾಳದಲ್ಲಿ ಒಂದು ಕೋಮುಗಲಭೆ ನಡೆಯುತ್ತದೆ. ವರದಿಗಳ ಪ್ರಕಾರ ಎರಡು ದಿನಗಳಲ್ಲಿ 270 ಕ್ಕೂ ಹೆಚ್ಚು ಮಂದಿ ಕೊಲ್ಲಲ್ಪಟ್ಟು, 1600 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 1947 ರಲ್ಲಿ ಭಾರತ ಸ್ವತಂತ್ರ್ಯವಾಯಿತು. ಆಗ ಧರ್ಮಾದಾರಿತವಾಗಿ ಭಾರತ, ಪೂರ್ವ ಪಾಕೀಸ್ತಾನ ಮತ್ತು ಪಶ್ಚಿಮ ಪಾಕೀಸ್ತಾನ (ಈಗಿನ ಬಾಂಗ್ಲಾದೇಶ) ಎಂದು ಮೂರು ಭಾಗಗಳಾಗಿ ಒಡೆಯಿತು. ಶಾಂತವಾಗಿದ್ದ ಬಾಂಗ್ಲಾದೇಶ 1971 ರಲ್ಲಿ ಹೊತ್ತಿ ಉರಿಯುತ್ತದೆ. ಪಾಕೀಸ್ತಾನದ ಸೈನ್ಯ ಮತ್ತು ಬಾಂಗ್ಲಾದ ಜಮಾತ್-ಇ-ಇಸ್ಲಾಮಿ ಎಂಬ ಮತಾಂಧ ಗುಂಪು ಅಲ್ಲಿನ ಜನರ ನರಮೇಧ ಶುರು ಮಾಡುತ್ತದೆ. ಧರ್ಮದ ಅಫೀಮು ತಲೆಗೇರಿ ಈ ಮತಾಂಧ ಗುಂಪು ತಮ್ಮ ದೇಶ ಮತ್ತು ಅದರ ಸ್ವಾತಂತ್ರ್ಯವನ್ನು ಮರೆತು ಪಾಕೀಸ್ತಾದ ಜೊತೆಗೆ ಸಹಕರಿಸುತ್ತಾರೆ. ಮೊದಲು ಬಾಂಗ್ಲಾದ ಬುದ್ಧಿವಂತರನ್ನೂ ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರನ್ನು ವ್ಯವಸ್ಥಿತವಾಗಿ ಕೊಲ್ಲುತ್ತಾರೆ. ಪತ್ರಕರ್ತರು, ವೈದ್ಯರು, ಕವಿಗಳನ್ನೆಲ್ಲಾ ಪಾಕೀಸ್ತಾನಿ ಸೈನ್ಯ ಮತ್ತು ರಜಾಕಾರರು ಎಳೆದೋಯ್ದು ಮಿರ್ಪುರ್ ಮತ್ತು ರಾಯರ್ ಬಜಾರ್ ಅಲ್ಲಿ ಕೊಲ್ಲುತ್ತಾರೆ. ಯುದ್ಧದ ಒಂಬತ್ತು ತಿಂಗಳ ಅವಧಿಯಲ್ಲಿ ಸುಮಾರು 2-4 ಲಕ್ಷದಷ್ಟು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿರುವುದು ದಾಖಲಾಗಿದೆ. ಪಾಕೀಸ್ತಾನದ ಇಮಾಮ್ಗಳು ಮತ್ತು ಮುಸಲ್ಮಾನ್ ಧಾರ್ಮಿಕ ನಾಯಕರು ಈ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವೆಸೆಗಿ, ಕೊಂದು ಬಂಗಾಳಿ ಹೆಣ್ಣು ಮಕ್ಕಳನ್ನು ಮುಸಲ್ಮಾನರ ಸಂತತಿ ಹೆಚ್ಚಿಸಲು ಉಪಯೋಗಿಸಿಕೊಂಡಿದ್ದಾರೆ. ಈ ಪರಿಯ ನರಮೇಧದ ಕಾರಣದಿಂದ ನಲುಗುತ್ತಿದ್ದ ದೇಶಕ್ಕೆ ಭಾರತ ಸಹಾಯಕ್ಕೆ ಬರುತ್ತದೆ. ಭಾರತದ ಸೈನಿಕ ದಳ, ವಾಯುಪಡೆ ಬಾಂಗ್ಲಾದ ಮತಾಂಧ ಮತ್ತು ಪಾಕೀಸ್ತಾನದ ಸೈನ್ಯದ ಮೇಲೆ ದಾಳಿ ಮಾಡುತ್ತದೆ. ಯುದ್ಧದಲ್ಲಿ ಅವರನ್ನು ಸೋಲಿಸಿ ಸುಮಾರು 93,000 ಸೈನಿಕರನ್ನು ಭಾರತ ಒತ್ತೆಯಾಳಾಗಿಸಿಕೊಳ್ಳುತ್ತದೆ. ಇದರೊಂದಿಗೆ ಪಾಕೀಸ್ತಾನದ ಕಪಿಮುಷ್ಠಿಯಿಂದ ಸ್ವತಂತ್ರ್ಯಗೊಂಡು ಬಾಂಗ್ಲಾದೇಶ ಎಂದಾಗುತ್ತದೆ. ಬಾಂಗ್ಲಾದೇಶವು ದಕ್ಷಿಣ ಏಷ್ಯಾದಲ್ಲಿ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ. ಕರೋನಾ ಸಮಯದಲ್ಲಿ ಆ ದೇಶಕ್ಕೆ 1.2 ಮಿಲಿಯನ್ಗಳಷ್ಟು ಡೋಸ್ ಲಸಿಕೆಯನ್ನು ಉಚಿತವಾಗಿ ಭಾರತ ನೀಡಿದೆ.


Media Reports the Communal Riots in Bengal in 1946


ಕಳೆದ ವರ್ಷ ಇಸ್ಕಾನ್ ದೇವಾಲಯದ ಸ್ವಾಮೀ ನಿತಾಯ್ ದಾಸ್ ಪ್ರಭು ಸೌಹಾರ್ದತೆ ಮತ್ತು ಸಾಮರಸ್ಯದ ಸಂಕೇತವಾಗಿ ರಂಜಾನ್ ತಿಂಗಳ ಅಷ್ಟೂ ದಿನಗಳು ಇಫ್ತಾರ್ ಕೂಟವನ್ನು ಆಯೋಜಿಸಿ, ಮುಸಲ್ಮಾನರಿಗೆ ಊಟ ಬಡಿಸಿದ್ದರು. ಆದರೆ, ಅದೇ ಮತಾಂಧ ಮುಸಲ್ಮಾನರು ಇಸ್ಕಾನ್ ದೇವಾಲಯಗಳ ಮೇಲೆ ದಾಳಿಗೈದು ಅವರನ್ನು ಹತ್ಯೆ ಮಾಡಿದ್ದಾರೆ. ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದರೂ ಭಾರತದಲ್ಲಿ ಅವರನ್ನು ಸೌಹಾರ್ದಯುತವಾಗಿ ಕಾಣುತ್ತಿದ್ದೇವೆ ಅನ್ನುವುದನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು. ಭಾರತ ಬಾಂಗ್ಲಾದೇಶಕ್ಕೆ ಇಷ್ಟೆಲ್ಲಾ ಸಹಾಯ ಮಾಡಿದರೂ, ಪ್ರತಿಬಾರಿಯೂ ಕಷ್ಟದ ಸಂದರ್ಭದಲ್ಲಿ ಅವರ ಜೊತೆಗಿದ್ದರೂ ಸಹ ಧರ್ಮದ ಹೆಸರಿನಲ್ಲಿ ಮತಾಂಧರಾಗಿ ಮಾನವತೆಯನ್ನು ಮರೆತು ನಡೆದುಕೊಂಡಿದ್ದಾರೆ. ಅಲ್ಲಿನ ಮುಸಲ್ಮಾನರು ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ಅಸಹ್ಯ ಮತ್ತು ಹೆದರಿಕೆ ಉಂಟು ಮಾಡುವಂತಹುದು. ಜಗತ್ತಿನಲ್ಲಿ ಮುಸಲ್ಮಾನರಿಗೆ ಮತ್ತು ಇತರ ಮತ ಪಂಥದವರಿಗೆ ಅನೇಕ ದೇಶಗಳಿವೆ ಆದರೆ, ಹಿಂದೂಗಳಿಗೆ ಇರುವುದು ಒಂದೇ ದೇಶ ಭಾರತ. ಎನ್.ಆರ್.ಸಿ ಮತ್ತು ಸಿ.ಎ.ಎ ವಿರುದ್ಧ ಪ್ರತಿಭಟನೆ ಮಾಡುವವರು ಈಗಲಾದರೂ ತಮ್ಮ ತಪ್ಪನ್ನು ಅರಿತುಕೊಳ್ಳಬೇಕು. ಸರ್ವೇಜನ ಸುಖಿನೋ ಭವಂತು ಎಂದು ಹೇಳುವ ನಾವು ಬಾಂಗ್ಲಾದ ಹಿಂದೂಗಳೊಂದಿಗೆ ನಿಲ್ಲಬೇಕಾಗಿದೆ, ಅವರ ಕ್ಷೇಮಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ.

Swami Nitaydas Serving Muslims during Ramzan

October 18, 2021

ಬಾಲಿವುಡ್ ಅಲ್ಲಿ ಭಾರತೀಯತೆ ಕಾಣಿಸುತ್ತಾ?

ಈ ವರ್ಷದ ಮಹಾತ್ಮ ಗಾಂಧಿ ಜಯಂತಿಯಂದು ಬಾಲಿವುಡ್ ಕಾ ಬಾದ್ ಷಾ ಅನ್ನಿಸಿಕೊಳ್ಳುವ ಶಾರುಖ್ ಖಾನ್ ಪುತ್ರ, 23 ವರ್ಷದ ಆರ್ಯನ್ ಖಾನ್ ಅನ್ನು ಎನ್.ಸಿ.ಬಿ ಬಂಧಿಸಿದ್ದಾರೆ. ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ, ಮಾದಕ ದ್ರವ್ಯಗಳ ಬಳಕೆ, ಮಾರಾಟ ಮತ್ತು ಖರೀದಿಯ ಆರೋಪ ಆತನ ಮೇಲಿರುವುದು. ಸಾಮಾನ್ಯವಾಗಿ ಮಾದಕ ವಸ್ತುಗಳ ಕೇಸಿನಲ್ಲಿ ಜಾಮೀನು ಸಿಗುವುದಿಲ್ಲ, ಅದರಂತೆ ಮುಂಬೈ ಹೈಕೋರ್ಟು ಆತನ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಇದೇನು ಹೊಸತಲ್ಲ, ಬಾಲಿವುಡ್ ಜೊತೆಗೆ ಮಾದಕ ದ್ರವ್ಯ ಆಗಾಗ ಕೇಳಿ ಬರುತ್ತಲೇ ಇದೆ. ಸಂಜಯ್ ದತ್ ತನ್ನ ಕಾಲೇಜ್ ದಿನಗಳಿಂದ 9 ವರ್ಷಗಳ ಕಾಲ ಡಗ್ಸ್ ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ. ಫರ್ದೀನ್ ಮಾದಕ ವ್ಯಸನಿಯಾಗಿದ್ದರು. ಆತನನ್ನು ಮುಂಬೈ ಪೊಲೀಸರು ಮೇ 5, 2001 ರಂದು ಬಂಧಿಸಿದ್ದರು. ಜೂನ್ 2018 ರಲ್ಲಿ ಥಾಣೆ ಪೊಲೀಸರು ನಟಿ ಮಮತಾ ಕುಲಕರ್ಣಿ ಭಾರತದ ಅತಿದೊಡ್ಡ ಡಗ್ಸ್ ಕೇಸಿನ ಆರೋಪಿಯೆಂದು ಹೆಸರಿಸಿದರು. ಕಳೆದ ವರ್ಷ ಭಾರತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ ಲಿಂಬಾಚಿಯಾರನ್ನು ಇದೇ ಕೇಸಿನಲ್ಲಿ ಬಂಧಿಸಲಾಯಿತು. ಈ ವರ್ಷ ಆಗಸ್ಟ್‌ನಲ್ಲಿ ಅರ್ಮಾನ್ ಕೊಹ್ಲಿಯನ್ನು ಎನ್‌.ಸಿ.ಬಿ ಬಂಧಿಸಿತ್ತು! ಇಷ್ಟಲ್ಲದೇ ಅನೇಕ ವಿಚಾರದಲ್ಲಿ ಬಾಲಿವುಡ್ ಭಾರತೀಯತೆಗಿಂತ ದೂರವಾಗಿರುವುದನ್ನು ಗಮನಿಸಬಹುದು. ಇದರ ಕುರಿತ ಒಂದು ಅವಲೋಕನವೇ ಈ ಲೇಖನ.
 
