ಮೊನ್ನೆ ಶುಕ್ರವಾರ ಹಮಾಸ್ ಎಂಬ ಭಯೋತ್ಪಾದಕ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ಹಾಗೂ ಕ್ಷಿಪಣಿಗಳ ಮಳೆಗೈದಿದೆ. ಇಸ್ರೇಲಿನ ಮಾಧ್ಯಮಗಳ ಪ್ರಕಾರ 26 ಸೈನಿಕರು, 30 ಪೊಲೀಸ್ ಅಧಿಕಾರಿಗಳು ಹಾಗೂ 600ಕ್ಕೂ ಹೆಚ್ಚು ಜನರನ್ನು ಹಮಾಸ್ ಭಯೋತ್ಪಾದಕರು ಗಾಝಾ ಪಟ್ಟಿಯಲ್ಲಿ ಕೊಂದಿದ್ದಾರೆ. ಇಷ್ಟೇ ಅಲ್ಲದೇ ಅನೇಕ ಇಸ್ರೇಲಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಅಲ್ಲಿಂದ ಬರುತ್ತಿರುವ ಪ್ರತಿಯೊಂದು ವೀಡಿಯೋಗಳು ಅಮಾನುಷ ಹಾಗೂ ಆತ್ಯಂತ ಭೀಕರವಾಗಿವೆ. ಹಮಾಸ್ ಅನ್ನು ಮುಗಿಸುವ ಮಟ್ಟಿಗೆ 'ಆಪರೇಷನ್ ಸ್ವೋರ್ಡ್ಸ್ ಆಫ್ ಐರನ್ - ಉಕ್ಕಿನ ಖಡ್ಗ' ಎನ್ನುತ್ತಾ ಯುದ್ಧವನ್ನು ಇಸ್ರೇಲ್ ಸರ್ಕಾರ ಘೋಷಿಸಿದೆ. ಅದಾಗಲೇ ಹಮಾಸಿನ ಬೇಹುಗಾರಿಕೆ ಸಂಸ್ಥೆಯ ಕಟ್ಟಡವನ್ನು ಧ್ವಂಸ ಮಾಡಿದೆ ಎಂಬ ಸುದ್ಧಿ ಸಹ ಇದೆ. ಭಾರತದ ರಾಜಕೀಯ ಹಾಗೂ ವಿದ್ಯಮಾನಗಳನ್ನೆಲ್ಲಾ ಬಿಟ್ಟು ಇಸ್ರೇಲ್ ವಿಚಾರ ನಮಗ್ಯಾಕೆ ಅಂದುಕೊಳ್ಳಬಹುದು. ಆದರೆ, ಜಾಗತಿಕ ವಿದ್ಯಮಾನಗಳು ನಮ್ಮ ದೇಶದ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿಯೇ ಈ ವಿಚಾರ ಮುಖ್ಯ.
![]() |
| Israel declares war, goes after Hamas fighters and bombards Gaza |
![]() |
| The Global Religious Landscape |
ಹಮಾಸಿನ ಈ ಅಮಾನುಷ ಕೃತ್ಯದ ವಿರುದ್ಧ ಜಗತ್ತಿನ ಅನೇಕ ದೇಶಗಳು ಇಸ್ರೇಲಿನ ಬೆಂಬಲಕ್ಕೆ ನಿಂತಿವೆ. ಭಾರತ ಕೂಡ ಇಸ್ರೇಲಿನ ಪರವಾಗಿ ಇದೆ. ನಮ್ಮ ಹಾಗೂ ಇಸ್ರೇಲ್ ಅಥವಾ ಯಹೂದಿಗಳ ಸಂಬಂಧ ಸ್ವಾತಂತ್ರ್ಯ ಪೂರ್ವದ್ದು. ಯಹೂದಿಗಳನ್ನು ಜಗತ್ತಿನ ಎಲ್ಲಾ ಜನಾಂಗ ಅಥವಾ ದೇಶಗಳು ಕೆಟ್ಟದಾಗಿ ನಡೆಸಿಕೊಂಡಿವೆ. ಅವರ ಸಂಸ್ಕೃತಿಯನ್ನು ಉಳಿಸಿಕೊಂಡು, ಮರ್ಯಾದೆಯಿಂದ ಬಾಳಲು ಅವಕಾಶ ನೀಡಿದ ಏಕೈಕ ರಾಷ್ಟ್ರ ಭಾರತ. ಹಾಗಾಗಿಯೇ ಇಸ್ರೇಲಿಗೆ ಭಾರತವೆಂದರೆ ಪ್ರೀತಿ. 