Bollywood and Drugs

ಚಕ್ದೇ ಇಂಡಿಯಾ! 2007 ರಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತದ ಮಾಜಿ ಹಾಕಿ ಆಟಗಾರ ರಂಜನ್ ನೇಗಿ ಅವರ ಜೀವನವನ್ನು ಹೋಲುತಿತ್ತು. ಆದರೆ, ಚಿತ್ರದಲ್ಲಿ ನಾಯಕನ ಹೆಸರನ್ನು ಕಬೀರ್ ಖಾನ್ ಎಂದಾಗಿತ್ತು. ಶೇರ್ನಿ! ಈ ವರ್ಷ ತೆರೆಕಂಡ ಚಿತ್ರವಿದು. ಈ ಚಿತ್ರದ ವಸ್ತು ಕೂಡ ಮಹಾರಾಷ್ಟ್ರದಲ್ಲಿ ನಡೆದ ಘಟನೆಯಂತಿದೆಯಾದರೂ ಇದರಲ್ಲಿ ವ್ಯತ್ಯಾಸವಿದೆ. ಅಸ್ಗರ್ ಅಲಿ ಖಾನ್ ಚಿತ್ರದಲ್ಲಿ ಕಲಾವಾ ಧರಿಸಿದ ರಂಜನ್ ರಾಜನ್ ಎಂಬ ಹೆಸರಿನಿಂದ ಚಿತ್ರದಲ್ಲಿ ಖಳನಟನಾಗಿದ್ದಾರೆ. ಅರಣ್ಯಾಧಿಕಾರಿ ಅಭರ್ನಾ ಅವರನ್ನು ಚಿತ್ರದಲ್ಲಿ ವಿದ್ಯಾ ವಿನ್ಸೆಂಟ್ ಎಂಬ ಕ್ರೈಸ್ತ ಪಂಥದವರ ಹೆಸರಿನಿಂದ ಚಿತ್ರಿಸಲಾಗಿದೆ. ಪಿ.ಕೆ - ನಿರ್ದೇಶಕ ರಾಜಕುಮಾರ್ ಹೇಳುವಂತೆ 'ಪಿ.ಕೆ ಒಂದು ಹಿಂದು ಧರ್ಮದ ಬಗ್ಗೆ ವಿಡಂಬನಾತ್ಮಕ ಚಿತ್ರ'. ಚಿತ್ರವನ್ನು ವಿಡಂಬನಾತ್ಮಕ ಎನ್ನುವುದಕ್ಕಿಂತ ಅಪಹಾಸ್ಯ ಸೂಚಕ ಎನ್ನಬಹುದಾಗಿದೆ.  ತಪಸ್ವಿ ಮಹರಾಜ್ (ಸೌರಭ್ ಶುಕ್ಲ) ಪಾತ್ರವನ್ನು ದೇವರನ್ನು ದರ್ಶಿಸುವ ವಿಚಾರವನ್ನು ತಪ್ಪಾಗಿ ಬಿಂಬಿಸಿದ್ದಾರೆ, ಹಿಂದೂ ದೇವರನ್ನು ಹಾಸ್ಯಾಸ್ಪದವಾಗಿ ಚಿತ್ರಿಸಲಾಗಿದೆ. ಗಂಗಾ ಕೀ ಸೌಗಂಧ್ - ಹಿಂದೂ ಪುರೋಹಿತರು ಕೇಸರಿ ಬಟ್ಟೆ ಧರಿಸಿ, ರುದ್ರಾಕ್ಷ ಧರಿಸಿ, ಜಪ ಮಾಡುವಾಗ ಮುಜರೆಯನ್ನು ನೋಡುತ್ತಿರುವಂತೆ ಚಿತ್ರಿಸಿದ್ದಾರೆ. ಚಿತ್ರದ ಹಾಡಿನಲ್ಲಿ ಹಿಂದೂ ಧರ್ಮದ ಮೂರ್ತಿ ಪೂಜೆಯನ್ನು ಆಡಿಕೊಂಡಿದ್ದಾರೆ. ಪುರೋಹಿತರು ಧರ್ಮದ ಹೆಸರಿನಲ್ಲಿ ಲೂಟಿ ಮಾಡುತ್ತಾರೆ, ದೇವರ ಹೆಸರಿನಲ್ಲಿ ಅಪರಾಧಿಗಳನ್ನು ರಕ್ಷಿಸುವವರು ಇವರು ಎಂಬಂತೆ ಚಿತ್ರಿಸಲಾಗಿದೆ. ಇದು ಕೆಲವು ಉದಾಹರಣೆಯಷ್ಟೇ. ಬಾಲಿವುಡ್ ನಲ್ಲಿ ಒಂದು ಧರ್ಮ ನಿಂದಕ ಚಿತ್ರಗಳನ್ನು ಮಾಡುವಂತಹ ಕೆಟ್ಟ ಚಟ ಬೆಳೆದಿದೆ ಎಂದೇ ಹೇಳಬಹುದು. ಸಾಂವಿಧಾನಿಕವಾಗಿ ಭಾರತೀಯರೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಹೌದು. ಹಾಗೆಂದು, ಒಂದು ಧರ್ಮ ಅಥವಾ ಪಂತದ ಓಲೈಕೆ ಮತ್ತೊಂದು ಧರ್ಮದ ಅವಹೇಳನ ಎಷ್ಟು ಸಲ್ಲ ಎಂಬುದನ್ನು ಬಾಲಿವುಡ್ ಆವರು ತಮಗೆ ತಾವು ಕೇಳಿಕೊಳ್ಳಬೇಕು. ಹಿಂದೂಸ್ಥಾನದಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವುದು ನಿಜಕ್ಕೂ ಭಾರತೀಯತೆ ಅಲ್ಲ!

ಮೊದಲ ಬಾರಿಗೆ ಮೋದಿ ಪ್ರಧಾನಿಯಾದ ಸಮಯವದು. ಭಾರತದಲ್ಲಿ ಅಸಹಿಶ್ಣುತೆ ಇದೆ ಎಂದು 2015 ರಲ್ಲಿ ಕೆಲವರು ಬೊಬ್ಬೆ ಇಟ್ಟರು. ಅದರಲ್ಲಿ ಬಾಲಿವುಡ್ಡಿನ ಆಮಿರ್ ಖಾನ್ ಕೂಡ ಇದ್ದರು. ವ್ಯಕ್ತಿ ಅಥವಾ ಪಕ್ಷವೊಂದರ ಮೇಲೆ ವಿರೋಧವಿದ್ದರೆ ಅವರ ವಿರುದ್ಧ ಮಾತಾಡುವುದು ಸರಿ. ಆದರೆ, ದೇಶ ಮತ್ತು ದೇಶದ ಜನರ ವಿರುದ್ಧ ಮಾತಾಡುವುದು ಸರಿನಾ ಎಂಬಂತಹ ಆತ್ಮವಿಮರ್ಶೆ ಮಾಡಿಕೊಳ್ಳಲಿಲ್ಲ. ಮುಂಬೈನಲ್ಲಿ 1993 ರಲ್ಲಿ ನಡೆದ ಸರಣಿ ಸ್ಪೋಟ, 2003 ಮತ್ತು 2006 ರಲ್ಲಿ ನಡೆದ ರೈಲು ಸ್ಪೋಟಗಳು, 2008 ರಲ್ಲಿ ತಾಜ್ ಹೋಟೆಲ್ಲಿನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ಇದೇ ಆಮಿರ್ ಖಾನ್ ಅಸಹಿಶ್ಣುತೆಯ ಮಾತು ಆಡಿರಲಿಲ್ಲ. 2005ರಲ್ಲಿ ಮೋದಿಗೆ ಅಮೇರಿಕಾ ವೀಸಾ ನಿರಾಕರಿಸುವ ವಿಚಾರದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ರಾಜ್ಯ ಸಭೆಯಲ್ಲಿ ಮೋದಿ ಪರವಾಗಿ ಇದ್ದರು. ಮೋದಿಯ ವಿರುದ್ಧ, ಮನಮೋಹನ್ ಸಿಂಗರು ಕ್ಷಮೆ ಬೇಡುವಂತೆ ಒತ್ತಾಯಿಸಿ ಬರೆದ ಪತ್ರಕ್ಕೆ ಆಮಿರ್ ಖಾನ್, ಅಮಲಾ ಅಕ್ಕಿನೇನಿ, ಆನಂದ್ ಪಟವರ್ಧನ್ ರವರುಗಳು ಸಹಿ ಹಾಕಿದ್ದರು. ನಮ್ಮ ಮನೆಯವರೊಬ್ಬರು ತಪ್ಪು ಮಾಡಿದಾಗಲೂ ಸಹ ನಮ್ಮ ಮನೆಯ ಮರ್ಯಾದೆ ಎಂದು ಬೇರೆಯವರ ಮುಂದೆ ನಾವು ಮಾತಾಡುವುದಿಲ್ಲ. ವಿದೇಶಿ ಸಂಸ್ಥೆಯ ಮುಂದೆ ನಮ್ಮದೇ ದೇಶದ ನಾಯಕನೊಬ್ಬ ತಪ್ಪು ಮಾಡಿಲ್ಲವಾದರೂ ಈ ರೀತಿ ಅವಹೇಳನಕಾರಿಯಾಗಿ ನಡೆದುಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲ. ಇದು ಬಾಲಿವುಡ್ ನವರಿಗೆ ತಿಳಿದಿಲ್ಲವ? 

List of people who signed letter demanding apology to Prime Minister in 2005

ಡ್ರಗ್ಸ್ ಕೇಸು, ಸಿನಿಮಾ ಮೂಲಕ ಧರ್ಮ ನಿಂದನೆ, ದೇಶ ಮತ್ತು ಅದರ ನಾಯಕರ ವಿರುದ್ಧ ಮಾತಾಡುವುದು ಒಂದು ಕೆಟ್ಟತನವಾಗಿ ಬಾಲಿವುಡ್ಡಿನಲ್ಲಿ ಬೆಳೆದಿದೆ. ತನ್ನ ಮಗ ಯಾರ ಜೊತೆ ಬೇಕಾದರೂ ಓಡಾಡಲಿ, ಏನು ಬೇಕಾದರೂ ಮಾಡಲಿ ಎಂದು 1999 ರಲ್ಲಿ ಮಾತಾಡಿದ್ದ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ. ತಂದೆಯಾದವನೊಬ್ಬ ಮಕ್ಕಳನ್ನು ಬೆಳಸುವ ರೀತಿ ಇದಲ್ಲ. ವಿಶ್ವವಿಖ್ಯಾತ ಜಾಕೀ ಚಾನ್ ಮಗನೂ ಸಹ ಇಂತಹುದೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ. ಜಾಕೀ ಚಾನ್ ಆತನ ಮಗನನ್ನು ವಹಿಸಿಕೊಂಡು ಬರಲ್ಲಿಲ್ಲ ಎಂಬುದು ನಮಗೆ ಆದರ್ಶವಾಗಬೇಕಿತ್ತು. ಸಿನಿಮಾ, ಕಲೆ ಎಂಬುದು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕೆ ಹೊರತಾಗಿ ಯಾವುದೋ ಒಂದು ಪಂಥದ ಒಲೈಕೆ ಅಥವಾ ಧರ್ಮನಿಂದನೆ ಮಾಡವುದು ಸರಿ ಇಲ್ಲ. ಇದೆಲ್ಲವನ್ನು ಗಮನಿಸಿದರೆ ಬಾಲಿವುಡ್ ಎಂಬುದು ನಮ್ಮ ಸಂಸ್ಕೃತಿಯಿಂದ ದೂರ ಆದಂತಿದೆ. ಆ ಕ್ಷೇತ್ರವನ್ನು ನೋಡಿದರೆ ಭಾರತೀಯತೆ ಇದೆಯಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ. ಇದು ಬದಲಾಗಬೇಕು ಮತ್ತು ನಮ್ಮ ಸಂಸ್ಕೃತಿಗೆ ಪೂರಕವಾಗಬೇಕು ಎಂಬುದು ನಮ್ಮ ಆಶಯ.

September 24, 2021

ಭಾರತ ಮತ್ತು ಜಗತ್ತನ್ನು ಒಮ್ಮೆ ಗಮನಿಸೋಣ

ತಾಲಿಬಾನ್‌ ಅಫ್ತಾನಿಸ್ತಾನವನ್ನು ವಶಪಡಿಕೊಳ್ಳುವುದರೊ೦ದಿಗೆ ಆಧುನಿಕ ಜಗತ್ತಿನಲ್ಲಿ ಭಯೋತ್ಪಾದಕ ಕೇಂದ್ರ ಸ್ಥಾನಕ್ಕೆ ಮರುಹುಟ್ಟು ಕೊಟ್ಟಂತಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡನ್‌ ತೆಗೆದುಕೊಂಡ ನಿರ್ಧಾರ ಬಿನ್‌ ಲಾಡನ್‌ ಮತ್ತು 9/11 ದಾಳಿ ನಡೆಸಿದ ಭಯೋತ್ಪಾದಕರು ಬಯಸಿದ ಇಸ್ಲಾಮಿಕ್‌ ಆಡಳಿದ ವ್ಯವಸ್ಥೆಗೆ ಅಡಿಪಾಯವಾಗಲಿದೆ. ಈ ಪ್ರಕ್ರಿಯೆ ಅಂತಾರಾಷ್ಟ್ರೀಯ ಜಿಹಾದಿ ಚಳುವಳಿಗೆ ಉತ್ತೇಜನವನ್ನು ನೀಡುತ್ತದೆ, ತಾಲಿಬಾನ್‌ ಸ೦ಘಟನೆಗೆ ಹೊಸಬರು ಸೇರಿಕೊಳ್ಳುವುದು ಹೆಚ್ಚಲಿದೆ, ಮಧ್ಯಪ್ರಾಚ್ಯ-ದಕ್ಷಿಣ ಯೂರೋಪಿನಿಂದ ಆಫ್ರಿಕಾ ಮತ್ತು ಏಷ್ಯಾದ ಭಾಗಗಳಲ್ಲಿ ಭಯೋತ್ಪಾದನ ಕೃತ್ಯವನ್ನು ಮಟ್ಟಹಾಕುವುದು ಮತ್ತಷ್ಟು ಕಠಿಣವಾಗುತ್ತದೆ. ಅಮೇರಿಕಾದಲ್ಲಿ ಕಳೆದ ಒಂದು ತಿಂಗಳಿನಿ೦ದ ದಿನನಿತ್ಯ ಲಕ್ಷಕ್ಕೂ ಅಧಿಕ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇ೦ಗ್ಲೆ೦ಡ್‌ ಅಲ್ಲೂ ಸಹ ಕಳೆದ 3-4 ತಿಂಗಳಿ೦ದ ಪ್ರತಿದಿನವೂ ಸರಾಸರಿ 35 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಫ್ರಾನ್ಸ್‌, ಇರಾನ್‌, ಟರ್ಕಿ ದೇಶಗಳಲ್ಲೂ ಪರಿಸ್ಥಿತಿ ಹೆಚ್ಚು ಕಮ್ಮಿ ಇದೇ ರೀತಿ ಇವೆ. ಅವರಲ್ಲಿರುವ ಜನಸಂಖ್ಯೆಗೆ ಹೊರಬರುತ್ತಿರುವ ಪ್ರಕರಣಗಳು ಹೆಚ್ಚು ಎ೦ದೇ ಹೇಳಬೇಕು. ಭಾರತದಲ್ಲಿ ಜುಲೈ ತಿಂಗಳಲ್ಲಿ ದಿನಕ್ಕೆ 40 ಸಾವಿರ ಪ್ರಕರಣವಿತ್ತು, ಅದೀಗ 30 ಸಾವಿರಕ್ಕೆ ಇಳಿದಿದೆ ಎ೦ಬುದು ಸಮಾಧಾನಕರ ವಿಚಾರ. ಸಾವಿನ ಸ೦ಖ್ಯೆಯೂ ಸಹ ಭಾರತದಲ್ಲಿ ಗಣನೀಯವಾಗಿ ಇಳಿದಿದೆ. ಇನ್ನು ಲಸಿಕೆ ನೀಡುವ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಮೊದಲ ಸ್ಮಾನದಲ್ಲಿದೆ. ಇಲ್ಲಿಯವರೆಗೆ ದೇಶದ ಶೇಕಡ 44 ರಷ್ಟು ಜನರಿಗೆ ಕನಿಷ್ಠ ಒ೦ದು ಡೋಸ್‌ ಲಸಿಕೆಯನ್ನು ಭಾರತ ನೀಡಿದೆ. ಪ್ರಧಾನಿ ಮೋದಿಯವರ ಜನ್ಮದಿನದ೦ತೂ 2.5 ಕೋಟಿ ಜನರಿಗೆ ಲಸಿಕೆ ನೀಡಿ ವಿಕ್ರಮ ಮೆರೆಯಿತು. ಈ ತಿ೦ಗಳಲ್ಲಿ ಮೂರು ಬಾರಿ ದಿನಕ್ಕೆ ಒಂದು ಕೋಟಿಗೂ ಅಧಿಕ ಮಂದಿಗೆ ಭಾರತ ಲಸಿಕೆ ನೀಡಿದೆ.

Vaccination Trend In India - 2021

ಕೊರೋನಾದ ಎರಡನೆ ಅಲೆಯ ಸಂದರ್ಭದಲ್ಲಿ ಭಾರತದಲ್ಲಿ ಹೆಣಗಳನ್ನು ಸುಡುತ್ತಿರುವ ಚಿತ್ರವನ್ನು ಪ್ರಕಟಿಸಿದ್ದ ಅಮೇರಿಕಾಕ್ಕೆ ಈಗ ಅದೇ ರೀತಿಯ ಪರಿಸ್ಥಿತಿ ಬಂದಿದೆ. ಸೆಪ್ಟೆಂಬರ್ ಅಲ್ಲಿ ಬರಬಹುದು ಎನ್ನಲಾಗಿದ್ದ ಮೂರನೆ ಅಲೆಗೆ ಮುನ್ನ ಭಾರತ ತನ್ನ ಆಮ್ಲಜನಕ ಉತ್ಪಾದನಾ ಸಾಮರ್ಥ್ಯವನ್ನು ದಿನಕ್ಕೆ 15000 ಟನ್ಗಳಿಗೆ ಹೆಚ್ಚಿಸುವ ಗುರಿಯನ್ನು ಹಾಕಿಕೊಂಡು ಅದರ ಪ್ರಕಾರ ಕೆಲಸ ಮಾಡುತ್ತಿದೆ. ಕೊರೋನಾದ ಸಂದರ್ಭದ ಈ ಎರಡು ವರ್ಷಗಳಲ್ಲಿ 70 ಸಾವಿರ ಮೆಗಾವ್ಯಾಟ್ಗಳಷ್ಟು ಸೌರ ವಿದ್ಯುತ್ ಉತ್ಪಾದನೆ ಮಾಡಿದೆ. ದೇಶದಲ್ಲಿ ಲಸಿಕೆ ಉತ್ಪಾದನೆಯು ಎರಡು ಪಟ್ಟು ಹೆಚ್ಚಾಗಿದೆ ಮತ್ತು ಮುಂದಿನ ತಿಂಗಳು ನಾಲ್ಕು ಪಟ್ಟು ಅಂದರೆ 300 ಮಿಲಿಯನ್ಗಳಷ್ಟು ಆಗಲಿದೆ. ನಮಗೆ ಬೇಕಾದಷ್ಟನ್ನು ಬಳಸಿಕೊಂಡು ಹೆಚ್ಚುವರಿ ಲಸಿಕೆಯನ್ನು ಹೊರದೇಶಕ್ಕೆ ರಫ್ತು ಮಾಡುತ್ತೇವೆ ಎಂದು ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಫೆಬ್ರವರಿ 2021 ಹೊತ್ತಿಗೆ ಒಟ್ಟು 9,242 ಕಿಮೀ ಅಷ್ಟು ಹೆದ್ದಾರಿಯನ್ನು ಭಾರತ ನಿರ್ಮಾಣ ಮಾಡಿದೆ. 2020-21ರ ಅವಧಿಯಲ್ಲಿ ದೈನಂದಿನ ಸರಾಸರಿ 29 ಕಿಲೋಮೀಟರ್ ನಂತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಕೊರೋನಾ ಕಾಲದಲ್ಲೂ ಹೆದ್ದಾರಿ ನಿರ್ಮಾಣ ಕಾರ್ಯ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ನಡೆದಿದೆ. 2021-22 ರಲ್ಲಿ, ಸರ್ಕಾರವು 12,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಸಮಗ್ರ ಮಾರ್ಗದರ್ಶಿ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ಅಡಿಯಲ್ಲಿ ಭಾರತ ಪೃಥ್ವಿ, ಅಗ್ನಿ, ಆಕಾಶ್, ತ್ರಿಶೂಲ್, ನಾಗ ಎಂಬ ಐದು ಕ್ಷಿಪಣಿಗಳನ್ನು ತಯಾರಿಸಿದೆ. "ಕ್ಷಿಪಣಿ ತಂತ್ರಜ್ಞಾನದಲ್ಲಿ ನಾವು ಸಂಪೂರ್ಣ ಆತ್ಮನಿರ್ಭರವಾಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಹೇಳಬಲ್ಲೆ ಮತ್ತು ನಾವು ದೇಶದ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ತಂತ್ರಜ್ಞಾನದ ಮೇಲೆ ಕೆಲಸ ಮಾಡಬೇಕಾಗಿದೆ" ಎಂದು ಡಿ.ಅರ್.ಡಿ.ಒ. ಅಧ್ಯಕ್ಷ ಸತೀಶ್ ರೆಡ್ಡಿ ಜೆ.ಎನ್.ಯು ಅಲ್ಲಿನ ಕಾರ್ಯಕ್ರಮವೊಂದರಲ್ಲಿ ಹೇಳಿದರು. ಅಗ್ನಿ-5 ಕ್ಷಿಪಣಿಯನ್ನು ಮತ್ತೆ ಪರೀಕ್ಷೆ ಮಾಡುವ ಉದ್ದೇಶ ಭಾರತ ಹೊಂದಿದೆ. ಇದರ ತೂಕ ಸುಮಾರು 50 ಸಾವಿರ ಕೇಜಿ ಇದ್ದು 5000 ಕೀ.ಮೀ ವ್ಯಾಪ್ತಿಯನ್ನು ತಲುಪಬಹುದಾದ ಶಕ್ತಿ ಹೊಂದಿದೆ. ಇದರ ಅರ್ಥ ಚೀನಾದ ರಾಜಧಾನಿ ಸೇರಿದಂತೆ ಬಹುತೇಕ ಪ್ರಮುಖ ಪಟ್ಟಣಗಳು ಅಗ್ನಿಯ ವ್ಯಾಪ್ತಿಗೆ ಬರುತ್ತದೆ! ಭಾರತ ಪರೀಕ್ಷೆ ಮಾಡುವ ಈ ಪ್ರಕ್ರಿಯೆ ಚೀನಾಕ್ಕೆ ನಿದ್ದೆಗೆಡಿಸಿದೆ. "ಭಾರತ ಪರಮಾಣು ಕ್ಷಿಪಣಿಯನ್ನು ತಯಾರಿಸುವ ಕುರಿತು ಯು.ಎನ್‌.ಎಸ್‌.ಸಿ.ಆರ್ 1172 ನಿಬಂಧನೆಗಳಿವೆ" ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲೀಜಿಯಾನ್ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ಒಲಂಪಿಕ್ಸ್ ಹಾಗೂ ಪ್ಯಾರಾ ಒಲಂಪಿಕ್ಸ್ ಅಲ್ಲಿ ಭಾರತ ಹಿಂದೆಂದಿಗಿಂತಲೂ ಅದ್ಭುತವನ್ನು ಸಾಧಿಸಿದೆ. ಭಾರತದ ಜನತೆ ಮತ್ತು ಸರ್ಕಾರ ಸಾಧಕರನ್ನು ಶ್ರೇಷ್ಠ ರೀತಿಯಲ್ಲಿ ಗೌರವಿಸಿದೆ. ಭಾರತ ಕ್ರಿಕೇಟ್ ಹೊರತು ಬೇರೆ ಕ್ರೀಡೆಯನ್ನು ಒಂದು ರೀತಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ, ಈ ಐದಾರು ವರ್ಷಗಳಲ್ಲಿ ಇತರ ಕ್ರೀಡೆಗೆ ಸಿಕ್ಕಿರುವ ಉತ್ತೇಜನದ ಫಲಿತಾಂಶ ಈ ವರ್ಷದ ಒಲಂಪಿಕ್ಸಲ್ಲಿ ಕಾಣಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ವಾರ ಅಮೇರಿಕಾದಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆಯಲ್ಲಿ ಕೊರೋನಾ ವಿರುದ್ಧದ ಲಸಿಕೆಗಳ ಮೇಲಿನ ಜಾಗತಿಕ ಪೇಟೆಂಟ್ ಅನ್ನು ಮನ್ನ ಮಾಡುವ ಪ್ರಸ್ತಾವವನ್ನು ಪ್ರಧಾನಿ ಮೋದಿ ಮಾಡಲಿದ್ದಾರೆ. 'ಸರ್ವೇ ಜನ ಸುಖಿನೋ ಭವಂತು' ಎಂಬ ಧ್ಯೇಯವಾಕ್ಯವನ್ನು ಭಾರತ ಎತ್ತಿಹಿಡಿಯುವ ಪ್ರಕ್ರಿಯೆ ಇದಾಗಿದೆ.

ಅಮೇರಿಕಾ, ಇಂಗ್ಲೆಂಡ್, ಭಾರತ ಮತ್ತು ಇತರ ದೇಶಗಳು ಅಫ್ಘಾನಿಸ್ತಾನದಿಂದ ರಾಜತಾಂತ್ರಿಕ ಮತ್ತು ತಮ್ಮ ದೇಶದ ನಾಗರೀಕರನ್ನು ಸ್ಥಳಾಂತರಿಸಿದರೂ ಚೀನಾ ಕಾಬೂಲಿನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರವು ಮಾಡಲಿಲ್ಲ. ತಾಲಿಬಾನಿನೊಂದಿಗೆ ತಮ್ಮ ಸಹಕಾರ ಇದೆ ಎಂಬ ಹೇಳಿಕೆಯನ್ನು ನೀಡಿತು. ತನ್ನ ಯೋಜನೆಗಳಿಗೆ ಮೂಲಸೌಕರ್ಯವನ್ನು ಭದ್ರಪಡಿಸಿಕೊಳ್ಳಲು ಮತ್ತು ಉಯ್ಘರ್ ಮುಸ್ಲ್ಮಾನರನ್ನು ಪ್ರತ್ಯೆಕಿಸಲು ಚೀನಾ ತಾಲಿಬಾನಿಗಳ ಸಹಕಾರವನ್ನು ಪಡೆಯಲು ಮುಂದಾಗಿದೆ. ಚೀನಾದ ವಾಯುವ್ಯ ಪ್ರದೇಶದ ಕ್ಸಿಂಜಿಯಾಂಗ್‌ನ ಶಿಬಿರಗಳಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಉಯ್ಘರ್ ಮುಸ್ಲಿಮರನ್ನು ಬಂಧಿಸಿ, ಅಲ್ಲಿನ ಜನರ ಮೇಲೆ ಆಕ್ರಮಣ ಮತ್ತು ಅತ್ಯಾಚಾರದ ಆರೋಪವನ್ನು ಚೀನಾ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಈ ದೌರ್ಜನ್ಯವನ್ನು ಚೀನಾ ಪದೇ ಪದೇ ನಿರಾಕರಿಸಿದೆ. ಈ ಆರೋಪದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾಲಿದೊಂದಿಗಿನ ಸಂಬಂಧ ಬೆಳೆಸಲು ಚೀನಾ ಮುಂದಾಗಿದೆ. ಪಾಕೀಸ್ತಾನವಂತೂ ತಾಲಿಬಾನ್ ಜೊತೆಗಿನ ಇದೆ ಎಂಬ ವಿಚಾರ ಈಗ ಹೊಸತಲ್ಲ. ಪಂಜಶೀರ್ ಕಣಿವೆಯನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನದ ಸೇನಾ ಸಿಬ್ಬಂದಿಗಳು ತಾಲಿಬಾನಿಗಳೊಂದಿಗೆ ಹೋರಾಡುತ್ತಿದ್ದಾರೆ, ಅದಕ್ಕೆ ಪುರಾವೆ ಸಂಘರ್ಷದ ಸ್ಥಳದಲ್ಲೇ ಪತ್ತೆಯಾಗಿದೆ. ಪಂಜಶೀರ್‌ನಲ್ಲಿ ಪ್ರತಿರೋಧ ಪಡೆಗಳ ಪ್ರತಿದಾಳಿಯಲ್ಲಿ ಹುತಾತ್ಮರಾದ ಪಾಕೀಸ್ತಾನಿ ಸೈನಿಕನ ಗುರುತಿನ ಚೀಟಿ ಪತ್ತೆಯಾಯಿತು. ಇದನ್ನು ಪಾಕೀಸ್ತಾನ ಅಲ್ಲಗೆಳೆಯಿತು. ಕಾರ್ಗಿಲ್ ಯುದ್ಧದಲ್ಲಿ ಮೃತಪಟ್ಟ ತಮ್ಮ ಸೈನಿಕರನ್ನೇ ಒಪ್ಪಿಕೊಳ್ಳದ ಪಾಕೀಸ್ತಾನ ಈಗ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತದೆ ಎಂಬುದು ಸಾಧ್ಯವೇ ಇಲ್ಲ. ಜಗತ್ತು ಕಳೆದ 3-4 ವರ್ಷದಿಂದ ಭಯೋತ್ಪಾದನೆ ಕುರಿತು ಪಾಕೀಸ್ತಾನವನ್ನು ತೆಗಳುತ್ತಾ ಬಂದಿದೆ. ಇಸ್ಲಾಮಿಕ್ ಸಹಕಾರದ ಸಂಘಟನೆ (ಒ.ಐ.ಸಿ.) ಮತ್ತು ಅರಬಿ ದೇಶಗಳು ಪಾಕೀಸ್ತಾನದ ವಿರುದ್ಧ ಮಾತಾಡಿದೆ. ಈ ದೇಶವನ್ನು ಬೆಂಬಲಿಸುತ್ತಿರುವುದು ಚೀನಾ ಮಾತ್ರ ಎಂಬುದನ್ನು ನೆನಪಿಡಬೇಕಾದ ವಿಚಾರ. ಕಳೆದ ವಾರ ನ್ಯೂಜಿಲಾಂಡ್, ಇಂಗ್ಲೆಂಡ್ ತಮ್ಮ ಆಟಗಾರರ ಸುರಕ್ಷತೆಯ ಕಾರಣದಿಂದ ಕ್ರಿಕೇಟ್ ಪ್ರವಾಸವನ್ನು ರದ್ದು ಮಾಡಿದೆ. ಪಾಕೀಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳು ಕ್ರಿಕೇಟ್ ವಿಶ್ವಕಪ್ ನಲ್ಲಿ ಆಡುವುದು ಈಗ ಆನುಮಾನವಾಗಿದೆ. ಇಸ್ಲಾಂ ವಿರೋಧಿ ಚಿಂತನೆಗಳಿವೆ ಎಂಬ ಕಾರಣಕೊಟ್ಟು ತಾಲಿಬಾನಿಗಳು ಐಪಿಎಲ್ 2021 ಪ್ರಸಾರವನ್ನು ಅಫ್ಘಾನಿಸ್ತಾನದಲ್ಲಿ ನಿಷೇಧ ಮಾಡಿದ್ದಾರೆ. ಹೆಣ್ಣುಮಕ್ಕಳು ವಿದ್ಯಾಭ್ಯಾಸಕ್ಕೆಂದು ಕಾಲೇಜಿಗೆ ತೆರಳಲು ಸಹ ಗಂಡಸೊಬ್ಬನನ್ನು ಕರೆದುಕೊಂಡು ಬರಬೇಕು ಎಂದು ತಾಲಿಬಾನಿನ ಕಾನೂನು ಅಫ್ಘಾನಿಸ್ತಾನದಲ್ಲಿ ಚಾಲ್ತಿಯಾಗಿದೆ. ತಾಲಿಬಾನಿಗಳ ಆಡಳಿತದೊಂದಿಗೆ ಅಫ್ಘಾನಿಸ್ತಾನ ಅಧುನಿಕ ಆಯುಧಗಳೊಂದಿಗೆ ಮಧ್ಯಕಾಲಕ್ಕೆ ಸಾಗಿದೆ. ತಮ್ಮ ದೇಶವನ್ನು ಜಾಗತಿಕವಾಗಿ ಮುಂದುವರೆಸಬೇಕು ಎಂಬ ಉದ್ದೇಶ ಅವರಲ್ಲಿ ಇಲ್ಲ. ಉಳಿದಂತೆ ಆಫ್ರಿಕಾ ಖಂಡದ ಅನೇಕ ರಾಷ್ಟ್ರಗಳು ನಾಗರೀಕತೆಯ ವಿಚಾರದಲ್ಲಿ ಇನ್ನೂ ಕತ್ತಲೆಯಲ್ಲೇ ಉಳಿದಿದೆ.