1999ರ ಕಾರ್ಗಿಲ್ ಯುದ್ಧದಲ್ಲಿ, 2019ನಲ್ಲಿನ ಪುಲ್ವಾಮ ದಾಳಿ ಆದಾಗ ಇಸ್ರೇಲ್ ಭಾರತದ ಪರವಾಗಿ ನಿಂತಿದೆ. ಭಾರತ ಇಸ್ರೇಲಿನಿಂದ ಹೆರಾಪ್ ಎಂಬ ಅತ್ಮಹತ್ಯ ಡ್ರೋನ್ ಗಳನ್ನು ಖರಿಸಿದಿಸುವ ಒಪ್ಪಂದ ಸಹ ಮಾಡಿಕೊಂಡಿತ್ತು. ಹಾಗಾಗಿ; ಭಾರತ ಅಧಿಕೃತವಾಗಿ ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದು ಇಸ್ರೇಲಿನ ಪರವಾಗಿ ನಿಂತಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇಸ್ರೇಲಿನ ಪರವಾದ ಪೋಸ್ಟ್ಗಳು ಓತಪ್ರೋತವಾಗಿ ಹರಿದಾಡುತ್ತಿದೆ. ಅಲ್ಲಿರುವ ಭಾರತೀಯರಿಗೆ ಸುರಕ್ಷಿತ ಜಾಗಗಳಿಗೆ ತೆರಳಲು ಸರ್ಕಾರ ಇಗಾಗಲೇ ತಿಳಿಸಿದೆ. ಕಾಂಗ್ರೇಸ್ ಪಕ್ಷ ಮಾತ್ರ ಮುಸಲ್ಮಾನರ ಮತಗಳನ್ನು ಕಳೆದುಕೊಳ್ಳುವ ಭಯದಿಂದ ಈ ವಿಚಾರವಾಗಿ ಒಂದು ದಿನ ಪೂರ್ಣ ಮೌನವಹಿಸಿತ್ತು. ನಂತರ ನಾಮಕಾವಸ್ಥೆ ಎಂಬಂತೆ 'ತಾನೂ ಇಸ್ರೇಲಿನ ಪರವಾಗಿದ್ದೇನೆ' ಎಂಬ ಪತ್ರಿಕಾ ಹೇಳಿಕೆಯನ್ನು ಮೈಗೆ ಎಣ್ಣೆ ಹಚ್ಚಿಕೊಂಡಂತೆ ಜೈರಾಂ ರಮೇಶ್ ಮೂಲಕ ಕೊಡಿಸಿದೆ.
ಇಸ್ರೇಲ್ ಪಾಲೆಸ್ಟೈನ್ ನಡುವಿನ ಕಲಹ ಇಂದು ನೆನ್ನೆಯದ್ದಲ್ಲ. 1948ರಲ್ಲಿ ಇಸ್ರೇಲ್ ಒಂದು ದೇಶ ಎಂದು ಸ್ಥಾಪಿತವಾದಾಗಿನಿಂದಲೂ ಇದೆ. ಇದು ಆಧುನಿಕ ಜಗತ್ತಿನಲ್ಲಾದರೆ, ಐತಿಹಾಸಿಕವಾಗಿ ಮತದ ಹಿನ್ನಲೆಯಲ್ಲಿ ಇಸ್ಲಾಂ ಹುಟ್ಟಿದಾಗಿನಿಂದಲೂ ಯಹೂದಿ ಹಾಗೂ ಮುಸಲ್ಮಾನರ ನಡುವೆ ಈ ಕಾದಾಟ ನಡೆಯುತ್ತಲೇ ಬಂದಿದೆ. ಜರುಸಲೆಂ ಎಂಬ ಪವಿತ್ರ ಜಾಗಕ್ಕಾಗಿ ಇಸ್ಲಾಂ, ಯಹೂದಿ ಹಾಗೂ ಕ್ರೈಸ್ತ ಮತದವರು ಇತಿಹಾಸದುದ್ದಕ್ಕೂ ಕಾದಾಟ ಮಾಡುತ್ತಲೇ ಇದ್ದಾರೆ. ಆರು ದಿನಗಳ ಯುದ್ಧ, ಅರಬ್-ಇಸ್ರೇಲ್ ಯುದ್ಧ ಹಾಗೂ 50 ವರ್ಷಗಳ ಹಿಂದೆ ನಡೆದ ಯೋಮ್ ಕಿಪ್ಪೂರ್ ಯುದ್ಧ ಇಸ್ರೇಲ್ ಸ್ಥಾಪಿತವಾದ ನಂತರ ಅದರ ವಿರುದ್ಧ ನಡೆದ ಕೆಲವು ಪ್ರಮುಖ ಯುದ್ಧಗಳು. 1973ರ ನಂತರ ಇಸ್ರೇಲ್ ಮೇಲೆ ನಡೆದ ಅತೀ ಭೀಕರವಾದ ದಾಳಿ ಇದಾಗಿದೆ. ಇಷ್ಟಕ್ಕೂ ಇದ್ದಕ್ಕಿದ್ದಂತೆ ಹಮಾಸ್ ಈ ಪರಿಯ ದಾಳಿ ಮಾಡಿದ್ದೇಕೆ?