Kiwis and England cancels its tour to Pakistan

ಪ್ರಧಾನಿ ಮೋದಿಯವರ 5 ದಿನದ ಅಮೇರಿಕಾದ ಪ್ರವಾಸ ಮಹತ್ವ ಪಡೆದುಕೊಂಡಿದೆ. ಅಲ್ಲಿರುವ ಭಾರತೀಯ ಉದ್ಯಮಿಗಳೊಂದಿಗೆ ಚರ್ಚೆ, ಕ್ವಾಡ್ ಶೃಂಗ ಸಭೆ, ಯು.ಎನ್. ಸಭೆ, ಬೈಡನ್ ಜೊತೆಗಿನ ಮೊದಲ ದ್ವಿಪಕ್ಷೀಯ ಮಾತುಕತೆ ಬಹಳ ಮುಖ್ಯವಾಗಿದೆ. ಅಫ್ಘಾನ್ ಬಿಕ್ಕಟ್ಟು ಮತ್ತದರ ಪರಿಣಾಮಗಳು, ಚೀನಾದ ವಿಸ್ತರಣಾವಾದ, ಪರಿಸರ ರಕ್ಷಣೆ ಮತ್ತು ಶುದ್ಧಶಕ್ತಿಯ ಪಾಲುದಾರಿಕೆಯ ಕುರಿತು ಚರ್ಚೆಗಳು ನಡೆಯುವುದರಲ್ಲಿದೆ. ಜಗತ್ತನ್ನು ಗಮನಿಸಿದರೆ ಭಾರತ ಒಂದು ರೀತಿ ನೆಮ್ಮದಿಯಾಗಿದೆ, ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದೆ ಮತ್ತು ಪ್ರತಿ ಹಂತದಲ್ಲೂ ಬೆಳವಣಿಗೆ ಕಾಣುತ್ತಿದೆ. ಲಸಿಕೆ ಪಡೆದ ಕೆಲವೇ ನಿಮಿಷಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣಪತ್ರ ನಮ್ಮ ಮೊಬೈಲ್ ಅಲ್ಲೇ ನೋಡಬಹುದಾಗಿದೆ. ಮುಂದುವರೆದ ದೇಶ ಎಂದು ಕರೆಸಿಕೊಳ್ಳುವ ಅಮೇರಿಕಾ ಮತ್ತು ಇಂಗ್ಲೆಂಡ್ ಇನ್ನೂ ಕೈಬರಹದ ಪ್ರಮಾಣಪತ್ರ ನೀಡುತ್ತಿದೆ. ಭಾರತದಲ್ಲಿ ಒಳ್ಳೆಯದಿದ್ದರೂ, ಎಲ್ಲಾ ಅನುಕೂಲವನ್ನು ಪಡೆದುಕೊಂಡು ತಮ್ಮಷ್ಟಕ್ಕೆ ತಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೂ ವಿರೋಧ ಪಕ್ಷಗಳು, ಚೀನಾದ ಗುಲಾಮರಾದ ಕಮ್ಯುನಿಸ್ಟರು ಮನಸ್ಸಿಗೆ ಬಂದಂತೆ ಮಾತಾಡುತ್ತಿದ್ದರೆ. ಲೆಕ್ಕವನ್ನು ನೋಡದೆ ಲಸಿಕೆಯನ್ನು ಕಾಯ್ದಿರಿಸಿ ಮೋದಿಯವರ ಹುಟ್ಟು ಹಬ್ಬದಂದು ಕೊಟ್ಟಿದ್ದಾರೆ ಎಂದೆಲ್ಲಾ ಅರ್ಥವಿಲ್ಲದ ಮಾತಾಡಿದ್ದಾರೆ. ಇಂತಹವರ ಮಾತಿಗೆ ಬೆಲೆಕೊಡದೆ ದೇಶವನ್ನು ಗಮನಿಸುತ್ತಾ, ಅದರ ಬೆಳವಣಿಗೆಗೆ ನಾವು ಜೊತೆಯಾಗಬೇಕಿದೆ.

Hand Written Covid Vaccination Certificates in America and United Kingdom

September 15, 2021

ದಶಕಾವಲೋಕನ - Bosch ಅಲ್ಲಿ ಒಂದು ದಶಕ

ಸೆಪ್ಟಂಬರ್ 12, 2021 ಕ್ಕೆ ನನ್ನ ವೃತ್ತಿ ಜೀವನ ಶುರುಮಾಡಿ ಹತ್ತು ವರ್ಷ. ಹತ್ತು ವರ್ಷ ನಾನು Bosch ಅಲ್ಲೇ ಕೆಲಸ ಮಾಡಿದ್ದೇನೆ. ಒಂದೇ ಕಡೆ ಹತ್ತು ವರ್ಷ ಕೆಲಸ ಮಾಡಿರುವುದು ಹಲವರಿಗೆ ಹುಬ್ಬೇರಿಸುವ ವಿಚಾರವೆ. ಈಗಿನ ಕಾರ್ಪೊರೇಟ್ ಜಗತ್ತಿನಲ್ಲಿ 3-4 ವರ್ಷ ಒಂದೆಡೆ ಇರುವುದೇ ಹೆಚ್ಚು. ಕೆಲಸದ ಮೇಲಿನ ಆಸಕ್ತಿ, ಕಚೇರಿಯ ವಾತಾವರಣ, ಸಹೋದ್ಯೋಗಿಗಳು ಮತ್ತು ಮ್ಯಾನೆಜರ್ ಜೊತೆಗಿನ ಒಡನಾಟ ಅಥವಾ ಹಣ ಇವುಗಳು ಒಂದು ಕಂಪನಿಯಲ್ಲಿ ಇರುವ ಅವಧಿಯನ್ನು ನಿರ್ಧರಿಸುತ್ತದೆ ಎಂಬುದು ನನ್ನ ಅಭಿಪ್ರಾಯ. Bosch ಅಲ್ಲಿ ನನಗೆ ಇದಾವುದರಲ್ಲೂ ಕೊರತೆ ಕಾಣಲಿಲ್ಲವಾದ್ದರಿಂದ ನಾನು ಈ ಸಂಸ್ಥೆಯನ್ನು ಬಿಟ್ಟಿಲ್ಲ. ಇದರ ಬಗ್ಗೆ ನನ್ನ ಸ್ನೇಹಿತರು, ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳಲ್ಲಿ ಆಕ್ಷೇಪವಿರಬಹುದು. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ ಎಂದು ನನ್ನ ಅಭಿಮತ. ವೃತ್ತಿ ಜೀವನದಲ್ಲಿ ಹತ್ತು ವರ್ಷ ದೊಡ್ಡದು ಅಥವಾ ಚಿಕ್ಕದ್ದು ಎಂಬ ಚಿಂತನೆ ನನ್ನದಲ್ಲವೇ ಅಲ್ಲ. ನನ್ನ ಅನುಭವದ ಮಾತನ್ನು ಬರೆಯುವುದು ನನ್ನ ಮನೋಧರ್ಮ, ಹಾಗಾಗಿ ಬರೆಯುತ್ತಿದ್ದೇನೆ.


Momento for a Decade @ Bosch
 
Bosch ಗೆ ನಾನು ಸೇರಬೇಕು ಎಂದು ಅಂದುಕೊಂಡವನೇ ಅಲ್ಲ. ಇಂಜಿನಿರಿಂಗ್ 7ನೇ ಸೆಮಿಸ್ಟರ್ ಓದುವಾಗಲೇ ಮತ್ತೊಂದು ಕಂಪನಿಯ ಕೆಲಸ ನನಗೆ ಸಿಕ್ಕಿತ್ತು. ಅದೊಂದು ದಿವಸ ನನ್ನ ಸಹಪಾಠಿಯೊಬ್ಬ 'ನಾಳೆ Bosch ಕಂಪನಿಯ ಕ್ಯಾಂಪಸ್ ಸೆಲೆಕ್ಶನ್ ಇದೆ' ಎಂದು ನನ್ನನ್ನು ಕರೆದ. ಬೆಂಗಳೂರಿನ SJBIT ಕಾಲೇಜಿನಲ್ಲಿ interview ಇದ್ದದ್ದು. ಒಂದು ಕೆಲಸ ಇದೆ ಎಂಬ ಉಡಾಫೆ ಭಾವದಿಂದಲೇ campus selection ಗೆ ಹೋಗಿದ್ದೆ. ಮೊದಲು C.E.T ಮಾದರಿಯ ಬರವಣಿಗೆ ಪರೀಕ್ಷೆ. ಪರೀಕ್ಷೆ ಮುಗಿದು ಫಲಿತಾಂಶ ಬರುವ ಹೊತ್ತಿಗೆ ಸಂಜೆಯಾಗಿತ್ತು. ಪರೀಕ್ಷೆ ಬರೆದವರ ಸಂಖ್ಯೆ 1450 ಎಂದು ನನಗೆ ಆಗಲೇ ತಿಳಿದದ್ದು. ಅಷ್ಟು ಜನರಲ್ಲಿ ನನ್ನನೂ ಸೇರಿದಂತೆ 85 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಸಂಖ್ಯೆಯನ್ನು ನೋಡಿ ನಾನು ಸ್ವಲ್ಪ ಗಂಭೀರನಾದೆ (ಪ್ರಾಂಶುಪಾಲರ ಕಚೇರಿಯ ಮುಂದೆ placement ಗಾಗಿ ವಿದ್ಯಾರ್ಥಿಗಳೆಲ್ಲ strike ಮಾಡಿದ್ದು, ನಾನು ಮುಂದಾಳತ್ವ ವಹಿಸಿದ್ದು ಎಲ್ಲಾ ಇಲ್ಲಿ ನೆನಪಾಗುತ್ತದೆ). ಮಾರನೆ ದಿವಸ ಎರಡನೇ ಸುತ್ತು. ಇಲ್ಲಿ ಎರಡು ಸುತ್ತು face to face technical interview ಗೆ ಕೂರಬೇಕಿತ್ತು. ಮೊದಲ ಸುತ್ತು 15-20 ನಿಮಿಷದಲ್ಲಿ ಮುಗಿದಿತ್ತು ಅದರೆ ಎರಡನೆ ಸುತ್ತು ಬರೋಬ್ಬರಿ 2.5 ಗಂಟೆಯದಾಗಿತ್ತು. ಎರಡನೇ ಸುತ್ತು ಮುಗಿಸುವಷ್ಟರಲ್ಲಿ ನಾನು ಬೆವತು ಹೋಗಿದ್ದೆ. ಮಧ್ಯಾಹ್ನ ಊಟ ಮಾಡಿರಲಿಲ್ಲ ಆದ್ದರಿಂದ ಸುಸ್ತು ಆಗಿತ್ತು. ಇದಾದ ಮೇಲೆ ಕೊನೆಯಲ್ಲಿ HR ಸುತ್ತು. ನಾನೇ ಕೊನೆಯ ಅಭ್ಯರ್ಥಿ. ನನ್ನ ಸರದಿ ಬರುವ ಹೊತ್ತಿಗೆ ರಾತ್ರಿ 8:30 ಆಗಿತ್ತು. Interview panelists ಎಲ್ಲರೂ ಹೊರಡಲು ತಯಾರಿ ಮಾಡಿಕೊಳ್ಳುತ್ತಿದ್ದರು. HR ಸುತ್ತಿನಲ್ಲಿ ನನಗೆ ಕೇಳಿದ್ದು ಎರಡೇ ಪ್ರಶ್ನೆಗಳು! Pythagoras Theorem ಹೇಳು ಮತ್ತು 25*25 ಎಷ್ಟು ಎಂದು. ನಾನು ಆಯ್ಕೆಯಾಗಿದ್ದೆ ಎಂಬುದು ಅಲ್ಲೇ ನನಗೆ ಸ್ಪಷ್ಟವಾಯ್ತು. Bosch ಅಲ್ಲಿ technical ಸುತ್ತಿನಲ್ಲಿ ಆಯ್ಕೆಯಾದರೆ ಮುಗೀತು ಎಂಬ ಅಭಿಪ್ರಾಯ ನನಗೆ ಬರಲು ಇದೇ ಕಾರಣ. ಅಂದುಕೊಂಡಂತೆ ನಾನು ಆಯ್ಕೆಯಾಗಿದ್ದೆ. ಅಧಿಕೃತವಾಗಿ ಈ ವಿಚಾರ ನಮ್ಮ ಕಾಲೇಜಿನಲ್ಲಿ ಎರಡು ದಿನಗಳ ನಂತರ ತಿಳಿಯಿತು. ಹೀಗೆ ಆಟಾಡಿಕೊಂಡೆ ನಾನು Bosch ಗೆ ಸೇರಿದೆ.
 
ಕೆಲಸಕ್ಕೆ ಸೇರುವ ಹಿಂದಿನ ದಿವಸ ಅಂದರೆ ಸೆಪ್ಟಂಬರ್ 11 ನೇ ತಾರೀಖು ಕೋರಮಂಗಲದಲ್ಲಿದ್ದ ಕಚೇರಿಗೆ ಹೇಗೆ ಬರುವುದು ಎಂದು ನೋಡಿಕೊಂಡೆ. Forum ಎದುರುಗಡೆ ನಮ್ಮ ಕಚೇರಿ ಇದೆ ಎಂದು ಅಂದಿನವರೆಗೆ ನನಗೆ ತಿಳಿದಿರಲಿಲ್ಲ. ಮೊದಲ ದಿನದ ದುಗುಡ, ಉತ್ಸಾಹ ಪದಗಳಲ್ಲಿ ಬಣ್ಣಿಸಲು ಆಗುವುದಿಲ್ಲ. ಹೊಟ್ಟೆಯಲ್ಲಿ ಚಿಟ್ಟೆ ಹಾರಾಡುವಂತೆ ಭಾಸವಾಗುತ್ತಿತ್ತು. ಕಾಲೇಜಿನ ವಿದ್ಯಾರ್ಥಿ ಜೀವನದಿಂದ ಕಾರ್ಪೊರೇಟ್ ಜಗತ್ತಿಗೆ ನನ್ನನ್ನು ತೆರೆದುಕೊಳ್ಳಬೇಕಿತ್ತು. ಅದೊಂದು ಹೊಸ ಜಗತ್ತು ನನ್ನ ಪಾಲಿಗೆ. ಅಂದು ನನ್ನ ಜೊತೆ ಸುಮಾರು 105 ಜನ ಸೇರಿದ್ದರು. ಒಂದೆರಡು ದಿವಸದಲ್ಲಿ ಕೆಲವರು ಪರಿಚಯವಾದರು. ಮೊದಲ ಬಾರಿಗೆ ಕಚೇರಿಯ filter ಅಲ್ಲಿ ಬಿಸಿ ನೀರು ಕುಡಿದು ನಾಲಿಗೆ ಸುಟ್ಟಿತ್ತು. ಒಂದು ವಾರದಲ್ಲಿ ಹೊಸ ಜಗತ್ತಿಗೆ ನಾನು ಹೊಂದಿಕೊಂಡೆ. ಮುಂದಿನ ಮೂರು ತಿಂಗಳು ತರಬೇತಿ. ನಾನು, ಗಿರೀಶ್ ಪ್ರಸನ್ನ (ಮಂಗಳೂರು. ಈತನಿಗೂ Bosch ಅಲ್ಲಿ ಹತ್ತು ವರ್ಷವಾಯ್ತು), ಬಿಭೂತಿ (ಬಹುಶಃ ಒಡಿಸ್ಸಾ) ಮತ್ತು ಕಾರ್ತಿಕ್ ಮೊಲಗು (ಆಂಧ್ರ ಪ್ರದೇಶ) ಒಂದು ತಂಡವಾಗಿ ಆಯ್ಕೆಯಾದೆವು. ಎಲ್ಲರೂ ಹೆಚ್ಚು ಮಾತಾಡುತ್ತಿದ್ದಾರೆ ಅನ್ನಿಸುತ್ತಿತ್ತು ಕಾರಣ ನಾನು ಮಾತೇ ಆಡುತ್ತಿರಲಿಲ್ಲ ಆತ್ಮವಿಶ್ವಾಸದ ಕೊರತೆಯ ಕಾರಣದಿಂದಾಗಿ. ತರಬೇತಿಯ ಫಲಿತಾಂಶ ಹೊರಬಂದಿತ್ತು. ನನ್ನ ತಂಡದ ಮೂವರು ಮೊದಲ ಹತ್ತರಲ್ಲಿ ಸ್ಥಾನ ಪಡೆದಿದ್ದರು. ಇದ್ದ 60 ಜನರ ಗುಂಪಲ್ಲಿ ನಾನು ಮೊದಲ 50 ರಲ್ಲೂ ಇರಲಿಲ್ಲ ಎಂದು ತೋರುತ್ತದೆ. ನಾಲ್ವರ ಈ ತಂಡ ಮತ್ತು ಇತರ 6-7 ಜನ Airbags Department ಸೇರಿದೆವು. ಒಬ್ಬೊಬ್ಬರು ಬೇರೆ ಬೇರೆ ತಂಡಕ್ಕೆ ಆಯ್ಕೆಯಾದೆವು. ಬಿಭೂತಿ ಮತ್ತು ಗಿರೀಶ್ ಮಾತ್ರ ಒಂದು ತಂಡದಲ್ಲಿದ್ದರು. ಅಲ್ಲಿಂದಾಚೆಗೆ ಮತ್ತೊಂದು ಹಂತ ಪ್ರಾರಂಭವಾಯಿತು.

 

***********************************************************************


ವೃತ್ತಿ ಜೀವನದ ಗುರುಗಳು

 

ಸತೀಶ್ ಶಿವ ಷಣ್ಮುಗಂ (SSS) :

ಈಜು ಬಾರದವನಿಗೆ ನದಿ ಅಥವಾ ಸಮುದ್ರಕ್ಕೆ ತಳ್ಳಿ ಈಜು ಕಲಿತುಕೊ ಅನ್ನುವಂತಹ, ಏನೇ ಪ್ರಶ್ನೆ ಕೇಳಿದರು ನಮ್ಮಿಂದಲೇ ಉತ್ತರ ಹೊರಡಿಸುವ ವ್ಯಕ್ತಿತ್ವ ಇವರದು. ಭೌತ್ತಶಾಶ್ತ್ರದ ಮೂಲತತ್ವಗಳ ಮೂಲಕವೇ ಮಾತಾಡುತ್ತಿದ್ದರು. ಇವರೊಟ್ಟಿಗೆ ಮಾತಾಡಬೇಕಾದರೆ ನನಗೆ ನಿಜಕ್ಕೂ ಭಯವೇ ಆಗುತ್ತಿತ್ತು. ಮಾತಾಡುವ ಮುನ್ನ ಪೂರ್ವತಯಾರಿಯ ಅವಶ್ಯಕತೆ ತುಂಬಾ ಇರುತಿತ್ತು. ವಹಿಸಿದ ಕೆಲಸ ನಮಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿದರೆ ಆತ ಹೇಳುತ್ತಿದ್ದದ್ದು "ಮನೆಗೆ ಹೋಗು" ಎಂದು. ನಮ್ಮಲ್ಲಿ ಸಾಮರ್ಥ್ಯವಿದೆ ಮತ್ತು ನಾವು ಕೆಲಸ ಮಾಡುತ್ತೇವೆ ಎಂದು ಅನ್ನಿಸಿದರೆ ಮಾತ್ರ ಅವರು ಸಹಾಯ ಮಾಡುತ್ತಿದ್ದರು. ಆಗೆಲ್ಲ ಅವರನ್ನು ಮನಸ್ಸಿನಲ್ಲೇ ಬೈದುಕೊಂಡದ್ದು ಇದೆ. ಆದರೆ, ಕೆಲವು ವರ್ಷಗಳಾದ ಮೇಲೆ ತಿಳಿಯಿತು. ಅವರು ಹಾಗೆ ಮಾಡಿದ್ದರಿಂದಲೇ ನಮ್ಮ ಕಲಿಕೆಯ ವೇಗ ಮತ್ತು ಸಾಮರ್ಥ್ಯ ಹೆಚ್ಚಿತು ಎಂದು. 4-5 ವರ್ಷಗಳ ನಂತರ ಅವರೊಂದಿಗೆ ಮತ್ತೆ ಕೆಲಸ ಮಾಡುವ ಅವಕಾಶವಾಯಿತು. ಆಗಲೂ ಒಂದು ರೀತಿಯ ಭಯವಿತ್ತು ಆದರೆ, ಅನುಭವದ ಬಲದಿಂದ, ಪೂರ್ವ ತಯಾರಿಯೊಂದಿಗೆ ಮಾತಾಡುತ್ತಿದ್ದೆ. ಇವರು ಕೆಲಸ ಮಾಡುತ್ತಿದ್ದ ಮತ್ತು ಮಾಡಿಸುತ್ತಿದ್ದ ರೀತಿಯ ಬಗ್ಗೆ ನನ್ನ juniors ಗೆ ಹಲವು ಸಲ ಹೇಳಿದ್ದೇನೆ. ಸತೀಶ್ ರವರಿಗೆ ಈ ಮೂಲಕ ನನ್ನ ಧನ್ಯವಾದಗಳು.


ವಿಜಯ್ ಜೇ :

ಅಧಿಕೃತವಾಗಿ ಇವರು ನನ್ನ ಮೊದಲ ಮೆಂಟರ್ ಆಗಿದ್ದರು. Bosch ಅಲ್ಲಿನ ಕ್ರಮದ ಬಗೆಗಿನ ಅ,ಆ,ಇ,ಈ ಹೇಳಿಕೊಟ್ಟವರು ಇವರು. ಯಾವುದೇ ಕೆಲಸವಾಗಲಿ ಪರಿಪೂರ್ಣವಾಗಿರಬೇಕು ಎಂಬುದನ್ನು ಇವರು ಅಪೇಕ್ಷಿಸುತ್ತಿದ್ದರು. ವಿಚಾರಗಳನ್ನು ಸಹ ತುಂಬಾ ತಾಳ್ಮೆಯಿಂದ ಹೇಳಿಕೊಡುತ್ತಿದ್ದರು. Mail ಅನ್ನು ಸ್ಪಷ್ಟವಾಗಿ, ತೀಕ್ಷ್ಣವಾಗಿ ಬರೆಯುವುದನ್ನು ನಾನು ಮೊದಲು ಕಲಿತದ್ದೇ ವಿಜಯ್ ಅವರಿಂದ. ಇವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡ ಮೇಲೆ ಇವರು ಮಾಡುತ್ತಿದ್ದ ಕೆಲಸ ನನ್ನ ನಿರ್ವಹಣೆಗೆ ಬಂತು. ಸುಮಾರು 2 ವರ್ಷಗಳ ಕಾಲ ಅನೇಕ technical ವಿಚಾರಗಳಲ್ಲಿ ಒಬ್ಬನೇ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂತು. ಇದು ನನ್ನನ್ನು, ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿಕೊಳ್ಳುವುದಕ್ಕೆ ಒದಗಿ ಬಂದ ಅವಕಾಶವಾಗಿತ್ತು ಮತ್ತು ಅದರಲ್ಲಿ ನಾನು ಸಫಲನಾಗಿದ್ದೆ. ಅದಕ್ಕೆ ವಿಜಯ್ ಹಾಕಿಕೊಟ್ಟ ಮಾರ್ಗದರ್ಶನ ಕಾರಣ. ಇವರಲ್ಲಿ ನನಗಿದ್ದ ಒಂದೇ ಒಂದು ತೊಂದರೆ ಎಂದರೆ ಈತ ಮಾತಾಡುತ್ತಿದ್ದದ್ದೇ ಕಮ್ಮಿ. ಎರಡು ವರ್ಷದ ಅವಧಿಯಲ್ಲಿ ಕೆಲಸದ ವಿಚಾರವನ್ನು ಹೊರತು ಪಡಿಸಿ ಇವರು ಮಾತಾಡಿದ್ದು 2-3 ಬಾರಿ ಮಾತ್ರ! ಈ ಮೂಲಕ ವಿಜಯ್ ಗೆ ನನ್ನ ಧನ್ಯವಾದಗಳು. ಹಾಂ, ಮುಖ್ಯವಾದ ಒಂದು ವಿಚಾರ ಒಂದಿದೆ. ನಾನು ಒಬ್ಬನೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ನನ್ನ ಮೇಲೆ ನಂಬಿಕೆ ಇಟ್ಟವರು ನಮ್ಮ ಮ್ಯಾನೇಜರ್ಗಳು. ಆದ್ದರಿಂದಲೇ ನನಗೂ ನನ್ನ ಸಾಮರ್ಥ್ಯ ಸಾಬೀತು ಪಡಿಸಲು ಸಾಧ್ಯವಾಯಿತು. ನಂಬಿಕೆ ಇದ್ದಲ್ಲಿ ಬದುಕು ಅಲ್ಲವೇ!


ರಾಮಕೃಷ್ಣ (RK) ಮತ್ತು ಸಂದೀಪ್ ಜಾಂಬ್ಲಿ :

ನಾನು ಒಬ್ಬನೇ ನಿರ್ಧಾರ ತೆಗೆದುಕೊಳ್ಳುವ 2-3 ವರ್ಷದ ಅವಧಿಯಲ್ಲಿ ಈ ಇಬ್ಬರೂ ಮುಂದಾಳತ್ವ ವಹಿಸಿದ್ದ ಪ್ರಾಜೆಕ್ಟಿನಲ್ಲಿ ನಾನು ಕೆಲಸ ಮಾಡಿದ್ದು. ಇವರೊಂದಿಗೆ ಅಧಿಕೃತವಾಗಿ ಮೀಟಿಂಗ್ ಕೋಣೆಯಲ್ಲಿ ಚರ್ಚೆ ಮಾಡಿದ್ದು ನನಗಂತೂ ನೆನಪೇ ಇಲ್ಲ. ಸಂದೀಪ್ ಅವರನ್ನು ನಾನು ಮೊದಲು ಭೇಟಿಯಾಗಿ ಮಾತಾಡಿದ್ದೆ ನಮ್ಮ ಕಚೇರಿಯ ಕ್ಯಾಂಟೀನ್ನಲ್ಲಿ. ಅನೇಕ ಸಲ ಇವರ ಜೊತೆ ಕಾಫೀ, ಸಂಜೆಯ ತಿಂಡಿ ಸಮಯದಲ್ಲಿ ಮಾತಾಡಿದ್ದೇನೆ. ಮಧ್ಯಾಹ್ನ ಊಟದ ನಂತರ ಓಡಾಡಬೇಕಾದರೂ ಸಹ ಚರ್ಚೆ ಮಾಡಿದ್ದುಂಟು. ಅದೊಂದು ದಿವಸ ನಾನು 6:30 ಹೊತ್ತಿಗೆ ಮನೆಗೆ ಹೊರಡುವವನಿದ್ದೆ. ಸ್ನೇಹಿತನನ್ನು ಮಾತಾಡಿಸಿಕೊಂಡು ಹೋಗೋಣ ಎಂದು ಸಂದೀಪ್ ಮತ್ತು RK ಇರುವಲ್ಲಿಗೆ ಬಂದೆ. ಯಾವುದೋ ವಿಚಾರವಾಗಿ ನಮ್ಮ ಚರ್ಚೆ ಶುರುವಾಯಿತು. ಅವರೊಂದಿಗಿನ ಮಾತುಗಳು ನನಗೆ ಪಾಠವಾಗುತ್ತಿತ್ತು. ಅಂದು ಮಾತು ಮುಗಿಸಿ ಹೊರಡುವಷ್ಟರಲ್ಲಿ ರಾತ್ರಿ 9:30. ನನ್ನ ಸ್ನೇಹಿತ ನನಗೆ ಹೇಳಿ ಮನೆ ತಲುಪಿದ್ದನಾದರೂ ನಮ್ಮ ಚರ್ಚೆ ಮುಗಿದಿರಲಿಲ್ಲ! ಯಾವುದೇ ವಿಚಾರವನ್ನಾಗಲಿ ವಿವಿಧ ದೃಷ್ಠಿಕೋನದಿಂದ ನೋಡುವುದನ್ನು ಈ ಇಬ್ಬರಿಂದ ನಾನು ಕಲಿತೆ. ನಾನು ನನ್ನ ಕೆಲವು ಸಹೊದ್ಯೋಗಿಗಳು ಸಂದೀಪ್ ಅವರನ್ನು 'Uncle' ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದೆವು. ಇದು ನಮ್ಮಲ್ಲಿ ‍ಮಾತಾಡಬೇಕಾದರೆ ಪ್ರಯೋಗವಾಗುತ್ತಿದ್ದ ಪದ. ಇದು ಆಡಿಕೊಳ್ಳುವ ರೀತಿಯಲ್ಲ ಬದಲಾಗಿ ಅವರೊಂದಿಗೆ ನಮಗಿದ್ದ ಸಲುಗೆ. ವೃತ್ತಿಜೀವನದಲ್ಲಿ ನನ್ನ ಜ್ಞಾನವನ್ನು ಹೆಚ್ಚು ಮಾಡಿದ ಇಬ್ಬರಿಗೂ ನನ್ನ ಧನ್ಯವಾದಗಳು.


ಕಿರಣ್ :

ನಾನು Bosch ಗೆ ಸೇರುವ ಹೊತ್ತಿಗೆ ಇವರಿಗೆ ನಮ್ಮ ಕಂಪನಿಯಲ್ಲಿ 5-6 ವರ್ಷ ಮತ್ತು ಒಟ್ಟಾರೆ 10 ವರ್ಷದಷ್ಟು ಅನುಭವವಾಗಿತ್ತು. ಯಾವುದೋ ವಿಚಾರದಲ್ಲಿ ಇವರ ಹತ್ತಿರ ಚರ್ಚೆ ಮಾಡಿ ತಿಳಿದುಕೊಳ್ಳುವ ಅವಶ್ಯಕತೆ ಇತ್ತು. ನನಗೋ ನನ್ನ ಜಾಗ ಬಿಟ್ಟು ಹೋಗಿ ಯರನ್ನಾದರೂ ಮಾತಾಡಿಸಲು ಹಿಂಜರಿಕೆ ಅಥವಾ ಭಯ (RK ಮತ್ತು ಸಂದೀಪ್ ಅವರ ಜೊತೆ ಮಾತಾಡುವಷ್ಟರಲ್ಲಿ 1.5-2 ವರ್ಷ ಅನುಭವವಾಗಿತ್ತು)! ಶುಕ್ರವಾರ ಮಾತಾಡಿಸಲಾಗದೇ ಸೋಮವಾರದ ತನಕ ಕಾದು, ನನ್ನ ಮತ್ತೊಬ್ಬ ಸಹೋದ್ಯೋಗಿ ಜೊತೆ ಕಿರಣ್ ರವರ ಬಳಿ ಹೋಗಿ ಚರ್ಚಿಸಿದೆ. ಬಹುಶಃ ನಾನು ಒಬ್ಬಂಟಿಯಾಗಿ ಚರ್ಚಿಸಿದ್ದು ಇವರ ಹತ್ತಿರವೇ ಮೊದಲು ಎಂದು ತೋರುತ್ತದೆ. ವಿಷಯವನ್ನು ಕೂಲಂಕುಷವಾಗಿ ಗ್ರಹಿಸುವುದನ್ನು ಇವರಿಂದ ಕಲಿತೆ. 6-7 ವರ್ಷಗಳ ನಂತರ ನಾನು ಇವರು ಕಚೇರಿಗೆ ಕಾರಿನಲ್ಲಿ ಒಟ್ಟಿಗೆ ಹೋಗುತ್ತಿದ್ದೆವು. ಕಾರಲ್ಲಿ ಅನೇಕ ಚರ್ಚೆಗಳನ್ನು ಮಾಡಿದ್ದೇವೆ. ಕೆಲಸದ ಹೊರತಾಗಿ ಅನೇಕ ವಿಚಾರಗಳು ಸಹ ಮಾತಾಡಿದ್ದೇವೆ. ಕೆಲವು ಬಾರಿ ಜಗಳ ಅನ್ನುವ ಮಟ್ಟಿಗೆ debate ಕೂಡ ನಮ್ಮಲ್ಲಿ ನಡೆದಿದೆ. ಈ ಕಾರಣದಿಂದಾಗಿ ನಮ್ಮಲ್ಲಿ ಸ್ನೇಹದ ಸಲುಗೆ ಕೂಡ ಬೆಳೆದಿದೆ. ಆದ್ದರಿಂದ ಧನ್ಯವಾದ ಹೇಳುವುದು ತೋರಿಕೆಯಂತಾಗುತ್ತದೆ.


Volvo Group :

ಈ ತಂಡ ನಮ್ಮ department ಅಲ್ಲಿನ ಶಾಲೆ ಎಂದೇ ಹೇಳಬೇಕು. ಇಲ್ಲಿ ನಾನು ಕಲಿತದ್ದು ಬಹಳ ಇದೆ. ತಂಡದ ಪ್ರತಿಯೊಬ್ಬರೂ ಕಲಿಸಿದ್ದಾರೆ. ವಿವಿಧ ಸಂಸ್ಕೃತಿಯುಳ್ಳ ವಿದೇಶಿಯರೊಂದಿಗೆ ಮಾತಾಡುವುದನ್ನು ಕಲಿಸಿದ್ದು ಇದೇ ತಂಡ. ತಾಳ್ಮೆಯಿಂದ ವರ್ತಿಸುವುದನ್ನು ಕಲಿಸಿದ್ದು ಇದೇ ತಂಡ. ಯಾವುದೇ ಕೆಲಸವನ್ನಾಗಲಿ ವ್ಯವಸ್ಥಿತವಾಗಿ ಮಾಡುವುದನ್ನು ಕಲಿಸಿದ್ದು ಈ ತಂಡ. Juniors ಗಳಿಗೆ ನನಗೆ ತಿಳಿದಿರುವ ವಿಚಾರವನ್ನು ಯಾವ ರೀತಿ ಹೇಳಿಕೊಡಬೇಕು ಎಂದು ಕಲಿಸಿದ್ದು ಈ ತಂಡ. ತನ್ಮೂಲಕ ನಾನು ಕಲಿತಿದ್ದೇನೆ. ನಾನು ಮೂಲತಃ development ಹಿನ್ನಲೆಯಿಂದ ಬಂದವನು ಹಾಗಾಗಿ, testers ಜೊತೆ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟವರು ಇದೇ ತಂಡದವರು. ಕೆಲಸಕ್ಕಿಂತ ಊಟ, ತಾಳ್ಮೆ, ಬಾಂಧವ್ಯ ಮುಖ್ಯ ಎಂದು ತಿಳಿಸಿಕೊಟ್ಟದ್ದು ಈ ತಂಡದವರೇ.

ಅದೊಂದು ಮಧ್ಯಾಹ್ನ ಊಟದ ಸಮಯ. ಕೆಲಸ ಮುಗಿಸಿ ಹೋಗೋಣ ಎಂದು ವಿಂಧ್ಯಾ ಎಂಬುವವರಿಗೆ ಹೇಳಿದೆ ಜೊತೆಗೆ ಕೆಲಸದ ಒತ್ತಡದಿಂದ ಸ್ವಲ್ಪ ಖಾರವಾಗೆ ಮಾತಾಡಿದ್ದೆ. ಅವರು ಕಾರಣಾಂತರದಿಂದ ಬೆಳಿಗ್ಗೆ ಉಪಹಾರ ಮಾಡಿರಲಿಲ್ಲ. ಆದರೆ, ನನಗೆ ಕೆಲಸವೇ ಮುಖ್ಯವಾಗಿತ್ತು. ನಂತರ ನಾವು ರಾಜಿ ಆದೆವು. ಕೆಲವು ದಿನಗಳ ನಂತರ ಇದೇ ರೀತಿಯ ಸಂದರ್ಭ ನನಗೆ ಬಂತು. ನಾನೂ ಸಹ ಬೆಳಗ್ಗೆ ಏನು ತಿಂದಿರಲಿಲ್ಲ. ಕೆಲಸ ಮುಗಿಸಿ ಊಟಕ್ಕೆ ಹೋಗೋಣ ಎಂದು ಕೂತಿದ್ದೆ. ಅದರೆ, ಗೀತು ಎಂಬುವವರು ನನ್ನನ್ನು ಊಟಕ್ಕೆ ಕಳುಹಿಸಿ ನಂತರ ಕೆಲಸ ನೋಡೋಣ ಎಂದರು. ಆ ಸಂದರ್ಭದಲ್ಲಿ ನಾನು ವಿಂಧ್ಯಾ ಜೊತೆ ನಡೆದುಕೊಂಡ ರೀತಿ ನೆನಪಾಯಿತು. ಅಂದಿನಿಂದ ನನ್ನಲ್ಲಿ ಬದಲಾವಣೆ ಬಂತು. ಈ ಪಾಠಕ್ಕಾಗಿ ವಿಂಧ್ಯಾ ಮತ್ತು ಗೀತೂ ಅವರಿಗೆ ನನ್ನ ಧನ್ಯವಾದಗಳು.

ಈ ತಂಡದಲ್ಲಿ ವ್ಯಕ್ತಿ ರೂಪದಲ್ಲಿ ಅಮೂಲ್ಯವಾದದ್ದನ್ನು ಕಳೆದುಕೊಂಡಿದ್ದೇನೆ ಹಾಗೂ ಮತ್ತೊಬ್ಬರನ್ನ ಪಡೆದುಕೊಂಡಿದ್ದೇನೆ.

ಈ ತಂಡಕ್ಕೆ ಸೇರಿದ ಹೊಸತರಲ್ಲಿ ನನ್ನ ಹೆಸರಿಗೆ ಒಂದು defect ವರ್ಗವಾಯ್ತು. ನನ್ನಲ್ಲಿಗೆ ಬರುವ ಮುನ್ನ 6-7 ತಿಂಗಳಿಂದ ಇಬ್ಬರ ಹೆಸರಿಗೆ ಹೋಗಿ ಪರಿಹಾರವಾಗದೇ ಬಂದಿತ್ತು. ಮೊದಲ ನೋಟದಲ್ಲಿ ಸಮಸ್ಯೆ ಸುಲಭವೆನ್ನಿಸಿತು ಆದರೆ, ವಿಶ್ಲೇಷಣೆ ಮಾಡುತ್ತಾ ಹೊದಂತ್ತೆಲ್ಲಾ ಸಮಸ್ಯೆ ಕ್ಲಿಷ್ಟವಾಯ್ತು. ಎರಡು ದಿನ ಪ್ರಯತ್ನ ಪಟ್ಟು ಸಾಧ್ಯವಾಗಲಿಲ್ಲ. ಮಾರನೇ ದಿವಸ ಇಂದು ಇದನ್ನು ಮುಗಿಸಿಯೇ ತೀರುತ್ತೇನೆ ಎಂದು ಕೂತೆ. ಕೇವಲ ಅರ್ಧ ಗಂಟೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ನಾವು ಆಗುತ್ತದೆ ಎಂದು ಮನಸ್ಸು ಮಾಡಿ, ಗಮನವಿಟ್ಟು ಪ್ರಯತ್ನಪಟ್ಟಿದ್ದಲ್ಲಿ ಯಾವುದೇ ಸಮಸ್ಯೆಯಾಗಲಿ, ಕೆಲಸವಾಗಲಿ ಮಾಡಿ ಮುಗಿಸಬಹುದು ಎಂದು ಇದರಿಂದ ಮನದಟ್ಟಾಯಿತು. ಇದನ್ನು ಕೂಡ ನನ್ನ juniors ಗಳಿಗೆ ಉದಾಹರಣೆಯನ್ನಾಗಿ ಹೇಳಿದ್ದೇನೆ.