ಅರಬ್ ರಾಷ್ಟ್ರಗಳು ಇಸ್ರೇಲ್ ಅನ್ನು ಒಂದು ದೇಶ ಎಂದೇ ಒಪ್ಪಿರಲಿಲ್ಲ. 1979ರಲ್ಲಿ ಈಜಿಪ್ಟ್, 1994ರಲ್ಲಿ ಜಾರ್ಡನ್ ರಾಜತಾಂತ್ರಿಕ ಕಾರಣಕ್ಕಾಗಿ ಇಸ್ರೇಲ್ ಅನ್ನು ರಾಷ್ಟ ಎಂದು ಒಪ್ಪಿಕೊಂಡಿತು. ಅದೇ ರೀತಿ ಯುಎಇ 2020ರಲ್ಲಿ ಇಸ್ರೇಲಿನೊಂದಿಗೆ ರಾಜತಾಂತ್ರಿಕ ಒಪ್ಪಂದಕ್ಕೆ ತೆರೆದುಕೊಂಡಿತು. ಇದಲ್ಲದೇ ಕಳೆದ ತಿಂಗಳು ಜಿ20 ಸಮಾವೇಶದಲ್ಲಿ ಭಾರತ, ಮಧ್ಯ ಪ್ರಾಚ್ಯ, ಇಸ್ರೇಲ್ ಹಾಗೂ ಯೂರೋಪ್ ನಡುವೆ ಆರ್ಥಿಕ ಕಾರಿಡಾರ್ (ಐಮೆಕ್) ಒಪ್ಪಂದ ಸಹ ಆಗಿದೆ. ಭಾರತದ ಮುಂಬೈನಿಂದ ದುಬೈ ತನಕ ಜಲ ಮಾರ್ಗ, ದುಬೈನಿಂದ ಸೌದಿ ಅರೇಬಿಯಾ, ಜೋರ್ಡಾನ್ ಹಾಗೂ ಇಸ್ರೇಲ್ ನಡುವೆ ರೈಲು ಮಾಗ್ರ, ನಂತರ ಇಸ್ರೇಲಿನ ಹೈಫಾ ಬಂದರಿನಿಂದ ಯೂರೋಪಿನವರೆಗೆ ಮತ್ತೆ ಜಲ ಮಾರ್ಗ ಹಾಗೂ ಅಲ್ಲಿಂದ ಮತ್ತೆ ರೈಲು. ಇದು ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ವಿರುದ್ಧ ಮಾಡುತ್ತಿರುವ ಯೋಜನೆ. ಇದಕ್ಕೆ ವಿರೋಧ ಮಾಡಿದ್ದು ಚೀನಾ, ಹಮಾಸ್ಸನ್ನು ಬೆಂಬಲಿಸುವ ದೇಶಗಳಾದ ಟರ್ಕಿ ಹಾಗೂ ಇರಾನ್ ಭಾರತದ ಏಳಿಗೆ ಚೀನಾ ಸಹಿಸುವುದಿಲ್ಲ, ತನ್ನನ್ನು ಹೊರತು ಪಡಿಸಿ ಆಗುತ್ತಿರುವ ಯೋಜನೆಯಿಂದ ಟರ್ಕಿಗೆ ಅಸಮಾಧಾನ, ಇಸ್ರೇಲ್ ಹಾಗೂ ಯುಎಇ ಒಂದಾಗುವುದು ಇರಾನ್ ಹಾಗೂ ಪಾಲೆಸ್ಟೈನಿಗೆ ಇಷ್ಟವಿಲ್ಲ. ಈಗ ಚುಕ್ಕಿಗಳನ್ನು ಜೋಡಿಸಿ ನೋಡಿ. ಈ ಯೋಜನೆಯನ್ನು ಮೊಳಕೆಯಲ್ಲೇ ನಾಶ ಮಾಡಬೇಕೆಂದೇ ಇರಾನ್ ಮತ್ತು ಟರ್ಕಿ ಹಮಾಸ್ ಮತ್ತು ಹೆಜ್ಬೊಲ್ಲಾಗಳ ಮೂಲಕ ಇಸ್ರೇಲಿನ ಮೇಲೆ ದಾಳಿ ನಡೆಸಿದೆ ಎಂಬುದು ನಿಸ್ಸಂಶಯವಾಗಿ ತಿಳಿಯುತ್ತದೆ! ಇತಿಹಾಸವನ್ನು ಗಮನಿಸಿದರೆ ಇಸ್ರೇಲ್ ಸುಮ್ಮನಿರುವ ದೇಶವಲ್ಲ. ಗಾಝಾ ಪಟ್ಟಿಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು, ಹಮಾಸ್ಸನ್ನು ನಾಶ ಮಾಡಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತದೆ, ಈಜಿಪ್ಟಿನ ಗಡಿಯೊಳಗೆ ನುಗ್ಗಿದರೂ ಆಶ್ಚರ್ಯವಿಲ್ಲ. ಪಾಲೆಸ್ಟೈನ್, ಹಮಾಸ್ ವಿರುದ್ಧದ ಈ ಯುದ್ಧದಲ್ಲಿ ಇಸ್ರೇಲ್ ಉಗ್ರವಾದಷ್ಟು ಇಸ್ಲಾಂ ರಾಷ್ಟ್ರಗಳು ತಮ್ಮ ಬ್ರಾತೃತ್ವದ ಭಾವನೆಯನ್ನು ಮುಂದಿಟ್ಟುಕೊಂಡು ಇಸ್ರೇಲ್ ವಿರುದ್ಧ ತಿರುಗಿ ಬೀಳುತ್ತದೆ. ಆಗ ಯುಎಇ ಹಾಗೂ ಸೌದಿಗೂ ವಿರೋಧಿಸುವುದು ಅನಿವಾರ್ಯವಾಗಿ, ಐಮೆಕ್ ಯೋಜನೆ ಹಳ್ಳಹಿಡಿಯುತ್ತದೆ!
ತುರುಕರ ಮನೆಹಾಳು ಮಾತು ಕೇಳಿ ಹಮಾಸ್ ಹಾಳಾಗುತ್ತಿದೆ. ಟರ್ಕಿ ಕೃತಘ್ನ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. ಆಪರೇಷನ್ ದೋಸ್ತ್ ಮೂಲಕ ಸಹಾಯ ಹಸ್ತ ಚಾಚಿದ ಭಾರತಕ್ಕೆ ಟರ್ಕಿ ಮೋಸ ಮಾಡಿದೆ. ಭಾರತಕ್ಕಷ್ಟೇ ಅಲ್ಲದೇ ನ್ಯಾಟೋ ದೇಶಗಳ ಹಿತಾಸಕ್ತಿ ವಿರುದ್ಧ ಅದು ನಡೆದುಕೊಂಡಿದೆ! ಚೀನಾ ವಿರುದ್ಧ ಬಲವಾದ ಹೆಜ್ಜೆ ಇಡುವ ಪ್ರಯತ್ನ ಮಾಡಿದ ಭಾರತಕ್ಕೆ ಈ ಯುದ್ಧ ಎಷ್ಟರ ಮಟ್ಟಿಗೆ ಹಿನ್ನಡೆಯಾಗುತ್ತದೆ ಅಥವಾ ಇಲ್ಲ ಎಂಬುದನ್ನು ಮುಂದೆ ಕಾದು ನೋಡಬೇಕಿದೆ.
***********************************************************
References


No comments:
Post a Comment