ಈ ರೀತಿ ಅನೇಕ technical, emotional, behavioral ಪಾಠಗಳನ್ನು ಕಲಿಸಿದ Volvo ತಂಡಕ್ಕೆ ನನ್ನ ಧನ್ಯವಾದಗಳು.
 
*********************************************************************** 

ಕೆಲಸದ ಮೂಲಕ ಕಲಿತ ಪಾಠಗಳು

ನಾನು ಕಲಸ ಮಾಡುವ department ಅಲ್ಲಿ ಹೆಚ್ಚಿನ ಕೆಲಸ ಆಗುತ್ತಿದ್ದದ್ದೇ ಸಂಜೆ 6:30 ಮೇಲೆ. ಬೆಳಗ್ಗೆ ಬಹುತೇಕ ಸಮಯ ಮೀಟಿಂಗ್, ಕಾಫೀ, ಊಟ ಇಂತಹುದರಲ್ಲೇ ಕಾಲವಾಗುತ್ತಿತ್ತು. ಕೆಲವರಿಗೆ ಮೀಟಿಂಗ್ ಎಂದರೆ time pass ಎಂಬ ಭಾವನೆ ಇದೆ ಆದರೆ, ಎಷ್ಟರ ಮಟ್ಟಿಗೆ ಅದರಿಂದ ನಾವು ಕಲಿತಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತಿರುವಂತಹ ವಿಚಾರ ಮಿಕ್ಕದ್ದು ಅವರವರ ಭಾವಕ್ಕೆ ಬಿಟ್ಟಿದೆ. ಕರೋನಾ ಬಂದು work from home ಶುರುವಾದ ನಂತರ ರಾತ್ರಿ ಕೆಲಸ ಮಾಡುವುದು ಹೆಚ್ಚಾಗಿದೆ. ನನ್ನ ಮಟ್ಟಿಗೆ ರಾತ್ರಿಯ ನಿಶಬ್ದದ ವಾತಾವರಣದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಬಹುದು. ನನಗೋ ಯಾವುದಾದರು ಕೆಲಸ ಮನಸ್ಸಿಗೆ ಹಿಡಿಸಿದರೆ ಅದನ್ನು ಮುಗಿಸುವ ತನಕ ನೆಮ್ಮದಿ ಸಿಗುತ್ತಿರಲಿಲ್ಲ. ರಾತ್ರಿ ಎಷ್ಟೇ ಹೊತ್ತಾದರೂ ಮುಗಿಸಲೇಬೇಕು ಎಂಬಂತಹ ಸ್ವಭಾವ ನನ್ನದು. ಮೊದಲೆಲ್ಲಾ ಕೆಲಸದ ಮೇಲೆ ಅಷ್ಟಾಗಿ ಆತ್ಮವಿಶ್ವಾಸ ಇರಲ್ಲಿಲ್ಲ. ಒಂದು ದಿನ ತೀರ್ಮಾನಿಸಿದೆ, ನಾನು ನಿರ್ವಹಿಸಬೇಕಾಗಿರುವ ತತ್ವವನ್ನು ಮೂಲದಿಂದ ಅರ್ಥೈಸಿಕೊಳ್ಳಬೇಕು ಎಂದು. ಅಂದು ಬೇರೆ ಏನು ಕೆಲಸ ಮಾಡದೆ ಹುಡುಕಾಟ ಶುರುಮಾಡಿದೆ. ಅರ್ಥ ಮಾಡಿಕೊಂಡದನ್ನು notes ಮಾಡಿಕೊಳ್ಳುತ್ತಾ ಹೋದೆ. ಸಂಜೆ ಹೊತ್ತಿಗೆ ಒಂದಷ್ಟು ವಿಚಾರಗಳು ಅರ್ಥವಾದವು. Independent ಆಗಿ ಕೆಲಸ ಮಾಡಬಹುದು ಎಂಬ ವಿಶ್ವಾಸ ಮೂಡಿತು. ನನ್ನ ಈ ನಂಬಿಕೆಯನ್ನು ಒರೆಗೆ ಹಚ್ಚಿ ನೋಡುವ ಸಂದರ್ಭ ಬೇಗಲೇ ಒದಗಿಬಂತು.

ಅದೊಂದು ಗುರುವಾರ ಒಂದು feature implementation ಅನ್ನು ಎರಡೇ ದಿನಗಳಲ್ಲಿ ಮುಗಿಸಬೇಕು ಎಂಬಂತಹ ಪರಿಸ್ಥಿತಿ ಬಂತು. ಅಂದು ರಾತ್ರಿ ಕಚೇರಿಯಲ್ಲೇ ಉಳಿಯಬೇಕಾಯಿತು. ರಾತ್ರಿ ಅಲ್ಲೇ ಊಟ ಮಾಡಿ ಕೆಲಸ ಶುರುಮಾಡಿದೆ. ಬೆಳಿಗ್ಗೆ ನಮ್ಮ ತಂಡದವರಿಗೆ ಆಶ್ಚರ್ಯ ರಾತ್ರಿ ಅಲ್ಲೇ ಉಳಿದು ಕೆಲಸ ಮಾಡಿದ್ದೇನಲ್ಲಾ ಎಂದು. ಬೆಳಿಗ್ಗೆ ಉಪಹಾರ ಮುಗಿಸಿ ಮತ್ತೆ ಕೆಲಸ ಶುರುಮಾಡಿದೆ. ಸಂಜೆ 4:00 ತನಕ ಒಂದು ರೀತಿ marathon ಓಡಿದಂತೆ ಕೆಲಸ ಮಾಡಿದೆ. ಮಧ್ಯಾಹ್ನ ಊಟ ಮಾಡುವ ಯೋಚನೆ ಕೂಡ ಬರಲಿಲ್ಲ. ಕೆಲಸ ಮುಗಿಸಿದ ನಂತರ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಮತ್ತು ಅದನ್ನು ಅನುಭವಿಸಿಯೇ ಅರ್ಥ ಮಾಡಿಕೊಳ್ಳಬೇಕು. ಈಗಲೂ ನೆನಪಿದೆ, ಕೆಲಸ ಮುಗಿಸಿ ಕೂತಾಗ ಕಾಲು ನಡುಗುತ್ತಿತ್ತು. ಆದರೆ, ಮನಸ್ಸಿಗೆ ಸಮಾಧಾನವಾಗಿತ್ತು.

ಕೆಲವು ಸಲ ಯಾವುದಾದರು ಕ್ಲಿಷ್ಟವಾದ ಸಮಸ್ಯೆಯನ್ನು ಪರಿಶೀಲಿಸಬೇಕಾದಾಗ ಮನಸ್ಸು ಒಂದೆಡೆ ಸಿಕ್ಕಿಹಾಕಿಕೊಳ್ಳುತ್ತಿತ್ತು. Change of work is rest ಅನ್ನುವ ಹಾಗೆ ಹೊರಗೆ ಓಡಾಡುವುದೋ, ಟೀ ಅಥವಾ ಹಾಲು ಕುಡಿಯುವುದು ಅಥವಾ ಇಷ್ಟವಾದ ಹಾಡನ್ನು ಕೇಳುವುದು ನನ್ನ ಅಭ್ಯಾಸ. ಇದೆಲ್ಲಕ್ಕಿಂತಲೂ ಹೆಚ್ಚು ಮಾಡುತ್ತಿದ್ದದ್ದು youtube ಅಲ್ಲಿ ಸಾಯಿಕುಮಾರ್ ರವರ ಚಿತ್ರದ ಕೆಲವು ದೃಶ್ಯವನ್ನು ನೋಡುವುದು. ಅದರಿಂದ ಮನಸ್ಸು ಬೇರೆಡೆ ಹೋಗುತ್ತಿತ್ತು. ಸ್ವಲ್ಪ ಸಮಯದ ನಂತರ ಮತ್ತೆ ಕೆಲಸ ಶುರು ಮಾಡುತ್ತಿದೆ. ಅನೇಕ ಬಾರಿ ಈ ಪ್ರಕ್ರಿಕೆ ಕೆಲಸ ಮಾಡಿದ್ದುಂಟು.

Volvo ತಂಡದಲ್ಲಿದ್ದಾಗ ನಾನು software architect ಆಗಿದ್ದ project ಅಲ್ಲಿ 3-4 ತಿಂಗಳಿಂದ ಒಂದು ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೆವು. ಕೆಲವು ತಜ್ಞರ ಬಳಿ ಚರ್ಚೆ ಕೂಡ ನಡೆದಿತ್ತು. ಈ ಸಮಸ್ಯೆಯ ಕುರಿತು ಇತರೆ ತಂಡದ ನನ್ನ ಸ್ನೇಹಿತರ ಜೊತೆಗೂ ಚರ್ಚೆ ಮಾಡಿದ್ದು ಉಂಟು. ಆದರೆ, ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಅದೊಂದು ರಾತ್ರಿ ಬಹುಶಃ 2:00 ರ ತನಕ ನನ್ನ ಹಾಲಿ ಮತ್ತು ಮಾಜಿ ಸಹೋದ್ಯೋಗಿಗಳ ಜೊತೆಗೆ conference call ಅಲ್ಲಿ ಚರ್ಚೆ ಮಾಡಿ ಮಲಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದು ಅನ್ನಿಸುವುದರಲ್ಲಿತ್ತು. ಆ ದಿನ ಬೆಳಗಿನ ಜಾವ ಅದೇನು ಅರೆ ನಿದ್ರೆಯಲ್ಲೋ ಅಥವಾ ಕನಸಿನಲ್ಲೋ ನನಗೆ ನೆನಪಿಲ್ಲ ಆದರೆ, ಪರಿಹಾರವೊಂದು ಹೊಳೆಯಿತು. ಬೆಳಿಗ್ಗೆ 6:25 ಸಮಯ, ಎದ್ದು ನನಗೆ ಹೊಳೆದ ಪರಿಹಾರವನ್ನು implement ಮಾಡಿ ಪರೀಕ್ಷಿಸಿದೆ, ಕೆಲಸ ಮಾಡಿತು! ಆ ಕ್ಷಣ ಒಂದು ರೀತಿ ಜಗತ್ತನ್ನು ಗೆದ್ದ ಅನುಭವ. ನನ್ನ manager ಗೆ, ರಾತ್ರಿ ಚರ್ಚೆ ಮಾಡಿದ್ದ ಇಬ್ಬರಿಗೆ ಅದೇ ಹೊತ್ತಲ್ಲಿ ಕರೆ ಮಾಡಿ ಈ ವಿಚಾರ ಹಂಚಿಕೊಂಡೆ. ಯಾವುದೇ ಕೆಲಸವಾಗಲಿ ತಪಸ್ಸಿನ ರೀತಿ ನಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದ್ದಲ್ಲಿ ಅದು ಸಫಲವಾಗುತ್ತದೆ ಎಂಬುದನ್ನು ನಾನು ಕಲಿತದ್ದು ಹೀಗೆ. ಈ ಪರಿಹಾರವನ್ನು ನನಗೆ ಯಾರೂ ಹೇಳಿದ್ದಲ್ಲ ಅಥವಾ ಎಲ್ಲೂ ನೋಡಿಯೂ ಇಲ್ಲ. ಇದು ನನಗೆ ಗೋಚರವಾಯಿತು (intuition ಕೆಲಸ ಮಾಡಿತು) ಎಂದೇ ನಾನು ಈವರಿಗೂ ನಂಬಿದ್ದೇನೆ.

ಕೆಲಸದಲ್ಲಿ ನಾನು ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಹಾಗೆ ಮಾಡಿದಾಗಲೆಲ್ಲ ಇತರರಿಗಿಂತ ನನಗೆ ನನ್ನ ಮೇಲೆ ಬೇಸರವಾಗಿದೆ, ನನಗೆ ನಾನೇ ಬೈದುಕೊಂಡಿದ್ದೇನೆ. ಆದರೆ, ಎಂದು ಕೂಡ ಧೈರ್ಯಗೆಡಲಿಲ್ಲ. ಮಾಡಿದ ತಪ್ಪನ್ನು ನಾನೇ ಸರಿ ಮಾಡಿ ಮತ್ತೆ ಅದೇ ತಪ್ಪಾಗದಂತೆ ಎಚ್ಚರ ವಹಿಸಿದ್ದೇನೆ. ಇನ್ಯಾವುದೋ ಹೊಸ ತಪ್ಪನ್ನು ಮಾಡುತ್ತಿದ್ದೆ. ಹೆಚ್ಚಾಗಿ ನನ್ನನ್ನು ಕಾಡಿದ್ದು CPD (Copy Paste Defects). ಬೇರೊಂದು ಕಡೆಯಿಂದ copy ಮಾಡಿ ನಾನು ಬರೆಯಬೇಕಿದ್ದ ಕಡೆ ಅದನ್ನು ಉಪಯೋಗ ಮಾಡಿದಾಗಲೆಲ್ಲಾ ಏನಾದರು ಒಂದು ತಪ್ಪಾಗುತ್ತಿತ್ತು. ಅದರ ಪರಿಣಾಮ ತುಂಬಾ ಗಂಭೀರವಾಗಿರುತ್ತಿತ್ತು. ಆದರೆ, ತಪ್ಪನ್ನು ಹುಡುಕಿದಾಗ ಅದು silly mistake ಆಗಿರುತ್ತಿತ್ತು. ಈ ತಪ್ಪುಗಳು ನನ್ನನ್ನು ಅನೇಕ ವರ್ಷಗಳು ಕಾಡಿದೆ. ನನ್ನ ಅನೇಕ ಸಹೋದ್ಯೋಗಿಗಳು ಈ ವಿಚಾರವಾಗಿ ನನ್ನನ್ನು ರೇಗಿಸಿದ್ದು ಉಂಟು.

ಮತ್ತೊಂದು ಸಲ ಯಾವುದೋ ಒಂದು ಕೆಲಸವನ್ನು 100 ಗಂಟೆ ಎಂದು ಅಂದಾಜು ಮಾಡಿದ್ದೆ. ಪ್ರಾರಂಭದಲ್ಲಿ ಆ ಕೆಲಸಕ್ಕೆ ಅಷ್ಟು ಹೊತ್ತು ಬೇಕಾಗಿತ್ತು ಎಂಬುದು ನಿಜವಾಗಿತ್ತು. ನಂತರ ಆ ಕೆಲಸದಲ್ಲಿ ತಿದ್ದುಪಡಿಗಳಾಗಿ ಕೇವಲ 3 ಗಂಟೆಯಲ್ಲಿ ಮುಗಿದಿತ್ತು. ಕೆಲಸ ಮಾಡಿದ ಅವಧಿಯನ್ನು ಮೂರು ಎಂದೇ ದಾಖಲಿಸಿದೆ. ಮಾರನೆ ದಿವಸ manager ನನ್ನನ್ನು ಕರೆದು ನನ್ನ ತಪ್ಪನ್ನು ನನಗೆ ಅರ್ಥ ಮಾಡಿಸಿದರು. 100 ಗಂಟೆ ಎಂದು ಅಂದಾಜಿಸಿ ಕೇವಲ 3 ಗಂಟೆಯಲ್ಲಿ ಮುಗಿದಿದೆ ಎಂದರೆ ಏನೋ ಗಂಭೀರ ತಪ್ಪಾಗಿದೆ ಎಂದು ಹೊರಜಗತ್ತಿಗೆ ತೋರಿಸಿದಂತಾಗುತ್ತದೆ, ಆದ್ದರಿಂದ ಜೋಪಾನ ಎಂದು ತಪ್ಪನ್ನು ಸರಿ ಪಡಿಸಿದರು. ಅದೇ ಕೊನೆ, ಈ ರೀತಿಯ ತಪ್ಪು ಮತ್ತೆ ಮರುಕಳಿಸಲಿಲ್ಲ. ನನಗೆ ಸಿಕ್ಕ manager ಗಳು ನನ್ನ ತಪ್ಪನ್ನು ಸಹಿಸಿಕೊಂಡು, ತಿದ್ದಿ, ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟರು. ಅವರು ನನ್ನನ್ನು ನಂಬದೇ ಇದ್ದಿದ್ದರೆ ನಾನು ಕುಸಿದು ಹೋಗುತ್ತಿದ್ದೆ ಅಥವಾ Bosch ಯಿಂದ ಹೊರ ಹೋಗುತ್ತಿದ್ದೆ. ಆದರೆ, ಆ ನಂಬಿಕೆಯ ಭಾವದಿಂದಲೇ ನನ್ನ ಸಾಮರ್ಥ್ಯ ಹೆಚ್ಚಿತು. ಹಾಗಾಗಿ ನನ್ನ managers ಗಳಿಗೆ ಈ ಮೂಲಕ ನನ್ನ ಧನ್ಯವಾದಗಳು.

ವೃತ್ತಿ ಬದುಕನ್ನು ಶುರು ಮಾಡುವ ಮುನ್ನ ವಿದೇಶಿಯರ ಮಾತು ಕೇಳಿದ್ದು ಕ್ರಿಕೆಟ್ ನೋಡಬೇಕಾದರೆ ಮಾತ್ರ. ಒಂದೆರಡು ಆಂಗ್ಲ ಭಾಷೆಯ ಚಿತ್ರಗಳನ್ನು ನೋಡಿದ್ದೆ ಆದರೂ ಅವರು ಮಾತಾಡುವ ರೀತಿ ಅರ್ಥವಾಗುತ್ತಿರಲಿಲ್ಲ. Bosch ಗೆ ಬಂದ ಮೇಲೆ ಮೊದಲ ಬಾರಿಗೆ ವಿದೇಶಿಯರ ಜೊತೆ ಮಾತಾಡಿದ್ದು. ಅಚ್ಚರಿ ಎಂದರೆ ಅವರ ಶೈಲಿ ಮತ್ತು ಭಾಷೆ ನನಗೆ ಸುಲಭವಾಗಿ ಅರ್ಥವಾಗುತ್ತಿತ್ತು. ಜರ್ಮನಿ, ಚೀನಾ, ಅಮೇರಿಕಾ, ಸ್ವೀಡನ್, ಕೊರಿಯಾ, ವಿಯೆಟ್ನಾಮ್ ಮತ್ತು ಜಪಾನ್ ದೇಶದವರ ಜೊತೆ ನಾನು ಮಾತಾಡಿದ್ದೇನೆ, ಕೆಲಸ ಮಾಡಿದ್ದೇನೆ. ಇದರ ಮೂಲಕ ಆಯಾ ದೇಶದವರು ಕೆಲಸ ಮಾಡುವ ರೀತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ನನಗೆ ಸಿಕ್ಕಿತು. ಜರ್ಮನಿ, ಸ್ವೀಡನ್, ಚೀನಾ ದೇಶಗಳಿಗೆ ಹೋಗಿ ಅಲ್ಲಿನ ಕೆಲಸದ ರೀತಿಯನ್ನು ಪ್ರತ್ಯಕ್ಷ ಕಂಡು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅನೇಕ ಸಹೋದ್ಯೋಗಿಗಳು, ಕೆಲವು customer ಗಳು ಅವರ ಮಾತು, ಕೆಲಸದ ಮೂಲಕ ನನಗೆ ಪರೋಕ್ಷವಾಗಿ ಪಾಠ ಮಾಡಿದ್ದಾರೆ. ಅವರೆಲ್ಲರಿಗೂ ಈ ಮೂಲಕ ನನ್ನ ಧನ್ಯವಾದಗಳು.  

*********************************************************************** 

ಸಾಗರದಾಚೆಗಿನ ಅನುಭವ

ಹತ್ತು ವರ್ಷದ ಈ ಅವಧಿಯಲ್ಲಿ ಮೂರು ಬಾರಿ ಜರ್ಮನಿ, ಎರಡು ಬಾರಿ ಚೀನಾ ಮತ್ತು ಒಂದು ಬಾರಿ ಸ್ವೀಡನ್ ದೇಶಗಳಿಗೆ ಹೋಗುವ ಅವಕಾಶ ಒದಗಿಬಂತು. ಚೀನಾಕ್ಕೆ ಎರಡು ಸಲವೂ ಎರಡು ವಾರಗಳ ಕಾಲ, ಸ್ವೀಡನ್ನಿಗೆ ಒಂದು ವಾರ ಮತ್ತು ಜರ್ಮನಿಗೆ ಮೊದಲ ಬಾರಿಗೆ ಮೂರು ತಿಂಗಳು, ಮಿಕ್ಕ ಎರಡು ಸಲ ಎರಡೆರಡು ವಾರಗಳ ಕಾಲ ಹೋಗಿದ್ದೆ. ಅಲ್ಲಿನ ಅನುಭವಗಳ ಬಗ್ಗೆ ಈಗಾಗಲೇ ನನ್ನ ಬ್ಲಾಗಿನಲ್ಲಿ ಬರೆದಿದ್ದೇನೆ. ಅದರ link ಅನ್ನು ಕೆಳಗೆ ಕೊಟ್ಟಿದ್ದೇನೆ.



***********************************************************************

ಕೆಲಸದ ಹೊರತು

ಕೆಲಸಕ್ಕೆ ಸೇರಿದ ಹೊಸತರಲ್ಲಿ ನಾನು ಕಚೇರಿಯ ಬಸ್ಸಲ್ಲಿ ಓಡಾಡುತ್ತಿದ್ದೆ. ಬಸ್ಸಿನ ಸದಸ್ಯರೊಂದಿಗೆ 'Bosch During Ramayana' ಎಂಬ ನಾಟಕ ಮಾಡಿದ್ದೆವು. ರಾಮಾಯಣದ ಕಾಲದಲ್ಲಿ Bosch ಇದ್ದಿದ್ದರೆ ಏನಾಗಬಹುದಿತ್ತು ಎಂಬ ಕಲ್ಪನೆಯ ನಾಟಕ. ಸೀತಾನ್ವೇಷಣೆಗೆ ಹನುಮಂತ Bosch Navigation System ಬಳಸಿದ್ದ ಎನ್ನುವ ರೀತಿಯ ನಾಟಕವದು. ನನ್ನ ಹಿರಿಯ ಸ್ನೇಹಿತ ವಿನಯ್ ಮತ್ತು ನಾನು ಕಥೆ ಬರೆದು, ಸಂಭಾಷಣೆ ಬರೆದು ವಿನಯ್ ರಾಮನಾಗಿ ನಾನು ಹನುಮಂತನಾಗಿ ನಟಿಸಿ, ನಿರ್ದೇಶನ ಮಾಡಿದ್ದೆವು. ನಾನು ಕೂಡ stage ಹತ್ತಬಹುದು ಎಂಬಂತಹ ವಿಶ್ವಾಸ ಈ ಘಟನೆ ತುಂಬಿತು. ಇದೊಂದು ಸಾಂಸೃತಿಕ ಚಟುವಟಿಕೆಯ ಸ್ಪರ್ಧೆಯಾಗಿತ್ತು. ನಮ್ಮ ನಾಟಕಕ್ಕೆ ಮೊದಲ ಬಹುಮಾನ ಬಂದಿತ್ತು.

ನಮ್ಮ department ಅಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದೆವು. ಆಗ ನಾನು ಕಾರ್ಗಿಲ್ ಯುದ್ಧ ಮತ್ತು ಗ್ರೆನೇಡಿಯರ್ ಯೋಗಿಂದ್ರ ಸಿಂಗ್ ಯಾದವರ ಬಗ್ಗೆ ಮಾತಾಡಿದ್ದೆ. ನಮ್ಮ ತಂಡದ ಮೂರು cubicle ಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳಿಂದ ಅಲಂಕರಿಸಿದ್ದೆವು. ಮತ್ತೊಂದು ಬಾರಿ ಬೇರೊಂದು department ಅವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪ್ರಾಸ್ತಾವಿಕ ನುಡಿಗಳನ್ನಾಡಿದ್ದೆ. ನನ್ನ ಕನಸಿನ ಕರ್ನಾಟಕದ ಕುರಿತು ಮಾತಾಡುವ ಅವಕಾಶ ಒದಗಿತು.

ಈ ವರ್ಷ 'Leadership Insights From Freedom Fighters' ಕಾರ್ಯಕ್ರಮದಲ್ಲಿ ನಮ್ಮ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ನಾಯಕತ್ವದ ಗುಣಗಳ ಬಗ್ಗೆ ಮಾತಾಡುವ ಕಾರ್ಯಕ್ರಮವಿತ್ತು. ಗಾಂಧಿ, ಸುಭಾಷ್, ಜಾನ್ಸಿ ರಾಣಿ ಲಕ್ಷ್ಮಿ ಬಾಯಿ, ರಾಣಿ ಅಬ್ಬಕ್ಕ, ಭಗತ್ ಸಿಂಗ್ ಮುಂತಾದವರ ಬಗ್ಗೆ ಮಾತಾಡಿದರು. ನಾನು ಚಂದ್ರಶೇಖರ್ ಆಜಾದರನ್ನು ಆಯ್ಕೆ ಮಾಡಿಕೊಂಡು ಮಾತಾಡಿದೆ.

Presentation About Chandrashekar Azad
 
***********************************************************************
 
ಹತ್ತು ವರ್ಷದ ಅನುಭವದಲ್ಲಿ ಕೆಲವು ವಿಚಾರಗಳನ್ನಷ್ಟೇ ಹಂಚಿಕೊಂಡಿದ್ದೇನೆ, ಕೆಲವರ ಹೆಸರನ್ನಷ್ಟೇ ಬರೆದಿದ್ದೇನೆ. ಕೆಲಸದಲ್ಲಿ ಜೊತೆಯಾಗಿದ್ದವರು, ಪಾಠ ಕಲಿಸಿದವರು ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಇಲ್ಲಿ ನಡೆದಿರುವ ರಾಜಕೀಯವನ್ನು ಗಮನಿಸಿದ್ದೆನಾದರೂ ಅದರ ಬಗ್ಗೆ ಮಾತಾಡುವ ಇಚ್ಛೆ ನನಗಿಲ್ಲ ಹಾಗಾಗಿ ಆ ವಿಚಾರವನ್ನು ಬಿಟ್ಟಿದ್ದೇನೆ. ನನ್ನ ಜಾಗದಿಂದ ಎದ್ದು ಹೋಗಿ ಯಾರಾದರೂ ಹಿರಿಯರನ್ನು ಮಾತಾಡಿಸಲು ನಾನು ಹೆದರುತ್ತಿದ್ದೆ ಎಂದರೆ ಈಗ ನನ್ನೊಂದಿಗೆ ಕೆಲಸ ಮಾಡುವವರು ಅದನ್ನು ನಂಬುವುದಿಲ್ಲ. ಈ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದೇನೆ ಅನ್ನುವರು. ಅಷ್ಟು ಬದಲಾಗಿದ್ದೇನೆ. ಕೆಲಸ ಮಾಡಿದ್ದೇನೆ ಎನ್ನುವುದಕ್ಕಿಂತ Bosch ಕೆಲಸ ಮಾಡಿಸಿಕೊಂಡಿದೆ. ವಯ್ಯಕ್ತಿಕ ಬದುಕಿನ ನೋವುಗಳನ್ನು ಸಹ ಮರೆಸಿ, ನೆಮ್ಮದಿ ನೀಡಿದೆ ಎಂಬುದು ಸಹಜವೇ, ಅತಿಶಯೋಕ್ತಿ ಅಲ್ಲ. ಮುಗಿಸುವ ಮುನ್ನ ಮತ್ತೊಮ್ಮೆ Bosch ಗೆ ಧನ್ಯವಾದಗಳು.